/newsfirstlive-kannada/media/post_attachments/wp-content/uploads/2024/12/bhavya6.jpg)
ಕನ್ನಡದ ಬಿಗ್ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಗಳು ಒಬ್ಬರ ಮೇಲೆ ಒಬ್ಬರು ದ್ವೇಷ ಸಾಧಿಸಿ ಗೆಲುವು ಸಾಧಿಸುತ್ತಿದ್ದಾರಾ ಎಂಬ ಅನುಮಾನ ಮೂಡಿದೆ. ಭಾನುವಾರದ ಸಂಚಿಕೆಯಲ್ಲಿ ನಡೆದ ಚಟುವಟಿಕೆಯಲ್ಲಿ ಈ ವಿಚಾರದ ಬಗ್ಗೆ ಪ್ರಸ್ತಾಪ ಮಾಡಲಾಗಿದೆ.
ಇದನ್ನೂ ಓದಿ:BBK11: ಬಿಗ್ ಬಾಸ್ ಮನೆಯಲ್ಲಿ ಐಶ್ವರ್ಯಗೆ ಬಿಗ್ ಶಾಕ್.. ಗಂಟು ಮೂಟೆ ಕಟ್ಟಿದ್ದು ಯಾರು?
ಹೌದು, ಕನ್ನಡ ಬಿಗ್ಬಾಸ್ ಸೀಸನ್ 11ಕ್ಕೆ ಕಿರುತೆರೆ ನಟಿಯರು ಎಂಟ್ರಿ ಕೊಟ್ಟಿದ್ದು ವೀಕ್ಷಕರಿಗೆ ಖುಷಿ ಕೊಟ್ಟಿತ್ತು. ಆದ್ರೆ, ಕಿಚ್ಚ ಸುದೀಪ್ ಮನೆಯವರಿಗೆ ಒಂದು ಚಟುವಟಿಕೆ ಕೊಟ್ಟಿದ್ದರು. ಸ್ಪರ್ಧಿಗಳ ಮುಂದೆ ಅವರಲ್ಲಿ ಇದು ಇಷ್ಟ ಇಲ್ಲ, ಇದನ್ನು ಅವರು ಬದಲಾಯಿಸಿಕೊಳ್ಳಬೇಕು ಎಂಬುವುದನ್ನು ಹೇಳಿ ಆ ತಟ್ಟೆಗೆ ಸುತ್ತಿಗೆಯಿಂದ ಹೊಡೆದು ಬ್ರೇಕ್ ಮಾಡಬೇಕು ಅಂತ ಕಿಚ್ಚ ಸುದೀಪ್ ಹೇಳಿದ್ದಾರೆ.
ಒಬ್ಬೊಬ್ಬರಾಗಿ ಬಂದು ಯಾವ ಸ್ಪರ್ಧಿ ಆಟವನ್ನು ಬದಲಾಯಿಸಿಕೊಳ್ಳಬೇಕು ಅಂತ ಫೋಟೋ ಅಂಟಿಸಿ ಸುತ್ತಿಗೆಯಿಂದ ಹೊಡೆದು ಬ್ರೇಕ್ ಮಾಡಿದ್ದಾರೆ. ಆಗ ಐಶ್ವರ್ಯಾ ಭವ್ಯಾ ಹಾಗೂ ತ್ರಿವಿಕ್ರಮ್ ಫೋಟೋವನ್ನು ತಟ್ಟೆಗೆ ಹಚ್ಚಿ ಸುತ್ತಿಗೆಯಿಂದ ಹೊಡೆದು ಬ್ರೇಕ್ ಮಾಡಿದ್ದಾರೆ. ಆಗ ಇದಕ್ಕೆ ಕಾರಣ ಕೊಟ್ಟ ಐಶ್ವರ್ಯಾ, ಎಲ್ಲ ಟಾಸ್ಕ್ನಲ್ಲಿ ತುಂಬಾ ಚೆನ್ನಾಗಿ ಆಡುತ್ತಾರೆ. ಇಲ್ಲಿ ಇರೋದೇ ಒಂದು ಕಪ್ ಅದಕ್ಕಾಗಿ ಗಮನ ಕೊಡಿ. ಇದರ ಮಧ್ಯೆ ಎಲ್ಲೋ ಒಬ್ಬರ ಜೊತೆಗೆ ನೀವು ಕಳೆದು ಹೋಗುತ್ತಿದ್ದೀರಿ, ಅದರಿಂದ ಆಚೆ ಬಂದು ಎಲ್ಲರ ಜೊತೆಗೆ ಇರಿ ಅಂತ ಭವ್ಯಾ ಗೌಡಗೆ ಹೇಳಿದ್ದಾರೆ.
ಇದಾದ ಬಳಿಕ ತ್ರಿವಿಕ್ರಮ್ ಬಗ್ಗೆ ಮಾತಾಡಿದ ಐಶ್ವರ್ಯಾ, ಈ ವಾರದಲ್ಲಿ ನೀವು ತುಂಬಾ ವೈಯಕ್ತಿವಾಗಿ ತೆಗೆದುಕೊಂಡಿದ್ದೀರಿ. ಆದ್ರೆ, ನೀವು ಈ ವಾರ ಕೊಟ್ಟ ಟಾಸ್ಕ್ನಲ್ಲಿ ನನ್ನ ಮೇಲೆ ದ್ವೇಷ ಸಾಧಿಸಿದ್ರಿ. ಇದನ್ನೂ ಬಿಟ್ಟು ನೀವು ಹೊಸ ವರ್ಷವನ್ನು ಶುರು ಮಾಡಿ ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ