ಜಸ್​ಪ್ರಿತ್ ಬೂಮ್ರಾಗೆ ಮತ್ತೆ ವಿಶ್ರಾಂತಿನಾ.. ಮೊಹಮ್ಮದ್​ ಸಿರಾಜ್ ಯಾರ ಕಣ್ಣಿಗೂ ಕಾಣಿಸ್ತಿಲ್ವಾ?

author-image
Bheemappa
Updated On
ಜಸ್​ಪ್ರಿತ್ ಬೂಮ್ರಾಗೆ ಮತ್ತೆ ವಿಶ್ರಾಂತಿನಾ.. ಮೊಹಮ್ಮದ್​ ಸಿರಾಜ್ ಯಾರ ಕಣ್ಣಿಗೂ ಕಾಣಿಸ್ತಿಲ್ವಾ?
Advertisment
  • ಈಗಾಗಲೇ ಇಂಜುರಿ ಸಮಸ್ಯೆಯಿಂದ ಬಳಲುತ್ತಿರುವ ಬೂಮ್ರಾ
  • ಟೀಮ್ ಇಂಡಿಯಾದಲ್ಲಿ ಅತಿ ಹೆಚ್ಚು ಓವರ್​ ಮಾಡಿದ ಬೌಲರ್​?
  • ಮ್ಯಾಂಚೆಸ್ಟರ್​​ನಲ್ಲಿ ಗೆಲುವುಬೇಕಂದ್ರೆ, ಬೂಮ್ರಾ ಆಡಲೇಬೇಕು

ಮ್ಯಾಂಚೆಸ್ಟರ್​​ ಟೆಸ್ಟ್​ ಪಂದ್ಯದಿಂದ ವೇಗಿ ಜಸ್​​ಪ್ರಿತ್​ ಬೂಮ್ರಾಗೆ ವಿಶ್ರಾಂತಿ ನೀಡಬೇಕಾ?. ತಂಡ ಸಂಕಷ್ಟಕ್ಕೆ ಸಿಲುಕಿರೋವಾಗ ಪ್ರಮಖ ಆಟಗಾರ ಹಿಂದೆ ಸರಿಯೋದು ಸರಿನಾ?. ಬೂಮ್ರಾ ವರ್ಕ್​​ಲೋಡ್​​ ಮ್ಯಾನೇಜ್​​ಮೆಂಟ್​​ ವಿಚಾರವಾಗಿ ದಿಗ್ಗಜ ಕ್ರಿಕೆಟಿಗರು ಫುಲ್​ ಗರಂ ಆಗಿದ್ದಾರೆ. ಬೂಮ್ರಾ ಆಡಲೇಬೇಕು ಎಂದು ಖಡಕ್​ ಮಾತುಗಳಲ್ಲಿ ಹೇಳಿದ್ದಾರೆ. ಅಸಲಿಗೆ ಬೂಮ್ರಾಗಲ್ಲ.. ವಿಶ್ರಾಂತಿ ಬೇಕಿರೋದು ಸಿರಾಜ್​​ಗೆ. ಯಾಕೆ ಅಂತೀರಾ?.

ಇಂಡೋ-ಇಂಗ್ಲೆಂಡ್​​ ನಡುವಿನ ಮಹತ್ವದ 4ನೇ ಟೆಸ್ಟ್​ ಪಂದ್ಯಕ್ಕೆ ಕೌಂಟ್​​ಡೌನ್​ ಆರಂಭವಾಗಿದೆ. ಲಾರ್ಡ್ಸ್​​ ಟೆಸ್ಟ್​ ಪಂದ್ಯವನ್ನ ಸೋತು, ಸರಣಿಯಲ್ಲಿ ಹಿನ್ನಡೆ ಅನುಭವಿಸಿರೋ ಟೀಮ್​ ಇಂಡಿಯಾ ಮ್ಯಾಂಚೆಸ್ಟರ್​ ಟೆಸ್ಟ್​ನಲ್ಲಿ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಸರಣಿ ಜೀವಂತವಾಗಿರಿಕೊಳ್ಳೋ ಒತ್ತಡಕ್ಕೆ ಸಿಲುಕಿರೋ ಯಂಗ್​ ಇಂಡಿಯಾ, ಅಭ್ಯಾಸದ ಕಣದಲ್ಲಿ ಬೆವರಿಳಿಸ್ತಾ ಇದೆ. ಇದರ ನಡುವೆ ಇಂಡಿಯನ್​ ಟೀಮ್​ ಮ್ಯಾನೇಜ್​ಮೆಂಟ್​ಗೆ ಮಾಜಿ ಕ್ರಿಕೆಟಿಗರು ಅಗತ್ಯ ಸಲಹೆ ನೀಡಿದ್ದಾರೆ.

publive-image

ವೇಗಿ ಬೂಮ್ರಾ ಆಡಿಸಲೇಬೇಕು ಎಂದ ಲೆಜೆಂಡ್ಸ್​​.!

ಬ್ಯಾಕ್​ ಇಂಜುರಿ ಸಮಸ್ಯೆಯಿಂದ ಬಳಲ್ತಾ ಇರೋ ಬೂಮ್ರಾ ವರ್ಕ್​ಲೋಡ್​​ ಮ್ಯಾನೇಜ್​ಮೆಂಟ್​ ದೃಷ್ಟಿಯಿಂದ ಪ್ರವಾಸದಲ್ಲಿ 3 ಟೆಸ್ಟ್​ ಪಂದ್ಯಗಳನ್ನ ಮಾತ್ರ ಆಡೋದಾಗಿ ತಿಳಿಸಿದ್ರು. ಅದ್ರಂತೆ ಮೊದಲ ಟೆಸ್ಟ್​​ ಆಡಿ, 2ನೇ ಟೆಸ್ಟ್​​ ಪಂದ್ಯದಿಂದ ವಿಶ್ರಾಂತಿ ಪಡೆದ ಬೂಮ್ರಾ, 3ನೇ ಟೆಸ್ಟ್​ನಲ್ಲಿ ಆಡಿದ್ರು. ಇದೀಗ 4ನೇ ಟೆಸ್ಟ್​​ನಿಂದ ವಿಶ್ರಾಂತಿ ಪಡೆಯೋ ಸಾಧ್ಯತೆ ದಟ್ಟವಾಗಿದೆ. ಆದ್ರೆ, ಸರಣಿ ಜೀವಂತವಾಗಿರಬೇಕು ಎಂದ್ರೆ ಮ್ಯಾಂಚೆಸ್ಟರ್​​ನಲ್ಲಿ ಗೆಲುವು ಅನಿವಾರ್ಯ. ಹೀಗಾಗಿ ಬೂಮ್ರಾ ಅಖಾಡದಲ್ಲಿ ಇರಬೇಕು.

‘ಬೂಮ್ರಾ ಆಡಲೇಬೇಕು’

ಮಹತ್ವದ ಪಂದ್ಯವಾಗಿರೋದ್ರಿಂದಾಗಿ ಬೂಮ್ರಾ ಮುಂದಿನ ಟೆಸ್ಟ್​ ಆಡಲೇಬೇಕೆಂದು ಹೇಳುತ್ತೇನೆ. ಬೂಮ್ರಾ ಆಡದೇ ಪಂದ್ಯದಲ್ಲಿ ಟೀಮ್​ ಇಂಡಿಯಾ ಸೋತರೆ ಸರಣಿ ಕತೆ ಮುಗಿಯಲಿದೆ. ಮುಂದಿನ 2 ಪಂದ್ಯಗಳಲ್ಲಿ ಬೂಮ್ರಾ ಆಡಲೇಬೇಕು. ಮೊದಲೇ 3 ಟೆಸ್ಟ್​ ಮಾತ್ರ ಆಡೋದಾಗಿ ಬೂಮ್ರಾ ಹೇಳಿದ್ರು. ಆದ್ರೆ, ಈ ಸರಣಿ ಅಂತ್ಯದ ಬಳಿಕ ಸಾಕಷ್ಟು ಬಿಡುವಿದೆ. ತವರಿನಲ್ಲಿ ನಡೆಯೋ ಸರಣಿಗಳಿಂದ ರೆಸ್ಟ್​ ಪಡೆಯಬಹುದು.

ಅನಿಲ್​ ಕುಂಬ್ಳೆ, ಮಾಜಿ ಕ್ರಿಕೆಟಿಗ

ವೈಯಕ್ತಿಕ ನಿರ್ಧಾರವಲ್ಲ.. ದೇಶ ಮುಖ್ಯ.!

ಬೂಮ್ರಾಗೆ ವಿಶ್ರಾಂತಿ ನೀಡೋ ವಿಚಾರವಾಗಿ ಮಾಜಿ ಕ್ರಿಕೆಟಿಗ ದಿಲೀಪ್​ ವೆಂಗ್​​ಸರ್ಕರ್​​ ಖಡಕ್​​ ಮಾತುಗಳನ್ನಾಡಿದ್ದಾರೆ. ಈ ಹಿಂದೆ 2ನೇ ಟೆಸ್ಟ್​​ನಿಂದ ವಿಶ್ರಾಂತಿ ಪಡೆದಿದ್ದನ್ನೂ ಪ್ರಶ್ನೆ ಮಾಡಿದ್ದಾರೆ.

ಭಾರತಕ್ಕಾಗಿ ಆಡೋದು ಮುಖ್ಯ

ಭಾರತಕ್ಕಾಗಿ ಆಡೋದು ಮುಖ್ಯ. ನೀನು ಫಿಟ್​ ಇಲ್ಲ ಅಂದ್ರೆ, ಆಡಲೇಬೇಡ. ಮೊದಲ ಟೆಸ್ಟ್​ ಪಂದ್ಯದ ಬಳಿಕ 7-8 ದಿನ ಅಂತರವಿತ್ತು. ಆದ್ರೂ, 2 ಪಂದ್ಯ ಆಡಲಿಲ್ಲ. ಇದನ್ನ ಒಪ್ಪಲು ಸಾಧ್ಯವಿಲ್ಲ. ಬೌಲರ್​​ಗಳು ಕೆಲ ಪಂದ್ಯಗಳನ್ನ ಆಯ್ಕೆ ಮಾಡಿಕೊಳ್ಳುವುದರ ಪರವಾಗಿ ನಾನಿಲ್ಲ. ಬೂಮ್ರಾ ವಿಶ್ವ ಶ್ರೇಷ್ಟ ಬೌಲರ್​​ ಮತ್ತು ಭಾರತಕ್ಕೆ ಪಂದ್ಯ ಗೆಲ್ಲಿಸಿಕೊಡಬಲ್ಲ. ಆದ್ರೆ, ಒಂದು ಪ್ರವಾಸದಲ್ಲಿದ್ದ ಮೇಲೆ ಎಲ್ಲಾ ಪಂದ್ಯ ಆಡಬೇಕು. ವೈಯಕ್ತಿಕ ಆದ್ಯತೆಗಳ ಮೇಲೆ ಪಂದ್ಯಗಳ ಆಯ್ಕೆ ಮಾಡುವ ಪ್ರಶ್ನೆಯೇ ಬರಬಾರದು.

ದಿಲೀಪ್​ ವೆಂಗ್​​ಸರ್ಕರ್​, ಮಾಜಿ ಕ್ರಿಕೆಟಿಗ

ದಿಲೀಪ್​ ವೆಂಗಸರ್ಕರ್​ ಅಭಿಪ್ರಾಯ ಸರಿಯಾಗೇ ಇದೆ. ಪಂದ್ಯದಿಂದ ಪಂದ್ಯಕ್ಕೆ ರಿಕವರಿಯಾಗಲು ಬೂಮ್ರಾ ಸಿಗ್ತಾ ಇದೆ. ಲಾರ್ಡ್ಸ್​​ ಟೆಸ್ಟ್​​ ಅಂತ್ಯವಾಗಿದ್ದು ಜುಲೈ 14ಕ್ಕೆ. ಮುಂದಿನ ಟೆಸ್ಟ್​ ಆರಂಭವಾಗೋದು ಜುಲೈ 23ಕ್ಕೆ. ಅಂದ್ರೆ, ಲಾರ್ಡ್ಸ್​​ ಟೆಸ್ಟ್​ನಿಂದ ಮ್ಯಾಂಚೆಸ್ಟರ್​ ಟೆಸ್ಟ್​ಗೆ 9 ದಿನಗಳ ಅಂತರವಿದೆ. ರಿಕವರಿಗೆ ಇಷ್ಟು ಸಮಯ ಸಾಕು ಅನ್ನೋದು ಎಕ್ಸ್​​ಪರ್ಟ್​​ಗಳ ಅಭಿಪ್ರಾಯವೂ ಆಗಿದೆ.

ಬೂಮ್ರಾಗಿಂತ ಸಿರಾಜ್​​ಗೆ ಬೇಕಿದೆ ವಿಶ್ರಾಂತಿ.!

ಅಸಲಿಗೆ ವಿಶ್ರಾಂತಿ ನೀಡಬೇಕಿರೋ ವೇಗಿ ಮೊಹಮ್ಮದ್​ ಸಿರಾಜ್​​ಗೆ. ಈ ಪ್ರವಾಸದ ಮೂರೂ ಪಂದ್ಯಗಳಲ್ಲಿ ಸಿರಾಜ್​ ದಣಿವರಿಯದೆ ಬೌಲಿಂಗ್​ ಮಾಡಿದ್ದಾರೆ. ಎಡ್ಜ್​ಬಾಸ್ಟನ್​ ಟೆಸ್ಟ್​ನಲ್ಲಿ 6 ವಿಕೆಟ್​ ಕಬಳಿಸಿ ತಂಡವನ್ನ ಗೆಲ್ಲಿಸಿದ್ದಾರೆ. 3 ಪಂದ್ಯಗಳಿಂದ 109 ಓವರ್​​ಗಳನ್​ ಬೌಲಿಂಗ್​ ಮಾಡಿದ್ದಾರೆ. ಬೂಮ್ರಾ ಮಾಡಿರೋದು 86.4 ಓವರ್​ ಮಾತ್ರ.!

ಇದನ್ನೂ ಓದಿ: ಕೇರಳಕ್ಕೆ ಗುಡ್​ಬೈ ಹೇಳಲಿರೋ ಬ್ರಿಟನ್ F-35 ಫೈಟರ್ ಜೆಟ್​.. ವಿಶ್ವದ ದುಬಾರಿ ವಿಮಾನಕ್ಕೆ ಏನಾಗಿತ್ತು..?

publive-image

ಈ ಪ್ರವಾಸ ಮಾತ್ರವಲ್ಲ.. 2023ರ ಆರಂಭದಿಂದ ಈವರೆಗೆ ಸಿರಾಜ್​ ಭಾರತ ತಂಡ ಆಡಿದ 27 ಟೆಸ್ಟ್​ಗಳ ಪೈಕಿ 24 ಪಂದ್ಯಗಳನ್ನ ಆಡಿದ್ದಾರೆ. 569.4 ಓವರ್​​ ಬೌಲಿಂಗ್​ ಮಾಡಿದ್ದಾರೆ. ಟೀಮ್​ ಇಂಡಿಯಾದ ಬೌಲರ್​ಗಳ ಪೈಕಿ ಅತಿ ಹೆಚ್ಚು ಓವರ್​ ಹಾಕಿರೋದು ಮೊಹಮ್ಮದ್​ ಸಿರಾಜ್. ಸಿರಾಜ್​ ಬಿಟ್ರೆ, ಆಸ್ಟ್ರೇಲಿಯಾದ ಮಿಚೆಲ್​ ಸ್ಟಾರ್ಕ್​, ಪ್ಯಾಟ್​ ಕಮಿನ್ಸ್​ ಇದಕ್ಕಿಂತ ಹೆಚ್ಚು ಓವರ್​ ಬೌಲಿಂಗ್​ ಮಾಡಿದ್ದಾರೆ.

ಲಾರ್ಡ್ಸ್​ ಟೆಸ್ಟ್​ ಪಂದ್ಯದ ಬಳಿಕ ಬೂಮ್ರಾಗೆ ಸಾಕಷ್ಟು ವಿಶ್ರಾಂತಿ ಸಿಕ್ಕಿದೆ. ಸರಣಿ ಜೀವಂತವಾಗಿರಿಕೊಳ್ಳಲು ಮ್ಯಾಂಚೆಸ್ಟರ್​​ನಲ್ಲಿ ಭಾರತಕ್ಕೆ ಗೆಲುವು ಅನಿವಾರ್ಯ. ಓಲ್ಡ್​ ಟ್ರಾಪರ್ಡ್​​ನ ಪಿಚ್​​ ಪೇಸ್​​ & ಬೌನ್ಸ್​​ ಹೊಂದಿರೋದ್ರಿಂದ ಬೂಮ್ರಾ ಪರಿಣಾಮಕಾರಿ ಆಗಲಿದ್ದಾರೆ. ಹೀಗಾಗಿ, ಬೂಮ್ರಾನ ಕಣಕ್ಕಿಳಿಸಿದ್ರೆ, ಟೀಮ್​ ಇಂಡಿಯಾಗೆ ಅಡ್ವಾಂಟೇಜ್​. ತಂಡ ಸಂಕಷ್ಟಕ್ಕೆ ಸಿಲುಕಿದಾಗ ಯುದ್ಧಭೂಮಿಯಲ್ಲಿ ಹೋರಾಡುವವನು ನಿಜವಾದ ವೀರನೇ ಹೊರತು, ಹಿಂದೆ ಸರಿಯುವವನಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment