25 ವರ್ಷಗಳ ಹಿಂದಿನ ಸೇಡು ತೀರಿಸಿಕೊಂಡ ಭಾರತ.. ಹೃದಯಗೆದ್ದ ನಮ್ಮ ಕನ್ನಡಿಗ KL ರಾಹುಲ್..!

author-image
Ganesh
Updated On
25 ವರ್ಷಗಳ ಹಿಂದಿನ ಸೇಡು ತೀರಿಸಿಕೊಂಡ ಭಾರತ.. ಹೃದಯಗೆದ್ದ ನಮ್ಮ ಕನ್ನಡಿಗ KL ರಾಹುಲ್..!
Advertisment
  • ಕನ್ನಡಿಗನ ಕೆಚ್ಚೆದೆಯ ಹೋರಾಟ.. ಭಾರತಕ್ಕೆ ಜಯ
  • 12 ವರ್ಷಗಳ ಬಳಿಕ ಟ್ರೋಫಿಗೆ ಮುತ್ತಿಕ್ಕಿದ ಟೀಮ್​ ಇಂಡಿಯಾ
  • ಚಕ್ರವರ್ತಿ, ಕುಲ್​ದೀಪ್ ಚಮತ್ಕಾರಕ್ಕೆ ಕಿವೀಸ್ ಕಂಗಾಲ್​​.!

ಅಸಂಖ್ಯ ಭಾರತೀಯ ಕ್ರಿಕೆಟ್​ ಅಭಿಮಾನಿಗಳ ಪ್ರಾರ್ಥನೆ ಫಲಿಸಿದೆ. 12 ವರ್ಷಗಳ ಬಳಿಕ ದುಬೈನಲ್ಲಿ ಚಾಂಪಿಯನ್ಸ್​ ಟ್ರೋಫಿಗೆ ಟೀಮ್​​ ಇಂಡಿಯಾ ಮುತ್ತಿಕ್ಕಿದೆ. ನ್ಯೂಜಿಲೆಂಡ್​ ನೀಡಿದ್ದು 252 ರನ್​ಗಳ ಟಾರ್ಗೆಟ್​ ಆದ್ರೂ ಟಫ್​ ಫೈಟ್​ ನೀಡ್ತು. ದಿಟ್ಟ ಹೋರಾಟ ನಡೆಸಿ ಟೀಮ್​ ಇಂಡಿಯಾ ರಣರೋಚಕ ಗೆಲುವು ಸಾಧಿಸಿತು. ಲೀಗ್​ನಲ್ಲಿ ಮಾಡಿದ್ದ ತಪ್ಪು.. ಫೈನಲ್​ನಲ್ಲಿ ಮಾಡ್ಬಾರದು ಅನ್ನೋ ಕಾರಣಕ್ಕೆ ಬ್ಯಾಟಿಂಗ್ ಆಯ್ದುಕೊಂಡಿದ್ದ ಕಿವೀಸ್ ಲೆಕ್ಕಾಚಾರ ತಲೆಕಳೆಗಾಯ್ತು.

4 ವಿಕೆಟ್​ಗಳಿಂದ ಮಣಿಸಿದ ರೋಹಿತ್ ಪಡೆ

ರೋಚಕ ಪಂದ್ಯದಲ್ಲಿ ಕಿವೀಸ್ ತಂಡವನ್ನು 4 ವಿಕೆಟ್​ಗಳಿಂದ ಮಣಿಸಿದ ರೋಹಿತ್ ಪಡೆ ಚಾಂಪಿಯನ್ಸ್ ಟ್ರೋಫಿ ಎತ್ತಿಹಿಡಿದಿದೆ. ಭಾರತ ಮತ್ತೊಮ್ಮೆ ಚಾಂಪಿಯನ್ಸ್​ ಟ್ರೋಫಿ ಮುಡಿಗೇರಿಸಿಕೊಳ್ಳುವ ಮೂಲಕ 25 ವರ್ಷಗಳ ಹಿಂದಿನ ಸೋಲಿನ ಸೇಡು ತೀರಿಸಿಕೊಂಡಿದೆ. 2000 ರಲ್ಲಿ ನಡೆದ ಇದೇ ಟೂರ್ನಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಸೋತಿತ್ತು. ಇದೀಗ ಅದರ ಸೇಡನ್ನು ತೀರಿಸಿಕೊಂಡಿದೆ.

ಇದನ್ನೂ ಓದಿ: ಟೀಮ್​ ಇಂಡಿಯಾ ಗೆಲುವಿಗೆ ಕಾರಣ ಯಾರು? ಅಸಲಿ ಸತ್ಯ ಬಿಚ್ಚಿಟ್ಟ ಕ್ಯಾಪ್ಟನ್​ ರೋಹಿತ್!

publive-image

 ರೋ‘ಹಿಟ್​’​​..!

ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟಾಸ್‌ ಗೆದ್ದ ಕಿವೀಸ್ ಬಳಗ, ಮೊದಲು ಬ್ಯಾಟಿಂಗ್ ಮಾಡಿತು. ಟೀಮ್ ಇಂಡಿಯಾ ಸ್ಪಿನ್ನರ್​​​ಗಳ ದಾಳಿಗೆ ನಲುಗಿ 7 ವಿಕೆಟ್‌ ನಷ್ಟಕ್ಕೆ 251 ರನ್ ಕಲೆಹಾಕಿತ್ತು. 252 ರನ್​ಗಳ ಗುರಿ ಬೆನ್ನಟ್ಟಿದ ಟೀಮ್​ ಇಂಡಿಯಾ ಧಮ್​ಧಾರ್​ ಆರಂಭ ಪಡೆದುಕೊಳ್ತು. ಕ್ಯಾಪ್ಟನ್​ ರೋಹಿತ್​ ಶರ್ಮಾ ರಣಾರ್ಭಟ ನಡೆಸಿದ್ರು. ಹಿಟ್​​ಮ್ಯಾನ್​ ಸೂಪರ್​ಹಿಟ್​ ಬ್ಯಾಟಿಂಗ್​ಗೆ ನ್ಯೂಜಿಲೆಂಡ್​ ಬೌಲರ್ಸ್​ ಸುಸ್ತು ಹೊಡೆದ್ರು. ಗಿಲ್​ ಎಚ್ಚರಿಕೆಯ ಆಟವಾಡಿ ನ್ಯೂಜಿಲೆಂಡ್​ ಬೌಲರ್​ಗಳ ತಾಳ್ಮೆ ಪರೀಕ್ಷಿಸಿದ್ರು. ಗಿಲ್​ ನಿರ್ಗಮನದ ಬಳಿಕ ಕಣಕ್ಕಿಳಿದ ವಿರಾಟ್​​ ಕೊಹ್ಲಿ 1 ರನ್​ಗೆ ಔಟಾಗಿ ನಿರಾಸೆ ಮೂಡಿಸಿದ್ರು. ಕೊಹ್ಲಿ ಬೆನ್ನಲ್ಲೇ ರೋಹಿತ್​ ಶರ್ಮಾ 76 ರನ್​ಗೆ ಪೆವಿಲಿಯನ್​ ಸೇರಿದ್ರು. ​

ಇದನ್ನೂ ಓದಿ: ಶುಭ್​ಮನ್​ ಗಿಲ್ ಔಟ್ ಆಗಿದ್ದು ಹೇಗೆ.. ಕಿವೀಸ್​ ಆಲ್​ರೌಂಡರ್ ಹಿಡಿದ ಆ ಕ್ಯಾಚ್ ಹೇಗಿದೆ?

publive-image

ಕನ್ನಡಿಗನ ಕೆಚ್ಚೆದೆಯ ಹೋರಾಟ..

ಬಳಿಕ ಕ್ರಿಸ್​ನಲ್ಲಿ ಜೊತೆಯಾದ ಶ್ರೇಯಸ್​ ಅಯ್ಯರ್​-ಅಕ್ಷರ್​ ಪಟೇಲ್​ ತಂಡಕ್ಕೆ ಚೇತರಿಕೆ ನೀಡಿ 4ನೇ ವಿಕೆಟ್​ಗೆ 61 ರನ್​ಗಳ ಜೊತೆಯಾಟವಾಡಿದ್ರು. ಶ್ರೇಯಸ್​​ 48 ರನ್​ಗಳಿಸಿ ಔಟಾದ್ರೆ, ಅಕ್ಷರ್​ ಪಟೇಲ್​ 29 ರನ್​ಗಳ ಅತ್ಯಮೂಲ್ಯ ಕಾಣಿಕೆ ನೀಡಿದ್ರು. ಬಳಿಕ ಕಣಕ್ಕಿದ ಹಾರ್ದಿಕ್​​ ಪಾಂಡ್ಯ 18 ರನ್​ಗಳಿಸಿ ನಿರ್ಗಮಿಸಿದ್ರು. ಆಗ ಬಂದ ಕನ್ನಡಿಗ ಕೆ.ಎಲ್​ ರಾಹುಲ್​ ಕೆಚ್ಚೆದೆಯ ಹೋರಾಟ ನಡೆಸಿದ್ರು. ಕ್ರಿಸ್​ ಕಚ್ಚಿ ನಿಂತು ಅಬ್ಬರಿಸಿ ತಂಡವನ್ನ ಅಜೇಯವಾಗಿ ಗೆಲುವಿನ ದಡ ಸೇರಿಸಿದ್ರು. ಆ ಮೂಲಕ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಹೃದಯವನ್ನು ನಮ್ಮ ಕನ್ನಡಿಗ ಕೆಎಲ್ ರಾಹುಲ್ ಗೆದ್ದರು. 6 ಎಸೆತಗಳು ಬಾಕಿ ಇರುವಾಗಲೇ 254 ರನ್ ಬಾರಿಸಿ ಭಾರತ ಗೆಲುವು ಸಾಧಿಸಿತು. 48ನೇ ಓವರ್​ನ ಕೊನೆಯ ಎಸೆತವನ್ನ ಬೌಂಡರಿಗಟ್ಟಿದ ರವೀಂದ್ರ ಜಡೇಜಾ ತಂಡವನ್ನ ಗೆಲುವಿನ ದಡ ಸೇರಿಸಿದ್ರು.

ಒಟ್ಟಾರೆ 12 ವರ್ಷಗಳ ಬಳಿಕ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಗೆದ್ದ ಸಂಭ್ರಮದಲ್ಲಿ ಟೀಮ್​ ಇಂಡಿಯಾ ಆಟಗಾರರು ತೇಲಾಡಿದ್ರು. ಕಪ್​ ಗೆದ್ದ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡಿದ್ರು. ಕೋಟ್ಯಂತರ ಅಭಿಮಾನಿಗಳ ಕನಸನ್ನ ನನಸು ಮಾಡಿದ ತೃಪ್ತ ಬಾವ ಟೀಮ್​ ಇಂಡಿಯಾ ಆಟಗಾರರ ಕಣ್ಣಲ್ಲಿತ್ತು.

ಇದನ್ನೂ ಓದಿ: ಭಾರತ ತಂಡದ ಮಾನ ಕಾಪಾಡಿದ ಕನ್ನಡಿಗ; ಕೆ.ಎಲ್​ ರಾಹುಲ್​​ ಅವರನ್ನು ಹಾಡಿಹೊಗಳಿದ ರೋಹಿತ್​ ಶರ್ಮಾ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment