ರಾಜಧಾನಿಯಲ್ಲಿ ಪುಂಡ-ಪೋಕರಿಗಳ ಹಾವಳಿ
ಕಾರು ಚಾಲಕನ ಜೊತೆ ಕ್ಯಾತೆ ತೆಗೆದು ದರ್ಪ..!
ಸೈಡ್ ಬಿಡುವಂತೆ ಹಾರ್ನ್ ಮಾಡಿದ್ದೇ ತಪ್ಪಾ?
ಬೆಂಗಳೂರು: ರಸ್ತೆಯಲ್ಲಿ ಮುಂದೆ ಹೋಗೋ ವಾಹನಕ್ಕೆ ಹಾರ್ನ್ ಹಾಕಂಗೆ ಇಲ್ಲ. ಹಾಕಿದ್ರೆ, ನಿಮ್ಮ ವಾಹನದ ಗಾಜು ಪುಡಿ ಪುಡಿ ಹಾಗೂ ನಿಮ್ಗೂ ಚೆನ್ನಾಗಿ ಏಟು ಬೀಳುತ್ತೆ. ಹೀಗೆ ನಾವು ಹೇಳುತ್ತಿಲ್ಲ. ಗಳೂರಿನಲ್ಲಿ ಹಾರ್ನ್ ಹಾಕಿ ಸೈಡ್ ಕೇಳಿದ್ದಕ್ಕೆ ಕಾರು ಚಾಲಕನಿಗೆ ಸಿಕ್ಕಿರೋ ಬಹುಮಾನನೇ ಇದು.
ಹಾರ್ನ್ ಮಾಡಿದಕ್ಕೆ ಕಾರು ಅಡ್ಡಗಟ್ಟಿದ ಪುಂಡರು
ನಗರದ ವರ್ತೂರು ಬಳಿ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಮೂರ್ನಾಲ್ಕು ಜನ ಸಾಗ್ತಾಯಿದ್ರು. ಹೀಗಾಗಿ ಹಿಂಬಂದಿಯಿಂದ ಬಂದ ಕಾರ್ ಚಾಲಕ ಸೈಡ್ ಬಿಡುವಂತೆ ಹಾರ್ನ್ ಹಾಕಿದ್ದಾರೆ. ಇದೇ ಕಾರಣಕ್ಕೆ ಖ್ಯಾತೆ ತೆಗೆದ ಪುಂಡರು, ಕಾರು ಅಡ್ಡಗಟ್ಟಿ ದರ್ಪ ಮೆರೆದಿದ್ದಾರೆ. ಮನಸೋ ಇಚ್ಚೆ ವರ್ತಿಸಿದ್ದಾರೆ.
An FIR has been registered in Varthur PS on the complaint of the victim.
Investigation is underway. There will be no room for such unruly behaviour or hooliganism under our watch, and will be met with severe consequences. https://t.co/unxmI2MPjB
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) July 13, 2023
ಬೈಕ್ನಿಂದ ಕಾರಿಗೆ ಡಿಕ್ಕಿ.. ಚಾಲಕನ ಮೇಲೆ ಹಲ್ಲೆ
ಮೊದಲು ಒಬ್ಬ ಬಂದು ಗಲಾಟೆಗೆ ಇಳಿತಾನೇ ಈ ನಡುವೆ ಮತ್ತೊಬ್ಬ ಬಂದು, ಬೈಕ್ನಿಂದ ಕಾರಿಗೆ ಡಿಕ್ಕಿ ಹೊಡಿತಾನೆ. ಇಷ್ಟಾಗುವಾಗಲೇ ಕಾರು ಚಾಲಕನ ಮೇಲೆ ಪುಂಡರು ಹಲ್ಲೆ ಮಾಡೋದಕ್ಕೆ ಶುರು ಮಾಡ್ತಾರೆ. ಈ ವೇಳೆ ಎಚ್ಚೆತ್ತ ಕಾರು ಚಾಲಕ, ರಿವರ್ಸ್ ಬಂದು ಅಲ್ಲಿಂದ ತಪ್ಪಿಸಿಕೊಳ್ತಾರೆ.
ಕಾರ್ ಫಾಲೋ.. ಅಪಾರ್ಟ್ಮೆಂಟ್ ಬಳಿ ಬಂದು ಹಲ್ಲೆ
ಇಷ್ಟಕ್ಕೆ ಸುಮ್ಮನಾಗದ ಪುಂಡರು ಬಳಿಕ ಕಾರು ಫಾಲೋ ಮಾಡಿಕೊಂಡು ಅಪಾರ್ಟ್ಮೆಂಟ್ ಬಳಿಗೆ ಬಂದು ಗಲಾಟೆಗೆ ಇಳಿದಿದ್ದಾರೆ. ಅಷ್ಟೇ ಅಲ್ಲ, ಕಾರಿನ ಗಾಜು ಪುಡಿ ಪುಡಿ ಮಾಡಿದ್ದಾರೆ. ಈ ಎಲ್ಲಾ ದೃಶ್ಯ ಗುಂಜೂರು ಬಳಿಯ ಅಪಾರ್ಟ್ಮೆಂಟ್ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ವರ್ತೂರು ಪೊಲೀಸರಿಂದ ಆರೋಪಿಗಳ ಬಂಧನ
ಹಲ್ಲೆಗೊಳಗಾದ ವ್ಯಕ್ತಿ ಈ ಬಗ್ಗೆ ಟ್ವಿಟ್ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ, ದೂರು ದಾಖಲಿಸಿಕೊಂಡ ವರ್ತೂರು ಪೊಲೀಸರು ರಾತ್ರೋ ರಾತ್ರಿ ಕಾರ್ಯಚರಣೆ ನಡೆಸಿ, ಆರೋಪಿಗಳನ್ನ ಬಂಧಿಸಿದ್ದಾರೆ. ಕೇಶವ ಮೂರ್ತಿ, ರವೀಂದ್ರ, ಗಣೇಶ್ ಬಂಧಿತ ಆರೋಪಿಗಳು.
ಅದೇನೇ ಇರಲಿ ಸಿಲಿಕಾನ್ ಸಿಟಿಯಲ್ಲಿ ಪುಂಡರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಳವಾಗ್ತಾನೇ ಇದೆ. ಈ ನಡುವೆ ರಸ್ತೆಯಲ್ಲಿ ತಮ್ಮ ಪಾಡಿಗೆ ತಾವು ಸಾಗ್ತಾಯಿದ್ರು, ಹಲ್ಲೆಗೆ ಮುಂದಾಗ್ತಾರೆ ಅಂದ್ರೆ ನಾವೆಷ್ಟು ಸೇಫ್ ನೀವೇ ಯೋಚಿಸಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರಾಜಧಾನಿಯಲ್ಲಿ ಪುಂಡ-ಪೋಕರಿಗಳ ಹಾವಳಿ
ಕಾರು ಚಾಲಕನ ಜೊತೆ ಕ್ಯಾತೆ ತೆಗೆದು ದರ್ಪ..!
ಸೈಡ್ ಬಿಡುವಂತೆ ಹಾರ್ನ್ ಮಾಡಿದ್ದೇ ತಪ್ಪಾ?
ಬೆಂಗಳೂರು: ರಸ್ತೆಯಲ್ಲಿ ಮುಂದೆ ಹೋಗೋ ವಾಹನಕ್ಕೆ ಹಾರ್ನ್ ಹಾಕಂಗೆ ಇಲ್ಲ. ಹಾಕಿದ್ರೆ, ನಿಮ್ಮ ವಾಹನದ ಗಾಜು ಪುಡಿ ಪುಡಿ ಹಾಗೂ ನಿಮ್ಗೂ ಚೆನ್ನಾಗಿ ಏಟು ಬೀಳುತ್ತೆ. ಹೀಗೆ ನಾವು ಹೇಳುತ್ತಿಲ್ಲ. ಗಳೂರಿನಲ್ಲಿ ಹಾರ್ನ್ ಹಾಕಿ ಸೈಡ್ ಕೇಳಿದ್ದಕ್ಕೆ ಕಾರು ಚಾಲಕನಿಗೆ ಸಿಕ್ಕಿರೋ ಬಹುಮಾನನೇ ಇದು.
ಹಾರ್ನ್ ಮಾಡಿದಕ್ಕೆ ಕಾರು ಅಡ್ಡಗಟ್ಟಿದ ಪುಂಡರು
ನಗರದ ವರ್ತೂರು ಬಳಿ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಮೂರ್ನಾಲ್ಕು ಜನ ಸಾಗ್ತಾಯಿದ್ರು. ಹೀಗಾಗಿ ಹಿಂಬಂದಿಯಿಂದ ಬಂದ ಕಾರ್ ಚಾಲಕ ಸೈಡ್ ಬಿಡುವಂತೆ ಹಾರ್ನ್ ಹಾಕಿದ್ದಾರೆ. ಇದೇ ಕಾರಣಕ್ಕೆ ಖ್ಯಾತೆ ತೆಗೆದ ಪುಂಡರು, ಕಾರು ಅಡ್ಡಗಟ್ಟಿ ದರ್ಪ ಮೆರೆದಿದ್ದಾರೆ. ಮನಸೋ ಇಚ್ಚೆ ವರ್ತಿಸಿದ್ದಾರೆ.
An FIR has been registered in Varthur PS on the complaint of the victim.
Investigation is underway. There will be no room for such unruly behaviour or hooliganism under our watch, and will be met with severe consequences. https://t.co/unxmI2MPjB
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) July 13, 2023
ಬೈಕ್ನಿಂದ ಕಾರಿಗೆ ಡಿಕ್ಕಿ.. ಚಾಲಕನ ಮೇಲೆ ಹಲ್ಲೆ
ಮೊದಲು ಒಬ್ಬ ಬಂದು ಗಲಾಟೆಗೆ ಇಳಿತಾನೇ ಈ ನಡುವೆ ಮತ್ತೊಬ್ಬ ಬಂದು, ಬೈಕ್ನಿಂದ ಕಾರಿಗೆ ಡಿಕ್ಕಿ ಹೊಡಿತಾನೆ. ಇಷ್ಟಾಗುವಾಗಲೇ ಕಾರು ಚಾಲಕನ ಮೇಲೆ ಪುಂಡರು ಹಲ್ಲೆ ಮಾಡೋದಕ್ಕೆ ಶುರು ಮಾಡ್ತಾರೆ. ಈ ವೇಳೆ ಎಚ್ಚೆತ್ತ ಕಾರು ಚಾಲಕ, ರಿವರ್ಸ್ ಬಂದು ಅಲ್ಲಿಂದ ತಪ್ಪಿಸಿಕೊಳ್ತಾರೆ.
ಕಾರ್ ಫಾಲೋ.. ಅಪಾರ್ಟ್ಮೆಂಟ್ ಬಳಿ ಬಂದು ಹಲ್ಲೆ
ಇಷ್ಟಕ್ಕೆ ಸುಮ್ಮನಾಗದ ಪುಂಡರು ಬಳಿಕ ಕಾರು ಫಾಲೋ ಮಾಡಿಕೊಂಡು ಅಪಾರ್ಟ್ಮೆಂಟ್ ಬಳಿಗೆ ಬಂದು ಗಲಾಟೆಗೆ ಇಳಿದಿದ್ದಾರೆ. ಅಷ್ಟೇ ಅಲ್ಲ, ಕಾರಿನ ಗಾಜು ಪುಡಿ ಪುಡಿ ಮಾಡಿದ್ದಾರೆ. ಈ ಎಲ್ಲಾ ದೃಶ್ಯ ಗುಂಜೂರು ಬಳಿಯ ಅಪಾರ್ಟ್ಮೆಂಟ್ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ವರ್ತೂರು ಪೊಲೀಸರಿಂದ ಆರೋಪಿಗಳ ಬಂಧನ
ಹಲ್ಲೆಗೊಳಗಾದ ವ್ಯಕ್ತಿ ಈ ಬಗ್ಗೆ ಟ್ವಿಟ್ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ, ದೂರು ದಾಖಲಿಸಿಕೊಂಡ ವರ್ತೂರು ಪೊಲೀಸರು ರಾತ್ರೋ ರಾತ್ರಿ ಕಾರ್ಯಚರಣೆ ನಡೆಸಿ, ಆರೋಪಿಗಳನ್ನ ಬಂಧಿಸಿದ್ದಾರೆ. ಕೇಶವ ಮೂರ್ತಿ, ರವೀಂದ್ರ, ಗಣೇಶ್ ಬಂಧಿತ ಆರೋಪಿಗಳು.
ಅದೇನೇ ಇರಲಿ ಸಿಲಿಕಾನ್ ಸಿಟಿಯಲ್ಲಿ ಪುಂಡರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಳವಾಗ್ತಾನೇ ಇದೆ. ಈ ನಡುವೆ ರಸ್ತೆಯಲ್ಲಿ ತಮ್ಮ ಪಾಡಿಗೆ ತಾವು ಸಾಗ್ತಾಯಿದ್ರು, ಹಲ್ಲೆಗೆ ಮುಂದಾಗ್ತಾರೆ ಅಂದ್ರೆ ನಾವೆಷ್ಟು ಸೇಫ್ ನೀವೇ ಯೋಚಿಸಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ