/newsfirstlive-kannada/media/post_attachments/wp-content/uploads/2023/11/Bus-Fire.jpg)
ಕೋಲ್ಕತ್ತಾ: ಪ್ರಯಾಣಿಕರಿದ್ದ ಬಸ್​ಗೆ ಬೆಂಕಿ ತಗುಲಿ ಓರ್ವ ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದ ಮೇದಿನಿಪುರ್​​ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ16ರಲ್ಲಿ ನಡೆದಿದೆ. ಈ ಘಟನೆಯಲ್ಲಿ 30 ಮಂದಿ ಗಾಯಗೊಂಡಿದ್ದಾರೆ.
ಶುಕ್ರವಾರದಂದು ತಡರಾತ್ರಿ ಬಸ್​​ಗೆ ಬೆಂಕಿ ತಗುಲಿದೆ. ಬಸ್ ಕೋಲ್ಕತ್ತಾದ ಬಾಘುಘಾಟ್​​ನಿಂದ​ ಒಡಿಶಾದ ಪಾರಾದೀಪ್​ಗೆ ಪ್ರಯಾಣಿಸುತ್ತಿತ್ತು. ಈ ವೇಳೆ ಬಸ್​ಗೆ ಬೆಂಕಿ ತಗುಲಿದೆ.
ಸಂಜೆ 5 ಗಂಟೆಗೆ ವೇಳೆಗೆ ಬಸ್​ ಕೋಲ್ಕತ್ತಾದಿಂದ ಹೊರಟಿದೆ. 10 ಗಂಟೆಯ ವೇಳೆಗೆ ಪಶ್ವಿಮ ಬಂಗಾಳದ ಮಾಧಬ್​ಪುರ ಪ್ರದೇಶವನ್ನು ತಲುಪಿದೆ. ಎಸಿ ಬಸ್​ ಇದಾಗಿದ್ದು, 10 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಓರ್ವ ಹತನಾಗಿದ್ದಾನೆ. 30 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us