ಬಾಲಾಸೋರ್ ಜಿಲ್ಲೆಯಲ್ಲಿ ನಡೆದ ತ್ರಿವಳಿ ರೈಲು ಅಪಘಾತ
ಭಯಾನಕ ರೈಲು ಅಪಘಾತದಲ್ಲಿ 290 ಜನರು ಪ್ರಾಣತೆತ್ತರು
ಇದೀಗ ಮೂವರು ರೈಲ್ವೆ ಉದ್ಯೋಗಿಗಳನ್ನು ಬಂಧಿಸಲಾಗಿದೆ
ಕಳೆದ ತಿಂಗಳು ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹನಗಾ ನಿಲ್ದಾಣದ ಬಳಿ ನಡೆದ ತ್ರಿವಳಿ ರೈಲು ಅಪಘಾತ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಅಪಘಾತದಲ್ಲಿ 1,100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರೆ, 290 ಜನರು ಪ್ರಾಣತೆತ್ತರು. ಆದರೆ ಕೇಂದ್ರೀಯ ತನಿಖಾ ದಳ ಈ ಅಪಘಾತದ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದು, ಇದೀಗ ಮೂವರು ರೈಲ್ವೆ ಉದ್ಯೋಗಿಗಳನ್ನು ಬಂಧಿಸಲಾಗಿದೆ.
ಹಿರಿಯ ವಿಭಾಗದ ಎಂಜಿನಿಯರ್ ಅರುಣ್ ಕುಮಾರ್ ಮಹಾಂತ, ಕಿರಿಯ ವಿಭಾಗದ ಎಂಜಿನಿಯರ್ ಎಂಡಿ ಅಮೀರ್ ಖಾನ್ ಮತ್ತು ತಂತ್ರಜ್ಞ ಪಾಪು ಕುಮಾರ್ನನ್ನು ಸಿಬಿಐ ಬಂಧಿಸಿದೆ. ಭಾರತೀಯ ದಂಡ ಸಂಹಿತೆಯ ಪ್ರಕಾರ ಸೆಕ್ಷನ್ 304ರ ಅಡಿಯಲ್ಲಿ ಮೂವರು ರೈಲ್ವೆ ಉದ್ಯೋಗಿಗಳನ್ನು ಅರೆಸ್ಟ್ ಮಾಡಲಾಗಿದೆ.
ಸಾಕ್ಷ್ಯಾಧಾರಗಳನ್ನು ನಾಶ
ಅರುಣ್ ಕುಮಾರ್ ಮಹಾಂತ ತನಿಖಾ ಸಮಿತಿಯ ಸದಸ್ಯರಾಗಿದ್ದರು. ಬಾಲಸೋರು ರೈಲ್ವೇ ಅಪಘಾತದ ಬಗ್ಗೆ ಪ್ರಾಥಮಿಕ ತಪಾಸಣಾ ವರದಿಯನ್ನು ಬರೆದಿದ್ದರು. ಆದರೆ ತಪಾಸಣಾ ವರದಿಯ ಬಗ್ಗೆ ಭಿನ್ನಾಭಿಪ್ರಾಯ ಮೂಡಿಬಂದವು.
ಇದೀಗ ಸಿಬಿಐ ಅಪರಾಧ ಸಾಕ್ಷ್ಯಾಧಾರಗಳನ್ನು ನಾಶ ಮಾಡಿದ ಹಿನ್ನಲೆಯಲ್ಲಿ 3 ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಅವರ ವಿರುದ್ಧ ಸೆಕ್ಷನ್ 201ರ ಆರೋಪ ಹೊರಿಸಿದೆ.
ತ್ರಿವಳಿ ರೈಲು ಅಪಘಾತ
ಜೂನ್2ರಂದು ಬಾಲಸೋರ್ನಲ್ಲಿ ತ್ರಿವಳಿ ರೈಲು ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ 290 ಜನರು ಸಾವನ್ನಪ್ಪಿದ್ದರು. ಅದರಲ್ಲೂ ಪ್ರಾಣತೆತ್ತ ಪ್ರಯಾಣಿಕರ ಮೃತದೇಹವನ್ನು ಹುಡುಕಾಡಲು ಸಂಬಂಧಪಟ್ಟವರು, ಮನೆಯವರು, ಕುಟುಂಬಸ್ಥರು ನರಕಯಾತನೆ ಪಡುವ ದೃಶ್ಯ ಮಾತ್ರ ಎಲ್ಲರ ಕಣ್ಣು ಕಟ್ಟಿತ್ತು. ಆದರೆ ಈ ಅಪಘಾತಕ್ಕೆ ನಿಜವಾದ ಕಾರಣ ತಿಳಿಯಲು ಕೇಂದ್ರ ತನಿಖಾ ದಳ ಮುಂದಾಯಿತು. ಜೂನ್ 6 ರಂದು ಕೂಲಂಕುಷವಾಗಿ ಈ ಅಪಘಾತದ ಬಗ್ಗೆ ತನಿಖೆಗೆ ಇಳಿಯಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಾಲಾಸೋರ್ ಜಿಲ್ಲೆಯಲ್ಲಿ ನಡೆದ ತ್ರಿವಳಿ ರೈಲು ಅಪಘಾತ
ಭಯಾನಕ ರೈಲು ಅಪಘಾತದಲ್ಲಿ 290 ಜನರು ಪ್ರಾಣತೆತ್ತರು
ಇದೀಗ ಮೂವರು ರೈಲ್ವೆ ಉದ್ಯೋಗಿಗಳನ್ನು ಬಂಧಿಸಲಾಗಿದೆ
ಕಳೆದ ತಿಂಗಳು ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹನಗಾ ನಿಲ್ದಾಣದ ಬಳಿ ನಡೆದ ತ್ರಿವಳಿ ರೈಲು ಅಪಘಾತ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಅಪಘಾತದಲ್ಲಿ 1,100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರೆ, 290 ಜನರು ಪ್ರಾಣತೆತ್ತರು. ಆದರೆ ಕೇಂದ್ರೀಯ ತನಿಖಾ ದಳ ಈ ಅಪಘಾತದ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದು, ಇದೀಗ ಮೂವರು ರೈಲ್ವೆ ಉದ್ಯೋಗಿಗಳನ್ನು ಬಂಧಿಸಲಾಗಿದೆ.
ಹಿರಿಯ ವಿಭಾಗದ ಎಂಜಿನಿಯರ್ ಅರುಣ್ ಕುಮಾರ್ ಮಹಾಂತ, ಕಿರಿಯ ವಿಭಾಗದ ಎಂಜಿನಿಯರ್ ಎಂಡಿ ಅಮೀರ್ ಖಾನ್ ಮತ್ತು ತಂತ್ರಜ್ಞ ಪಾಪು ಕುಮಾರ್ನನ್ನು ಸಿಬಿಐ ಬಂಧಿಸಿದೆ. ಭಾರತೀಯ ದಂಡ ಸಂಹಿತೆಯ ಪ್ರಕಾರ ಸೆಕ್ಷನ್ 304ರ ಅಡಿಯಲ್ಲಿ ಮೂವರು ರೈಲ್ವೆ ಉದ್ಯೋಗಿಗಳನ್ನು ಅರೆಸ್ಟ್ ಮಾಡಲಾಗಿದೆ.
ಸಾಕ್ಷ್ಯಾಧಾರಗಳನ್ನು ನಾಶ
ಅರುಣ್ ಕುಮಾರ್ ಮಹಾಂತ ತನಿಖಾ ಸಮಿತಿಯ ಸದಸ್ಯರಾಗಿದ್ದರು. ಬಾಲಸೋರು ರೈಲ್ವೇ ಅಪಘಾತದ ಬಗ್ಗೆ ಪ್ರಾಥಮಿಕ ತಪಾಸಣಾ ವರದಿಯನ್ನು ಬರೆದಿದ್ದರು. ಆದರೆ ತಪಾಸಣಾ ವರದಿಯ ಬಗ್ಗೆ ಭಿನ್ನಾಭಿಪ್ರಾಯ ಮೂಡಿಬಂದವು.
ಇದೀಗ ಸಿಬಿಐ ಅಪರಾಧ ಸಾಕ್ಷ್ಯಾಧಾರಗಳನ್ನು ನಾಶ ಮಾಡಿದ ಹಿನ್ನಲೆಯಲ್ಲಿ 3 ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಅವರ ವಿರುದ್ಧ ಸೆಕ್ಷನ್ 201ರ ಆರೋಪ ಹೊರಿಸಿದೆ.
ತ್ರಿವಳಿ ರೈಲು ಅಪಘಾತ
ಜೂನ್2ರಂದು ಬಾಲಸೋರ್ನಲ್ಲಿ ತ್ರಿವಳಿ ರೈಲು ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ 290 ಜನರು ಸಾವನ್ನಪ್ಪಿದ್ದರು. ಅದರಲ್ಲೂ ಪ್ರಾಣತೆತ್ತ ಪ್ರಯಾಣಿಕರ ಮೃತದೇಹವನ್ನು ಹುಡುಕಾಡಲು ಸಂಬಂಧಪಟ್ಟವರು, ಮನೆಯವರು, ಕುಟುಂಬಸ್ಥರು ನರಕಯಾತನೆ ಪಡುವ ದೃಶ್ಯ ಮಾತ್ರ ಎಲ್ಲರ ಕಣ್ಣು ಕಟ್ಟಿತ್ತು. ಆದರೆ ಈ ಅಪಘಾತಕ್ಕೆ ನಿಜವಾದ ಕಾರಣ ತಿಳಿಯಲು ಕೇಂದ್ರ ತನಿಖಾ ದಳ ಮುಂದಾಯಿತು. ಜೂನ್ 6 ರಂದು ಕೂಲಂಕುಷವಾಗಿ ಈ ಅಪಘಾತದ ಬಗ್ಗೆ ತನಿಖೆಗೆ ಇಳಿಯಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ