/newsfirstlive-kannada/media/post_attachments/wp-content/uploads/2025/06/RCB_CHANDAN_SHETTY.jpg)
ಬೆಂಗಳೂರು: ಆರ್ಸಿಬಿ 18 ವರ್ಷದ ಸಂಭ್ರಮೋತ್ಸವ ಕಣ್ತುಂಬಿಕೊಳ್ಳಲು ನಟ, ರ್ಯಾಪರ್ ಚಂದನ್ ಶೆಟ್ಟಿ ಕೂಡ ಚಿನ್ನಸ್ವಾಮಿ ಮೈದಾನಕ್ಕೆ ಹೋಗಿದ್ದರು. ಈ ವೇಳೆ ಅವರಿಗೆ ಆದ ಆತಂಕದ ಅನುಭವದ ಬಗ್ಗೆ ಮಾತನಾಡಿದ್ದಾರೆ.
18 ವರ್ಷದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೋಫಿ ಗೆದ್ದಿದ್ದಕ್ಕೆ ಇಂದು ಬೆಳಗ್ಗೆಯಿಂದ ತುಂಬಾ ಖುಷಿ ಆಗಿದ್ದೆ. ನಿಜವಾಗಲೂ ನಾನು ಆ ಸಾಗರದಂತೆ ಇರೋ ಜನರ ಮಧ್ಯೆದಿಂದ ಹೋಗಿ ಬಂದೆ. ಮೈದಾನದ ಗೇಟ್ ನಂಬರ್ 3ಕ್ಕೆ ಹೋಗಲು ನನಗೆ ಪಾಸ್ ಸಿಕ್ಕಿತ್ತು. ಗೇಟ್- 3 ಅಲ್ಲ, ಅದರ ಹತ್ತಿರಕ್ಕೂ ಹೋಗೋಕೆ ಆಗಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ವರ್ಷದ ಹಿಂದೆ ಮದುವೆ ಆಗಿದ್ದ ಅಕ್ಷತಾ.. RCB ವಿಜಯೋತ್ಸವದಲ್ಲಿ ಗಂಡನ ಎದುರೇ ಜೀವ ಬಿಟ್ಟಳು
ಗೇಟ್ ನಂಬರ್ 3ರಲ್ಲಿ ಹೋಗೋಕೆ ಆಗದಿದ್ದಕ್ಕೆ ಹೇಗೋ ಮಾಡಿ ಗೇಟ್ ನಂಬರ್- 10ರ ಬಳಿಗೆ ಬಂದೆ. ಅಲ್ಲಿ ಇನ್ನು ಹೆಚ್ಚಿನ ಜನಸಂಖ್ಯೆ ಇದ್ದರು. ಒಂದು ಮೂಮೆಂಟ್ಗೆ ಉಸಿರಾಡೋಕೆ ನನಗೆ ಕಷ್ಟ ಆಗಿತ್ತು. ಆ 11 ಜೀವಗಳಿಗೂ ಎಷ್ಟೊಂದು ಕಷ್ಟ ಆಗಿರಬಹುದು. ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡವರು ಯಾರಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಿಜವಾಗಲೂ ತುಂಬಾ ಬೇಸರ ಆಗುತ್ತಿದೆ ಎಂದು ಹೇಳಿದರು.
ನನಗೆ ಗೊತ್ತಿಲ್ಲ. ಈ ಘಟನೆಗೆ ಯಾರೂ ಹೊಣೆ ಎಂದು ಹೇಳುವುದಕ್ಕೆ ಕಷ್ಟ ಆಗುತ್ತದೆ. ಸರಿಯಾಗಿ ವ್ಯವಸ್ಥೆ ಮಾಡಲಿಲ್ವಾ?. 18 ವರ್ಷದ ನಂತರ ಕಪ್ ಬಂದರೆ ಅದರ ಖುಷಿ ಹೀಗಿರುತ್ತಾ ಎನ್ನುವುದು ಯಾರಿಗೂ ಗೊತ್ತಾಗಲಿಲ್ಲ. ಎರಡು ದಿನ ಬಿಟ್ಟು ಕಾರ್ಯಕ್ರಮ ಆಯೋಜನೆ ಮಾಡಿದ್ರೆ ಚೆನ್ನಾಗಿತ್ತು. ಪಾಸ್ಗಳನ್ನು ಹಂಚಿಕೆ ಮಾಡಿ ಮಾಡಬಹುದಿತ್ತು. ಇನ್ನು ಐಸಿಯುನಲ್ಲಿ ಯಾರು ಯಾರು ಇದ್ದರೋ ಅವರೆಲ್ಲರೂ ಬೇಗ ಹುಷಾರ್ ಆಗಿ ಬೇಗ ಬರಲಿ. ಆ 11 ಜೀವಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ