newsfirstkannada.com

ಕೊನೆಗೂ ಡಿವೋರ್ಸ್​ ಬಗ್ಗೆ ಮೌನಮುರಿದ ಚಂದನ್​ ಶೆಟ್ಟಿ.. ನಿವೇದಿತಾ ಬಗ್ಗೆ ಏನಂದ್ರು?

Share :

Published June 7, 2024 at 7:07pm

    4 ವರ್ಷಗಳ ಬಳಿಕ ಡಿವೋರ್ಸ್​ ಮಾಡಿಕೊಂಡ ಚಂದನ್​, ನಿವೇದಿತಾ

    ಡಿವೋರ್ಸ್​ ಬಗ್ಗೆ ಕೊನೆಗೂ ಮೌನಮುರಿದ ಗಾಯಕ ಚಂದನ್​ ಶೆಟ್ಟಿ!

    ಯಾವ ಕಾರಣಕ್ಕಾಗಿ ಡಿವೋರ್ಸ್​ ಮಾಡಿಕೊಂಡಿದ್ದು ಎಂದು ಬಿಚ್ಚಿಟ್ರು

ನಟಿ ನಿವೇದಿತಾ ಗೌಡ ಜತೆ ಡಿವೋರ್ಸ್​ ಮಾಡಿಕೊಂಡ ಬಳಿಕ ಬಿಗ್​ಬಾಸ್​ ಖ್ಯಾತಿಯ ಚಂದನ್​ ಶೆಟ್ಟಿ ಹೇಳಿಕೆ ನೀಡಿದ್ದಾರೆ. ಇಂದು, ನಾನು ಮತ್ತು ನಿವೇದಿತಾ ಮದುವೆಯಾಗಿ ನಾಲ್ಕು ವರ್ಷಗಳ ನಂತರ ಕಾನೂನುಬದ್ಧವಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮ ಸ್ವಂತ ಸಂತೋಷ ಮತ್ತು ಬೆಳವಣಿಗೆಯ ಮೇಲೆ ಕೇಂದ್ರೀಕರಿಸುವುದು ಮುಖ್ಯ ಎಂದು ಅರ್ಥಮಾಡಿಕೊಳ್ಳುವ ಮೂಲಕ ನಾವು ನಮ್ಮ ಮದುವೆಯನ್ನು ಉತ್ತಮ ರೀತಿಯಲ್ಲಿ ಕೊನೆಗೊಳಿಸುತ್ತಿದ್ದೇವೆ ಎಂದಿದ್ದಾರೆ.

ಇನ್ನು, ಈ ಕಷ್ಟದ ಸಮಯದಲ್ಲಿ ನಾವು ಮಾಧ್ಯಮಗಳು, ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ಬೆಂಬಲವನ್ನು ಕೇಳುತ್ತೇವೆ. ನಾವು ನಮ್ಮ ದಾರಿಯಲ್ಲಿ ಹೋಗುತ್ತಿದ್ದರೂ ಸಹ, ನಾವು ಇನ್ನೂ ಪರಸ್ಪರ ಬಲವಾದ ಸ್ನೇಹ ಮತ್ತು ಗೌರವವನ್ನು ಹೊಂದಿದ್ದೇವೆ. ಈ ಸವಾಲಿನ ಅವಧಿಯಲ್ಲಿ ನಿಮ್ಮ ಬೆಂಬಲ ನಮ್ಮಿಬ್ಬರಮೇಲಿರಲಿ ಎಂದು ಚಂದನ್​ ಶೆಟ್ಟಿ ಕೇಳಿಕೊಂಡಿದ್ದಾರೆ.

4 ವರ್ಷಗಳ ಹಿಂದೆ 2020ರಲ್ಲಿ ಫೆಬ್ರವರಿ 26ನೇ ತಾರೀಕಿನಂದು ಬಿಗ್​ಬಾಸ್ ಖ್ಯಾತಿಯ ಚಂದನ್ ಶೆಟ್ಟಿ- ನಿವೇದಿತಾ ಗೌಡ ಮದುವೆ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಮದುವೆಗೆ ಪುನೀತ್ ರಾಜ್‌ಕುಮಾರ್ ದಂಪತಿ, ಧ್ರುವ ಸರ್ಜಾ ದಂಪತಿ, ರಘು ಶಾಸ್ತ್ರಿ, ನಟ ಶ್ರೇಯಸ್ ಮಂಜು, ಶೈನ್ ಶೆಟ್ಟಿ, ನಟಿ ಅದ್ವಿತಿ ಶೆಟ್ಟಿ, ನಿರೂಪಕ ಅಕುಲ್ ಬಾಲಾಜಿ, ನಿರಂಜನ್ ದೇಶಪಾಂಡೆ ಮುಂತಾದವರು ಬಂದು ಜೋಡಿಗೆ ಶುಭ ಹಾರೈಸಿದ್ರು. ಈ ಜೋಡಿಯನ್ನು ಎಲ್ಲರೂ ಬಹಳ ಮೆಚ್ಚಿಕೊಂಡಿದ್ರು.

ಇನ್ನು, ಇಷ್ಟು ದಿನ ಚೆನ್ನಾಗಿ ಇದ್ದ ಚಂದನ್ ಶೆಟ್ಟಿ- ನಟಿ ನಿವೇದಿತಾ ಗೌಡ ದಿಢೀರ್​ ಅಂತಾ ಡಿವೋರ್ಸ್​ ಮಾಡಿಕೊಂಡಿದ್ದಾರೆ. ಈ ಜೋಡಿ ಡಿವೋರ್ಸ್​ ಸುದ್ದಿ ಕೇಳಿ ಎಲ್ಲರಿಗೂ ಶಾಕ್​ ಆಗಿದೆ. ಇಬ್ಬರು ಪರಸ್ಪರ ಒಪ್ಪಂದದ ಮೇರೆಗೆ ಡಿವೋರ್ಸ್​ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಇದನ್ನೂ ಓದಿ: ‘ಇಷ್ಟು ದಿನ ಒಬ್ಬನೇ ಇರ್ತಿದ್ದೆ..’ ಡಿವೋರ್ಸ್​ಗೆ ಮುನ್ನ ನಿವೇದಿತಾ ಬಗ್ಗೆ ಚಂದನ್​ ಶೆಟ್ಟಿ ಹೇಳಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊನೆಗೂ ಡಿವೋರ್ಸ್​ ಬಗ್ಗೆ ಮೌನಮುರಿದ ಚಂದನ್​ ಶೆಟ್ಟಿ.. ನಿವೇದಿತಾ ಬಗ್ಗೆ ಏನಂದ್ರು?

https://newsfirstlive.com/wp-content/uploads/2024/06/chandan-shetty8.jpg

    4 ವರ್ಷಗಳ ಬಳಿಕ ಡಿವೋರ್ಸ್​ ಮಾಡಿಕೊಂಡ ಚಂದನ್​, ನಿವೇದಿತಾ

    ಡಿವೋರ್ಸ್​ ಬಗ್ಗೆ ಕೊನೆಗೂ ಮೌನಮುರಿದ ಗಾಯಕ ಚಂದನ್​ ಶೆಟ್ಟಿ!

    ಯಾವ ಕಾರಣಕ್ಕಾಗಿ ಡಿವೋರ್ಸ್​ ಮಾಡಿಕೊಂಡಿದ್ದು ಎಂದು ಬಿಚ್ಚಿಟ್ರು

ನಟಿ ನಿವೇದಿತಾ ಗೌಡ ಜತೆ ಡಿವೋರ್ಸ್​ ಮಾಡಿಕೊಂಡ ಬಳಿಕ ಬಿಗ್​ಬಾಸ್​ ಖ್ಯಾತಿಯ ಚಂದನ್​ ಶೆಟ್ಟಿ ಹೇಳಿಕೆ ನೀಡಿದ್ದಾರೆ. ಇಂದು, ನಾನು ಮತ್ತು ನಿವೇದಿತಾ ಮದುವೆಯಾಗಿ ನಾಲ್ಕು ವರ್ಷಗಳ ನಂತರ ಕಾನೂನುಬದ್ಧವಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮ ಸ್ವಂತ ಸಂತೋಷ ಮತ್ತು ಬೆಳವಣಿಗೆಯ ಮೇಲೆ ಕೇಂದ್ರೀಕರಿಸುವುದು ಮುಖ್ಯ ಎಂದು ಅರ್ಥಮಾಡಿಕೊಳ್ಳುವ ಮೂಲಕ ನಾವು ನಮ್ಮ ಮದುವೆಯನ್ನು ಉತ್ತಮ ರೀತಿಯಲ್ಲಿ ಕೊನೆಗೊಳಿಸುತ್ತಿದ್ದೇವೆ ಎಂದಿದ್ದಾರೆ.

ಇನ್ನು, ಈ ಕಷ್ಟದ ಸಮಯದಲ್ಲಿ ನಾವು ಮಾಧ್ಯಮಗಳು, ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ಬೆಂಬಲವನ್ನು ಕೇಳುತ್ತೇವೆ. ನಾವು ನಮ್ಮ ದಾರಿಯಲ್ಲಿ ಹೋಗುತ್ತಿದ್ದರೂ ಸಹ, ನಾವು ಇನ್ನೂ ಪರಸ್ಪರ ಬಲವಾದ ಸ್ನೇಹ ಮತ್ತು ಗೌರವವನ್ನು ಹೊಂದಿದ್ದೇವೆ. ಈ ಸವಾಲಿನ ಅವಧಿಯಲ್ಲಿ ನಿಮ್ಮ ಬೆಂಬಲ ನಮ್ಮಿಬ್ಬರಮೇಲಿರಲಿ ಎಂದು ಚಂದನ್​ ಶೆಟ್ಟಿ ಕೇಳಿಕೊಂಡಿದ್ದಾರೆ.

4 ವರ್ಷಗಳ ಹಿಂದೆ 2020ರಲ್ಲಿ ಫೆಬ್ರವರಿ 26ನೇ ತಾರೀಕಿನಂದು ಬಿಗ್​ಬಾಸ್ ಖ್ಯಾತಿಯ ಚಂದನ್ ಶೆಟ್ಟಿ- ನಿವೇದಿತಾ ಗೌಡ ಮದುವೆ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಮದುವೆಗೆ ಪುನೀತ್ ರಾಜ್‌ಕುಮಾರ್ ದಂಪತಿ, ಧ್ರುವ ಸರ್ಜಾ ದಂಪತಿ, ರಘು ಶಾಸ್ತ್ರಿ, ನಟ ಶ್ರೇಯಸ್ ಮಂಜು, ಶೈನ್ ಶೆಟ್ಟಿ, ನಟಿ ಅದ್ವಿತಿ ಶೆಟ್ಟಿ, ನಿರೂಪಕ ಅಕುಲ್ ಬಾಲಾಜಿ, ನಿರಂಜನ್ ದೇಶಪಾಂಡೆ ಮುಂತಾದವರು ಬಂದು ಜೋಡಿಗೆ ಶುಭ ಹಾರೈಸಿದ್ರು. ಈ ಜೋಡಿಯನ್ನು ಎಲ್ಲರೂ ಬಹಳ ಮೆಚ್ಚಿಕೊಂಡಿದ್ರು.

ಇನ್ನು, ಇಷ್ಟು ದಿನ ಚೆನ್ನಾಗಿ ಇದ್ದ ಚಂದನ್ ಶೆಟ್ಟಿ- ನಟಿ ನಿವೇದಿತಾ ಗೌಡ ದಿಢೀರ್​ ಅಂತಾ ಡಿವೋರ್ಸ್​ ಮಾಡಿಕೊಂಡಿದ್ದಾರೆ. ಈ ಜೋಡಿ ಡಿವೋರ್ಸ್​ ಸುದ್ದಿ ಕೇಳಿ ಎಲ್ಲರಿಗೂ ಶಾಕ್​ ಆಗಿದೆ. ಇಬ್ಬರು ಪರಸ್ಪರ ಒಪ್ಪಂದದ ಮೇರೆಗೆ ಡಿವೋರ್ಸ್​ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಇದನ್ನೂ ಓದಿ: ‘ಇಷ್ಟು ದಿನ ಒಬ್ಬನೇ ಇರ್ತಿದ್ದೆ..’ ಡಿವೋರ್ಸ್​ಗೆ ಮುನ್ನ ನಿವೇದಿತಾ ಬಗ್ಗೆ ಚಂದನ್​ ಶೆಟ್ಟಿ ಹೇಳಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More