/newsfirstlive-kannada/media/post_attachments/wp-content/uploads/2025/02/CCL.jpg)
ಹೈದ್ರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಮುಂಬೈ ಹೀರೋ ಹಾಗೂ ಕರ್ನಾಟಕ ಬುಲ್ಡೋಜರ್ಸ್ ನಡುವಿನ ಸಿಸಿಎಲ್ ಪಂದ್ಯದಲ್ಲಿ ಮುಂಬೈ ಹೀರೋಗಳನ್ನು ಕರ್ನಾಟಕ ತಂಡ ಮಣ್ಣು ಮುಕ್ಕುಸಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ತನ್ನ ಆಯ್ಕೆಗೆ ಪಶ್ಚಾತಾಪವನ್ನು ಪಡುವಂತೆ ಕರ್ನಾಟಕದ ಹೀರೋಗಳು ಆಟವಾಡಿದರು. ಮೊದಲ ಇನ್ನಿಂಗ್ಸ್ನಲ್ಲಿ ಡಾರ್ಲಿಂಗ್ ಕೃಷ್ಣ ಭರ್ಜರಿ ಶತಕದಿಂದಾಗಿ ಕರ್ನಾಟಕ ಬುಲ್ಡೋಜರ್ಸ್ 10 ಓವರ್ಗಳಿಗೆ 171 ರನ್ ಕಲೆ ಹಾಕಿತು.ಕೇವಲ 36 ಬೌಲ್ಗಳನ್ನು ಎದುರಿಸಿದ ಕೃಷ್ಣ 9 ಸಿಕ್ಸ್ ಹಾಗೂ 11 ಬೌಂಡರಿಗಳ ಮೂಲಕ 111 ರನ್ ಕಲೆ ಹಾಕಿದರು
ನಂತರ ಬ್ಯಾಟಿಂಗ್ಗೆ ಇಳಿದ ಮುಂಬೈ ಹೀರೋಗಳನ್ನು ಕೇವಲ 100ರನ್ಗೆ ಕಟ್ಟಿ ಹಾಕುವಲ್ಲಿ ಕರ್ನಾಟಕ ಬುಲ್ಡೋಸರ್ಸ್ ತಂಡದ ಬೌಲರ್ಗಳು ಯಶಸ್ವಿಯಾದ್ರು ಕರಣ್ ಆರ್ಯನ್ 2 ಓವರ್ ಬೌಲಿಂಗ್ ಮಾಡಿ 3 ವಿಕೆಟ್ ಕಿತ್ತು ಮುಂಬೈ ತಂಡಕ್ಕೆ ದೊಡ್ಡ ಪೆಟ್ಟನ್ನು ಕೊಟ್ಟರು. ಮೊದಲ ಇನ್ನಿಂಗ್ಸ್ನಲ್ಲಿ ಶಬೀರ್ ಅಹ್ಲುವಾಲಿಯಾ ಗಳಿಸಿದ 35 ರನ್ ಅತಿಹೆಚ್ಚು ರನ್ ಆಗಿ. ಉಳಿದ ಬ್ಯಾಟರ್ಗಳು ಹೀಗೆ ಬಂದು ಹಾಗೆ ಹೋದರು.
ನಂತರ ಎರಡನೇ ಇನ್ನಿಂಗ್ಸ್ಗೆ ಬ್ಯಾಟಿಂಗ್ಗೆ ಇಳಿದ ಕರ್ನಾಟಕದ ಕಿಚ್ಚನ ಪಡೆ 10 ಓವರ್ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 127 ರನ್ ಕಲೆ ಹಾಕಿತು. ಮೊದಲ ಇನ್ನಿಂಗ್ಸ್ನಲ್ಲಿ ಅಬ್ಬರಿಸಿದ್ದ ಡಾರ್ಲಿಂಗ್ ಕೃಷ್ಣ ಕೇವಲ 19 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮಂಜುನಾಥ್ ಗೌಡ ಅವರ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡ 127ರನ್ ಗಳಿಸುವಲ್ಲಿ ಯಶಸ್ವಿಯಾಯ್ತು.
ಇದನ್ನೂ ಓದಿ:9 ಸಿಕ್ಸರ್, 11 ಬೌಂಡರಿ.. ಡಾರ್ಲಿಂಗ್ ಕೃಷ್ಣ ಆಕರ್ಷಕ ಶತಕ; ಕರ್ನಾಟಕ ಬುಲ್ಡೋಜರ್ಸ್ ಸಖತ್ ಸೆಲೆಬ್ರೇಷನ್! VIDEO
ಕರ್ನಾಟಕದ ಬ್ಯಾಟಿಂಗ್ ಬಳಿಕ ಅಂಗಳಕ್ಕೆ ಇಳಿದ ಮುಂಬೈ ಹೀರೋಸ್ ತಂಡ ಮತ್ತೆ ಮುಗ್ಗರಿಸಿತು. 10 ಓವರ್ಗಳಲ್ಲಿ ಐದು ವಿಕೆಟ್ ಒಪ್ಪಿಸಿ ಕೇವಲ 113 ರನ್ಗಳನ್ನು ಗಳಿಸಲು ಮಾತ್ರ ಸಾಧ್ಯವಾಯ್ತು. ಮುಂಬೈ ಪರ ಶಬೀರ್ ಅಹುಲುವಾಲಿಯಾ ಮಾತ್ರ ಏಕಾಂಗಿ ಹೋರಾಟ ನಡೆಸಿ 26 ಬಾಲ್ಗಳಿಗೆ 3 ಸಿಕ್ಸರ್ ಹಾಗೂ 4 ಬೌಂಡರಿ ಬಾರಿಸುವ ಮೂಲಕ 51 ರನ್ ಗಳಿಸಿದರು. ಆದರೆ ಅವರ ಏಕಾಂಗಿ ಹೋರಾಟ ವ್ಯರ್ಥವಾಯ್ತು ಕೊನೆಗೆ ಕರ್ನಾಟಕ ಬುಲ್ಡೋಸರ್ಸ್ ತಂಡ 85 ರನ್ಗಳ ಅಂತರದಲ್ಲಿ ಮುಂಬೈ ತಂಡವನ್ನು ಮಣಿಸಿ ಗೆಲುವಿನ ಕೇಕೆ ಹಾಕಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ