/newsfirstlive-kannada/media/post_attachments/wp-content/uploads/2024/12/bigg-boss6.jpg)
ಬಿಗ್ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಇಬ್ಬರು ಸ್ಪರ್ಧಿಗಳು ಬಿಗ್ಬಾಸ್ ಮನೆಗೆ ಮೂಲ ನಿಯಮವನ್ನೇ ಬ್ರೇಕ್ ಮಾಡಿದ್ದಾರೆ. ಈ ಬಾರಿಯ ಬಿಗ್ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಗಳು ಒಂದಲ್ಲಾ ಒಂದು ಬಿಗ್ಬಾಸ್ ಮನೆಯ ರೂಲ್ಸ್ ಬ್ರೇಕ್ ಮಾಡುತ್ತಲೇ ಇರುತ್ತಾರೆ.
ಇದನ್ನೂ ಓದಿ: ಮೆಹಂದಿ ಮಾಸುವ ಮುನ್ನವೇ ಶೂಟಿಂಗ್ ಸೆಟ್ಗೆ ಬಂದ ಚಿನ್ನುಮರಿ ಜಾಹ್ನವಿ; ಫ್ಯಾನ್ಸ್ ಫುಲ್ ಖುಷ್
ಮೈಕ್ ಹಾಕಿಕೊಳ್ಳದೇ ಮಾತಾಡುವುದು, ಸ್ಪರ್ಧಿಗಳು ಪಿಸು ಧ್ವನಿಯಲ್ಲಿ ಮಾತಾಡುವುದು, ದೈಹಿಕವಾಗಿ ಹಲ್ಲೆ ಮಾಡುವುದು, ಮುಖ್ಯವಾಗಿ ಜೈಲಿಗೆ ಹೋಗಿರೋ ಸ್ಪರ್ಧಿಗಳು ಆಚೆ ಬರಬಾರದು, ಅಲ್ಲದೇ ರಾಗಿ ಕಂಜಿ, ನೀರು ಬಿಟ್ಟು ಯಾವ ಪದಾರ್ಥವನ್ನು ಸೇವಿಸುವಂತಿಲ್ಲ. ಆದರೆ, ಇದೀಗ ಬಿಗ್ಬಾಸ್ ಮನೆಯ ಮೂಲಕ ನಿಯಮವನ್ನೇ ಈ ಇಬ್ಬರು ಸ್ಪರ್ಧಿಗಳು ಬ್ರೇಕ್ ಮಾಡಿದ್ದಾರೆ.
View this post on Instagram
ಮನೆಯವರಿಂದ ಸಮವಾಗಿ ಕಳಪೆ ಪಟ್ಟವನ್ನು ಸ್ವೀಕರಿಸಿದ ಚೈತ್ರಾ ಕುಂದಾಪುರ ಹಾಗೂ ತ್ರಿವಿಕ್ರಮ್ ಜೈಲಿಗೆ ಹೋಗಿದ್ದಾರೆ. ಇದು ಮೂರನೇ ಬಾರಿಗೆ ಚೈತ್ರಾ ಕುಂದಾಪುರ ಜೈಲಿಗೆ ಪ್ರವೇಶ ಮಾಡಿದ್ದಾರೆ. ಅಲ್ಲದೇ ತ್ರಿವಿಕ್ರಮ್ ಇದೇ ಮೊದಲ ಬಾರಿಗೆ ಜೈಲಿಗೆ ಹೋಗಿದ್ದಾರೆ. ಹೀಗೆ ಜೈಲಿಗೆ ಈ ಇಬ್ಬರು ಪ್ರವೇಶ ಮಾಡುತ್ತಿದ್ದಂತೆ ಕ್ಯಾಪ್ಟನ್ ಮುಂದೆಯೇ ಆಚೆ ಬರುತ್ತೇನೆ ಅಂತ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಇದನ್ನೇ ಸಾಬೀತು ಮಾಡಿದ್ದಾರೆ.
ಇದನ್ನೂ ಓದಿ:ಜೈಲಿಂದ ಬರ್ತಿದ್ದಂತೆ ಅಲ್ಲು ಅರ್ಜುನ್ ಮನೆಗೆ ವಿಜಯ್ ದೇವರಕೊಂಡ ದೌಡು; ಯಾರೆಲ್ಲಾ ಬಂದಿದ್ರು?
ಕಲರ್ಸ್ ಕನ್ನಡ ರಿಲೀಸ್ ಮಾಡಿದ ಹೊಸ ಪ್ರೋಮೋದಲ್ಲಿ ಚೈತ್ರಾ ಕುಂದಾಪುರ ಹಾಗೂ ತ್ರಿವಿಕ್ರಮ್ ಜೈಲಿನಿಂದ ಆಚೆ ಹೋಗಿ ರೂಲ್ಸ್ ಬ್ರೇಕ್ ಮಾಡೋಣ ಅಂತ ಹೇಳಿದ್ದಾರೆ. ಇದಾದ ಬಳಿಕ ತಡ ಮಾಡದೇ ತ್ರಿವಿಕ್ರಮ್ ಹಾಗೂ ಚೈತ್ರಾ ಇಬ್ಬರು ಜೈಲಿನಿಂದ ಆಚೆ ಬಂದಿದ್ದಾರೆ. ಇಂದಿನ ಎಪಿಸೋಡ್ನಲ್ಲಿ ಈ ಇಬ್ಬರಿಗೆ ಕ್ಯಾಪ್ಟನ್ ಯಾವ ಶಿಕ್ಷೆ ನೀಡುತ್ತಾರೆ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ