ಭಾರತದ ಈ ಸ್ಟಾರ್​ ಪ್ಲೇಯರ್​ ನಿವೃತ್ತಿ ಘೋಷಿಸಲು ನಾವೇ ಕಾರಣ; ಸ್ಫೋಟಕ ಸತ್ಯ ಬಿಚ್ಚಿಟ್ಟ ರೋಹಿತ್

author-image
Ganesh Nachikethu
Updated On
‘ಇದು ನನ್ನ ಕೊನೆಯ ಪಂದ್ಯ..’ ಕೊಹ್ಲಿ, ಬೂಮ್ರಾ, ಪಾಂಡ್ಯ ಬಗ್ಗೆಯೂ ಮಾತನಾಡಿದ ರೋಹಿತ್..
Advertisment
  • ಆರ್​. ಅಶ್ವಿನ್​ ನಿವೃತ್ತಿ ಬಗ್ಗೆ ಮಾತಾಡಿದ ಕ್ಯಾಪ್ಟನ್​ ರೋಹಿತ್​​
  • ನಮ್ಮಿಂದ ಅಶ್ವಿನ್​​ಗೆ ಬೇಸರ ಆಗಿದ್ದು ನಿಜ ಎಂದ ಹಿಟ್​ಮ್ಯಾನ್​​
  • ಹೀಗಾಗಿ ನಿವೃತ್ತಿ ಘೋಷಿಸಿದ್ದಾರೆ ಅಶ್ವಿನ್​ ಎಂದ ಕ್ಯಾಪ್ಟನ್​..!

ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾಗೆ ದೊಡ್ಡ ಆಘಾತದ ಸುದ್ದಿ ಒಂದು ಕಾದಿತ್ತು. ಬಾರ್ಡರ್ ಗವಾಸ್ಕರ್ ಟೆಸ್ಟ್ ಸೀರಿಸ್ ಮಧ್ಯೆಯೇ ಟೀಮ್​ ಇಂಡಿಯಾದ ಸ್ಟಾರ್​ ಆಲ್​ರೌಂಡರ್​​​ ಆರ್​. ಅಶ್ವಿನ್​​​ ಅವರು ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ರು. ಅಶ್ವಿನ್ ಅವರ ಈ ದಿಢೀರ್ ನಿರ್ಧಾರ ಭಾರತ ಕ್ರಿಕೆಟ್ ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿತ್ತು.

publive-image

ಆರ್​. ಅಶ್ವಿನ್​ ನಿವೃತ್ತಿ ಘೋಷಿಸಿ ಇಷ್ಟು ದಿನ ಆಯ್ತು. ಈಗ ಮೊದಲ ಬಾರಿಗೆ ಕ್ಯಾಪ್ಟನ್​ ರೋಹಿತ್​ ಶರ್ಮಾ ಮಾತಾಡಿದ್ದಾರೆ. ಟೀಮ್​ ಇಂಡಿಯಾದ ಸ್ಟಾರ್​ ಆಲ್​ರೌಂಡರ್​ ಆರ್. ಅಶ್ವಿನ್. ಇವರು ಮ್ಯಾಚ್‌ ವಿನ್ನರ್‌ ಕೂಡ. ಇಂತಹ ಸ್ಪಿನ್ ಮಾಂತ್ರಿಕನನ್ನು ಪಡೆಯಲು ಭಾರತ ಕ್ರಿಕೆಟ್​ ತಂಡ ಅದೃಷ್ಟ ಮಾಡಿತ್ತು ಎಂದರು.

ಭಾರತ ಕ್ರಿಕೆಟ್ ತಂಡಕ್ಕೆ ಅಶ್ವಿನ್ ಅವರ ಕೊಡುಗೆ ದೊಡ್ಡದು. ತವರಿನಲ್ಲಿ ಅಶ್ವಿನ್ ಅವರ ಚಮತ್ಕಾರದಿಂದ ಬಹಳಷ್ಟು ಟೆಸ್ಟ್‌ಗಳನ್ನ ಗೆದ್ದಿದ್ದೇವೆ. ಹೀಗಾಗಿ ಇವರು ಬಿಗ್ ಮ್ಯಾಚ್ ವಿನ್ನರ್ ಅನ್ನೋದರಲ್ಲಿ ಸಂಶಯವೇ ಇಲ್ಲ. ಇವರನ್ನು ಕೆಲವು ಪಂದ್ಯಗಳಲ್ಲಿ ಬೆಂಚ್​ ಕಾಯಿಸಿದ್ದು ನಿಜ. ಎಷ್ಟೇ ದೊಡ್ಡ ಆಟಗಾರನಾದ್ರೂ ಕೆಲವು ಪಂದ್ಯಗಳಲ್ಲಿ ಬೆಂಚ್​ ಕಾಯಲೇಬೇಕು. ನಾನು ಹಲವು ಬಾರಿ ಬೆಂಚ್​ ಕಾದಿದ್ದೇನೆ. ಇದು ಅವರಿಗೆ ಬೇಸರ ತರಿಸಿರಬಹುದು ಎಂದರು.

ಆರಂಭದಲ್ಲಿ ಅಶ್ವಿನ್ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದ. ಕೆಲವು ವರ್ಷಗಳ ಬಳಿಕ ಅಶ್ವಿನ್ ಸ್ಪಿನ್ನರ್​ ಆದರು. ಅವರು 5 ಮತ್ತು 7 ವಿಕೆಟ್ ತೆಗೆದಾಗ ನನಗೆ ಅಚ್ಚರಿ ಆಗುತ್ತಿತ್ತು. ಬ್ಯಾಟ್ಸ್‌ಮನ್ ಆಗಿದ್ದ ಇವರು ಬೌಲರ್ ಆಗಿ ಬದಲಾಗಿದ್ದು ಶಾಕಿಂಗ್ ಸುದ್ದಿ ಎಂದರು.

ಇದನ್ನೂ ಓದಿ:RCB ಮಾಜಿ ಆಟಗಾರನ ಸಂಸಾರದಲ್ಲಿ ಬಿರುಗಾಳಿ; ಸ್ಟಾರ್​ ಕ್ರಿಕೆಟರ್​ ಡಿವೋರ್ಸ್​ ಕೇಸ್​ಗೆ ಮೇಜರ್​ ಟ್ವಿಸ್ಟ್​​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment