ನನಗೆ ದಣಿವಾಗುತ್ತಿದೆ.. ಕೇವಲ ಮೂರೇ 3 ಟೆಸ್ಟ್​ ಪಂದ್ಯಗಳ ನಾಯಕತ್ವಕ್ಕೆ ಸುಸ್ತಾದ ಶುಭ್​ಮನ್​ ಗಿಲ್​..!

author-image
Bheemappa
ಬ್ಯಾಟಿಂಗ್​ನಲ್ಲಿ ಸೈಲೆಂಟ್ ಆದ ಶುಭ್​ಮನ್ ಗಿಲ್​.. ಮೂರು ಇನ್ನಿಂಗ್ಸ್​ನಲ್ಲಿ ಕ್ಯಾಪ್ಟನ್​ ರನ್ ಇಷ್ಟೇನಾ?
Advertisment
  • ಮೊದಲ ವಿದೇಶ ಪ್ರವಾಸದಲ್ಲೇ ಶುಭ್​ಮನ್ ಗಿಲ್​ ಅಸಹಾಯಕತೆ
  • ಯುವ ಕ್ಯಾಪ್ಟನ್​ ಗಿಲ್​ಗೆ ಕಾಡುತ್ತಿದೆ ರೋಹಿತ್​, ಕೊಹ್ಲಿ ಅನುಪಸ್ಥಿತಿ.!
  • ಈ ಟೆಸ್ಟ್​ ಪಂದ್ಯಗಳಲ್ಲಿ ಶುಭ್​ಮನ್​ ನೆರವಿಗೆ ಬರ್ತಿಲ್ವಾ ಸೀನಿಯರ್ಸ್​?

ಇಂಡೋ-ಇಂಗ್ಲೆಂಡ್​​ 4ನೇ ಟೆಸ್ಟ್​ ಪಂದ್ಯದ ನಡುವೆಯೇ ಸ್ಫೋಟಕ ಸುದ್ದಿ ಹೊರಬಿದ್ದಿದೆ. ಟೀಮ್​ ಇಂಡಿಯಾ ಟೆಸ್ಟ್​ ನಾಯಕತ್ವದಲ್ಲಿ ಮತ್ತೆ ಬದಲಾವಣೆ ಚರ್ಚೆ ಆರಂಭವಾಗಿದೆ. ಕೆಲ ದಿನಗಳ ಹಿಂದಷ್ಟೇ ಪಟ್ಟವೇರಿದ ಶುಭ್​ಮನ್​ ಗಿಲ್​ ಜಸ್ಟ್​ 3 ಟೆಸ್ಟ್​ಗೆ ಸುಸ್ತಾಗಿದ್ದಾರೆ. ಬಹಿರಂಗವಾಗಿ ನನಗೆ ಸುಸ್ತಾಗ್ತಿದೆ ಎಂದು ಹೇಳಿಕೊಂಡಿದ್ದಾರೆ.

ಇಂಡೋ-ಇಂಗ್ಲೆಂಡ್​ ನಡುವಿನ 4ನೇ ಟೆಸ್ಟ್​​ ಪಂದ್ಯ ಮ್ಯಾಂಚೆಸ್ಟರ್​ ಮೈದಾನದಲ್ಲಿ ಭರದಿಂದ ಸಾಗ್ತಿದೆ. ಗೆಲುವಿನ ಅನಿವಾರ್ಯತೆಗೆ ಸಿಲುಕಿರೋ ಟೀಮ್​ ಇಂಡಿಯಾ ಮೊದಲು ಬ್ಯಾಟಿಂಗ್​ ನಡೆಸ್ತಿದ್ದು, ಪಂದ್ಯದ ಮೊದಲ ದಿನವೇ ಭರ್ಜರಿ ಹೋರಾಟ ನಡೆಸಿದೆ. ಇದರ ನಡುವೆ ಟೀಮ್​ ಇಂಡಿಯಾ ಡ್ರೆಸ್ಸಿಂಗ್​ ರೂಮ್​ನಿಂದ ಸ್ಫೋಟಕ ಸುದ್ದಿ ಹೊರಬಿದ್ದಿದೆ.

publive-image

ಉಲ್ಟಾ ಹೊಡೆದ ಮ್ಯಾನೇಜ್​ಮೆಂಟ್​ನ ಲೆಕ್ಕಾಚಾರ.!

ಇಂಗ್ಲೆಂಡ್​ ಪ್ರವಾಸಕ್ಕೂ ಮುನ್ನ ಟೀಮ್​ ಇಂಡಿಯಾ ಭಾರೀ ಬದಲಾವಣೆಗೆ ಸಾಕ್ಷಿಯಾಗಿದ್ದು ಗೊತ್ತೆ ಇದೆ. ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ದಿಢೀರ್​ ಎಂದು ಟೆಸ್ಟ್​ ಕ್ರಿಕೆಟ್​​ಗೆ ಗುಡ್​ ಬೈ ಹೇಳಿದ್ದು ದೊಡ್ಡ ಶಾಕ್​ ಮೂಡಿಸಿತ್ತು. ಇದಾದ ಬಳಿಕ ಅಚ್ಚರಿಯ ನಿರ್ಧಾರ ತಳೆದ ಟೀಮ್​ ಮ್ಯಾನೇಜ್​ಮೆಂಟ್​ & ಸೆಲೆಕ್ಷನ್​ ಕಮಿಟಿ ಸೀನಿಯರ್​​ಗಳನ್ನ ಸೈಡ್​​ಲೈನ್​ ಮಾಡಿ ಯುವ ಆಟಗಾರ ಶುಭ್​ಮನ್​ ಗಿಲ್​ಗೆ ನಾಯಕನ ಪಟ್ಟ ಕಟ್ಟಿತು. ಭವಿಷ್ಯದ ಲೆಕ್ಕಾಚಾರ ಹಾಕಿ ಗಿಲ್​​ಗೆ ಪಟ್ಟಾಭಿಶೇಕ ಮಾಡಲಾಯ್ತು. ಆದ್ರೆ, 3 ಪಂದ್ಯಕ್ಕೆ ಆ ಲೆಕ್ಕಾಚಾರ ತಪ್ಪಾಗಿದೆ.

3 ಪಂದ್ಯಕ್ಕೆ ಸುಸ್ತಾದ ನಾಯಕ ಶುಭ್​ಮನ್​ ಗಿಲ್.!

ಮುಂದಿನ 5ರಿಂದ 6 ವರ್ಷಗಳ ಸುದೀರ್ಘ ಜರ್ನಿಯ ಲೆಕ್ಕಾಚಾರವನ್ನ ಹಾಕಿ ಯುವ ಶುಭ್​ಮನ್​ ಗಿಲ್​ಗೆ ಟೀಮ್​ ಇಂಡಿಯಾ ಮ್ಯಾನೇಜ್​​ಮೆಂಟ್​ ನಾಯಕತ್ವದ ಹೊಣೆಗಾರಿಕೆ ನೀಡಿತು. ಆದ್ರೆ, ಮೊದಲ ಪ್ರವಾಸ ಅಂತ್ಯವಾಗೋದ್ರೊಳಗೆ ಗಿಲ್​​ ಡಲ್​ ಆಗಿದ್ದಾರೆ. ಮೊದಲ 3 ಟೆಸ್ಟ್​​ ಪಂದ್ಯಗಳಲ್ಲಿ ನಾಯಕತ್ವ ನಿಭಾಯಿಸಿದ ಬೆನ್ನಲ್ಲೇ ಶುಭ್​​ಮನ್​ ಗಿಲ್​ ಸುಸ್ತಾಗಿದ್ದಾರೆ. ನಾಯಕತ್ವದ ನನಗೆ ಹೊರೆಯಾಗ್ತಿದೆ ಅಂತಾ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಪ್ರಾಮಾಣಿಕವಾಗಿ ಹೇಳಬೇಕಂದ್ರೆ, ದೈಹಿಕವಾಗಿ ಅಷ್ಟೇನು ಸುಸ್ತಾಗಲ್ಲ. ಆದ್ರೆ, ಮಾನಸಿಕವಾಗಿ ದಣಿವಾಗುತ್ತೆ. ಯಾಕಂದ್ರೆ, ಆಟಗಾರನಾಗಿ ನೀವು ಅಲ್ಲಿದ್ದಾಗ ನೀವು ಏನಾದ್ರೂ ಆಗಬೇಕೆಂದು ಕಾಯುತ್ತಿರುತ್ತೇವೆ. ಬಾಲ್​​ ನಮ್ಮ ಬಳಿ ಬರಬೇಕೆಂದು. ಆದ್ರೆ, ನಾಯಕನಾದಾಗ ಎಲ್ಲಾ ಸಮಯದಲ್ಲೂ ಯೋಚನೆ ಮಾಡ್ತಾ ಇರಬೇಕು. ಅಂದ್ರೆ ಮಾನಸಿಕವಾಗಿ ಒಳಗೊಂಡಿರುತ್ತೇವೆ. ಮಾನಸಿಕವಾಗಿ ಇದು ತುಂಬಾ ದಣಿವುಂಟು ಮಾಡುತ್ತದೆ.

ಶುಭ್​ಮನ್ ಗಿಲ್​, ಭಾರತ ತಂಡದ ನಾಯಕ

ಮೊದಲ ಪ್ರವಾಸದಲ್ಲೇ ಗಿಲ್​ ಅಸಹಾಯಕ.!

ಕ್ಯಾಪ್ಟನ್​​ ಶುಭ್​​ಮನ್​ ಗಿಲ್​ ಮೊದಲ ಪ್ರವಾಸದಲ್ಲಿ ಬೊಂಬಾಟ್​​ ಬ್ಯಾಟಿಂಗ್​ ನಡೆಸಿದ್ದಾರೆ. ಮೊದಲ 3 ಪಂದ್ಯಗಳಲ್ಲೇ 600ಕ್ಕೂ ಅಧಿಕ ರನ್​ ಬಾರಿಸಿ ಬ್ಯಾಟಿಂಗ್​ ಟೆಸ್ಟ್​ನ ಫಸ್ಟ್​ಕ್ಲಾಸ್​ನಲ್ಲಿ ಪಾಸ್​ ಮಾಡಿದ್ದಾರೆ. ಆದ್ರೆ, ನಾಯಕತ್ವದ ವಿಚಾರದಲ್ಲಿ ಗಿಲ್​ ಗೊಂದಲದಲ್ಲೇ ಉಳಿದಿದ್ದಾರೆ. ಕೆಲವೊಮ್ಮೆ ಅಂತೂ ಮೈದಾನದಲ್ಲಿ ತಮ್ಮ ಅಸಹಾಯಕತೆಯನ್ನ ಗಿಲ್​ ವ್ಯಕ್ತಪಡಿಸಿದ್ದಾರೆ. ಬೌಲಿಂಗ್​ ಬದಲಾವಣೆ, ಫೀಲ್ಡ್​ ಪ್ಲೇಸ್​​ಮೆಂಟ್​ ವಿಚಾರಗಳಲ್ಲಿ ಪದೇ ಪದೇ ಎಡವಿದ್ದಾರೆ. ಮಾನಸಿಕವಾಗಿ ದಣಿವಾಗಿದೆ.

ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಕಾಡು ಆನೆ ದಾಳಿಗೆ ಉಸಿರು ಚೆಲ್ಲಿದ ಮಹಿಳೆ

publive-image

ಗಿಲ್​ಗೆ ಕಾಡ್ತಿದೆ ರೋಹಿತ್​, ಕೊಹ್ಲಿ ಅನುಪಸ್ಥಿತಿ.!

ಮೊದಲ ಟಾಸ್ಕ್​ನಲ್ಲಿ ಶುಭ್​ಮನ್​ ಗಿಲ್​ಗೆ ಮಾಜಿ ನಾಯಕರಾದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಅನುಪಸ್ಥಿತಿ ಕಾಡ್ತಿದೆ. ಈ ಇಬ್ಬರು ಆಟಗಾರರಿದ್ದಿದ್ರೆ, ಶುಭ್​​ಮನ್​ ಗಿಲ್​ಗೆ ಅಗತ್ಯ ಸಲಹೆ ಸೂಚನೆಗಳನ್ನ ನೀಡ್ತಾ ಇದ್ದರೂ. ನಾಯಕತ್ವದ ಒತ್ತಡವನ್ನ ಕಡಿಮೆ ಮಾಡ್ತಾ ಇದ್ರು. ಆದ್ರೆ, ಈಗ ತಂಡದಲ್ಲಿರೋ ಆಟಗಾರರ ಪೈಕಿ ಕೆ.ಎಲ್​ ರಾಹುಲ್​, ಬೂಮ್ರಾ ನಾಯಕತ್ವದ ವಿಚಾರದಲ್ಲಿ ಹೆಚ್ಚು ನೆರವಾಗ್ತಿಲ್ಲ. ವೈಸ್​ ಕ್ಯಾಪ್ಟನ್​ ಪಂತ್​ ಇನ್ವಾಲ್​​ಮೆಂಟ್​ ಕೂಡ ಕಡಿಮೆಯಿದೆ. ಹೀಗಾಗಿಯೇ 3 ಪಂದ್ಯಗಳಿಗೆ ಶುಭ್​ಮನ್​ಗೆ ಸುಸ್ತಾಗಿದೆ.

ಮೊದಲ 3 ಪಂದ್ಯದ ಅಂತ್ಯದ ಬೆನ್ನಲ್ಲೇ ನನಗೆ ನಾಯಕತ್ವದ ಹೊರೆಯಾಗ್ತಿದೆ ಅನ್ನೋ ಮಾತನ್ನ ಶುಭ್​​ಮನ್​ ಗಿಲ್​ ಆಡಿದ್ದಾರೆ. ಗಿಲ್​ ಹೇಳಿರೋ ಈ ಮಾತು ಮತ್ತೆ ಟೀಮ್​ ಇಂಡಿಯಾ ನಾಯತ್ವದಲ್ಲಿ ಬದಲಾವಣೆಯಾಗುತ್ತಾ ಅನ್ನೋ ಪ್ರಶ್ನೆಯ ಹುಟ್ಟಿಗೆ ಕಾರಣವಾಗಿದೆ. ಸದ್ಯಕ್ಕಂತೂ ಯಾವುದೇ ಬದಲಾವಣೆಗಳಾಗಲ್ಲ. ಈ ಸರಣಿ ಅಂತ್ಯದ ಬಳಿಕ ಏನ್​ ಬೇಕಾದ್ರೂ ಆಗಬಹುದು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment