KL ರಾಹುಲ್ ಅತ್ಯದ್ಭುತವಾಗಿ​ ಕಾಲುಗಳಲ್ಲಿ ಹಿಡಿದಿದ್ದ ಕ್ಯಾಚ್​.. ಅಂಪೈರ್ ಯಾಕೆ ಔಟ್​ ಕೊಡಲಿಲ್ಲ?

author-image
Bheemappa
Updated On
KL ರಾಹುಲ್ ಅತ್ಯದ್ಭುತವಾಗಿ​ ಕಾಲುಗಳಲ್ಲಿ ಹಿಡಿದಿದ್ದ ಕ್ಯಾಚ್​.. ಅಂಪೈರ್ ಯಾಕೆ ಔಟ್​ ಕೊಡಲಿಲ್ಲ?
Advertisment
  • ಕನ್ನಡಿಗ ರಾಹುಲ್ ಹಿಡಿದ ಕ್ಯಾಚ್ ಅನ್ನು ಔಟ್​ ಕೊಡಲಿಲ್ಲ
  • ಸಿರಾಜ್, ಜಸ್​ಪ್ರಿತ್​ ಬೂಮ್ರಾ ಎಷ್ಟು ವಿಕೆಟ್​ ಪಡೆದಿದ್ದಾರೆ?
  • ಆಸಿಸ್​ನ ಈ ಸ್ಪಿನ್ನರ್ ಔಟ್ ಆಗಿದ್ದರೇ ಆಟ ಮುಗಿದಿತ್ತು

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 4ನೇ ಟೆಸ್ಟ್​ ಪಂದ್ಯದ 4ನೇ ದಿನ ಟೀಮ್ ಇಂಡಿಯಾದ ಆಟಗಾರರು ಅದ್ಭುತ ಪ್ರದರ್ಶನ ತೋರಿದ್ದಾರೆ. ಜಸ್​ಪ್ರೀತ್ ಬೂಮ್ರಾ ಅವರ ಬೌಲಿಂಗ್​ಗೆ ಆಸಿಸ್​ ಪ್ಲೇಯರ್ಸ್​ ಮೂಲೆ ಗುಂಪಾದರು. ನಾಥನ್ ಲಿಯಾನ್ ಬ್ಯಾಟ್​​ಗೆ ಟಚ್ ಆಗಿದ್ದ ಬೌಲ್​ ಅನ್ನು ಕೆ.ಎಲ್ ರಾಹುಲ್​ ಕಾಲುಗಳಲ್ಲಿ ಹಿಡಿದರೂ ಅಂಪೈರ್ ಔಟ್​ ಕೊಡಲಿಲ್ಲ. ಇದಕ್ಕೆ ಕಾರಣ ಕೂಡ ಇದೆ.

ಆಸಿಸ್​ ಸ್ಪಿನ್ನರ್ ನಾಥನ್ ಲಿಯಾನ್ 10ನೇ ಬ್ಯಾಟ್ಸ್​ಮನ್​ ಆಗಿ ಬ್ಯಾಟ್ ಬೀಸಲು ಕ್ರೀಸ್​ಗೆ ಬಂದಿದ್ದರು. ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದ ನಾಥನ್ ಲಿಯಾನ್​ರನ್ನ ಔಟ್ ಮಾಡಿದ್ದರೇ ಆಸಿಸ್​ನ 2ನೇ ಇನ್ನಿಂಗ್ಸ್ ಇಂದಿಗೆ ಮುಗಿದು ಹೋಗುತ್ತಿತ್ತು. ಅದರಂತೆ ಯಾರ್ಕರ್​ ಸ್ಪೆಷಲಿಸ್ಟ್ ಜಸ್​ಪ್ರಿತ್ ಬೂಮ್ರಾ ಅವರು ಸೂಪರ್ ಆಗಿಯೇ ಬೌಲಿಂಗ್ ಮಾಡಿದ್ದರು. ಆ ಬಾಲ್ ನಾಥನ್ ಲಿಯಾನ್ ಬ್ಯಾಟ್​ಗೆ ಟಚ್ ಆಗಿ ಸ್ಲಿಪ್​ನಲ್ಲಿ ಹೋಯಿತು.

ಇದನ್ನೂ ಓದಿ: ಬಲೆಗೆ ಬಿದ್ದ ದೈತ್ಯಾಕಾರದ ಮೀನು.. ಇದು ಎಷ್ಟು KG ಇದೆ ಎಂದ್ರೆ..?

publive-image

ಈ ವೇಳೆ ಸ್ಲಿಪ್​ನಲ್ಲಿದ್ದ ಕೆ.ಎಲ್ ರಾಹುಲ್ ಕೈಯಿಂದ ಕ್ಯಾಚ್ ಮಿಸ್ ಮಾಡಿದರೂ ತನ್ನ ಎರಡು ಕಾಲುಗಳ ಸಹಾಯದಿಂದ ಬಾಲ್ ಅನ್ನು ಕ್ಯಾಚ್ ಹಿಡಿದಿದ್ದರು. ಔಟ್​ ಎಂದು ಭಾರತದ ಆಟಗಾರರು ಸಂಭ್ರಮಿಸುವಾಗ ಅಂಪೈರ್ ನೋಬಾಲ್ ಎಂದು ಹೇಳಿದರು. ಜಸ್​ಪ್ರಿತ್ ಬೂಮ್ರಾ ಬೌಲಿಂಗ್ ಮಾಡುವಾಗ ಒಂದು ಕಾಲನ್ನು ಬಿಳಿ ಗೆರೆಯಿಂದ ಹೊರಕ್ಕೆ ಇಟ್ಟಿದ್ದರು. ಹೀಗಾಗಿ ಅಂಪೈರ್ ನೋಬಾಲ್ ಹೇಳಿದ್ದರಿಂದ ನಾಥನ್ ಲಿಯಾನ್ ನಾಟೌಟ್ ಆಗಿದ್ದು ನಾಳೆಗೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದರು.

ಇದೊಂದು ಬಾಲ್ ಅನ್ನು ಬೂಮ್ರಾ ಸರಿಯಾಗಿ ಹಿಡಿದಿದ್ದರೇ ಟೀಮ್ ಇಂಡಿಯಾ ಸಖತ್ ಖುಷಿಯಲ್ಲಿ 4ನೇ ದಿನ ಮುಗಿಸುತ್ತಿತ್ತು ಎಂದು ಹೇಳಬಹುದು. ಇನ್ನು ಈ ಪಂದ್ಯದಲ್ಲಿ ಬೂಮ್ರಾ ಅವರು 4 ವಿಕೆಟ್​ಗಳನ್ನು ಪಡೆದು ತಂಡಕ್ಕೆ ಹೊಸ ಭರವಸೆಯನ್ನು ಮೂಡಿಸಿದ್ದಾರೆ. ಇನ್ನು ಸಿರಾಜ್​ ಕೂಡ 3 ವಿಕೆಟ್ ಪಡೆದು ಸಂಭ್ರಮಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment