newsfirstkannada.com

Breaking: ಮೇಘಾಲಯದ ರಾಜ್ಯಪಾಲರಾಗಿ ಸಿ.ಹೆಚ್ ವಿಜಯಶಂಕರ್ ನೇಮಕ.. ರಾಜಕೀಯ ಹಿನ್ನೆಲೆ ಏನು..?

Share :

Published July 28, 2024 at 8:24am

    ಮೈಸೂರಿನ ಮಾಜಿ ಸಂಸದರಿಗೆ ಒಲಿದು ಬಂದ ಮಹತ್ವದ ಹುದ್ದೆ

    CH ವಿಜಯ್​ ಶಂಕರ್​ ಈಗ ಯಾವ ರಾಜ್ಯದ ರಾಜ್ಯಪಾಲರು..?

    ನೂತನ ರಾಜ್ಯಪಾಲರನ್ನು ನೇಮಕ ಮಾಡಿದ ರಾಷ್ಟ್ರಪತಿ ಮುರ್ಮು

ಬೆಂಗಳೂರು: ರಾಜಸ್ಥಾನ, ತೆಲಂಗಾಣ, ಪಂಜಾಬ್ ಸೇರಿದಂತೆ 9 ರಾಜ್ಯಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ರಾಜ್ಯಪಾಲರನ್ನು ನೇಮಕ ಮಾಡಿದ್ದಾರೆ. ಅದರಂತೆ ಮೇಘಾಲಯದ ನೂತನ ಗವರ್ನರ್​ ಆಗಿ ಮೈಸೂರಿನ ಮಾಜಿ ಸಂಸದ ಸಿ.ಹೆಚ್ ವಿಜಯ್​ ಶಂಕರ್ ಅವರನ್ನ ನೇಮಕ ಮಾಡಲಾಗಿದೆ.

ಇದನ್ನೂ ಓದಿ: ಡ್ಯಾಂಗಳಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ; ಈಗಷ್ಟೇ ನಾಟಿ ಶುರುಮಾಡಿದ್ದ ಅನ್ನದಾತರಿಗೆ ಸಂಕಷ್ಟ

ರಾಣೆಬೆನ್ನೂರು ಮೂಲದವರಾದ ಚಂದ್ರಶೇಖರ್​ ಹೆಚ್.ವಿಜಯ್​ ಶಂಕರ್ ಇವರ ಪೂರ್ಣ ಹೆಸರು. ವಿಜಯ್​ ಶಂಕರ್ 1956 ಅಕ್ಟೋಬರ್​ 21ರಂದು ಜನಿಸಿದರು. ರಾಜಕೀಯ ಆರಂಭದ ದಿನಗಳಿಂದ ಬಿಜೆಪಿಯಲ್ಲಿದ್ದ ಇವರು, 2017ರಲ್ಲಿ ಕಾಂಗ್ರೆಸ್​​ ಸೇರ್ಪಡೆಗೊಂಡಿದ್ದರು. 2019ರಲ್ಲಿ ಮತ್ತೆ ಬಿಜೆಪಿಗೆ ಸೇರಿಕೊಂಡಿದ್ದಾರೆ. ಇದೀಗ ಮೇಘಾಲಯದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.

ಮೊದಲು ಬಿಜೆಪಿಯಿಂದ ಸ್ಪರ್ಧೆ ಮಾಡಿ ಮೈಸೂರಿನ ಸಂಸದರಾಗಿದ್ದರು. 2014ರಲ್ಲಿ ಹಾಸನದಿಂದ ಸ್ಪರ್ಧೆ ಮಾಡಿ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ವಿರುದ್ಧ ಸೋಲು ಕಂಡರು. ಮೈಸೂರಿನ ಹುಣಸೂರು ಕ್ಷೇತ್ರದ ಶಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ವಿಧಾನ ಪರಿಷತ್​ನ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಇದೆ.

ಇದನ್ನೂ ಓದಿ: IAS ಕೋಚಿಂಗ್​ ಸೆಂಟರ್​ಗೆ ಮಳೆ ನೀರು ನುಗ್ಗಿ ದುರಂತ.. ಮೂವರು ವಿದ್ಯಾರ್ಥಿಗಳು ಸಾವು

ರಾಜ್ಯಗಳಿಗೆ ಆಯ್ಕೆಯಾದ ನೂತನ ರಾಜ್ಯಪಾಲರು

  • ರಾಜಸ್ಥಾನ- ಹರಿಭಾವು ಕಿಸನ್ ರಾವ್ ಬಾಗ್ಡೆ
  • ತೆಲಂಗಾಣ- ಜಿಷ್ಣು ದೇವ್ ವರ್ಮಾ
  • ಜಾರ್ಖಂಡ್- ಸಂತೋಷ್ ಕುಮಾರ್ ಗಂಗ್ವಾರ್
  • ಮಹಾರಾಷ್ಟ್ರ- ಸಿ.ಪಿ ರಾಧಾಕೃಷ್ಣನ್
  • ಅಸ್ಸಾಂ- ಲಕ್ಷ್ಮಣ್ ಪ್ರಸಾದ್ ಆಚಾರ್ಯ (ಮಣಿಪುರಕ್ಕೆ ಇನ್​ಚಾರ್ಜ್​)
  • ಪಂಜಾಬ್- ಗುಲಾಬ್ ಚಂದ್ ಕಟಾರಿಯಾ
  • ಛತ್ತೀಸ್‌ಗಢ- ರಾಮೆನ್ ದೇಕಾ
  • ಮೇಘಾಲಯ- ಸಿ.ಹೆಚ್​ ವಿಜಯ್ ಶಂಕರ್
  • ಸಿಕ್ಕಿಂ- ಓಂ ಪ್ರಕಾಶ್ ಮಾಥುರ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: ಮೇಘಾಲಯದ ರಾಜ್ಯಪಾಲರಾಗಿ ಸಿ.ಹೆಚ್ ವಿಜಯಶಂಕರ್ ನೇಮಕ.. ರಾಜಕೀಯ ಹಿನ್ನೆಲೆ ಏನು..?

https://newsfirstlive.com/wp-content/uploads/2024/07/CH_VIJAYSHANKAR.jpg

    ಮೈಸೂರಿನ ಮಾಜಿ ಸಂಸದರಿಗೆ ಒಲಿದು ಬಂದ ಮಹತ್ವದ ಹುದ್ದೆ

    CH ವಿಜಯ್​ ಶಂಕರ್​ ಈಗ ಯಾವ ರಾಜ್ಯದ ರಾಜ್ಯಪಾಲರು..?

    ನೂತನ ರಾಜ್ಯಪಾಲರನ್ನು ನೇಮಕ ಮಾಡಿದ ರಾಷ್ಟ್ರಪತಿ ಮುರ್ಮು

ಬೆಂಗಳೂರು: ರಾಜಸ್ಥಾನ, ತೆಲಂಗಾಣ, ಪಂಜಾಬ್ ಸೇರಿದಂತೆ 9 ರಾಜ್ಯಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ರಾಜ್ಯಪಾಲರನ್ನು ನೇಮಕ ಮಾಡಿದ್ದಾರೆ. ಅದರಂತೆ ಮೇಘಾಲಯದ ನೂತನ ಗವರ್ನರ್​ ಆಗಿ ಮೈಸೂರಿನ ಮಾಜಿ ಸಂಸದ ಸಿ.ಹೆಚ್ ವಿಜಯ್​ ಶಂಕರ್ ಅವರನ್ನ ನೇಮಕ ಮಾಡಲಾಗಿದೆ.

ಇದನ್ನೂ ಓದಿ: ಡ್ಯಾಂಗಳಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ; ಈಗಷ್ಟೇ ನಾಟಿ ಶುರುಮಾಡಿದ್ದ ಅನ್ನದಾತರಿಗೆ ಸಂಕಷ್ಟ

ರಾಣೆಬೆನ್ನೂರು ಮೂಲದವರಾದ ಚಂದ್ರಶೇಖರ್​ ಹೆಚ್.ವಿಜಯ್​ ಶಂಕರ್ ಇವರ ಪೂರ್ಣ ಹೆಸರು. ವಿಜಯ್​ ಶಂಕರ್ 1956 ಅಕ್ಟೋಬರ್​ 21ರಂದು ಜನಿಸಿದರು. ರಾಜಕೀಯ ಆರಂಭದ ದಿನಗಳಿಂದ ಬಿಜೆಪಿಯಲ್ಲಿದ್ದ ಇವರು, 2017ರಲ್ಲಿ ಕಾಂಗ್ರೆಸ್​​ ಸೇರ್ಪಡೆಗೊಂಡಿದ್ದರು. 2019ರಲ್ಲಿ ಮತ್ತೆ ಬಿಜೆಪಿಗೆ ಸೇರಿಕೊಂಡಿದ್ದಾರೆ. ಇದೀಗ ಮೇಘಾಲಯದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.

ಮೊದಲು ಬಿಜೆಪಿಯಿಂದ ಸ್ಪರ್ಧೆ ಮಾಡಿ ಮೈಸೂರಿನ ಸಂಸದರಾಗಿದ್ದರು. 2014ರಲ್ಲಿ ಹಾಸನದಿಂದ ಸ್ಪರ್ಧೆ ಮಾಡಿ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ವಿರುದ್ಧ ಸೋಲು ಕಂಡರು. ಮೈಸೂರಿನ ಹುಣಸೂರು ಕ್ಷೇತ್ರದ ಶಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ವಿಧಾನ ಪರಿಷತ್​ನ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಇದೆ.

ಇದನ್ನೂ ಓದಿ: IAS ಕೋಚಿಂಗ್​ ಸೆಂಟರ್​ಗೆ ಮಳೆ ನೀರು ನುಗ್ಗಿ ದುರಂತ.. ಮೂವರು ವಿದ್ಯಾರ್ಥಿಗಳು ಸಾವು

ರಾಜ್ಯಗಳಿಗೆ ಆಯ್ಕೆಯಾದ ನೂತನ ರಾಜ್ಯಪಾಲರು

  • ರಾಜಸ್ಥಾನ- ಹರಿಭಾವು ಕಿಸನ್ ರಾವ್ ಬಾಗ್ಡೆ
  • ತೆಲಂಗಾಣ- ಜಿಷ್ಣು ದೇವ್ ವರ್ಮಾ
  • ಜಾರ್ಖಂಡ್- ಸಂತೋಷ್ ಕುಮಾರ್ ಗಂಗ್ವಾರ್
  • ಮಹಾರಾಷ್ಟ್ರ- ಸಿ.ಪಿ ರಾಧಾಕೃಷ್ಣನ್
  • ಅಸ್ಸಾಂ- ಲಕ್ಷ್ಮಣ್ ಪ್ರಸಾದ್ ಆಚಾರ್ಯ (ಮಣಿಪುರಕ್ಕೆ ಇನ್​ಚಾರ್ಜ್​)
  • ಪಂಜಾಬ್- ಗುಲಾಬ್ ಚಂದ್ ಕಟಾರಿಯಾ
  • ಛತ್ತೀಸ್‌ಗಢ- ರಾಮೆನ್ ದೇಕಾ
  • ಮೇಘಾಲಯ- ಸಿ.ಹೆಚ್​ ವಿಜಯ್ ಶಂಕರ್
  • ಸಿಕ್ಕಿಂ- ಓಂ ಪ್ರಕಾಶ್ ಮಾಥುರ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More