/newsfirstlive-kannada/media/post_attachments/wp-content/uploads/2025/05/RAJAT_PATIDAR_1.jpg)
ಈ ಬಾರಿಯ ಐಪಿಎಲ್ ಅಂತಿಮಘಟ್ಟ ತಲುಪಿದ್ದರೂ, ಯಾವುದೇ ತಂಡ ಈವರೆಗೂ ಪ್ಲೇಆಫ್ಗೆ ಎಂಟ್ರಿ ಕೊಟ್ಟಿಲ್ಲ. ಇದರಿಂದ ಐಪಿಎಲ್ ಮತ್ತಷ್ಟು ರೋಚಕತೆ ಪಡೆದುಕೊಂಡಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಗುಜರಾತ್ ಅನ್ನು ಆರ್ಸಿಬಿ ಹಿಂದಿಕ್ಕಿ ಮೊದಲ ಸ್ಥಾನ ಸ್ವೀಕರಿಸಿದೆ. ಇದರ ಬೆನ್ನಲ್ಲೇ ಆರ್ಸಿಬಿ ಅಭಿಮಾನಿಗಳಿಗೆ ಕ್ಯಾಪ್ಟನ್ ರಜತ್ ಪಾಟಿದಾರ್ ಧನ್ಯವಾದಗಳನ್ನು ಹೇಳಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ ಪಂದ್ಯ ಮಳೆಯಿಂದ ರದ್ದು ಆಯಿತು. ಮೇ 17 ರಂದು ನಡೆಯಬೇಕಿದ್ದ ಪಂದ್ಯಕ್ಕೆ ಟಾಸ್ ಹಾಕುವುದಕ್ಕೂ ಅವಕಾಶ ಕೊಡದ ಮಳೆ, ಆಡದಂತೆ ಮಾಡಿತು. ಈ ಪಂದ್ಯ ನೋಡಲೆಂದು ಬಂದಿದ್ದ ಸಾವಿರಾರು ಅಭಿಮಾನಿಗಳು ಕೊನೆವರೆಗೂ ಕಾದು ಕುಳಿತಿರುವುದನ್ನು ನೋಡಿ, ನಾಯಕ ರಜತ್ ಪಾಟಿದಾರ್ ಥ್ಯಾಂಕ್ಸ್ ಹೇಳಿದ್ದಾರೆ.
ಇದನ್ನೂ ಓದಿ: RCB ಪ್ಲೇ ಆಫ್ ಸುಲಭವಲ್ಲ, ಮತ್ತಷ್ಟು ಕಷ್ಟ ಕಷ್ಟ.. 5 ಟೀಮ್ಗಳ ಪಾಯಿಂಟ್ಸ್ ಹೇಗಿದೆ?
ಎಂ.ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಿದ್ದ ಎಲ್ಲ ಆರ್ಸಿಬಿ ಅಭಿಮಾನಿಗಳಿಗೆ ಧನ್ಯವಾದಗಳು. ಪಂದ್ಯ ನಡೆಯುತ್ತದೆ ಎಂದು ಆರಂಭದಿಂದಲೂ ಬಹಳ ಸಮಯ ಕಾದು ಕಾದು ಸುಸ್ತಾದರೂ ನಿಮ್ಮ ಅಭಿಮಾನ ಬೀಡಲಿಲ್ಲ. ಮಳೆಯ ನಡುವೆ ದೀರ್ಘವಾಗಿ ಕಾದಿದ್ದಕ್ಕಾಗಿ ನಿಮಗೆಲ್ಲರಿಗೂ ಧನ್ಯವಾದ. ತಂಡಕ್ಕಾಗಿ ನೀವು ಮಾಡುತ್ತಿರುವ ಸಪೋರ್ಟ್ ಮೆಚ್ಚುವಂತಹದ್ದು. ನಿಮ್ಮ ಈ ಬೆಂಬಲ ಮುಂದೆಯೂ ಹೀಗೆ ಇರಲಿ. ಎಲ್ಲರಿಗೂ ವಿ ಆಲ್ ಲವ್ ಯು ಎಂದು ಹೇಳಿದ್ದಾರೆ.
ಪ್ಲೇ ಆಫ್ಗೆ ರಜತ್ ಪಡೆಗೆ ಇನ್ನೊಂದು ಅಂಕ ಮಾತ್ರ ಬಾಕಿ ಇದೆ. ಪಂದ್ಯ ರದ್ದುಗೊಂಡ ಹಿನ್ನೆಲೆಯಲ್ಲಿ ಎರಡೂ ತಂಡಗಳು ತಲಾ ಒಂದೊಂದು ಪಾಯಿಂಟ್ಸ್ ಪಡೆದುಕೊಂಡಿವೆ. ಒಟ್ಟು 17 ಅಂಕಗಳಿಂದ ಆರ್ಸಿಬಿ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ಸ್ಥಾನಕ್ಕೆ ಏರಿದೆ. ಮಳೆಯಿಂದ ಐಪಿಎಲ್ ಪಂದ್ಯ ನಡೆಯದಿದ್ದಕ್ಕೆ ಕೋಲ್ಕತ್ತ ತಂಡ ಟೂರ್ನಿಯಿಂದಲೇ ಹೊರಬಿದ್ದಿದೆ. ಇದರ ಜೊತೆಗೆ ಆರ್ಸಿಬಿ ಪ್ಲೇ ಆಫ್ಗೆ ಪ್ರವೇಶ ಮಾಡಲಾಗಲಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ