ಭೀಕರ ರಸ್ತೆ ಅಪಘಾತ; ಓವರ್​ಟೇಕ್ ಮಾಡಲು ಹೋಗಿ ಟ್ರ್ಯಾಕ್ಟರ್​ಗೆ ಗುದ್ದಿ ಬಸ್​; ನಾಲ್ವರು ಸಾವು

author-image
AS Harshith
Updated On
ಭೀಕರ ರಸ್ತೆ ಅಪಘಾತ; ಓವರ್​ಟೇಕ್ ಮಾಡಲು ಹೋಗಿ ಟ್ರ್ಯಾಕ್ಟರ್​ಗೆ ಗುದ್ದಿ ಬಸ್​; ನಾಲ್ವರು ಸಾವು
Advertisment
  • ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿದ್ದ ಸುಮಾರು 25ಕ್ಕೂ ಹೆಚ್ಚು ಜನರು
  • ಹುಲಿಗಿ ದರ್ಶನಕ್ಕೆ ಹೋಗಿ ವಾಪಸ್ಸಾಗುತ್ತಿದ್ದ ವೇಳೆ ದುರ್ಘಟನೆ
  • ಬಸ್​ ಚಾಲಕನ ತಪ್ಪಿಗೆ 4 ಸಾವು.. ಆಸ್ಪತ್ರೆಯಲ್ಲಿ ನರಳಾಡುತ್ತಿರುವ ಗಾಯಾಳುಗಳು

ಕೊಪ್ಪಳ: ಇಲ್ಲಿನ ಹೊಸಲಿಂಗಾಪುರ ಬಳಿ ಭೀಕರ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಬಸ್​ವೊಂದು ಟ್ರ್ಯಾಕ್ಟರ್ ಟ್ರ್ಯಾಲಿಗೆ ಹಿಂಬದಿಯಿಂದ ಗುದ್ದಿದೆ. ಪರಿಣಾಮ ಟ್ರ್ಯಾಲಿಯಲ್ಲಿದ್ದ ನಾಲ್ವರು ಮೃತರಾಗಿದ್ದಾರೆ. ಟ್ರ್ಯಾಲಿಯಲ್ಲಿದ್ದ 9 ಜನರಿಗೆ ಗಂಭೀರ ಗಾಯವಾಗಿದೆ.

ನಿನ್ನೆ ರಾತ್ರಿ ಸುಮಾರು 8 ಗಂಟೆಗೆ ನಡೆದಿದ್ದ ಘಟನೆ ಇದಾಗಿದೆ. ಸಾವನ್ನಪ್ಪಿದವರು ಯಲಬುರ್ಗಾದ ಕರಮುಡಿ ಮೂಲದವರು ಎಂದು ಗುರುತಿಸಲಾಗಿದೆ.

publive-image

ಹುಲಿಗಿ ದರ್ಶನಕ್ಕೆ ಕುಟುಂಬಸ್ಥರು

ಒಂದೇ ಕುಟುಂಬದವರು ಯಲಬುರ್ಗಾದಿಂದ ಹುಲಿಗಿ ದರ್ಶನಕ್ಕೆ ಟ್ರ್ಯಾಕ್ಟರ್​ನಲ್ಲಿ ಬಂದಿದ್ದರು. ದರ್ಶನ ಪಡೆದು ಮನೆಗೆ ಮರಳುವಾಗ ವೇಗವಾಗಿ ಬಂದ ಬಸ್​ವೊಂದು ಟ್ರ್ಯಾಕ್ಟರ್​ ಹಿಂಬದಿಗೆ  ಗುದ್ದಿದೆ. ಹೊಸಪೇಟೆ ಮೂಲದ ಟೂರಿಸ್ಟ್ ಹಾಗೂ ಟ್ರಾವೆಲ್ಸ್ ಬಸ್ ನಿಂದ ಅಪಘಾತ ಸಂಭವಿಸಿದೆ. ಬಸ್ ಗುದ್ದಿದ ರಭಸಕ್ಕೆ ಟ್ರ್ಯಾಕ್ಟರ್ ಪಲ್ಟಿಯಾಗಿತ್ತು. ಸುಮಾರು 25 ಕ್ಕೂ ಹೆಚ್ಚು ಜನರು ಟ್ರ್ಯಾಕ್ಟರ್​ನಲ್ಲಿ ಇದ್ದರು. ಅಪಘಾತ ಸಂಭವಿಸಿದಂತೆ ಬಸ್​ ಚಾಲಕ ಪರಾರಿಯಾಗಿದ್ದಾನೆ.

publive-image

ಇದನ್ನೂ ಓದಿ: ಮೊದಲೊಂದು ಮದುವೆ, 2 ಮಕ್ಕಳು.. ಆದ್ರೂ ಸೀರಿಯಲ್​ ಗೆಳತಿ ನೆನಪಿನಲ್ಲೇ ನಟ ಚಂದು ಆತ್ಮಹತ್ಯೆ ಮಾಡಿಕೊಂಡ್ರಾ?

ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ

ಮಕ್ಕಳು, ಮಹಿಳೆಯರು, ಯುವಕರು ಸೇರಿದಂತೆ ಸುಮಾರು 9 ಜನರಿಗೆ ಗಂಭೀರ ಗಾಯಗಳಾಗಿವೆ. ತಲೆ ಭಾಗ, ಎದೆ ಭಾಗ, ಕಾಲಿಗೆ ಪೆಟ್ಟು ಬಿದ್ದು ನರಳಾಡುತ್ತಿದ್ದರು. ಕೂಡಲೇ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

publive-image

ಇದನ್ನೂ ಓದಿ: ನಟಿ ಪವಿತ್ರಾ ಸಾವನ್ನು ಕಣ್ಣಾರೆ ಕಂಡ ಚಂದು.. ಗೆಳತಿ ಸಾವು ಅರಗಿಸಿಕೊಳ್ಳಲಾಗದೆ ಕಿರುತೆರೆ ನಟ ಆತ್ಮಹತ್ಯೆ

ಓವರ್​ ಟೇಕ್​ ಮಾಡಿದ ಚಾಲಕ

ಸ್ಥಳಕ್ಕೆ ಭೇಟಿ ನೀಡಿದ್ದ ಎಸ್ಪಿ ಯಶೋಧಾ ವಂಟಗೋಡಿ. ಬಸ್ ಚಾಲಕನಿಂದ ಈ ಅಪಘಾತ ನಡೆದಿದೆ ಎಂದು ಹೇಳಿದ್ದಾರೆ. ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ಇದ್ದವರು ಕೈಯಲ್ಲಿ ಸಿಗ್ನಲ್​ ಮಾಡಿದ್ರು, ಆದರೂ ಓವರ್ ಟೇಕ್ ಮಾಡಲು ಹೋಗಿ ಗುದ್ದಿದ್ದಾನೆ. ಗುದ್ದಿ ರಭಸಕ್ಕೆ ಬಸ್ ನ ಮುಂಭಾಗ ಸಂಪೂರ್ಣ ಡ್ಯಾಮೇಜ್ ಆಗಿದೆ. ಅಪಘಾತ ಹಿನ್ನೆಲೆ ರಾತ್ರಿಯೆಲ್ಲ ಟ್ರಾಫಿಕ್ ಜಾಮ್ ಆಗಿದೆ ಎಂದು ಹೇಳಿದ್ದಾರೆ.

publive-image

ಪೊಲೀಸರು ಬಸ್, ಟ್ರ್ಯಾಕ್ಟರ್ ತೆರವುಗೊಳಿಸಲು ರಾತ್ರಿಯೆಲ್ಲ ಹರಸಹಾಸ ಪಟ್ಟಿದ್ದಾರೆ. ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment