/newsfirstlive-kannada/media/post_attachments/wp-content/uploads/2025/05/Axar_Patel-3.jpg)
ತವರಿನ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ತಂಡ ಅದ್ಭುತವಾಗಿ ಗೆಲುವು ಸಾಧಿಸಿ ಪ್ಲೇ ಆಫ್ಗೆ ಎಂಟ್ರಿಕೊಟ್ಟಿದೆ. ಐಪಿಎಲ್ನ ಆರಂಭದಲ್ಲಿ ಟೇಬಲ್ ಟಾಪರ್ ಆಗಿದ್ದ ಡೆಲ್ಲಿ ಕ್ಯಾಪಿಟಲ್ ಬರು ಬರುತ್ತಾ ಹೀನಾಯ ಪ್ರದರ್ಶನ ನೀಡಿ ಇದೀಗ ಪ್ಲೇ ಆಫ್ಗೆ ಹೋಗುವ ಒಂದೊಳ್ಳೆ ಅವಕಾಶ ಕೈಚೆಲ್ಲಿದೆ. ಈ ಎಲ್ಲದರ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಪಂದ್ಯಕ್ಕೆ ಗೈರು ಹಾಜರಾಗಿದ್ದು ಏಕೆ?.
ತಂಡದ ನಾಯಕ ಅಕ್ಷರ್ ಪಟೇಲ್ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ವಿರುದ್ಧ ಅಖಾಡಕ್ಕೆ ಇಳಿದು ಸೋಲೋಪ್ಪಿಕೊಂಡಿದೆ. ಅಕ್ಷರ್ ಪಟೇಲ್ ಅವರ ಜವಾಬ್ದಾರಿಯನ್ನು ಫಾಫ್ ಡುಪ್ಲೆಸಿಸ್ ವಹಿಸಿಕೊಂಡಿದ್ದರು. ನಾಯಕನಾಗಿ ಟಾಸ್ ಗೆದ್ದ ಫಾಫ್, ಪಂದ್ಯವನ್ನು ಗೆಲ್ಲಲು ಆಗಲಿಲ್ಲ. ಮುಂಬೈ ಇಂಡಿಯನ್ಸ್ ನೀಡಿದ್ದ ಸಾಧಾರಣ ಮೊತ್ತದ ಟಾರ್ಗೆಟ್ ತಲುಪಲಾಗದೇ ಡೆಲ್ಲಿ ತಂಡ ಮಂಡಿಯೂರಿದೆ.
ಇದನ್ನೂ ಓದಿ:ಪ್ಲೇ ಆಫ್ ರೇಸ್; ಡೆಲ್ಲಿ ಟೀಮ್ ಅನ್ನು ಹೊರ ದಬ್ಬಿದ ಪಾಂಡೆ ಪಡೆ.. ಮುಂಬೈ ಗೆಲುವಿಗೆ ಕಾರಣ?
2025ರ ಐಪಿಎಲ್ ಆರಂಭದಿಂದಲೂ ಡೆಲ್ಲಿ ತಂಡದ ನಾಯಕನಾಗಿದ್ದ ಅಕ್ಷರ್ ಪಟೇಲ್ ಅವರು ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದಾರೆ. ಇದರಿಂದ ಆಗಿಯೇ ಮುಂಬೈ ಇಂಡಿಯನ್ಸ್ ಜೊತೆಗಿನ ಅತಿ ಮುಖ್ಯವಾದ ಪಂದ್ಯದಿಂದ ಹೊರಗುಳಿದಿದ್ದರು. ತೀವ್ರ ಜ್ವರದಿಂದ ಬಳಲುತ್ತಿರುವ ಅಕ್ಷರ್ ಪಟೇಲ್, ವೈದ್ಯರಿಂದ ಚಿಕಿತ್ಸೆ ಪಡೆದುಕೊಂಡಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ಆಲ್ರೌಂಡರ್ ಪ್ರದರ್ಶನ ನೀಡುವ ಅಕ್ಷರ್ ಪಟೇಲ್ ತಂಡದಲ್ಲಿ ಇದ್ದಿದ್ದರೇ ಗೆಲುವಿಗೆ ಮುಖ್ಯ ಪಾತ್ರವಹಿಸುತ್ತಿದ್ದರು. ಅತ್ಯುತ್ತಮ ಬೌಲಿಂಗ್ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಒಳ್ಳೆಯ ಬ್ಯಾಟಿಂಗ್ ಮಾಡುವ ಅಕ್ಷರ್ ಪಟೇಲ್ ತಂಡವನ್ನು ಸೋಲಿನ ಸುಳಿಯಿಂದ ಪಾರು ಮಾಡುವ ಚಾಣಕ್ಷರಾಗಿದ್ದಾರೆ. ಡೆಲ್ಲಿ ತಂಡದ ಸೋಲಿಗೆ ಈ ಆಲ್ರೌಂಡರ್ ಅನುಪಸ್ಥಿತಿಯು ಒಂದು ಕಾರಣ ಎಂದು ಹೇಳಬಹುದು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ