/newsfirstlive-kannada/media/post_attachments/wp-content/uploads/2025/05/AIRPORT.jpg)
ಭಾರತ ಹಾಗೂ ಪಾಕಿಸ್ತಾನ ನಡುವಿನ ಘರ್ಷಣೆ ಮತ್ತಷ್ಟು ತೀವ್ರಗೊಂಡ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿರುವ ಏರ್ಪೋರ್ಟ್ಗಳನ್ನು ತಾತ್ಕಾಲಿಕವಾಗಿ ಮುಚ್ಚುವ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.
ಪಾಕಿಸ್ತಾನ ಹಾಗೂ ಭಾರತದ ನಡುವಿನ ಘರ್ಷಣೆಯಿಂದ ದೇಶದ 24 ಏರ್ಪೋರ್ಟ್ಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಈ ಮೊದಲು ಹೇಳಿತ್ತು. ಅದರಂತೆ ಇದೀಗ ದಿನಾಂಕವನ್ನು ವಿಸ್ತರಣೆ ಮಾಡಿದ್ದು ಮೇ 15ರ ವರೆಗೆ ಉತ್ತರ ಭಾರತದ ಬಹುತೇಕ ಏರ್ಪೋರ್ಟ್ಗಳು ಬಂದ್ ಆಗಿರುತ್ತವೆ.
ಇದನ್ನೂ ಓದಿ: ಜಮ್ಮು ಕಂಪ್ಲೀಟ್ ಬ್ಲಾಕ್ ಔಟ್; ಮನೆಯಲ್ಲೇ ಇರಿ ಎಂದು ಸಿಎಂ ಒಮರ್ ಅಬ್ದುಲ್ಲಾ ಮನವಿ; ಗಡಿಯಲ್ಲಿ ಆತಂಕ!
ವಿಮಾನ ಪ್ರಯಾಣ ಮಾಡುವಂತಹ ಪ್ರಯಾಣಿಕರು 3 ಗಂಟೆ ಮೊದಲೇ ವಿಮಾನ ನಿಲ್ದಾಣಕ್ಕೆ ಬರುವಂತೆ ಈಗಾಗಲೇ ಸೂಚಿಸಲಾಗಿದೆ. ದೇಶದ್ಯಾಂತ ಇರುವ ಏರ್ಪೋರ್ಟ್ಗಳಲ್ಲಿ ಭದ್ರತೆಯನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಮುಂಚಿತವಾಗೆ ಬರಬೇಕೆಂದು ಹೇಳಿದೆ. ನೆರೆಯ ರಾಷ್ಟ್ರಗಳ ಮಧ್ಯ ಘರ್ಷಣೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನು ಮೇ 15ರ ವರೆಗೆ ಉತ್ತರ ಭಾರತದ ಏರ್ ಪೋರ್ಟ್ಗಳು ಬಂದ್ ಆಗಿರಲಿವೆ. ಹೀಗಾಗಿ ಉತ್ತರದ ಕಡೆಗೆ ಹೋಗುವ ಮೊದಲು ಸಾರಿಗೆಗೆ ಉತ್ತಮವಾದ ವಾಹನವನ್ನು ಆಯ್ಕೆ ಮಾಡಿಕೊಳ್ಳಬೇಕು. ಜಮ್ಮು, ಶ್ರೀನಗರ, ಅಮೃತಸರ, ಪಂಜಾಬ್ನ, ಲೂಧಿಯಾನ, ಪಾಟಿಯಾಲ, ಬಥಿಂದಾ, ಹಲ್ವಾರಾ, ಪಠಣ್ಕೋಟ್, ಹಿಮಾಚಲ ಪ್ರದೇಶದ ಭೂಂತರ್ ಸೇರಿದಂತೆ ಒಟ್ಟು 24 ಏರ್ ಪೋರ್ಟ್ಗಳನ್ನು ಬಿಟ್ಟು ಬಂದುಬಿಡು ಎಂದು ಹೇಳಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ