Advertisment

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಟಿಇಟಿ ತೇರ್ಗಡೆ ಕಡ್ಡಾಯದಿಂದ ವಿನಾಯಿತಿ : 6 & 7ನೇ ತರಗತಿಗೆ ಬೋಧನೆಗೂ ಅವಕಾಶ-ಕ್ಯಾಬಿನೆಟ್‌

ದೇಶದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಟಿಇಟಿ ತೇರ್ಗಡೆ ಆಗುವುದು ಕಡ್ಡಾಯ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಇದರಿಂದ 10-20 ವರ್ಷದಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವವರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದರು. ಈಗ ರಾಜ್ಯ ಸರ್ಕಾರ ಟಿಇಟಿಯಿಂದ ವಿನಾಯಿತಿ ನೀಡಿದೆ.

author-image
Chandramohan
primary school teachers

ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರೀಲೀಫ್ ಕೊಟ್ಟ ಕ್ಯಾಬಿನೆಟ್ ಸಭೆ

Advertisment
  • ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರೀಲೀಫ್ ಕೊಟ್ಟ ಕ್ಯಾಬಿನೆಟ್ ಸಭೆ
  • ಶಿಕ್ಷಕರಿಗೆ ಟಿಇಟಿ ಕಡ್ಡಾಯದಿಂದ ವಿನಾಯಿತಿ
  • ಆಯಾ ವಿಷಯಗಳಲ್ಲಿ ಪದವಿ ಹೊಂದಿದ್ದರೇ, 6, 7ನೇ ತರಗತಿಗೆ ಭೋದನೆಗೆ ಅವಕಾಶ

ಒಂದರಿಂದ ಐದನೇ ತರಗತಿವರೆಗಿನ ಪ್ರಾಥಮಿಕ ಶಾಲಾ ಶಿಕ್ಷಕರು ಆಯಾ ವಿಷಯಗಳಲ್ಲಿ ಪದವಿ ಹೊಂದಿದ್ದರೇ ಸಾಕು, ಆರು ಮತ್ತು ಏಳನೇ ತರಗತಿಗಳಿಗೆ ಪಾಠ ಮಾಡಬಹುದು ಎಂದು ರಾಜ್ಯ ಕ್ಯಾಬಿನೆಟ್ ತೀರ್ಮಾನ ಕೈಗೊಂಡಿದೆ.  ಟಿಇಟಿ( ಶಿಕ್ಷಕರ ಅರ್ಹತಾ ಪರೀಕ್ಷೆ) ಪ್ರಮಾಣ ಪತ್ರ ಹೊಂದಿರಬೇಕೆಂಬ ಷರತ್ತು ಅನ್ನು ಕೈ ಬಿಟ್ಟು 6 ಮತ್ತು 7ನೇ ತರಗತಿಗಳಿಗೆ ಭೋಧಿಸಲು ಅವಕಾಶ ಆಗುವಂತೆ ತಿದ್ದುಪಡಿ ಮಾಡಿ ಆಕ್ಟೋಬರ್  16 ರಂದು ಹೊರಡಿಸಿದ್ದ ವೃಂದ ಮತ್ತು ನೇಮಕಾತಿ (ತಿದ್ದುಪಡಿ) ಕರಡು ನಿಯಮಗಳಿಗೆ  ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. 
ಇದರಿಂದ ರಾಜ್ಯದಲ್ಲಿ 1.5 ಲಕ್ಷ ಶಿಕ್ಷಕರಿಗೆ ಅನುಕೂಲವಾಗಲಿದೆ. ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಟಿಇಟಿ ಪ್ರಮಾಣ ಪತ್ರ ಹೊಂದಿರಬೇಕೆಂಬ ಷರತ್ತು ಸಡಿಲಿಸುವ ನಿರ್ಧಾರವನ್ನು ರಾಜ್ಯ ಕ್ಯಾಬಿನೆಟ್ ಸಭೆಯಲ್ಲಿ ಕೈಗೊಳ್ಳಲಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರು ಅಗತ್ಯ ವಿಷಯಗಳಲ್ಲಿ ಪದವಿ ಹೊಂದಿದ್ದಲ್ಲಿ 6 ಮತ್ತು 7ನೇ ತರಗತಿಗೆ ಬೋಧಿಸಲು ಅರ್ಹರು ಎಂಬ ತೀರ್ಮಾನದಿಂದ 1.5 ಲಕ್ಷ ಶಿಕ್ಷಕರಿಗೆ ಅನುಕೂಲವಾಗಲಿದೆ ಎಂದು ಶಿಕ್ಷಕ ಸಂಘಟನೆಗಳು ಹೇಳಿವೆ. 
ಇತ್ತೀಚೆಗೆ ಸುಪ್ರೀಂಕೋರ್ಟ್, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಟಿಇಟಿ ತೇಗರ್ಡೆಯಾಗುವುದು ಕಡ್ಡಾಯ ಎಂದು ಆದೇಶಿಸಿತ್ತು. ಆದರೇ, ಕರ್ನಾಟಕ ರಾಜ್ಯ ಸರ್ಕಾರವು ಟಿಇಟಿ ಕಡ್ಡಾಯದಿಂದ ವಿನಾಯಿತಿ ನೀಡಿದೆ. ಕಡ್ಡಾಯ ನಿಯಮವನ್ನು ಸಡಿಲಿಸಿದ ಮೊದಲ ರಾಜ್ಯವಾಗಿದೆ.  ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರು ಹೊರತುಪಡಿಸಿ ಉಳಿದ ಎಲ್ಲ ಶಿಕ್ಷಕರು ಟಿಇಟಿ   ಅರ್ಹತೆ ಪ್ರಮಾಣಪತ್ರ ಹೊಂದಿರುವುದು ಕಡ್ಡಾಯ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.  ಸೇವೆಯಲ್ಲಿರುವ ಶಿಕ್ಷಕರಿಗೆ ಟಿಇಟಿ ಅರ್ಹತೆ ಪಡೆಯಲು 2-3 ವರ್ಷ ಕಾಲಾವಕಾಶ ನೀಡಬೇಕು.  ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರಿಗೆ ವಿನಾಯಿತಿ ನೀಡಿದ್ದರೂ, ಮುಂಬಡ್ತಿಗೆ ಅರ್ಹರಲ್ಲವೆಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. 
ಸುಪ್ರೀಂಕೋರ್ಟ್ ಆದೇಶದ ವಿರುದ್ಧ ರಾಜ್ಯ ಶಿಕ್ಷಕರ ಸಂಘ ಹಾಗೂ ಉಳಿದ ರಾಜ್ಯದ ಶಿಕ್ಷಕರ ಸಂಘಗಳು ದೆಹಲಿಗೆ ಹೋಗಿ ಹೋರಾಟ ನಡೆಸಿದ್ದವು. 
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ರಾಜ್ಯದ ಶಿಕ್ಷಣ ಇಲಾಖೆ ಹಾಗೂ ರಾಜ್ಯ ಸರ್ಕಾರದ ಮೇಲೆ  ಹಾಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಡ ಹೇರಿತ್ತು.  ಪರಿಣಾಮ ರಾಜ್ಯ ಕ್ಯಾಬಿನೆಟ್ ಪ್ರಾಥಮಿಕ ಶಾಲಾ ಶಿಕ್ಷಕರಿಗೆ  ಟಿಇಟಿ ಕಡ್ಡಾಯ ನಿಯಮದಿಂದ ವಿನಾಯಿತಿ ನೀಡಿದೆ. ಇದರಿಂದ ಈಗಾಗಲೇ 10-20 ವರ್ಷಗಳಿಂದ ಶಿಕ್ಷಕರಾಗಿ ನೇಮಕಗೊಂಡ ಶಾಲೆಗಳಲ್ಲಿ ಬೋಧನೆ ಮಾಡುತ್ತಿರುವ ಶಿಕ್ಷಕರು ಈಗ ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.  

Advertisment

primary school teachers 2


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

TET EXEMPTION TO SCHOOL TEACHERS IN KARNATAKA
Advertisment
Advertisment
Advertisment