/newsfirstlive-kannada/media/post_attachments/wp-content/uploads/2025/02/ROHIT_KOHLI-2.jpg)
ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ಆದರೆ, ಬ್ಯಾಟರ್ಗಳ ಅವಸರವೇ ಟೀಮ್ ಇಂಡಿಯಾ ಪಾಲಿಗೆ ಅಪಾಯವಾಗುವ ಲಕ್ಷಣ ಘೋಚರಿಸುತ್ತಿದೆ. ಇದಕ್ಕೆ ಕಾರಣ ಟಾಪ್ ಬ್ಯಾಟರ್ಸ್ ವಿಕೆಟ್ ಒಪ್ಪಿಸಿದ ರೀತಿ.
ಅವಸರವೇ ಅಪಘಾತಕ್ಕೆ ಕಾರಣ. ಜಾಗರೂಕವಾಗಿ ಚಾಲಯಿಸಿ.. ರಸ್ತೆ ಪ್ರಯಾಣದ ವೇಳೆ ಇಂಥಹ ಬೋರ್ಡ್ಸ್ಗಳನ್ನ ನಾವ್ ನೋಡುತ್ತೇವೆ. ಪ್ರತಿ ತಿರುವುಗಳಲ್ಲಿ, ಸ್ಫಿಡ್ ಬ್ರೇಕರ್ ಬಳಿ ಟ್ರಾಫಿಕ್ ಸಿಗ್ನಲ್ಸ್ ಜೊತೆ ಜೊತೆಗೆ ಎಚ್ಚರಿಕೆಯ ಸಂದೇಶ ಟ್ರಾಫಿಕ್ ಪೋಲಿಸರು ಅಳವಡಿಸ್ತಾರೆ. ಇದಕ್ಕೆ ಕಾರಣ ಪ್ರಯಾಣಿಕರ ಸೇಫ್ಟಿ.. ಆದ್ರೀಗ ಟೀಮ್ ಇಂಡಿಯಾಗೂ ಈ ಸಂದೇಶ ನೀಡಬೇಕಿದೆ. ಇದಕ್ಕೆ ಕಾರಣ ಚಾಂಫಿಯನ್ಸ್ ಟ್ರೋಫಿ ಪ್ರಯಾಣ.
ಚಾಂಪಿಯನ್ಸ್ ಟ್ರೋಫಿ ಎಂಬ ಬಸ್ ಏರಿರುವ ಟೀಮ್ ಇಂಡಿಯಾ, ಮೊದಲ ಸ್ಟಾಪ್ ತಲುಪಿದ್ದಾಗಿದೆ. ಆದ್ರೆ, ಮೊದಲ ಬಸ್ಸ್ಟಾಪ್ನಲ್ಲೇ ಇಂಡಿಯನ್ ಬ್ಯಾಟರ್ಸ್ ಮಾಡಿದ ತಪ್ಪುಗಳು, ಇಡೀ ತಂಡವನ್ನು ಡೇಂಜರ್ ಝೋನ್ಗೆ ತಳ್ಳುವಂತಿದೆ.
ಅಟ್ಯಾಕಿಂಗ್ ಬ್ಯಾಟಿಂಗ್.. 2 ಬಾಲ್ ಡಾಟ್.. ಬೇಕಿತ್ತಾ ಈ ಆತುರ..?
ಬಾಂಗ್ಲಾ ಎದುರು ರೋಹಿತ್, ಟೀಮ್ ಇಂಡಿಯಾಗೆ ಸಾಲಿಡ್ ಓಪನಿಂಗ್ ನೀಡಿದರು. ಅಟ್ಯಾಕಿಂಗ್ ಬ್ಯಾಟಿಂಗ್ ಮೂಲಕ ರಂಜಿಸಿದರು. ಆದ್ರೆ, ಟಸ್ಕಿನ್ ಎಸೆದ 10ನೇ ಓವರ್ನಲ್ಲಿ ಸತತ ಎರಡು ಬಾಲ್ ಡಾಟ್ ಮಾಡಿದ ರೋಹಿತ್ಗೆ, 5ನೇ ಎಸೆತವನ್ನು ಮುನ್ನುಗ್ಗಿ ಬಂದು ಹೊಡೆಯೋ ಅವಶ್ಯಕತೆ ಇರಲಿಲ್ಲ. ಆದ್ರೆ, 2 ಬಾಲ್ ಟಾಟ್ ಆಯ್ತಾಲ್ಲ ಅನ್ನೋ ಕೋಪಕ್ಕೆ ಗುಡ್ ಲೆನ್ತ್ ಬಾಲ್ನ ದಂಡಿಸಿ ಕೈಸುಟ್ಟುಕೊಂಡರು.
ಲೆಗ್ ಸ್ಪಿನ್ನರ್ಗೆ ಮತ್ತೆ ವಿಕೆಟ್ ಒಪ್ಪಿಸಿದ ವಿರಾಟ್..!
ಬಾಂಗ್ಲಾ ಎದುರು ವಿರಾಟ್ ವಿಕ್ನೇಸ್ ಮತ್ತೊಮ್ಮೆ ಬಟಾಬಯಲಾಗಿದೆ. ಲೆಗ್ ಸ್ಪಿನ್ನರ್ ರಿಷದ್ ಎಸೆದ ಚೆಂಡನ್ನು ಲೇಟ್ ಕಟ್ ಮಾಡುವುದರೊಂದಿಗೆ ಸುಲಭಕ್ಕೆ ಕ್ಯಾಚ್ ನೀಡಿ ಔಟಾದರು. ಇದಕ್ಕೆ ಕಾರಣ ಕೊಹ್ಲಿಯ ಅವಸರವೇ ಆಗಿತ್ತು.
ಇದನ್ನೂ ಓದಿ:ಗೆಳೆಯನ ಜೊತೆ ಸಪ್ತಪದಿ ತುಳಿದ ಮಾರ್ಟಿನ್ ಬ್ಯೂಟಿ; ಹುಡುಗ ಯಾರು..?
ಜವಾಬ್ದಾರಿ ಮರೆತ ಶ್ರೇಯಸ್ ಅಯ್ಯರ್..!
112 ರನ್ಗೆ ಟೀಮ್ ಇಂಡಿಯಾ 2 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಕ್ರೀಸ್ಗೆ ಬಂದಿದ್ದ ಶ್ರೇಯಸ್ ಸಾಲಿಡ್ ಟಚ್ನಲ್ಲಿರುವಂತೆ ಕಂಡರು. ಆದ್ರೆ, ಮುಸ್ತಾಫಿಜುರ್ ರಹಮಾನ್ರ ಸ್ಲೋವರ್ ಕಟರ್ಗೆ ಶ್ರೇಯಸ್, ಬಿಗ್ ಶಾಟ್ ಪ್ಲೇ ಮಾಡಲು ಮುಂದಾಗಿ ಔಟಾದರು.
ಇನ್ನಿಂಗ್ಸ್ ಬಿಲ್ಡ್ ಮಾಡೋ ಟೈಮ್ನಲ್ಲಿ ಬೇಕಿತ್ತಾ ಅಕ್ಷರ್..?
133 ರನ್ಗೆ 3 ವಿಕೆಟ್. ಈ ಟೈಮ್ನಲ್ಲಿ ಅಕ್ಷರ್, ಗಿಲ್ ಜೊತೆ ಸ್ಲೋ ಆ್ಯಂಡ್ ಸ್ಟಡಿ ಇನ್ನಿಂಗ್ಸ್ ಕಟ್ಟಬೇಕಿತ್ತು. ಆದ್ರೆ, ಇದನ್ನೆಲ್ಲ ಮೈಮರೆತ ಅಕ್ಷರ್ ಪಟೇಲ್, ಅನಾವಶ್ಯಕ ಶಾಟ್ ಪ್ಲೇ ಮಾಡಿ ಕ್ಯಾಚ್ ನೀಡಿ ನಿರ್ಗಮಿಸಿದರು.
ಅವಸರಕ್ಕೆ ಬ್ಯಾಟ್ ಬೀಸಿದ್ರೆ ಕೈಚೆಲ್ಲಬೇಕಿರುತ್ತೆ ವಿಕೆಟ್..!
ಬ್ಯಾಟ್ಸ್ಮನ್ ಎಂದಾಕ್ಷಣ.. ಪ್ರತಿ ಬಾಲ್ನ ಬೌಂಡರಿ ಬಾರಿಸೋದು ಅಲ್ಲ. ಪ್ರತಿ ಎಸೆತವನ್ನು ಹಿಟ್ ಮಾಡೋದು ಅಲ್ಲ. ಉತ್ತಮ ಎಸೆತಗಳಿಗೆ ಗೌರವ ನೀಡಬೇಕು. ತಾಳ್ಮೆಯಿಂದ ಕ್ರೀಸ್ನಲ್ಲಿ ನೆಲೆಯೂರಬೇಕು. ಬ್ಯಾಡ್ ಬಾಲ್ಸ್ನ ಬೌಂಡರಿ ಸಿಡಿಸಬೇಕು. ಇಲ್ಲ ಅವಸರಕ್ಕೆ ಬ್ಯಾಟ್ ಬೀಸಿದ್ರೆ, ವಿಕೆಟ್ ಬೀಳೋದ್ರ ಜೊತೆಗೆ ಟೀಮ್ ಸಂಕಷ್ಟಕ್ಕೆ ಸಿಲುಕಬೇಕಿರುತ್ತೆ. ಹೀಗಾಗಿಯೇ ಹೇಳ್ತಿರೋದು ಅವಸರವೇ ಅಪಾಯ.. ತಾಳ್ಮೆ ಇರಲಿ ಅಂತ.
ಮಾದರಿಯಾಗಬೇಕಿದೆ ಶುಭ್ಮನ್ ಬ್ಯಾಟಿಂಗ್..!
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಅನುಭವಿಗಳು ನಿಜ. ಆದ್ರೆ, ಬಾಂಗ್ಲಾ ಎದುರು ಶುಭ್ಮನ್ ಗಿಲ್ ಬ್ಯಾಟಿಂಗ್ನಲ್ಲಿದ್ದ ಪ್ರಬುದ್ಧತೆ. ಪರಿಸ್ಥಿತಿಗೆ ತಕ್ಕಂತೆ ಗೇರ್ ಬದಲಿಸುವ ಚಾಣಾಕ್ಷತೆ ಇತರರಲ್ಲಿ ಇರಲಿಲ್ಲ. ಅವಸರಕ್ಕೆ ಬ್ಯಾಡ್ ಶಾಟ್ಗೆ ಕೈಹಾಕಿ ಕೈಸುಟ್ಟುಕೊಳ್ಳಲಿಲ್ಲ. ಹೀಗಾಗಿ ಶುಭ್ಮನ್ ಬ್ಯಾಟಿಂಗ್ ನೋಡಿ, ಈ ಸೀನಿಯರ್ಸ್ ಕಲಿಯಬೇಕಾದ ಅಗತ್ಯತೆ ನಿಜಕ್ಕೂ ಇದ್ದೇ ಇದೆ.
ಅವಸರಕ್ಕೆ ಬ್ಯಾಟ್ ಬೀಸಿ ಅಪಾಯಕ್ಕೆ ಸಿಲುಕುವುದರ ಬದಲಿಗೆ, ತಾಳ್ಮೆ ವಹಿಸಿ.. ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಬೀಸುವಿಕೆಯನ್ನು ಮುಂದಿನ ಪಂದ್ಯಗಳಲ್ಲಾದರು ರೂಢಿಸಿಕೊಳ್ಳಬೇಕಿದೆ. ಇಲ್ಲ ಟೀಮ್ ಇಂಡಿಯಾ ಡೇಂಜರ್ ಝೋನ್ಗೆ ಸಿಲುಕೋದು ಫಿಕ್ಸ್.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ