/newsfirstlive-kannada/media/post_attachments/wp-content/uploads/2025/01/KOHLI_gambhir.jpg)
ಚಾಂಪಿಯನ್ಸ್ ಟ್ರೋಫಿಗೆ ಸಿದ್ಧತೆ ಆರಂಭಿಸೋಕೆ ಮುನ್ನವೇ ಟೀಮ್ ಇಂಡಿಯಾಗೆ ಬಿಗ್ ಸೆಟ್ ಬ್ಯಾಕ್ ಎದುರಾಗಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಬೂಮ್ರಾ ಆಡೋದು ಬಹುತೇಕ ಡೌಟ್ ಎನ್ನಲಾಗ್ತಿದೆ. ಹೀಗಾಗಿ ಬೂಮ್ರಾ ಬದಲಿ ಆಟಗಾರನ ಆಯ್ಕೆ ಲೆಕ್ಕಾಚಾರ ಶುರುವಾಗಿದೆ. ಈ ವಿಚಾರದಲ್ಲಿ ಗಂಭೀರ್ ರಾಜಕೀಯ ದಾಳ ಉರುಳಿಸಿದ್ದಾರೆ. ಇದು ಕೊಹ್ಲಿ ಶಿಷ್ಯ ವರ್ಸಸ್ ಗೌತಿ ಶಿಷ್ಯನ ಬ್ಯಾಟಲ್ ವಾರ್ ಆಗಿ ಮಾರ್ಪಟ್ಟಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಕೌಂಟ್ಡೌನ್ ಶುರುವಾಗ್ತಿದೆ. ಇನ್ನಷ್ಟೇ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯ ತಯಾರಿಗಿಳಿಬೇಕಿದೆ. ಆದ್ರೆ, ಆ ತಯಾರಿ ಮುನ್ನವೇ ಟೀಮ್ ಇಂಡಿಯಾಗೆ ಹಿನ್ನಡೆ ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಸದ್ಯ ಇಂಜುರಿಯಿಂದ ಬಳಲುತ್ತಿರುವ ವೇಗಿ ಜಸ್ಪ್ರಿತ್ ಬೂಮ್ರಾ, ಆಡ್ತಾರಾ, ಇಲ್ವಾ ಅನ್ನೋ ಭವಿಷ್ಯ ನ್ಯೂಜಿಲೆಂಡ್ ಡಾಕ್ಟರ್ಸ್ ವರದಿ ಮೇಲೆ ನಿಂತಿದೆ. ಕೆಲ ಮೂಲಗಳ ಪ್ರಕಾರ ಚಾಂಪಿಯನ್ಸ್ ಟ್ರೋಫಿ ವೇಳೆಗೆ ಬೂಮ್ರಾ , 100 ಪರ್ಸೆಟ್ ಫಿಟ್ ಆಗೋದು ಬಹುತೇಕ ಡೌಟ್ ಎನ್ನಲಾಗಿದೆ. ಹೀಗಾಗಿ ಮಿನಿ ವಿಶ್ವಕಪ್ನಿಂದ ಬೂಮ್ರಾರನ್ನು ಕೈಬಿಡೋದು ಖಚಿತ ಎನ್ನಲಾಗುತ್ತಿದ್ದು, ಮ್ಯಾನೇಜ್ಮೆಂಟ್ ಪರ್ಯಾಯ ಆಟಗಾರನ ಹುಡುಕಾಟಕ್ಕೆ ಮುಂದಾಗಿದೆ.
ಸಿರಾಜ್ V/S ಹರ್ಷಿತ್.. ಇಬ್ಬರಲ್ಲಿ ಯಾರಿಗೆ ಮಣೆ..?
ಬೂಮ್ರಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡೋದು ಡೌಟ್ ಎಂಬ ಸುದ್ದಿ ಹೊರ ಬೀಳ್ತಿದ್ದಂತೆ ಬೂಮ್ರಾ ಸ್ಥಾನಕ್ಯಾರು ಅನ್ನೋ ಪ್ರಶ್ನೆ ಉದ್ಬವವಾಗಿದೆ. ಇದಕ್ಕೆ ವಿರಾಟ್ ಕೊಹ್ಲಿಯ ಶಿಷ್ಯ ಮೊಹಮ್ಮದ್ ಸಿರಾಜ್ ಹೆಸರು ಮುಂಚೂಣಿಯಲ್ಲಿದೆ. ಆದ್ರೆ, ಸಿರಾಜ್ ಜೊತೆ ಹೆಡ್ ಕೋಚ್ ಗಂಭೀರ್ ಶಿಷ್ಯ ಹರ್ಷಿತ್ ರಾಣಾ ಹೆಸರು ರೇಸ್ನಲ್ಲಿ ಕಾಣಿಸಿಕೊಂಡಿದೆ. ಇದೀಗ ಅನುಭವಿ ಮೊಹಮ್ಮದ್ ಸಿರಾಜ್ VS ಅನಾನುಭವಿ ಹರ್ಷಿತ್ ರಾಣಾ ನಡುವಿನ ಪೈಪೋಟಿಯಲ್ಲಿ ಯಾರಿಗೆ ಮಣೆ ಅನ್ನೋದು ಕುತೂಹಲ ಮೂಡಿಸಿದೆ.
ಹರ್ಷಿತ್ ರಾಣಾಗೆ ಹೊಡೆಯುತ್ತಾ ಜಾಕ್ ಪಾಟ್..?
ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ ಅಲಭ್ಯತೆಯಲ್ಲಿ ಸಿರಾಜ್, ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ಆಗಿ ಮೆರೆದಾಡಿದ್ದಾರೆ. ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ ಟೂರ್ನಿಗಳು ಸೇರಿದಂತೆ ಏಷ್ಯಾಕಪ್ನಂತ ಬಿಗ್ ಈವೆಂಟ್ಸ್ನಲ್ಲಿ ಗೇಮ್ ಚೇಜಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ. ಕಳೆದ 2 ವರ್ಷಗಳಿಂದ ಏಕದಿನ ಕ್ರಿಕೆಟ್ನಲ್ಲಿ ಹೈಯೆಸ್ಟ್ ವಿಕೆಟ್ ಟೇಕರ್ ಆಗಿರುವ ಸಿರಾಜ್, ಬೂಮ್ರಾ ಬದಲಿಯಾಗಿ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆಯೋದಕ್ಕೆ ಅತ್ಯಂತ ಸಮರ್ಥ ಆಟಗಾರ ಅನ್ನೋದ್ರಲ್ಲಿ ಡೌಟೇ ಇಲ್ಲ.
ಆದ್ರೆ, ನ್ಯೂ ಬಾಲ್ನಲ್ಲಿ ಅಷ್ಟೇ ಸಿರಾಜ್ ಪ್ರತಾಪ ಎಂದು ಕ್ಯಾಪ್ಟನ್ ರೋಹಿತ್ ಶರ್ಮಾ ಓಪನ್ ಸ್ಟೇಟ್ಮೆಂಟ್ ಮಾಡಿದ್ದಾರೆ. ಅದಲ್ಲದೇ, ಈಗಾಗಲೇ ಇಂಗ್ಲೆಂಡ್ ಸರಣಿಯಲ್ಲಿ ಬೂಮ್ರಾಗೆ ಬ್ಯಾಕ್ ಆಪ್ ಪ್ಲೇಯರ್ ಆಗಿ ಯುವ ಹರ್ಷಿತ್ ರಾಣಾ ಆಯ್ಕೆಯಾಗಿದ್ದಾರೆ. ಇದನ್ನ ನೋಡಿದ್ರೆ, ಸಿರಾಜ್ಗೆ ಚಾನ್ಸ್ ನೀಡೋ ಅವಕಾಶ ಕಡಿಮೆಯಿದೆ. ಚಾಂಪಿಯನ್ಸ್ ಟ್ರೋಫಿಗೂ ಡೆಲ್ಲಿ ಬಾಯ್ ಹರ್ಷಿತ್ ರಾಣಾರನ್ನೇ ಕರೆದೊಯ್ಯುವ ಒಲವು ಮ್ಯಾನೇಜ್ಮೆಂಟ್ ಲೆವೆಲ್ನಲ್ಲಿದೆ.
ಹರ್ಷಿತ್ ರಾಣಾಗಾಗಿ ಹೆಡ್ ಕೋಚ್ ಗಂಭೀರ್ ಪಟ್ಟು..!
ಬೂಮ್ರಾ ಬದಲಿ ಆಟಗಾರನ ಆಯ್ಕೆ ವಿಚಾರದಲ್ಲಿ ಹೆಡ್ ಕೋಚ್ ಗಂಭೀರ್ ರಾಜಕೀಯ ಜೋರಾಗಿದೆ. ಕೊಹ್ಲಿ ಶಿಷ್ಯನಾದ ಸಿರಾಜ್ ಬದಲಾಗಿ ನ್ಯೂ ಪೇಸರ್ ಹರ್ಷಿತ್ ರಾಣಾಗೆ ಮಣೆ ಹಾಕುವಂತೆ ಸೆಲೆಕ್ಟರ್ಸ್ಗೆ ಒತ್ತಡ ಹೇರುತ್ತಿದ್ದಾರೆ ಅನ್ನೋದು ಸದ್ಯದ ಇನ್ಸೈಡ್ ಮಾಹಿತಿ. ಇದಕ್ಕೆ ಕಾರಣ ಕೆಕೆಆರ್ ಲಿಂಕ್ ಹಾಗೂ ತವರು ಡೆಲ್ಲಿಯ ಹುಡುಗ ಅನ್ನೋದಾಗಿದೆ.
ಮೊಹಮ್ಮದ್ ಸಿರಾಜ್ ಹೇಳಿ ಕೇಳಿ ವಿರಾಟ್ ಕೊಹ್ಲಿ ಆಪ್ತ ಶಿಷ್ಯ. ಹೀಗಾಗಿ ಸಿರಾಜ್ರನ್ನ ತಂಡದಲ್ಲಿ ಸೇರಿಸಿದ್ರೆ, ಸೀನಿಯರ್ ಆಟಗಾರರ ಪ್ರಭಾವ ಹೆಚ್ಚಾಗುತ್ತೆ. ಈ ಕಾರಣಕ್ಕಾಗಿಯೇ ಕೋಚ್ ಗಂಭೀರ್, ಬೂಮ್ರಾರನ್ನು ಕೈ ಬಿಟ್ರೆ, ಯಂಗ್ ಪೇಸರ್ ಹರ್ಷಿತ್ ರಾಣಾಗೆ ಮಣೆ ಹಾಕುವಂತೆ ಪಟ್ಟು ಹಿಡಿದಿದ್ದಾರೆ. ಆದ್ರೆ, ಟಿ20 ಹಾಗೂ ಏಕದಿನ ತಂಡದಲ್ಲಿ ಒಂದೇ ಒಂದು ಪಂದ್ಯವನ್ನ ಹರ್ಷಿತ್ ರಾಣಾ ಆಡಿಲ್ಲ. ವೈಟ್ಬಾಲ್ ಹಿಡಿದು ಇಂಟರ್ನ್ಯಾಷನಲ್ ಪಂದ್ಯವನ್ನೇ ಆಡದ ಅನಾನುಭವಿ ಹರ್ಷಿತ್ ರಾಣಾನ ಏಕಾಏಕಿ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆ ಮಾಡೋದು ಎಷ್ಟು ಸರಿ ಅನ್ನೋದು ಪ್ರಶ್ನೆಯಾಗಿದೆ.
ಇದನ್ನೂ ಓದಿ: CCL; ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಯಾರ್ ಯಾರಿಗೆ ಚಾನ್ಸ್.. ಟ್ರೋಫಿಗೆ ಗುರಿ ಇಟ್ಟ ಕಿಚ್ಚನ ಹೊಸ ಹುರುಪು
ಸಿರಾಜ್ ಸೈಡ್ಲೈನ್.. ಹರ್ಷಿತ್ ರಾಣಾಗೆ ಹರ್ಷ..!
ಈಗಾಗಲೇ ಟೀಮ್ ಮ್ಯಾನೇಜ್ಮೆಂಟ್ ಸಿರಾಜ್ಗೆ ಪರೋಕ್ಷವಾಗಿ ಸೈಡ್ಲೈನ್ ಮಾಡಿರೋ ಸಂದೇಶವನ್ನ ರವಾನಿಸಿದೆ. ಇಂಗ್ಲೆಂಡ್ ಎದುರಿನ ಏಕದಿನ ಸರಣಿಯಲ್ಲಿ ಬೂಮ್ರಾಗೆ ಬ್ಯಾಕ್ ಆಫ್ ಆಟಗಾರನಾಗಿ ಹರ್ಷಿತ್ ರಾಣಾ ಆಯ್ಕೆ ಮಾಡಿರೋ ನಿರ್ಧಾರವೇ ಈ ಮೇಸೆಜ್ನ ಪಾಸ್ ಮಾಡಿದೆ. ಯಾಕಂದ್ರೆ, ಹರ್ಷಿತ್ ರಾಣಾ ಆಯ್ಕೆ ನಿರ್ಧಾರ ಇಂಗ್ಲೆಂಡ್ ಸರಣಿಗೆ ಮಾತ್ರ ಸೀಮಿತವಾಗಿಲ್ಲ. ಚಾಂಪಿಯನ್ಸ್ ಟ್ರೋಫಿಗೂ ವಿಸ್ತಾರವಾಗುವ ಸಾಧ್ಯತೆಯಿದೆ.
ಕೋಚ್ ಪಟ್ಟವೇರಿದ ಬಳಿಕ ಪ್ರತಿ ಟೂರ್, ಪ್ರತಿ ಸಿರೀಸ್ನಲ್ಲಿ ತನ್ನಿಷ್ಟದ ಆಟಗಾರರನ್ನೇ ಗಂಭೀರ್ ತಂಡಕ್ಕೆ ಕರೆ ತರುತ್ತಿದ್ದಾರೆ. ಇದೀಗ ಮಹತ್ವದ ಐಸಿಸಿ ಈವೆಂಟ್ಸ್ನ ಸೆಲೆಕ್ಷನ್ ವಿಚಾರದಲ್ಲೂ ರಾಜಕೀಯ ಮಾಡ್ತಿದ್ದಾರೆ. ಗಂಭೀರ್ರ ಈ ರಾಜಕೀಯ ಟೂರ್ನಿಯಲ್ಲಿ ಟೀಮ್ ಇಂಡಿಯಾಗೆ ಹಿನ್ನಡೆಯುಂಟು ಮಾಡೋ ಸಾಧ್ಯತೆ ಇದೆ. ಟ್ಯಾಲೆಂಟ್ ನಿರೂಪಿಸಿರೋ ಅನುಭವಿ ವೇಗಿ ಮೊಹಮ್ಮದ್ ಸಿರಾಜ್ನ ಬಿಟ್ಟು, ಅನಾನುಭವಿ ಹರ್ಷಿತ್ ರಾಣಾಗೆ ಮಣೆ ಹಾಕೋ ನಿರ್ಧಾರ ಯಾವ ಕಾರಣಕ್ಕೂ ಒಪ್ಪುವಂತದ್ದಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ