/newsfirstlive-kannada/media/post_attachments/wp-content/uploads/2024/10/Kaveri-Water-3.jpg)
ತುಲಾ ಸಂಕ್ರಮಣದ ವಿಶೇಷ ದಿನವಾದ ಇಂದು ಕೊಡಗಿನ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವವಾಗಿದೆ. ಸಾವಿರಾರು ಜನರು ಭಾಗಮಂಡಲದ ತಲಕಾವೇರಿಗೆ ಆಗಮಿಸಿ ಪುಣ್ಯ ಕಾರ್ಯವನ್ನು ಕಣ್ತುಂಬಿಸಿಕೊಂಡಿದ್ದಾರೆ.
ಮುಂಜಾನೆ 7 ಗಂಟೆ 40 ನಿಮಿಷಕ್ಕೆ ಪವಿತ್ರ ಕಾವೇರಿಯ ತೀರ್ಥೋದ್ಭವ ಜರುಗಲಿದೆ. ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ವಿಜೃಂಭಣೆಯಿಂದ ಕಾರ್ಯ ನಡೆದಿದೆ. ಭಕ್ತರಿಗಾಗಿ ಕಲ್ಯಾಣಿಯಲ್ಲಿ ಪುಣ್ಯ ಸ್ನಾನಕ್ಕೆ ಅವಕಾಶ ಕಲ್ಪಿಸಿದೆ.
/newsfirstlive-kannada/media/post_attachments/wp-content/uploads/2024/10/Kaveri-Water-2.jpg)
ಇದನ್ನೂ ಓದಿ: ಶತ್ರುಗಳ ಕಾಟ; ಕೌಟುಂಬಿಕ ಸಮಸ್ಯೆ; ಮನೆವರಿಗೆಲ್ಲಾ ಅವಮಾನ; ಇಲ್ಲಿದೆ ಇಂದಿನ ಭವಿಷ್ಯ
ಪ್ರತಿ ವರ್ಷದಂತೆ ಈ ವರ್ಷ ಕೂಡ ತಲಕಾವೇರಿಯಲ್ಲಿ ಸಹಸ್ರಾರು ಭಕ್ತರು ಕಾಣಿಸಿಕೊಂಡಿದ್ದಾರೆ. ಮಳೆ, ಚಳಿ ಎನ್ನದೆ ಪುಣ್ಯಕಾರ್ಯದಲ್ಲಿ ಭಾಗಿಗಳಾಗಿದ್ದಾರೆ. ಇನ್ನು ಒಂದು ತಿಂಗಳ ಕಾಲ ಕಾವೇರಿ ತುಲಾ ಸಂಕ್ರಮಣ ಜಾತ್ರೆಗೆ ನಡೆಯಲಿಕ್ಕಿದೆ.
ಇದನ್ನೂ ಓದಿ: ಗೆದ್ದ ಮಗಳ ತಬ್ಬಿ ಕಣ್ಣೀರು ಹಾಕಿದ ಅಬುಧಾಬಿ ರಾಜಕುಮಾರ; ತಂದೆ ಮಮತೆ ಕಂಡು ಭಾವುಕರಾದ ಜನ
/newsfirstlive-kannada/media/post_attachments/wp-content/uploads/2024/10/Kaveri-Water-3.jpg)
ಕಾವೇರಿ ಕೊಡಗಿನ ಕುಲದೇವತೆ. ಕನ್ನಡ ನಾಡಿನ ಜೀವನದಿ. ಕಾವೇರಿ ಹುಟ್ಟುವುದೇ ಇಲ್ಲಿಂದ. ದಕ್ಷಿಣ ಭಾರತದ ಗಂಗೆ ಎಂದೇ ಪೂಜಿಸಲ್ಪಡುವ ಕಾವೇರಿ ತೀರ್ಥದಲ್ಲಿ ಮಿಂದರೆ ಸಂಕಷ್ಟ ಪಾವನವಾಗುತ್ತದೆ ಎಂಬ ನಂಬಿಕೆ. ಹಾಗಾಗಿ ಭಕ್ತರು ಈ ಶುಭ ಸಂದರ್ಭದಲ್ಲಿ ತಲಕಾವೇರಿಗೆ ಆಗಮಿಸಿ ತೀರ್ಥೋಬ್ಬವದಲ್ಲಿ ಭಾಗಿಯಾಗುತ್ತಾರೆ. ಅದರಂತೆಯೇ ಇಂದು ನಡೆದ ತುಲಾ ಸಂಖ್ರಮಣದಲ್ಲಿ ಕಾವೇರಿ ಮಾತೆಯನ್ನು ಪೂಜಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us