/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ
- ಮಾತಿನಿಂದ ತೊಂದರೆಯಾಗಿ ಕುಟುಂಬದ ಮೇಲೆ ಪರಿಣಾಮ ಬೀರಲಿದೆ
- ವೃತ್ತಿ ಮತ್ತು ವ್ಯಾಪಾರದಲ್ಲಿ ಅನುಕೂಲವಿದೆ
- ಮನೆ ಬದಲಾಯಿಸುವುದು ಸಧ್ಯಕ್ಕೆ ಬೇಡ
- ಮನೆಯಲ್ಲಿ ಕಿರಿಕಿರಿ ಆಗಬಹುದು
- ಆರೋಗ್ಯ, ಹಣ ಉತ್ತಮವಾಗಿರುತ್ತದೆ
- ಇಂದು ವಿದ್ಯಾರ್ಥಿಗಳಿಗೆ ಶುಭವಿದೆ
- ಸರಸ್ವತಿಯನ್ನು ಪ್ರಾರ್ಥಿಸಿ
ವೃಷಭ
- ಮಾನಸಿಕ ನೆಮ್ಮದಿ ಸಿಕ್ಕರೆ ಉಳಿದೆಲ್ಲಾ ನಿಮ್ಮ ವಶವಾಗಬಹುದು
- ನಿಮ್ಮ ಧಾರಾಳತೆಯಿಂದ ಬೇರೆಯವರಿಗೆ ಅನುಕೂಲವಿದೆ
- ಹಿರಿಯರ ಆಶ್ರಯದಿಂದ ಸಮಾಧಾನ ಸಿಗಲಿದೆ
- ಇಂದು ಯಾವುದೇ ವಿವಾದಗಳು ಬೇಡ
- ಕ್ರೀಡಾಪಟುಗಳು ವಿಶೇಷ ಎಚ್ಚರಿಕೆ ವಹಿಸಬೇಕು
- ಈ ದಿನ ಮಾನಸಿಕ ಶಾಂತಿ ಕಡಿಮೆ ಇರಲಿದೆ
- ಗರ್ಭಿಣಿ ಸ್ತ್ರೀಯರು ಎಚ್ಚರವಹಿಸಬೇಕು
- ಕೃಷ್ಣನನ್ನು ತುಳಸಿಯಿಂದ ಪೂಜಿಸಿ
ಮಿಥುನ
- ಅಪರಿಚಿತ ವ್ಯಕ್ತಿಯೊಂದಿಗೆ ವಿವಾದ ಆಗಬಹುದು
- ಆರ್ಥಿಕ ತೊಂದರೆಯಿಲ್ಲ, ಮಕ್ಕಳ ಬಗ್ಗೆ ಎಚ್ಚರಿಕೆಯಿರಲಿ
- ಕೇವಲ ಹಣದಿಂದ ಏನೂ ಸಾಧಿಸಲಾಗದು ಎಂದು ತಿಳಿಯಬೇಕಾದ ದಿನ
- ಮನೆಯ ಸಮಸ್ಯೆಗಳಿಂದ ಉದ್ವೇಗಗೊಳ್ಳುತ್ತೀರಿ
- ಮಾನಸಿಕ ಧೈರ್ಯ ಕಡಿಮೆ ಆಗುವುದರಿಂದ ಬೇಸರ
- ಊಹಾಪೋಹಗಳಿಂದ ಮಾನಸಿಕ ಖಿನ್ನತೆ ಉಂಟಾಗಲಿದೆ
- ಗೋವಿಗೆ ಅಕ್ಕಿಬೆಲ್ಲ ನೀಡಿ
ಕಟಕ
- ಕೌಟುಂಬಿಕ ಸಾಮರಸ್ಯದಿಂದ ಸಂತೋಷ ಅನುಭವಿಸಿ
- ನಿಮ್ಮ ವ್ಯವಹಾರದಿಂದ ಬೇರೆಯವರಿಗೆ ಲಾಭ
- ಯಾರನ್ನೂ ಹೆಚ್ಚು ಹಚ್ಚಿಕೊಳ್ಳಬೇಡಿ ದುಃಖ ಆಗಬಹುದು
- ಇಂದು ಮಕ್ಕಳಿಂದ ಖುಷಿ ಸಿಗಲಿದೆ
- ಆಹಾರ ವ್ಯತ್ಯಯ ಆಗುವುದರಿಂದ ಆರೋಗ್ಯ ವ್ಯತ್ಯಾಸ ಆಗಬಹುದು
- ಮನಸ್ಸಿಗೆ ನೆಮ್ಮದಿಯಿಂದಿರುವ ದಿನ
- ಶ್ರೀರಾಮನನ್ನು ಪ್ರಾರ್ಥಿಸಿ
ಸಿಂಹ
- ಶಿಕ್ಷಣರಂಗದ ವ್ಯಕ್ತಿಗಳಿಗೆ ಅನುಕೂಲವಿದೆ
- ಬೇರೆಯವರ ಕಷ್ಟದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು
- ಬಂಧುಗಳಿಂದ ಸಹಾಯ, ಅನುಕೂಲವಿದೆ
- ಇಂದು ಯಶಸ್ಸಿದೆ ಪ್ರಯತ್ನ ಮಾಡಿ
- ಇಂದು ನಿಮ್ಮ ಮನಸ್ಥಿತಿಯನ್ನು ಹಾಗೇ ಕಾಯ್ದುಕೊಳ್ಳಿ
- ಈ ದಿನ ಸಾಲಗಾರರ ಕಾಟ ಕಾಡಬಹುದು
- ರಾಜರಾಜೇಶ್ವರಿಯನ್ನು ಅರ್ಚಿಸಿ
ಕನ್ಯಾ
- ಕಾರ್ಯಕ್ಷೇತ್ರಗಳಲ್ಲಿ ಶೀಘ್ರ ಬದಲಾವಣೆಯಾಗಬಹುದು
- ಇಂದು ಪ್ರೇಮಿಗಳಿಗೆ ಉತ್ತಮ ದಿನ
- ನಿಮ್ಮ ಸಂತೋಷವನ್ನು ಬೇರೆಯವರಿಗೆ ಹಂಚಿ
- ಬೇರೆಯವರ ಕಷ್ಟವನ್ನು ನಿಮ್ಮ ಹತ್ತಿರ ಹೇಳಿಕೊಳ್ಳಬಹುದು
- ಬೇರೆಯವರ ಪ್ರೀತಿಗೆ ನೀವು ಪಾತ್ರರಾಗಬಹುದು
- ಹಣದ ವಿಚಾರದಲ್ಲಿ ನಿಮ್ಮ ಆದಾಯ ಗಮನಿಸಿ
- ಇಷ್ಟದೇವತಾ ಪ್ರಾರ್ಥನೆ
ತುಲಾ
- ಮಾನಸಿಕ ದುಃಖ ನಿಮ್ಮನ್ನು ಕಾಡಬಹುದು
- ಮನೆಯಲ್ಲಿ ಪರಸ್ಪರ ಅನ್ಯೋನ್ಯತೆ ಕಾಪಾಡಿಕೊಳ್ಳಬೇಕು
- ಇಂದು ನಿಮ್ಮ ಹತ್ತಿರ ಹಣ ಇರಲಿದೆ ಆದರೆ ನೆಮ್ಮದಿಯಿಲ್ಲ
- ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಬೇಕು
- ನಿಮ್ಮ ಮಾತಿನಿಂದಲೇ ಅವಮಾನ ಪಡುತ್ತೀರಿ
- ಇಂದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು
- ದುರ್ಗಾದೇವಿಯನ್ನು ಪ್ರಾರ್ಥಿಸಿ
ವೃಶ್ಚಿಕ
- ವೈವಾಹಿಕ ಜೀವನದ ಏರಿಳಿತಗಳ ಅನುಭವ ಆಗಲಿದೆ
- ಇಂದು ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ
- ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೀರಿ
- ಆಧ್ಯಾತ್ಮಿಕ ಲಾಭಕ್ಕಾಗಿ ಧ್ಯಾನ, ಯೋಗ ಮಾಡಿ
- ಇಂದು ಪ್ರೇಮಿಗಳಿಗೆ ಸಾಧಾರಣವಾದ ದಿನ
- ನಿಮ್ಮ ಬುದ್ಧಿವಂತಿಕೆ ಕೆಲಸ ಮಾಡುತ್ತದೆ
- ವಿಷ್ಣುವನ್ನು ಸ್ಮರಿಸಿ
ಧನುಸ್ಸು
- ಮಧ್ಯವರ್ತಿಗಳಿಂದ ನಿಮ್ಮ ಕೆಲಸಕ್ಕೆ ತೊಂದರೆಯಾಗಬಹುದು
- ಹಣ ಬರುತ್ತದೆ, ಅಪಮಾನವೂ ಇರುತ್ತದೆ
- ಪ್ರಯತ್ನ ಪೂರ್ವಕವಾಗಿ ಸಂತೋಷ ಪಡಬೇಕು
- ಈ ದಿನ ಕೋಪ ನಿಯಂತ್ರಣದಲ್ಲಿರಲಿ
- ಕೆಲವು ಗಂಭೀರ ಸಮಸ್ಯೆಗಳು ಎದುರಾಗುತ್ತವೆ
- ಕುಟುಂಬ ಸಂಘರ್ಷ ಉಂಟಾಗಬಹುದು
- ಈಶ್ವರಾರಾಧನೆ ಮಾಡಿ
ಮಕರ
- ವಾದ-ವಿವಾದಗಳ ಸುಳಿಯಲ್ಲಿ ಸಿಲುಕುತ್ತೀರಿ
- ದಾಂಪತ್ಯದಲ್ಲಿ ಅಭಿಪ್ರಾಯ ಭೇದ
- ಇಂದು ಆಹಾರ ನಿಯಂತ್ರಣದಲ್ಲಿರಲಿ
- ಬೇರೆಯವರ ಅವಲಂಬನೆ ಬೇಡ
- ವೃತ್ತಿಯಲ್ಲಿ ಆರ್ಥಿಕ ನಷ್ಟ ಆಗಬಹುದು
- ಕುಲದೇವತಾ ಆರಾಧನೆ ಮಾಡಿ
ಕುಂಭ
- ಹಳೆಯ ಗೆಳೆಯರ ಸಂಪರ್ಕದಿಂದ ಸಮಸ್ಯೆಯಾಗಬಹುದು
- ಹೊಸ ವಸ್ತ್ರ ಖರೀದಿ ವಿಚಾರದಲ್ಲಿ ನಿರಾಸೆ ಆಗಬಹುದು
- ಕುಟುಂಬ ಸದಸ್ಯರ ಬಗ್ಗೆ ಕಾಳಜಿಯಿರಲಿ
- ಸಮಯೋಚಿತ ಬದಲಾವಣೆಗೆ ಆದ್ಯತೆ ನೀಡಿ
- ಆರ್ಥಿಕ ಸಮಸ್ಯೆಯಿರುವುದಿಲ್ಲ
- ನವಗ್ರಹರ ಆರಾಧನೆ ಮಾಡಿ
ಮೀನ
- ಮಕ್ಕಳೊಂದಿಗೆ ನಿಮ್ಮ ಅಮೂಲ್ಯವಾದ ಸಮಯ ಕಳೆಯುತ್ತೀರಿ
- ಸಹೋದರರ ಸಹಕಾರ ಸಿಗಲಿದೆ
- ಯಾವುದೇ ರೀತಿಯ ಹೊಸ ವ್ಯವಹಾರ ಬೇಡ
- ವೃತ್ತಿಯಲ್ಲಿ ಸ್ವಲ್ಪ ವ್ಯತ್ಯಯ ಆಗಬಹುದು
- ಹಳೆಯ ನೆನಪಿನಿಂದ ಸಂತೋಷ ಸಿಗಲಿದೆ
- ಹಣದ ವಿಚಾರದಲ್ಲಿ ಸ್ವಲ್ಪ ಸಮಸ್ಯೆಯಾಗಬಹುದು
- ಲಕ್ಷ್ಮಿದೇವಿ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ