/newsfirstlive-kannada/media/post_attachments/wp-content/uploads/2024/09/BBK-11-Chaitra-kundapura.jpg)
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಟಿಕೆಟ್ ಕೊಡಿಸೋದಾಗಿ ಉದ್ಯಮಿ ಒಬ್ಬರಿಗೆ ಕೋಟಿಗಟ್ಟಲೇ ವಂಚನೆ ಮಾಡಿದ ಆರೋಪದಲ್ಲಿ ಜೈಲು ಸೇರಿದ್ದವರು ಚೈತ್ರಾ ಕುಂದಾಪುರ. ಈ ಕೇಸ್ ಬೆನ್ನಲ್ಲೇ ಚೈತ್ರಾ ಎಲ್ಲೂ ಕಾಣಸಿಕೊಂಡಿರಲಿಲ್ಲ. ಬರೋಬ್ಬರಿ ಒಂದೂವರೆ ವರ್ಷದ ಬಳಿಕ ಚೈತ್ರಾ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಇನ್ನು, ಬಿಗ್ಬಾಸ್ಗೆ ಎಂಟ್ರಿಕೊಟ್ಟ ಮೊದಲ ದಿನವೇ ನಟಿ ಚೈತ್ರಾ ಕುಂದಾಪುರ ಕಿರಿಕ್ ತೆಗೆದಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಸಹ ಸ್ಪರ್ಧಿಗಳ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ. ಚೈತ್ರಾ ಕಿರಿಕ್ ಮಾಡಿಕೊಂಡ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಈ ಬಾರಿ ಬಿಗ್ ಬಾಸ್ನಲ್ಲಿ ನರಕ ಹಾಗೂ ಸ್ವರ್ಗ ಅನ್ನೋ ಎರಡು ಕಾನ್ಸೆಪ್ಟ್ ಇದೆ. ಚೈತ್ರಾ ನರಕದಲ್ಲಿ ಇದ್ದಾರೆ. ಇವರಿಗೆ ಬಿಗ್ ಬಾಸ್ ಮನೆ ಕ್ಲೀನಿಂಗ್ ಮಾಡುವ ಕೆಲಸ ನೀಡಲಾಗಿತ್ತು. ಕ್ಲೀನಿಂಗ್ ಮಾಡುವಾಗ ಚೈತ್ರಾ ಪೇರಲೆಕಾಯಿ ಕದ್ದು ತಿಂದಿದ್ದಾರೆ. ಇದೇ ಕಾರಣಕ್ಕೆ ಸ್ವರ್ಗ ನಿವಾಸಿಗಳು ಚೈತ್ರಾ ವಿರುದ್ಧ ಸಿಟ್ಟಾಗಿದ್ದಾರೆ.
Chaitra Kundapura ?#ChaitraKundapura#BBK11#KicchaSudeep#DBoss#kundapura#yashboos#BiggBossKannadapic.twitter.com/fZCaU29T9X
— B B K 11 ?️?️?️ (@MadhuT512865) October 1, 2024
ತಪ್ಪು ಮಾಡಿಲ್ಲ ಎಂದು ವಾದಕ್ಕಿಳಿದ ಚೈತ್ರಾ!
ಅಷ್ಟೇ ಅಲ್ಲ ತಾವು ಮಾಡಿದ್ದು ಸರಿ ಎಂದು ಸಹ ಸ್ಪರ್ಧಿಗಳೊಂದಿಗೆ ಚೈತ್ರಾ ವಾಗ್ವಾದಕ್ಕಿಳಿದಿದ್ದಾರೆ. ಈ ವಿಚಾರ ವೀಕೆಂಡ್ನಲ್ಲಿ ಚರ್ಚೆ ಆಗುವ ಸಾಧ್ಯತೆ ಇದ್ದು, ಚೈತ್ರಾಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳಬಹುದು.
ಇದನ್ನೂ ಓದಿ:BBK11: ಬಿಗ್ ಬಾಸ್ ಮನೆಯಲ್ಲಿ ನಾಮಿನೇಶನ್ ಫೈಟ್.. ಗೌತಮಿಗೆ ಶಾಕ್; ಮೊದಲು ಔಟ್ ಆಗೋದು ಯಾರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ