/newsfirstlive-kannada/media/post_attachments/wp-content/uploads/2025/03/KL-RAHUL-1.jpg)
ಅಸಂಖ್ಯ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪ್ರಾರ್ಥನೆ ಫಲಿಸಿದೆ. 12 ವರ್ಷಗಳ ಬಳಿಕ ದುಬೈನಲ್ಲಿ ಚಾಂಪಿಯನ್ಸ್ ಟ್ರೋಫಿಗೆ ಟೀಮ್ ಇಂಡಿಯಾ ಮುತ್ತಿಕ್ಕಿದೆ. ನ್ಯೂಜಿಲೆಂಡ್ ನೀಡಿದ್ದು 252 ರನ್ಗಳ ಟಾರ್ಗೆಟ್ ಆದ್ರೂ ಟಫ್ ಫೈಟ್ ನೀಡ್ತು. ದಿಟ್ಟ ಹೋರಾಟ ನಡೆಸಿ ಟೀಮ್ ಇಂಡಿಯಾ ರಣರೋಚಕ ಗೆಲುವು ಸಾಧಿಸಿತು. ಲೀಗ್ನಲ್ಲಿ ಮಾಡಿದ್ದ ತಪ್ಪು.. ಫೈನಲ್ನಲ್ಲಿ ಮಾಡ್ಬಾರದು ಅನ್ನೋ ಕಾರಣಕ್ಕೆ ಬ್ಯಾಟಿಂಗ್ ಆಯ್ದುಕೊಂಡಿದ್ದ ಕಿವೀಸ್ ಲೆಕ್ಕಾಚಾರ ತಲೆಕಳೆಗಾಯ್ತು.
4 ವಿಕೆಟ್ಗಳಿಂದ ಮಣಿಸಿದ ರೋಹಿತ್ ಪಡೆ
ರೋಚಕ ಪಂದ್ಯದಲ್ಲಿ ಕಿವೀಸ್ ತಂಡವನ್ನು 4 ವಿಕೆಟ್ಗಳಿಂದ ಮಣಿಸಿದ ರೋಹಿತ್ ಪಡೆ ಚಾಂಪಿಯನ್ಸ್ ಟ್ರೋಫಿ ಎತ್ತಿಹಿಡಿದಿದೆ. ಭಾರತ ಮತ್ತೊಮ್ಮೆ ಚಾಂಪಿಯನ್ಸ್ ಟ್ರೋಫಿ ಮುಡಿಗೇರಿಸಿಕೊಳ್ಳುವ ಮೂಲಕ 25 ವರ್ಷಗಳ ಹಿಂದಿನ ಸೋಲಿನ ಸೇಡು ತೀರಿಸಿಕೊಂಡಿದೆ. 2000 ರಲ್ಲಿ ನಡೆದ ಇದೇ ಟೂರ್ನಿಯ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಸೋತಿತ್ತು. ಇದೀಗ ಅದರ ಸೇಡನ್ನು ತೀರಿಸಿಕೊಂಡಿದೆ.
ಇದನ್ನೂ ಓದಿ: ಟೀಮ್ ಇಂಡಿಯಾ ಗೆಲುವಿಗೆ ಕಾರಣ ಯಾರು? ಅಸಲಿ ಸತ್ಯ ಬಿಚ್ಚಿಟ್ಟ ಕ್ಯಾಪ್ಟನ್ ರೋಹಿತ್!
ರೋ‘ಹಿಟ್’..!
ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಕಿವೀಸ್ ಬಳಗ, ಮೊದಲು ಬ್ಯಾಟಿಂಗ್ ಮಾಡಿತು. ಟೀಮ್ ಇಂಡಿಯಾ ಸ್ಪಿನ್ನರ್ಗಳ ದಾಳಿಗೆ ನಲುಗಿ 7 ವಿಕೆಟ್ ನಷ್ಟಕ್ಕೆ 251 ರನ್ ಕಲೆಹಾಕಿತ್ತು. 252 ರನ್ಗಳ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಧಮ್ಧಾರ್ ಆರಂಭ ಪಡೆದುಕೊಳ್ತು. ಕ್ಯಾಪ್ಟನ್ ರೋಹಿತ್ ಶರ್ಮಾ ರಣಾರ್ಭಟ ನಡೆಸಿದ್ರು. ಹಿಟ್ಮ್ಯಾನ್ ಸೂಪರ್ಹಿಟ್ ಬ್ಯಾಟಿಂಗ್ಗೆ ನ್ಯೂಜಿಲೆಂಡ್ ಬೌಲರ್ಸ್ ಸುಸ್ತು ಹೊಡೆದ್ರು. ಗಿಲ್ ಎಚ್ಚರಿಕೆಯ ಆಟವಾಡಿ ನ್ಯೂಜಿಲೆಂಡ್ ಬೌಲರ್ಗಳ ತಾಳ್ಮೆ ಪರೀಕ್ಷಿಸಿದ್ರು. ಗಿಲ್ ನಿರ್ಗಮನದ ಬಳಿಕ ಕಣಕ್ಕಿಳಿದ ವಿರಾಟ್ ಕೊಹ್ಲಿ 1 ರನ್ಗೆ ಔಟಾಗಿ ನಿರಾಸೆ ಮೂಡಿಸಿದ್ರು. ಕೊಹ್ಲಿ ಬೆನ್ನಲ್ಲೇ ರೋಹಿತ್ ಶರ್ಮಾ 76 ರನ್ಗೆ ಪೆವಿಲಿಯನ್ ಸೇರಿದ್ರು.
ಇದನ್ನೂ ಓದಿ: ಶುಭ್ಮನ್ ಗಿಲ್ ಔಟ್ ಆಗಿದ್ದು ಹೇಗೆ.. ಕಿವೀಸ್ ಆಲ್ರೌಂಡರ್ ಹಿಡಿದ ಆ ಕ್ಯಾಚ್ ಹೇಗಿದೆ?
ಕನ್ನಡಿಗನ ಕೆಚ್ಚೆದೆಯ ಹೋರಾಟ..
ಬಳಿಕ ಕ್ರಿಸ್ನಲ್ಲಿ ಜೊತೆಯಾದ ಶ್ರೇಯಸ್ ಅಯ್ಯರ್-ಅಕ್ಷರ್ ಪಟೇಲ್ ತಂಡಕ್ಕೆ ಚೇತರಿಕೆ ನೀಡಿ 4ನೇ ವಿಕೆಟ್ಗೆ 61 ರನ್ಗಳ ಜೊತೆಯಾಟವಾಡಿದ್ರು. ಶ್ರೇಯಸ್ 48 ರನ್ಗಳಿಸಿ ಔಟಾದ್ರೆ, ಅಕ್ಷರ್ ಪಟೇಲ್ 29 ರನ್ಗಳ ಅತ್ಯಮೂಲ್ಯ ಕಾಣಿಕೆ ನೀಡಿದ್ರು. ಬಳಿಕ ಕಣಕ್ಕಿದ ಹಾರ್ದಿಕ್ ಪಾಂಡ್ಯ 18 ರನ್ಗಳಿಸಿ ನಿರ್ಗಮಿಸಿದ್ರು. ಆಗ ಬಂದ ಕನ್ನಡಿಗ ಕೆ.ಎಲ್ ರಾಹುಲ್ ಕೆಚ್ಚೆದೆಯ ಹೋರಾಟ ನಡೆಸಿದ್ರು. ಕ್ರಿಸ್ ಕಚ್ಚಿ ನಿಂತು ಅಬ್ಬರಿಸಿ ತಂಡವನ್ನ ಅಜೇಯವಾಗಿ ಗೆಲುವಿನ ದಡ ಸೇರಿಸಿದ್ರು. ಆ ಮೂಲಕ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಹೃದಯವನ್ನು ನಮ್ಮ ಕನ್ನಡಿಗ ಕೆಎಲ್ ರಾಹುಲ್ ಗೆದ್ದರು. 6 ಎಸೆತಗಳು ಬಾಕಿ ಇರುವಾಗಲೇ 254 ರನ್ ಬಾರಿಸಿ ಭಾರತ ಗೆಲುವು ಸಾಧಿಸಿತು. 48ನೇ ಓವರ್ನ ಕೊನೆಯ ಎಸೆತವನ್ನ ಬೌಂಡರಿಗಟ್ಟಿದ ರವೀಂದ್ರ ಜಡೇಜಾ ತಂಡವನ್ನ ಗೆಲುವಿನ ದಡ ಸೇರಿಸಿದ್ರು.
ಒಟ್ಟಾರೆ 12 ವರ್ಷಗಳ ಬಳಿಕ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಸಂಭ್ರಮದಲ್ಲಿ ಟೀಮ್ ಇಂಡಿಯಾ ಆಟಗಾರರು ತೇಲಾಡಿದ್ರು. ಕಪ್ ಗೆದ್ದ ಸಂಭ್ರಮದಲ್ಲಿ ಡ್ಯಾನ್ಸ್ ಮಾಡಿದ್ರು. ಕೋಟ್ಯಂತರ ಅಭಿಮಾನಿಗಳ ಕನಸನ್ನ ನನಸು ಮಾಡಿದ ತೃಪ್ತ ಬಾವ ಟೀಮ್ ಇಂಡಿಯಾ ಆಟಗಾರರ ಕಣ್ಣಲ್ಲಿತ್ತು.
ಇದನ್ನೂ ಓದಿ: ಭಾರತ ತಂಡದ ಮಾನ ಕಾಪಾಡಿದ ಕನ್ನಡಿಗ; ಕೆ.ಎಲ್ ರಾಹುಲ್ ಅವರನ್ನು ಹಾಡಿಹೊಗಳಿದ ರೋಹಿತ್ ಶರ್ಮಾ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್