ಬೀಗ ಹಾಕಿದ್ದ ಮನೆಗಳೇ ಟಾರ್ಗೆಟ್ ಮಾಡ್ತಿದ್ದ ಆರೋಪ
ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಒಂದು ಕೆಜಿ ಇನ್ನೂರೈವತ್ತು ಗ್ರಾಂ ಚಿನ್ನಾಭರಣಗಳು ವಶಕ್ಕೆ
ಬೆಂಗಳೂರು: ಕೋಣನಕುಂಟೆ ಪೊಲೀಸರು ಸೆಂಚುರಿ ಕಳ್ಳನನ್ನು ಬಂಧಿಸಿದ್ದಾರೆ. ಇಮ್ರಾನ್ ಅಲಿಯಾಸ್ ಚೋರ್ ಇಮ್ರಾನ್ ಬಂಧಿತ ಆರೋಪಿ.
ಸೆಂಚುರಿ ಕಳ್ಳ..!
ಇಮ್ರಾನ್ ವಿರುದ್ಧ ಕರ್ನಾಟಕ ಸೇರಿ ಹಲವು ರಾಜ್ಯದಲ್ಲಿ ಕಳ್ಳತನ ಮಾಡಿರುವ ಆರೋಪ ಇದೆ. ಇದುವರೆಗೆ ಸುಮಾರು 120ಕ್ಕೂ ಹೆಚ್ಚು ಕಳ್ಳತನ ಮಾಡಿದ್ದಾನೆ, ಹೀಗಾಗಿ ಈತನಿಗೆ ಸೆಂಚುರಿ ಕಳ್ಳ ಎಂದು ಹೆಸರಿಡಲಾಗಿದೆ. ಬೀಗ ಹಾಕಿದ್ದ ಮನೆಗಳನ್ನು ಒಬ್ಬನೇ ಬಂದು ಕಳ್ಳತನ ಮಾಡ್ತಿರುವ ಆರೋಪ ಇದೆ.
ಕೆಲವು ಕಳ್ಳತನ ಪ್ರಕರಣಗಳಲ್ಲಿ ಮಾತ್ರ ಸಹಾಯಕರನ್ನು ಕರೆದುಕೊಂಡು ಹೋಗ್ತಿದ್ದ. ಇನ್ನು ಆರೋಪಿ ಬಳಿಯಿಂದ ಸುಮಾರು ಒಂದು ಕೆಜಿ ಇನ್ನೂರೈವತ್ತು ಗ್ರಾಂ ಚಿನ್ನದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಕದ್ದ ವಸ್ತುಗಳನ್ನು ಮುಂಬೈ ಮತ್ತು ಹೈದ್ರಾಬಾದ್ನಲ್ಲಿ ಗಿರವಿ ಇಡುತ್ತಿದ್ದ. ಚುಂಚಘಟ್ಟದಲ್ಲಿ ನಡೆದಿದ್ದ ಕಳ್ಳತನ ಪ್ರಕರಣದ ತನಿಖೆ ವೇಳೆ ಇಮ್ರಾನ್ನನ್ನು ಬಂಧಿಸಿದ್ದಾರೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:Attention Please: ಬ್ಯಾಂಕ್ ಕೆಲಸ ಐದು ದಿನದಲ್ಲಿ ಮುಗಿಸಿಕೊಳ್ಳಿ.. ಆಗಸ್ಟ್ನಲ್ಲಿ ಬ್ಯಾಂಕ್ಗಳಿಗೆ ಭರ್ಜರಿ ರಜೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬೀಗ ಹಾಕಿದ್ದ ಮನೆಗಳೇ ಟಾರ್ಗೆಟ್ ಮಾಡ್ತಿದ್ದ ಆರೋಪ
ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಒಂದು ಕೆಜಿ ಇನ್ನೂರೈವತ್ತು ಗ್ರಾಂ ಚಿನ್ನಾಭರಣಗಳು ವಶಕ್ಕೆ
ಬೆಂಗಳೂರು: ಕೋಣನಕುಂಟೆ ಪೊಲೀಸರು ಸೆಂಚುರಿ ಕಳ್ಳನನ್ನು ಬಂಧಿಸಿದ್ದಾರೆ. ಇಮ್ರಾನ್ ಅಲಿಯಾಸ್ ಚೋರ್ ಇಮ್ರಾನ್ ಬಂಧಿತ ಆರೋಪಿ.
ಸೆಂಚುರಿ ಕಳ್ಳ..!
ಇಮ್ರಾನ್ ವಿರುದ್ಧ ಕರ್ನಾಟಕ ಸೇರಿ ಹಲವು ರಾಜ್ಯದಲ್ಲಿ ಕಳ್ಳತನ ಮಾಡಿರುವ ಆರೋಪ ಇದೆ. ಇದುವರೆಗೆ ಸುಮಾರು 120ಕ್ಕೂ ಹೆಚ್ಚು ಕಳ್ಳತನ ಮಾಡಿದ್ದಾನೆ, ಹೀಗಾಗಿ ಈತನಿಗೆ ಸೆಂಚುರಿ ಕಳ್ಳ ಎಂದು ಹೆಸರಿಡಲಾಗಿದೆ. ಬೀಗ ಹಾಕಿದ್ದ ಮನೆಗಳನ್ನು ಒಬ್ಬನೇ ಬಂದು ಕಳ್ಳತನ ಮಾಡ್ತಿರುವ ಆರೋಪ ಇದೆ.
ಕೆಲವು ಕಳ್ಳತನ ಪ್ರಕರಣಗಳಲ್ಲಿ ಮಾತ್ರ ಸಹಾಯಕರನ್ನು ಕರೆದುಕೊಂಡು ಹೋಗ್ತಿದ್ದ. ಇನ್ನು ಆರೋಪಿ ಬಳಿಯಿಂದ ಸುಮಾರು ಒಂದು ಕೆಜಿ ಇನ್ನೂರೈವತ್ತು ಗ್ರಾಂ ಚಿನ್ನದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಕದ್ದ ವಸ್ತುಗಳನ್ನು ಮುಂಬೈ ಮತ್ತು ಹೈದ್ರಾಬಾದ್ನಲ್ಲಿ ಗಿರವಿ ಇಡುತ್ತಿದ್ದ. ಚುಂಚಘಟ್ಟದಲ್ಲಿ ನಡೆದಿದ್ದ ಕಳ್ಳತನ ಪ್ರಕರಣದ ತನಿಖೆ ವೇಳೆ ಇಮ್ರಾನ್ನನ್ನು ಬಂಧಿಸಿದ್ದಾರೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:Attention Please: ಬ್ಯಾಂಕ್ ಕೆಲಸ ಐದು ದಿನದಲ್ಲಿ ಮುಗಿಸಿಕೊಳ್ಳಿ.. ಆಗಸ್ಟ್ನಲ್ಲಿ ಬ್ಯಾಂಕ್ಗಳಿಗೆ ಭರ್ಜರಿ ರಜೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ