/newsfirstlive-kannada/media/post_attachments/wp-content/uploads/2024/10/WhatsApp-Image-2024-10-23-at-10.45.37-PM.jpeg)
ಸೈನಿಕ ತುದಿಗಾಲಲ್ಲಿ ನಿಂತಿದ್ರೂ, ಸಾರಥಿ ಬಾಚಿ ತಬ್ಬಲು ಸಜ್ಜಾಗಿದ್ರು. ಬಿಜೆಪಿ ತೊರೆದು ಕಾಂಗ್ರೆಸ್ ಮನೆ ಸೇರಿದ ಯೋಗೇಶ್ವರ್ ವಿಚಾರ ಮುಗಿದು ಹೋದ ಅಧ್ಯಾಯ. ಆದ್ರೆ, ಚನ್ನಪಟ್ಟಣದ ಮೈತ್ರಿಗೆ ಸಂಕಷ್ಟ ಮಾತ್ರ ತಂದೊಡ್ಡಿದ್ದಾರೆ. ಸ್ವತಂತ್ರವಾಗಿ ಸ್ಪರ್ಧಿಸುವ ಚಾನ್ಸ್ ಬಗ್ಗೆ ಲೆಕ್ಕ ಹಾಕಿದ್ದ ಅಲಯನ್ಸ್ ಪಡೆ, ಆ ಲೆಕ್ಕಾಚಾರಗಳನ್ನೇಲ್ಲ ಕಾಂಗ್ರೆಸ್ ತಲೆಕೆಳಗು ಮಾಡಿದೆ.
ಡಿಸಿಎಂ ಡಿಕೆಶಿ ಮಾಸ್ಟರ್ಸ್ಟ್ರೋಕ್ಗೆ ದಳಪತಿ ಗಲಿಬಿಲಿ!
ಈ ಕಾಂಬಿನೇಷನ್ ಮೊದಲೇ ಅರಿತಿದ್ದ ದಳಪತಿ, ಸವಾಲಿನ ಸಮುದ್ರ ಈಜಬೇಕಿದೆ. ಆದ್ರೆ ಅಭ್ಯರ್ಥಿ ಯಾರು ಅನ್ನೋದನ್ನ ನಿರ್ಧರಿಸುವಲ್ಲಿಯೇ ಜೆಡಿಎಸ್ಗೆ ಬೆಟ್ಟದಂತ ಸ್ಪರ್ಧೆ ಎದುರಿಸಬೇಕಾಗಿದೆ. ಕ್ಷೇತ್ರದ ಟಿಕೆಟ್ಗೆ ನಾಲ್ವರು ಮುಂಚೂಣಿಯಲ್ಲಿದ್ದು ಯಾರಿಗೆ ಟಿಕೆಟ್ ಒಪ್ಪಿಸಿದ್ರೆ ಗೆಲ್ಲಬಹುದು ಅನ್ನೋ ಮಂಥನಕ್ಕೆ ದಳಪತಿಗಳು ಕೂತಿದ್ದಾರೆ. ಈ ನಡುವೆ ಮೊಮ್ಮಗ ನಿಖಿಲ್ ಕರೆಸಿಕೊಂಡ ಜೆಡಿಎಸ್ ವರಿಷ್ಠ ದೇವೇಗೌಡ್ರು ಚರ್ಚೆ ನಡೆಸಿರೋದು ಕುತೂಹಲಕ್ಕೆ ಕಾರಣ ಆಗಿದೆ.
ಇದನ್ನೂ ಓದಿ: ಮೈತ್ರಿ ರಣ ತಂತ್ರಕ್ಕೆ ಕೈಕೊಟ್ಟ ಸೈನಿಕ; ದಳಪತಿಗೆ ಬಿಗ್ ಟೆನ್ಶನ್, ಕಾರಣ ಇಲ್ಲಿದೆ..
ಈ ನಾಲ್ವರಲ್ಲಿ ಮೈತ್ರಿ ಪಡೆಗೆ ಯಾರು ಹಿತವರು?
ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಬಯಸಿದ್ದ ದಳಪತಿ, ಅದಕ್ಕಾಗಿ ಜೆಡಿಎಸ್ನಿಂದ ನಿಖಿಲ್ ಕುಮಾರಸ್ವಾಮಿ ನಿಲ್ಲಿಸುವ ಲೆಕ್ಕಾಚಾರ ಇತ್ತು. ಆದ್ರೆ, ಈಗ ನೇರ ಹಣಾಹಣಿ ಕಾರಣಕ್ಕೆ ಪ್ಲಾನ್ ಚೇಂಜ್ ಆಗಿದೆ. ನಿಖಿಲ್ ಬದಲಿಗೆ ಅನಿತಾ ಕುಮಾರಸ್ವಾಮಿ ಹೆಸರು ತೇಲಿ ಬರುತ್ತಿದ್ದು, ಆ ಅವಕಾಶದ ಸಾಧ್ಯತೆ ಕಡಿಮೆ ಇದೆ.. ಆದ್ರೆ 3ನೇ ಅಭ್ಯರ್ಥಿ ಮಾತ್ರ ಅಚ್ಚರಿ ಡಿ.ಕೆ.ಸುರೇಶ್ರನ್ನ ಕಟ್ಟಿಹಾಕಿದ್ದ ಡಾ.ಸಿ.ಎನ್.ಮಂಜುನಾಥ್ ಟ್ರಿಕ್ ಬಳಸಲು ಪ್ಲಾನ್ ಏನೋ ಇದೆ. ಅದಕ್ಕಾಗಿ ಗೌಡರ ಪುತ್ರಿ ಮಂಜುನಾಥ್ರ ಪತ್ನಿ ಅನಸೂಯಾ ಹೆಸರು ಪಟ್ಟಿಯಲ್ಲಿದೆ. ಆದ್ರೆ, ಮಂಜುನಾಥ್ ಗ್ರೀನ್ ಸಿಗ್ನಲ್ ನೀಡುತ್ತಿಲ್ಲ. ಫೈನಲಿ ಜೆಡಿಎಸ್ನ ಲೋಕಲ್ ಲೀಡರ್ ಜಯಮುತ್ತು ಪರ ಗೌಡರ ಚಿತ್ತ ನೆಟ್ಟಿದೆ. ಕುಟುಂಬ ರಾಜಕಾರಣ ಇಲ್ಲ ಅನ್ನೋದನ್ನ ಸಾರಿ, ಸಾಮಾನ್ಯ ಕಾರ್ಯಕರ್ತನ ಹಣೆಪಟ್ಟಿ ಮೇಲೆ ಎಲೆಕ್ಷನ್ ನಡೆಸುವ ಲೆಕ್ಕಾಚಾರವೂ ಇದೆ.
ಇದನ್ನೂ ಓದಿ:ಹ್ಯಾಟ್ರಿಕ್ ಗೆಲುವು.. 5 ಬಾರಿ ಪಕ್ಷದಿಂದ ಪಕ್ಷಕ್ಕೆ ಜಂಪ್; ಸಿ.ಪಿ ಯೋಗೇಶ್ವರ್ ರಾಜಕೀಯದ ಇತಿಹಾಸ ಇಲ್ಲಿದೆ
ಈ ನಾಲ್ಕು ಲೆಕ್ಕಾಚಾರಗಳು ಏನೇ ಇದ್ರೂ ಎನ್ಡಿಎ ಸಭೆಯಲ್ಲಿ ಫೈನಲ್ ಆಗಬೇಕಿದೆ. ಮತ್ತೊಂದು ಸುತ್ತಿನ ಸಭೆ ಕರೆದಿರುವ ಕುಮಾರಸ್ವಾಮಿ ನಾಳೆ ಹೊತ್ತಿಗೆ ಎನ್ಡಿಎ ಟಿಕೆಟ್ ಘೋಷಿಸುವುದು ಬಹುತೇಕ ದಟ್ಟವಾಗಿದೆ. ನಾವೆಲ್ಲಾ ಕುಳಿತು ಚರ್ಚೆ ಮಾಡುತ್ತೇವೆ ಅಂತ ಜೆಡಿಎಸ್-ಬಿಜೆಪಿ ನಾಯಕರು ಹೇಳಿದ್ದಾರೆ.
ಒಟ್ಟಾರೆ, ಮೈತ್ರಿ ನಾಯಕರ ಲೆಕ್ಕಾಚಾರಗಳು ಪಲ್ಟಿ ಆಗಿದ್ದು, ಸಂದಿಗ್ಧತೆಗೆ ಸಿಲುಕಿದ್ದಾರೆ.. ಇವತ್ತು ಅಥವಾ ನಾಳೆ ಬೆಳಗ್ಗೆವರೆಗೆ ಎನ್ಡಿಎ ಅಭ್ಯರ್ಥಿ ಯಾರಾಗಬೇಕು ಅನ್ನೋ ತೀರ್ಮಾನ ಪ್ರಕಟ ಆಗಲಿದ್ದು, ಸಸ್ಪೆನ್ಸ್ ಜಾರಿಯಲ್ಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ