/newsfirstlive-kannada/media/post_attachments/wp-content/uploads/2024/12/KL_RAHUL_CATCH.jpg)
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 4ನೇ ಟೆಸ್ಟ್​ ಪಂದ್ಯದ 4ನೇ ದಿನ ಟೀಮ್ ಇಂಡಿಯಾದ ಆಟಗಾರರು ಅದ್ಭುತ ಪ್ರದರ್ಶನ ತೋರಿದ್ದಾರೆ. ಜಸ್​ಪ್ರೀತ್ ಬೂಮ್ರಾ ಅವರ ಬೌಲಿಂಗ್​ಗೆ ಆಸಿಸ್​ ಪ್ಲೇಯರ್ಸ್​ ಮೂಲೆ ಗುಂಪಾದರು. ನಾಥನ್ ಲಿಯಾನ್ ಬ್ಯಾಟ್​​ಗೆ ಟಚ್ ಆಗಿದ್ದ ಬೌಲ್​ ಅನ್ನು ಕೆ.ಎಲ್ ರಾಹುಲ್​ ಕಾಲುಗಳಲ್ಲಿ ಹಿಡಿದರೂ ಅಂಪೈರ್ ಔಟ್​ ಕೊಡಲಿಲ್ಲ. ಇದಕ್ಕೆ ಕಾರಣ ಕೂಡ ಇದೆ.
ಆಸಿಸ್​ ಸ್ಪಿನ್ನರ್ ನಾಥನ್ ಲಿಯಾನ್ 10ನೇ ಬ್ಯಾಟ್ಸ್​ಮನ್​ ಆಗಿ ಬ್ಯಾಟ್ ಬೀಸಲು ಕ್ರೀಸ್​ಗೆ ಬಂದಿದ್ದರು. ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದ ನಾಥನ್ ಲಿಯಾನ್​ರನ್ನ ಔಟ್ ಮಾಡಿದ್ದರೇ ಆಸಿಸ್​ನ 2ನೇ ಇನ್ನಿಂಗ್ಸ್ ಇಂದಿಗೆ ಮುಗಿದು ಹೋಗುತ್ತಿತ್ತು. ಅದರಂತೆ ಯಾರ್ಕರ್​ ಸ್ಪೆಷಲಿಸ್ಟ್ ಜಸ್​ಪ್ರಿತ್ ಬೂಮ್ರಾ ಅವರು ಸೂಪರ್ ಆಗಿಯೇ ಬೌಲಿಂಗ್ ಮಾಡಿದ್ದರು. ಆ ಬಾಲ್ ನಾಥನ್ ಲಿಯಾನ್ ಬ್ಯಾಟ್​ಗೆ ಟಚ್ ಆಗಿ ಸ್ಲಿಪ್​ನಲ್ಲಿ ಹೋಯಿತು.
ಇದನ್ನೂ ಓದಿ: ಬಲೆಗೆ ಬಿದ್ದ ದೈತ್ಯಾಕಾರದ ಮೀನು.. ಇದು ಎಷ್ಟು KG ಇದೆ ಎಂದ್ರೆ..?
/newsfirstlive-kannada/media/post_attachments/wp-content/uploads/2024/12/KL_RAHUL_BUMRHA.jpg)
ಈ ವೇಳೆ ಸ್ಲಿಪ್​ನಲ್ಲಿದ್ದ ಕೆ.ಎಲ್ ರಾಹುಲ್ ಕೈಯಿಂದ ಕ್ಯಾಚ್ ಮಿಸ್ ಮಾಡಿದರೂ ತನ್ನ ಎರಡು ಕಾಲುಗಳ ಸಹಾಯದಿಂದ ಬಾಲ್ ಅನ್ನು ಕ್ಯಾಚ್ ಹಿಡಿದಿದ್ದರು. ಔಟ್​ ಎಂದು ಭಾರತದ ಆಟಗಾರರು ಸಂಭ್ರಮಿಸುವಾಗ ಅಂಪೈರ್ ನೋಬಾಲ್ ಎಂದು ಹೇಳಿದರು. ಜಸ್​ಪ್ರಿತ್ ಬೂಮ್ರಾ ಬೌಲಿಂಗ್ ಮಾಡುವಾಗ ಒಂದು ಕಾಲನ್ನು ಬಿಳಿ ಗೆರೆಯಿಂದ ಹೊರಕ್ಕೆ ಇಟ್ಟಿದ್ದರು. ಹೀಗಾಗಿ ಅಂಪೈರ್ ನೋಬಾಲ್ ಹೇಳಿದ್ದರಿಂದ ನಾಥನ್ ಲಿಯಾನ್ ನಾಟೌಟ್ ಆಗಿದ್ದು ನಾಳೆಗೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದರು.
ಇದೊಂದು ಬಾಲ್ ಅನ್ನು ಬೂಮ್ರಾ ಸರಿಯಾಗಿ ಹಿಡಿದಿದ್ದರೇ ಟೀಮ್ ಇಂಡಿಯಾ ಸಖತ್ ಖುಷಿಯಲ್ಲಿ 4ನೇ ದಿನ ಮುಗಿಸುತ್ತಿತ್ತು ಎಂದು ಹೇಳಬಹುದು. ಇನ್ನು ಈ ಪಂದ್ಯದಲ್ಲಿ ಬೂಮ್ರಾ ಅವರು 4 ವಿಕೆಟ್​ಗಳನ್ನು ಪಡೆದು ತಂಡಕ್ಕೆ ಹೊಸ ಭರವಸೆಯನ್ನು ಮೂಡಿಸಿದ್ದಾರೆ. ಇನ್ನು ಸಿರಾಜ್​ ಕೂಡ 3 ವಿಕೆಟ್ ಪಡೆದು ಸಂಭ್ರಮಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us