newsfirstkannada.com

ಸಿನಿಮಾದಲ್ಲಿ ಚಾನ್ಸ್ ನೀಡೋದಾಗಿ ಯುವತಿಗೆ ವಂಚನೆ ಕೇಸ್​​​ಗೆ ಬಿಗ್​ ಟ್ವಿಸ್ಟ್​​.. ಅಸಲಿಗೆ ಆಗಿದ್ದೇನು..?

Share :

Published August 22, 2023 at 6:22pm

    ನಿರ್ದೇಶಕನ ಹೆಸರಲ್ಲಿ ಯುವತಿಗೆ ಭಾರೀ ವಂಚನೆ

    ಸಿನಿಮಾದಲ್ಲಿ ಚಾನ್ಸ್​​ ಕೊಡೋದಾಗಿ ಹೇಳಿ ಮೋಸ

    ವಂಚನೆ ಕೇಸ್​ಗೆ ಬಿಗ್​ ಟ್ವಿಸ್ಟ್​​, ಮತ್ತೊಬ್ಬರು ಎಂಟ್ರಿ!

ಬೆಂಗಳೂರು: ತಾನು ರಂಗಿನ ರಾಟೆ’ ಸಿನಿಮಾದ ನಿರ್ದೇಶಕ ಎಂದು ಹೇಳಿಕೊಂಡು ಸಂತೋಷ್ ವಂಚನೆ ಎಸಗಿದ್ದ ಆರೋಪ ಕೇಳಿ ಬಂದಿತ್ತು. ಆರೋಪಿ ಸಂತೋಷ್ ಸಿನಿಮಾದಲ್ಲಿ ಚಾನ್ಸ್ ನೀಡೋದಾಗಿ ನಂಬಿಸಿ ಗೂಗಲ್‌ಪೇ, ಫೋನ್​ಪೇ ಮೂಲಕ ಹಣ ವರ್ಗಾಯಿಸಿಕೊಂಡು ವಂಚನೆ ಎಸಗಿದ್ದಾರೆ ಎಂದು ಯುವತಿ ಆರೋಪಿಸಿದ್ದಳು. ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಗೆ ಸಂತ್ರಸ್ತ ಯುವತಿ ದೂರು ಕೂಡ ನೀಡಿದ್ದರು.

ಇನ್ನು, ಪೊಲೀಸರು ತನಿಖೆಯನ್ನು ತೀವ್ರಗೊಳಿಸುತ್ತಿದ್ದಂತೆಯೇ ಕೇಸ್​ಗೆ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಈಗ ಸಂತೋಷ್ ರಂಗಿನ ರಾಟೆ ಸಿನಿಮಾದ ನಿರ್ದೇಶಕನೇ ಅಲ್ಲ ಎಂದು ತಿಳಿದು ಬಂದಿದೆ. ಹೀಗೆ ಎಂದು ಖುದ್ದು ರಂಗಿನ ರಾಟೆ ಸಿನಿಮಾದ ನಿರ್ದೇಶಕ ಆರ್ಮುಗಂ ಹೇಳಿಕೆ ನೀಡಿದ್ದಾರೆ.

ಈ ಸಂಬಂಧ ಮಾತಾಡಿದ ನಿರ್ದೇಶಕ ಆರ್ಮುಗಂ, ಸಂತೋಷ್​ ಸಿನಿಮಾದಲ್ಲಿ ಸಹನಟನಾಗಿ ಕೆಲಸ ಮಾಡಿದ್ದ. ದೇವಸ್ಥಾನದಲ್ಲಿ ಕಳ್ಳತನ ಮಾಡುವ ಖದೀಮನ ರೋಲ್ ಮಾಡಿದ್ದ. ನಿರ್ದೇಶಕನ ಹೆಸರು ಹೇಳಿಕೊಂಡು ವಂಚನೆ ಮಾಡಿದ್ದಾರೆ. ವರ್ಷಾನುಗಟ್ಟಲೇ ದುಡ್ಡು ಹಾಕಿ ಸಿನಿಮಾ ಮಾಡಿದ್ದೇವೆ. ಒಂದು ಕ್ಷಣದಲ್ಲೇ ಬಂದು ನಮ್ಮ ಹೆಸರು ಹಾಳು ಮಾಡಿದ್ದಾನೆ. ಆತನ ವಿರುದ್ಧ ಆಕೆ ಆರೋಪ ಮಾಡಿ ದೂರು ನೀಡಲಿ. ಆದರೆ ನಮ್ಮ ಚಿತ್ರ ತಂಡದ ಬಗ್ಗೆ ಮಾತನಾಡುವುದು ತಪ್ಪು. ನಮಗೂ ಆತನಿಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

ಸಿನಿಮಾದಲ್ಲಿ ಚಾನ್ಸ್ ನೀಡೋದಾಗಿ ಯುವತಿಗೆ ವಂಚನೆ ಕೇಸ್​​​ಗೆ ಬಿಗ್​ ಟ್ವಿಸ್ಟ್​​.. ಅಸಲಿಗೆ ಆಗಿದ್ದೇನು..?

https://newsfirstlive.com/wp-content/uploads/2023/08/Santhosh-case.jpg

    ನಿರ್ದೇಶಕನ ಹೆಸರಲ್ಲಿ ಯುವತಿಗೆ ಭಾರೀ ವಂಚನೆ

    ಸಿನಿಮಾದಲ್ಲಿ ಚಾನ್ಸ್​​ ಕೊಡೋದಾಗಿ ಹೇಳಿ ಮೋಸ

    ವಂಚನೆ ಕೇಸ್​ಗೆ ಬಿಗ್​ ಟ್ವಿಸ್ಟ್​​, ಮತ್ತೊಬ್ಬರು ಎಂಟ್ರಿ!

ಬೆಂಗಳೂರು: ತಾನು ರಂಗಿನ ರಾಟೆ’ ಸಿನಿಮಾದ ನಿರ್ದೇಶಕ ಎಂದು ಹೇಳಿಕೊಂಡು ಸಂತೋಷ್ ವಂಚನೆ ಎಸಗಿದ್ದ ಆರೋಪ ಕೇಳಿ ಬಂದಿತ್ತು. ಆರೋಪಿ ಸಂತೋಷ್ ಸಿನಿಮಾದಲ್ಲಿ ಚಾನ್ಸ್ ನೀಡೋದಾಗಿ ನಂಬಿಸಿ ಗೂಗಲ್‌ಪೇ, ಫೋನ್​ಪೇ ಮೂಲಕ ಹಣ ವರ್ಗಾಯಿಸಿಕೊಂಡು ವಂಚನೆ ಎಸಗಿದ್ದಾರೆ ಎಂದು ಯುವತಿ ಆರೋಪಿಸಿದ್ದಳು. ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಗೆ ಸಂತ್ರಸ್ತ ಯುವತಿ ದೂರು ಕೂಡ ನೀಡಿದ್ದರು.

ಇನ್ನು, ಪೊಲೀಸರು ತನಿಖೆಯನ್ನು ತೀವ್ರಗೊಳಿಸುತ್ತಿದ್ದಂತೆಯೇ ಕೇಸ್​ಗೆ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಈಗ ಸಂತೋಷ್ ರಂಗಿನ ರಾಟೆ ಸಿನಿಮಾದ ನಿರ್ದೇಶಕನೇ ಅಲ್ಲ ಎಂದು ತಿಳಿದು ಬಂದಿದೆ. ಹೀಗೆ ಎಂದು ಖುದ್ದು ರಂಗಿನ ರಾಟೆ ಸಿನಿಮಾದ ನಿರ್ದೇಶಕ ಆರ್ಮುಗಂ ಹೇಳಿಕೆ ನೀಡಿದ್ದಾರೆ.

ಈ ಸಂಬಂಧ ಮಾತಾಡಿದ ನಿರ್ದೇಶಕ ಆರ್ಮುಗಂ, ಸಂತೋಷ್​ ಸಿನಿಮಾದಲ್ಲಿ ಸಹನಟನಾಗಿ ಕೆಲಸ ಮಾಡಿದ್ದ. ದೇವಸ್ಥಾನದಲ್ಲಿ ಕಳ್ಳತನ ಮಾಡುವ ಖದೀಮನ ರೋಲ್ ಮಾಡಿದ್ದ. ನಿರ್ದೇಶಕನ ಹೆಸರು ಹೇಳಿಕೊಂಡು ವಂಚನೆ ಮಾಡಿದ್ದಾರೆ. ವರ್ಷಾನುಗಟ್ಟಲೇ ದುಡ್ಡು ಹಾಕಿ ಸಿನಿಮಾ ಮಾಡಿದ್ದೇವೆ. ಒಂದು ಕ್ಷಣದಲ್ಲೇ ಬಂದು ನಮ್ಮ ಹೆಸರು ಹಾಳು ಮಾಡಿದ್ದಾನೆ. ಆತನ ವಿರುದ್ಧ ಆಕೆ ಆರೋಪ ಮಾಡಿ ದೂರು ನೀಡಲಿ. ಆದರೆ ನಮ್ಮ ಚಿತ್ರ ತಂಡದ ಬಗ್ಗೆ ಮಾತನಾಡುವುದು ತಪ್ಪು. ನಮಗೂ ಆತನಿಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More