ಚಿನ್ನಸ್ವಾಮಿ ಮೈದಾನದಲ್ಲಿ ಮತ್ತೆ ಮುಗ್ಗರಿಸಿದ ಆರ್ಸಿಬಿ
ಫಾಫ್ ಡುಪ್ಲೆಸಿ ಪಡೆಯ ಸೋಲಿಗೆ ಕಾರಣ ಏನು.?
ಲಕ್ನೋ ಸೂಪರ್ ಜೈಂಟ್ಸ್ ‘ಲಕ್’ ಬದಲಾಗಿದ್ದು ಎಲ್ಲಿ.?
ಹೋಮ್ಗ್ರೌಂಡ್ ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ ಮತ್ತೊಮ್ಮೆ ಮುಗ್ಗರಿಸಿದೆ. ನಿಜ ಹೇಳಬೇಕಂದ್ರೆ ಲಕ್ನೋ ಎದುರು ಗೆಲ್ಲೋ ಅವಕಾಶ ಆರ್ಸಿಬಿಗೆ ಇತ್ತು. ಆನ್ಫೀಲ್ಡ್ನಲ್ಲಾದ ಯಡವಟ್ಟುಗಳು ತಂಡವನ್ನ ಸೋಲಿಗೆ ಗುರಿ ಮಾಡಿದ್ವು.
ಕಾರಣ ನಂ.1: ಕ್ವಿಂಟನ್ ಡಿ ಕಾಕ್ ಕ್ಯಾಚ್ ಡ್ರಾಪ್
ಆರ್ಸಿಬಿ ಮೊದಲ ತಪ್ಪು ಮಾಡಿದ್ದೇ ಇಲ್ಲೇ.. ಪಂದ್ಯದ 7ನೇ ಓವರ್ನಲ್ಲೇ ಡಿಕಾಕ್ ಆಟಕ್ಕೆ ಬ್ರೇಕ್ ಹಾಕೋ ಅವಕಾಶವಿತ್ತು. ಕ್ಯಾಚ್ ಡ್ರಾಪ್ ಮಾಡಿದ ಮ್ಯಾಕ್ಸ್ವೆಲ್ ಜೀವದಾನ ನೀಡಿದ್ರು. ಸಿಕ್ಕ ಲೈಫ್ ಲೈನ್ ಬಳಸಿಕೊಂಡ ಡಿಕಾಕ್ 81 ರನ್ ಚಚ್ಚಿದ್ರು.
ಕಾರಣ ನಂ.2: ಕೈಕೊಟ್ಟ ಮೊಹಮ್ಮದ್ ಸಿರಾಜ್
ಆರ್ಸಿಬಿ ನಂಬಿಗಸ್ಥ ವೇಗಿ ಮೊಹಮ್ಮದ್ ಸಿರಾಜ್ ಫ್ಲಾಪ್ ಶೋ ಮುಂದುವರೆಸಿದ್ರು. ಡಿ ಕಾಕ್ ಒಬ್ಬರಿಗೆ 12 ಬಾಲ್ ಬೌಲಿಂಗ್ ಮಾಡಿ 28 ರನ್ ಬಿಟ್ಟು ಕೊಟ್ರು. ಒಟ್ಟಾರೆ 4 ಓವರ್ ಹಾಕಿ 47 ರನ್ ಲೀಕ್ ಮಾಡಿದ್ರು.
ಕಾರಣ ನಂ.3: ನಿಕೊಲಸ್ ಪೂರನ್ ಕ್ಯಾಚ್ ಡ್ರಾಪ್
ನಿಕೊಲಸ್ ಪೂರನ್ 3 ರನ್ಗಳಿಸಿದ್ದಾಗ ಜೀವದಾನ ಪಡೆದುಕೊಂಡ್ರು. ಅನುಜ್ ರಾವತ್ ಕ್ಯಾಚ್ ಡ್ರಾಪ್ ಮಾಡಿದ್ರು. ಬಳಿಕ ಅಬ್ಬರಿಸಿದ ಪೂರನ್ 5 ಸಿಕ್ಸರ್, 1 ಬೌಂಡರಿ ಸಹಿತ 40 ರನ್ ಸಿಡಿಸಿದ್ರು. ಪರಿಣಾಮ ಲಕ್ನೋ 181 ರನ್ಗಳ ಬಿಗ್ ಸ್ಕೋರ್ ಕಲೆ ಹಾಕ್ತು.
ಕಾರಣ ನಂ.4: ದುಬಾರಿಯಾದ ಕ್ಯಾಮರೂನ್ ಗ್ರೀನ್, ರೀಸಿ ಟಾಪ್ಲಿ
ಬೌಲರ್ಗಳಾದ ಕ್ಯಾಮರೂನ್ ಗ್ರೀನ್, ರಿಸೀ ಟಾಪ್ಲಿ ಕೂಡ ದುಬಾರಿಯಾದ್ರು. ಇವ್ರ ಕಳಪೆ ಬೌಲಿಂಗ್ ಆರ್ಸಿಬಿಗೆ ಹೊರೆಯಾಯ್ತು.
ಕಾರಣ ನಂ.5: ಅತಿರಥ ಮಹಾರಥರ ಫ್ಲಾಪ್ ಶೋ.!
183 ರನ್ಗಳ ಟಾರ್ಗೆಟ್ ಆರ್ಸಿಬಿಗೆ ದೊಡ್ಡ ಸವಾಲೇನಾಗಿರಲಿಲ್ಲ. ಆದ್ರೆ ಟಾಪ್ ಆರ್ಡರ್ ಬ್ಯಾಟರ್ಸ್ ತರಗೆಲೆಯಂತೆ ಉದುರಿದ್ರು. ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿ, ಮ್ಯಾಕ್ಸ್ವೆಲ್, ಕ್ಯಾಮರೂನ್ ಗ್ರೀನ್.. ಪೆವಿಲಿಯನ್ ಪರೇಡ್ ನಡೆಸಿದ್ರು.
ಕಾರಣ ನಂ.6: ಕ್ರಿಸ್ ಕಚ್ಚಿ ನಿಲ್ಲದ ಬ್ಯಾಟ್ಸ್ಮನ್ಗಳು
ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಮಾತ್ರವಲ್ಲ.. ಮಹಿಪಾಲ್ ಲೋಮ್ರೊರ್ ಹೊರತುಪಡಿಸಿದ್ರೆ, ಆರ್ಸಿಬಿಯ ಯಾವೊಬ್ಬ ಆಟಗಾರ ಕೂಡ ಕ್ರಿಸ್ ಕಚ್ಚಿ ನಿಲ್ಲೋ ಯತ್ನವನ್ನೆ ಮಾಡಲಿಲ್ಲ. ಬ್ಯಾಕ್ ಟು ಬ್ಯಾಕ್ ವಿಕೆಟ್ ಪತನ ತಂಡವನ್ನ ಸಂಕಷ್ಟಕ್ಕೆ ದೂಡಿತು.
ಕಾರಣ ನಂ.7: ಮಯಾಂಕ್ ಯಾದವ್ ಎದುರು ತಿಣುಕಾಟ
ಲಕ್ನೋನ ಸ್ಪೀಡ್ ಸೆನ್ಸೇಷನ್ ಮಯಾಂಕ್ ಯಾದವ್ ಎದುರು ಆರ್ಸಿಬಿ ಬ್ಯಾಟರ್ಸ್ ತಿಣುಕಾಡಿದ್ರು. 4 ಓವರ್ ಟೈಟ್ ಸ್ಪೆಲ್ ಹಾಕಿದ ಮಯಾಂಕ್ 3 ವಿಕೆಟ್ ಉರುಳಿಸಿ, ಜಸ್ಟ್ 14 ರನ್ ಬಿಟ್ಟು ಕೊಟ್ರು.
ಕಾರಣ ನಂ.8: ಬದಲಾಗದ ಬ್ಯಾಟ್ಸ್ಮನ್ಗಳ ಆ್ಯಟಿಟ್ಯೂಡ್
ಕೆಕೆಆರ್ ಎದುರಿನ ಸೋಲಿನಿಂದ ಆರ್ಸಿಬಿ ಬ್ಯಾಟ್ಸ್ಮನ್ಗಳು ಎಚ್ಚೆತ್ತುಕೊಂಡಂತೆ ಕಾಣಲಿಲ್ಲ. ಲಕ್ನೋ ಎದುರೂ ಭಯದಿಂದಲೇ ಬ್ಯಾಟ್ ಬೀಸಿದ್ರು. ಕೊಹ್ಲಿ – ಡುಪ್ಲೆಸಿ ಸ್ಪಿನ್ ಎದುರು ತಿಣುಕಾಡಿದ್ರೆ, ಉಳಿದವರು ಸ್ಪೀಡ್ ಬೌಲಿಂಗ್ ಮುಂದೆ ಮಂಡಿಯೂರಿದರು.
ವಿಶೇಷ ವರದಿ: ವಸಂತ್ ಮಳವತ್ತಿ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಚಿನ್ನಸ್ವಾಮಿ ಮೈದಾನದಲ್ಲಿ ಮತ್ತೆ ಮುಗ್ಗರಿಸಿದ ಆರ್ಸಿಬಿ
ಫಾಫ್ ಡುಪ್ಲೆಸಿ ಪಡೆಯ ಸೋಲಿಗೆ ಕಾರಣ ಏನು.?
ಲಕ್ನೋ ಸೂಪರ್ ಜೈಂಟ್ಸ್ ‘ಲಕ್’ ಬದಲಾಗಿದ್ದು ಎಲ್ಲಿ.?
ಹೋಮ್ಗ್ರೌಂಡ್ ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ ಮತ್ತೊಮ್ಮೆ ಮುಗ್ಗರಿಸಿದೆ. ನಿಜ ಹೇಳಬೇಕಂದ್ರೆ ಲಕ್ನೋ ಎದುರು ಗೆಲ್ಲೋ ಅವಕಾಶ ಆರ್ಸಿಬಿಗೆ ಇತ್ತು. ಆನ್ಫೀಲ್ಡ್ನಲ್ಲಾದ ಯಡವಟ್ಟುಗಳು ತಂಡವನ್ನ ಸೋಲಿಗೆ ಗುರಿ ಮಾಡಿದ್ವು.
ಕಾರಣ ನಂ.1: ಕ್ವಿಂಟನ್ ಡಿ ಕಾಕ್ ಕ್ಯಾಚ್ ಡ್ರಾಪ್
ಆರ್ಸಿಬಿ ಮೊದಲ ತಪ್ಪು ಮಾಡಿದ್ದೇ ಇಲ್ಲೇ.. ಪಂದ್ಯದ 7ನೇ ಓವರ್ನಲ್ಲೇ ಡಿಕಾಕ್ ಆಟಕ್ಕೆ ಬ್ರೇಕ್ ಹಾಕೋ ಅವಕಾಶವಿತ್ತು. ಕ್ಯಾಚ್ ಡ್ರಾಪ್ ಮಾಡಿದ ಮ್ಯಾಕ್ಸ್ವೆಲ್ ಜೀವದಾನ ನೀಡಿದ್ರು. ಸಿಕ್ಕ ಲೈಫ್ ಲೈನ್ ಬಳಸಿಕೊಂಡ ಡಿಕಾಕ್ 81 ರನ್ ಚಚ್ಚಿದ್ರು.
ಕಾರಣ ನಂ.2: ಕೈಕೊಟ್ಟ ಮೊಹಮ್ಮದ್ ಸಿರಾಜ್
ಆರ್ಸಿಬಿ ನಂಬಿಗಸ್ಥ ವೇಗಿ ಮೊಹಮ್ಮದ್ ಸಿರಾಜ್ ಫ್ಲಾಪ್ ಶೋ ಮುಂದುವರೆಸಿದ್ರು. ಡಿ ಕಾಕ್ ಒಬ್ಬರಿಗೆ 12 ಬಾಲ್ ಬೌಲಿಂಗ್ ಮಾಡಿ 28 ರನ್ ಬಿಟ್ಟು ಕೊಟ್ರು. ಒಟ್ಟಾರೆ 4 ಓವರ್ ಹಾಕಿ 47 ರನ್ ಲೀಕ್ ಮಾಡಿದ್ರು.
ಕಾರಣ ನಂ.3: ನಿಕೊಲಸ್ ಪೂರನ್ ಕ್ಯಾಚ್ ಡ್ರಾಪ್
ನಿಕೊಲಸ್ ಪೂರನ್ 3 ರನ್ಗಳಿಸಿದ್ದಾಗ ಜೀವದಾನ ಪಡೆದುಕೊಂಡ್ರು. ಅನುಜ್ ರಾವತ್ ಕ್ಯಾಚ್ ಡ್ರಾಪ್ ಮಾಡಿದ್ರು. ಬಳಿಕ ಅಬ್ಬರಿಸಿದ ಪೂರನ್ 5 ಸಿಕ್ಸರ್, 1 ಬೌಂಡರಿ ಸಹಿತ 40 ರನ್ ಸಿಡಿಸಿದ್ರು. ಪರಿಣಾಮ ಲಕ್ನೋ 181 ರನ್ಗಳ ಬಿಗ್ ಸ್ಕೋರ್ ಕಲೆ ಹಾಕ್ತು.
ಕಾರಣ ನಂ.4: ದುಬಾರಿಯಾದ ಕ್ಯಾಮರೂನ್ ಗ್ರೀನ್, ರೀಸಿ ಟಾಪ್ಲಿ
ಬೌಲರ್ಗಳಾದ ಕ್ಯಾಮರೂನ್ ಗ್ರೀನ್, ರಿಸೀ ಟಾಪ್ಲಿ ಕೂಡ ದುಬಾರಿಯಾದ್ರು. ಇವ್ರ ಕಳಪೆ ಬೌಲಿಂಗ್ ಆರ್ಸಿಬಿಗೆ ಹೊರೆಯಾಯ್ತು.
ಕಾರಣ ನಂ.5: ಅತಿರಥ ಮಹಾರಥರ ಫ್ಲಾಪ್ ಶೋ.!
183 ರನ್ಗಳ ಟಾರ್ಗೆಟ್ ಆರ್ಸಿಬಿಗೆ ದೊಡ್ಡ ಸವಾಲೇನಾಗಿರಲಿಲ್ಲ. ಆದ್ರೆ ಟಾಪ್ ಆರ್ಡರ್ ಬ್ಯಾಟರ್ಸ್ ತರಗೆಲೆಯಂತೆ ಉದುರಿದ್ರು. ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿ, ಮ್ಯಾಕ್ಸ್ವೆಲ್, ಕ್ಯಾಮರೂನ್ ಗ್ರೀನ್.. ಪೆವಿಲಿಯನ್ ಪರೇಡ್ ನಡೆಸಿದ್ರು.
ಕಾರಣ ನಂ.6: ಕ್ರಿಸ್ ಕಚ್ಚಿ ನಿಲ್ಲದ ಬ್ಯಾಟ್ಸ್ಮನ್ಗಳು
ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಮಾತ್ರವಲ್ಲ.. ಮಹಿಪಾಲ್ ಲೋಮ್ರೊರ್ ಹೊರತುಪಡಿಸಿದ್ರೆ, ಆರ್ಸಿಬಿಯ ಯಾವೊಬ್ಬ ಆಟಗಾರ ಕೂಡ ಕ್ರಿಸ್ ಕಚ್ಚಿ ನಿಲ್ಲೋ ಯತ್ನವನ್ನೆ ಮಾಡಲಿಲ್ಲ. ಬ್ಯಾಕ್ ಟು ಬ್ಯಾಕ್ ವಿಕೆಟ್ ಪತನ ತಂಡವನ್ನ ಸಂಕಷ್ಟಕ್ಕೆ ದೂಡಿತು.
ಕಾರಣ ನಂ.7: ಮಯಾಂಕ್ ಯಾದವ್ ಎದುರು ತಿಣುಕಾಟ
ಲಕ್ನೋನ ಸ್ಪೀಡ್ ಸೆನ್ಸೇಷನ್ ಮಯಾಂಕ್ ಯಾದವ್ ಎದುರು ಆರ್ಸಿಬಿ ಬ್ಯಾಟರ್ಸ್ ತಿಣುಕಾಡಿದ್ರು. 4 ಓವರ್ ಟೈಟ್ ಸ್ಪೆಲ್ ಹಾಕಿದ ಮಯಾಂಕ್ 3 ವಿಕೆಟ್ ಉರುಳಿಸಿ, ಜಸ್ಟ್ 14 ರನ್ ಬಿಟ್ಟು ಕೊಟ್ರು.
ಕಾರಣ ನಂ.8: ಬದಲಾಗದ ಬ್ಯಾಟ್ಸ್ಮನ್ಗಳ ಆ್ಯಟಿಟ್ಯೂಡ್
ಕೆಕೆಆರ್ ಎದುರಿನ ಸೋಲಿನಿಂದ ಆರ್ಸಿಬಿ ಬ್ಯಾಟ್ಸ್ಮನ್ಗಳು ಎಚ್ಚೆತ್ತುಕೊಂಡಂತೆ ಕಾಣಲಿಲ್ಲ. ಲಕ್ನೋ ಎದುರೂ ಭಯದಿಂದಲೇ ಬ್ಯಾಟ್ ಬೀಸಿದ್ರು. ಕೊಹ್ಲಿ – ಡುಪ್ಲೆಸಿ ಸ್ಪಿನ್ ಎದುರು ತಿಣುಕಾಡಿದ್ರೆ, ಉಳಿದವರು ಸ್ಪೀಡ್ ಬೌಲಿಂಗ್ ಮುಂದೆ ಮಂಡಿಯೂರಿದರು.
ವಿಶೇಷ ವರದಿ: ವಸಂತ್ ಮಳವತ್ತಿ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್