/newsfirstlive-kannada/media/post_attachments/wp-content/uploads/2024/06/ROHIT-SHARMA-14.jpg)
ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾಗೆ ದೊಡ್ಡ ಆಘಾತದ ಸುದ್ದಿ ಒಂದು ಕಾದಿತ್ತು. ಬಾರ್ಡರ್ ಗವಾಸ್ಕರ್ ಟೆಸ್ಟ್ ಸೀರಿಸ್ ಮಧ್ಯೆಯೇ ಟೀಮ್​ ಇಂಡಿಯಾದ ಸ್ಟಾರ್​ ಆಲ್​ರೌಂಡರ್​​​ ಆರ್​. ಅಶ್ವಿನ್​​​ ಅವರು ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ರು. ಅಶ್ವಿನ್ ಅವರ ಈ ದಿಢೀರ್ ನಿರ್ಧಾರ ಭಾರತ ಕ್ರಿಕೆಟ್ ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿತ್ತು.
ಆರ್​. ಅಶ್ವಿನ್​ ನಿವೃತ್ತಿ ಘೋಷಿಸಿ ಇಷ್ಟು ದಿನ ಆಯ್ತು. ಈಗ ಮೊದಲ ಬಾರಿಗೆ ಕ್ಯಾಪ್ಟನ್​ ರೋಹಿತ್​ ಶರ್ಮಾ ಮಾತಾಡಿದ್ದಾರೆ. ಟೀಮ್​ ಇಂಡಿಯಾದ ಸ್ಟಾರ್​ ಆಲ್​ರೌಂಡರ್​ ಆರ್. ಅಶ್ವಿನ್. ಇವರು ಮ್ಯಾಚ್ ವಿನ್ನರ್ ಕೂಡ. ಇಂತಹ ಸ್ಪಿನ್ ಮಾಂತ್ರಿಕನನ್ನು ಪಡೆಯಲು ಭಾರತ ಕ್ರಿಕೆಟ್​ ತಂಡ ಅದೃಷ್ಟ ಮಾಡಿತ್ತು ಎಂದರು.
ಭಾರತ ಕ್ರಿಕೆಟ್ ತಂಡಕ್ಕೆ ಅಶ್ವಿನ್ ಅವರ ಕೊಡುಗೆ ದೊಡ್ಡದು. ತವರಿನಲ್ಲಿ ಅಶ್ವಿನ್ ಅವರ ಚಮತ್ಕಾರದಿಂದ ಬಹಳಷ್ಟು ಟೆಸ್ಟ್ಗಳನ್ನ ಗೆದ್ದಿದ್ದೇವೆ. ಹೀಗಾಗಿ ಇವರು ಬಿಗ್ ಮ್ಯಾಚ್ ವಿನ್ನರ್ ಅನ್ನೋದರಲ್ಲಿ ಸಂಶಯವೇ ಇಲ್ಲ. ಇವರನ್ನು ಕೆಲವು ಪಂದ್ಯಗಳಲ್ಲಿ ಬೆಂಚ್​ ಕಾಯಿಸಿದ್ದು ನಿಜ. ಎಷ್ಟೇ ದೊಡ್ಡ ಆಟಗಾರನಾದ್ರೂ ಕೆಲವು ಪಂದ್ಯಗಳಲ್ಲಿ ಬೆಂಚ್​ ಕಾಯಲೇಬೇಕು. ನಾನು ಹಲವು ಬಾರಿ ಬೆಂಚ್​ ಕಾದಿದ್ದೇನೆ. ಇದು ಅವರಿಗೆ ಬೇಸರ ತರಿಸಿರಬಹುದು ಎಂದರು.
ಆರಂಭದಲ್ಲಿ ಅಶ್ವಿನ್ ಆರಂಭಿಕ ಬ್ಯಾಟ್ಸ್ಮನ್ ಆಗಿದ್ದ. ಕೆಲವು ವರ್ಷಗಳ ಬಳಿಕ ಅಶ್ವಿನ್ ಸ್ಪಿನ್ನರ್​ ಆದರು. ಅವರು 5 ಮತ್ತು 7 ವಿಕೆಟ್ ತೆಗೆದಾಗ ನನಗೆ ಅಚ್ಚರಿ ಆಗುತ್ತಿತ್ತು. ಬ್ಯಾಟ್ಸ್ಮನ್ ಆಗಿದ್ದ ಇವರು ಬೌಲರ್ ಆಗಿ ಬದಲಾಗಿದ್ದು ಶಾಕಿಂಗ್ ಸುದ್ದಿ ಎಂದರು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ