/newsfirstlive-kannada/media/post_attachments/wp-content/uploads/2024/02/NF_CYBER_CRIME_2.jpg)
ದೆಹಲಿ: ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಕೆಲವು ಮೊಬೈಲ್ ಅಪ್ಲಿಕೇಷನ್​​ಗಳಿಂದ ದೂರ ಇರಿ ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ. ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಏಜೆನ್ಸಿ ಸೈಬರ್​ ದೋಸ್ತ್​ ಎಚ್ಚರಿಕೆ ಕೊಟ್ಟಿದೆ.
ಇತ್ತೀಚೆಗೆ ಸೈಬರ್ ಪ್ರಕರಣಗಳು ಹೆಚ್ಚುತ್ತಿವೆ. ಆನ್​ಲೈನ್​ ಮೂಲಕ ವಂಚಿಸಿ ಯಾಮಾರಿಸ್ತಿದ್ದು, ಜಾಗೃತರಾಗಿರಿ ಎಂದು ಹೇಳಿದೆ. CashExpand-U ಫೈನಾನ್ಸ್ ಅಸಿಸ್ಟೆಂಟ್ ಲೋನ್ ಅಪ್ಲಿಕೇಷನ್​ ಬಗ್ಗೆ ಜಾಗರೂಕರಾಗಿರಿ. ಇದು ವಿದೇಶಿ ಶತ್ರುಗಳಿಗೆ ಸಂಬಂಧಿಸಿರಬಹುದು ಎಂದು ಹೇಳಿದೆ.
ಇನ್ನು ಈ ಅಪ್ಲಿಕೇಷನ್​​ನನ್ನು ಗೂಗಲ್ ಪ್ಲೇ ಸ್ಟೋರ್​ನಿಂದ ತೆಗೆದು ಹಾಕಲಾಗಿದೆ. ಆದರೆ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಡೌನ್​ಲೋಡ್​ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಅಪ್ಲಿಕೇಷನ್ 4.4 ರೇಟ್ ಪಡೆದುಕೊಂಡಿದೆ. ಇದರ ಬಗ್ಗೆ 7.19 ಸಾವಿರ ಮಂದಿ ವಿಶ್ಲೇಷಣೆ ಮಾಡಿದ್ದಾರೆ. ಈ ಅಪ್ಲಿಕೇಷನ್ ಸಾಲ ಸೌಲಭ್ಯ ಒದಗಿಸುತ್ತಿತ್ತು, ಅದರ ಬಗ್ಗೆ ಹುಷಾರಾಗಿರಿ ಎಂದು ಎಚ್ಚರಿಕೆ ನೀಡಲಾಗಿದೆ.
ಒಂದು ವೇಳೆ ನಿಮ್ಮ ಮೊಬೈಲ್​​ನಲ್ಲಿ ಈ ಅಪ್ಲಿಕೇಷನ್​ ಇದ್ದರೆ ಕೂಡಲೇ ಅನ್​ ಇನ್​ಸ್ಟಾಲ್ ಮಾಡಿ. ಇಲ್ಲದಿದ್ರೆ ನಿಮ್ಮ ಮೊಬೈಲ್​ನಲ್ಲಿರುವ ದಾಖಲೆಗಳಿಗೆ ಹಾನಿ ಮಾಡಬಹುದು. ಜೊತೆಗೆ ಆರ್ಥಿಕವಾಗಿ ಪೆಟ್ಟು ನೀಡಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us