ಭಾರತದ ಹೀನಾಯ ಸೋಲಿಗೆ ಕಾರಣವೇನು? ಸ್ಫೋಟಕ ಸತ್ಯ ಬಿಚ್ಚಿಟ್ಟ ಕ್ಯಾಪ್ಟನ್​ ರೋಹಿತ್​​!

author-image
Ganesh Nachikethu
Updated On
ಭಾರತದ ಹೀನಾಯ ಸೋಲಿಗೆ ಕಾರಣವೇನು? ಸ್ಫೋಟಕ ಸತ್ಯ ಬಿಚ್ಚಿಟ್ಟ ಕ್ಯಾಪ್ಟನ್​ ರೋಹಿತ್​​!
Advertisment
  • ತವರಿನಲ್ಲೇ ಟೀಮ್​ ಇಂಡಿಯಾಗೆ ಹೀನಾಯ ಸೋಲು!
  • 3-0 ಅಂತರದಲ್ಲಿ ಟೆಸ್ಟ್​ ಸೀರೀಸ್​ ಗೆದ್ದ ನ್ಯೂಜಿಲೆಂಡ್​​​ ತಂಡ
  • 24 ವರ್ಷಗಳ ಬಳಿಕ ಮೊದಲ ಬಾರಿಗೆ ಸೀರೀಸ್​ ವೈಟ್​ವಾಶ್​​

ಟೀಮ್​ ಇಂಡಿಯಾವನ್ನು ನ್ಯೂಜಿಲೆಂಡ್​​ ತಂಡ 3-0 ಅಂತರದಲ್ಲಿ ಸೋಲಿಸಿ ಗೆದ್ದು ಬೀಗಿದೆ. ಬರೋಬ್ಬರಿ 24 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತದಲ್ಲಿ ಟೀಮ್​ ಇಂಡಿಯಾವನ್ನು ಸೋಲಿಸಿ ನ್ಯೂಜಿಲೆಂಡ್​​ ತಂಡ ವೈಟ್​ವಾಶ್​ ಮಾಡಿದೆ.

ಕೊನೆಯ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾವನ್ನು ನ್ಯೂಜಿಲೆಂಡ್​ ಟೀಮ್​ 25 ರನ್​​ಗಳಿಂದ ಸೋಲಿಸಿದೆ. ಈ ಗೆಲುವಿನ ಮೂಲಕ ನ್ಯೂಜಿಲೆಂಡ್ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದಿದೆ. ಇನ್ನು, ಟೀಮ್​ ಇಂಡಿಯಾ ಹೀನಾಯ ಸೋಲಿನ ಬಳಿಕ ಕ್ಯಾಪ್ಟನ್​ ರೋಹಿತ್​ ಶರ್ಮಾ ಮಾತಾಡಿದ್ದಾರೆ.

ಕ್ಯಾಪ್ಟನ್​ ರೋಹಿತ್​​ ಏನಂದ್ರು?

ಟೆಸ್ಟ್​ ಸೀರೀಸ್​​ ಸೋಲೋದು ಅಷ್ಟು ಸುಲಭವಲ್ಲ. ನನಗೆ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯ ಆಗುತ್ತಿಲ್ಲ. ನಾವು ಕೊನೆಯ ಟೆಸ್ಟ್​ ಪಂದ್ಯದಲ್ಲೂ ಸರಿಯಾಗಿ ಆಡಲಿಲ್ಲ. ನಮಗಿಂತ ನ್ಯೂಜಿಲೆಂಡ್​​​ ಚೆನ್ನಾಗಿ ಆಡಿದೆ ಎಂದರು ರೋಹಿತ್​.

ನಾವು ಸಾಕಷ್ಟು ತಪ್ಪುಗಳು ಮಾಡಿದ್ದೇವೆ. ನಮ್ಮ ತಪ್ಪುಗಳನ್ನು ನಾವು ಒಪ್ಪಿಕೊಳ್ಳಲೇಬೇಕು. ಮೊದಲ ಎರಡು ಟೆಸ್ಟ್​​ಗಳಲ್ಲಿ ನಾವು ರನ್​ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದೆವು. 3ನೇ ಟೆಸ್ಟ್​​ನಲ್ಲಿ 30 ರನ್​​ಗಳಿಂದ ಲೀಡ್​​ನಲ್ಲಿದ್ದೆವು. ನಾವು ಚೇಸ್​ ಮಾಡುವಾಗ ರನ್​ ಕಲೆ ಹಾಕಲೇಬೇಕು. ನಾವು ಆ ವಿಚಾರದಲ್ಲಿ ಎಡವಿದೆವು ಎಂದರು.

ನಾನು ಬ್ಯಾಟರ್​ ಆಗಿ ಮತ್ತು ಕ್ಯಾಪ್ಟನ್​​ ಆಗಿ ಫೇಲ್​ ಆಗಿದ್ದೇವೆ. ನಾನು ಅಂದುಕೊಂಡಿದ್ದು ಎಕ್ಸಿಗ್ಯೂಟ್​​ ಮಾಡಲು ಆಗಲಿಲ್ಲ. ಜೈಸ್ವಾಲ್​​, ಗಿಲ್​​ ಮತ್ತು ಪಂತ್​​ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟ್​ ಮಾಡಿದ್ರು. ಇಡೀ ತಂಡ ಬೌಲಿಂಗ್​ ಮತ್ತು ಬ್ಯಾಟಿಂಗ್​ ಕಳಪೆ ಪ್ರದರ್ಶನ ನೀಡಿದೆ. ನನಗೆ ಈ ಸೋಲು ಬಹಳ ಬೇಸರ ತಂದಿದೆ ಎಂದು ಅಸಮಾಧಾನ ಹೊರಹಾಕಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment