/newsfirstlive-kannada/media/post_attachments/wp-content/uploads/2024/09/Bus-Accident-1.jpg)
ಚಿಕ್ಕಬಳ್ಳಾಪುರ: ಭೀಕರ ಅಪಘಾತದಲ್ಲಿ 8 ಮಂದಿ ಸಾವನ್ನಪ್ಪಿದ ಘಟನೆ ಆಂಧ್ರದ ಚಿತ್ತೂರು ಬಳಿ ನಡೆದಿದೆ. ಅಪಘಾತದಲ್ಲಿ 30 ಪ್ರಯಾಣಿಕರು ಗಾಯಗೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2024/09/Accident-4.jpg)
ನಿನ್ನೆ ಶುಕ್ರವಾರ ಸಂಜೆ ನಡೆದಿರುವ ಅಪಘಾತ ಇದಾಗಿದೆ. ಚಿತ್ತೂರು -ಬೆಂಗಳೂರು ಹೆದ್ದಾರಿಯ ಮೊಗಲಿ ಘಾಟ್ ಬಳಿ ಎಪಿಎಸ್ಆರ್​​​ಟಿಸಿ ಹಾಗೂ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮೃತರಲ್ಲಿ ಬಹುತೇಕರು ಬೆಂಗಳೂರಿನವರು ಎನ್ನಲಾಗಿದೆ.
/newsfirstlive-kannada/media/post_attachments/wp-content/uploads/2024/09/Accident-3.jpg)
ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನ ಮುಗಿಸಿ ಬರುವಾಗ ಕಾರಿನ ಮೇಲೆ ಬಿದ್ದ ಲಾರಿ; ಕರ್ನಾಟಕದ ಮೂವರು ಸಾವು
ಪ್ರಯಾಣಿಕರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಬಸ್​​ನಲ್ಲಿ ವಾಪಸ್ ತೆರಳುವ ವೇಳೆ ದುರ್ಘಟನೆ ನಡೆದಿದೆ. ತಿರುಪತಿಯಿಂದ ಬೆಂಗಳೂರಿಗೆ ಬರುತ್ತಿದ್ದ ಎಪಿಎಸ್​​ಆರ್​​​ಟಿಸಿ ಬಸ್ ಅಪಘಾತಕ್ಕೀಡಾಗಿದೆ. ಹೀಗಾಗಿ 8 ಜನರು ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ಅಯ್ಯೋ..ಹಸಿವು..ಹಸಿವು! ಬಳ್ಳಾರಿಯಲ್ಲಿ ತೂಕದ ಲೆಕ್ಕಚಾರದಲ್ಲಿ ಊಟ.. ಜೈಲೂಟ ಸಾಲದೆ ಪರದಾಡುತ್ತಿರೋ ದಾಸ
/newsfirstlive-kannada/media/post_attachments/wp-content/uploads/2024/09/Accident.webp)
ಬಸ್ ನಿಯಂತ್ರಣ ಕಳೆದುಕೊಂಡು ಟ್ರಕ್ ಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಪಲಮನೇರು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/09/Accident-5.jpg)
ದುರ್ಘಟನೆ ಬಗ್ಗೆ ತಿಳಿದ ಆಂಧ್ರ ಸಿ ಎಂ ಚಂದ್ರಬಾಬು ನಾಯ್ಡು ಮೃತ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us