ಬದ್ಧವೈರಿ ಆದರೂ ಚೆನ್ನೈ ಗೆಲುವಿಗಾಗಿ ಪ್ರಾರ್ಥಿಸುತ್ತಿರುವ RCB.. ಯಾಕೆ ಗೊತ್ತಾ?

author-image
Bheemappa
Updated On
IPL ಕದನದಲ್ಲಿ ಅಭಿಮಾನಿಗಳಿಗೆ ಭಾವುಕ ಕ್ಷಣ.. ಕೊಹ್ಲಿ-ಧೋನಿ ಕೊನೆಯ ಬಾರಿಗೆ ಮುಖಾಮುಖಿ..?
Advertisment
  • ಪ್ರತಿ ಬಾರಿ RCBಗೆ ಕಂಟಕವಾಗಿರುವ ಹೈದ್ರಾಬಾದ್ ಟೀಮ್​
  • ಚೆನ್ನೈ ಸೂಪರ್​ ಕಿಂಗ್ಸ್​ ಗೆಲುವು ಆರ್​ಸಿಬಿಗೆ ಇಂಪಾರ್ಟೆಂಟ್​
  • ಆರ್​​ಸಿಬಿ ಕನಸನ್ನು ಭಗ್ನ ಮಾಡಿರುವ ಹೈದ್ರಾಬಾದ್​ ತಂಡ

ಐಪಿಎಲ್​ ಸೀಸನ್​-18ರಲ್ಲಿ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಪ್ಲೇ ಆಫ್​​ಗೆ ಎಂಟ್ರಿ ಕೊಟ್ಟಿದೆ. ಪ್ಲೇ ಆಫ್​ಗೆ ಎಂಟ್ರಿ ಕೊಟ್ಟ ಸಮಾಧಾನದ ನಡುವೆ ಹೈದ್ರಾಬಾದ್​ ವಿರುದ್ಧ ಸೋತಿರುವುದು ಹೆಚ್ಚು ನೋವು ನೀಡುತ್ತಿದೆ. ಇದರಿಂದ ತಂಡಕ್ಕೆ, ಮತ್ತೊಂದು ಟೆನ್ಶನ್ ಶುರುವಾಗಿದೆ. ಪ್ಲೇ ಆಫ್​​ಗೂ ಮೊದಲು ನಡೆಯೋ ಕ್ಲೈಮ್ಯಾಕ್ಸ್​ ಪಂದ್ಯಗಳಲ್ಲಿ, ಆರ್​ಸಿಬಿಗೆ ನಿಜವಾದ ಅಗ್ನಿ ಪರೀಕ್ಷೆ ಎದುರಾಗಿದ್ದು ಇದೀಗ ಚೆನ್ನೈ ಗೆಲುವಿಗೆ ಆರ್​ಸಿಬಿ ಪ್ರಾರ್ಥಿಸುವಂತೆ ಆಗಿದೆ.

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವೆ ಐಪಿಎಲ್​ನ ಪಂದ್ಯ ನಡೆಯುತ್ತಿದೆ. ಈಗಾಗಲೇ ಟಾಸ್ ಗೆದ್ದಿರುವ ಚೆನ್ನೈ ತಂಡ ಬ್ಯಾಟಿಂಗ್ ಮಾಡುತ್ತಿದೆ. ಈ ಪಂದ್ಯ ಧೋನಿ ಪಡೆ ಗೆಲುವು ಪಡೆದರೆ ಏನು ಪ್ರಯೋಜನ ಇಲ್ಲ. ಆದರೆ ಈ ಗೆಲುವು ಆರ್​ಸಿಬಿ ಅತ್ಯಂತ ಮುಖ್ಯವಾಗಿದೆ.

ಇದನ್ನೂ ಓದಿ: ತನ್ನ ಅಭಿಮಾನಿ ಕುಟುಂಬಕ್ಕೆ ಹಣ ನೀಡಿದ ಸಚಿವ ಜಮೀರ್ ಅಹ್ಮದ್.. ಎಷ್ಟು ಲಕ್ಷ?

publive-image

ಏಕೆಂದರೆ ಈ ಪಂದ್ಯದಲ್ಲಿ ಗುಜರಾತ್ ವಿರುದ್ಧ ಚೆನ್ನೈ ತಂಡ ಗೆಲುವು ಸಾಧಿಸಿದರೆ, ಗುಜರಾತ್ ಒಟ್ಟು 14 ಪಂದ್ಯಗಳಿಂದ​ 18 ಅಂಕಗಳಿಗೆ ಫಿಕ್ಸ್ ಆಗಲಿದೆ. ಇದರಿಂದ ಆರ್​ಸಿಬಿಗೆ ಇನ್ನೊಂದು ಪಂದ್ಯ ಇರುವುದರಿಂದ ಲಕ್ನೋ ವಿರುದ್ಧ ಗೆಲುವು ಪಡೆದರೆ ಒಟ್ಟು 19 ಅಂಕಗಳಿಂದ ಟಾಪ್​​​- 2 ಸ್ಥಾನ ಸಿಗಲಿದೆ. ಈ ಸ್ಥಾನ ಸಿಕ್ಕರೇ ಫೈನಲ್​ ಹೋಗಲು ಸುಲಭವಾಗುತ್ತದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಶುಭ್​ಮನ್ ಗಿಲ್ ಪಡೆಯನ್ನು ಧೋನಿ ಪಡೆ ಮಣ್ಣು ಮುಕ್ಕಿಸಿದರೆ ಆರ್​ಸಿಬಿಗೆ ಲಾಭದಾಯಕವಾಗಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಟ್ರೋಫಿಯಲ್ಲಿ ಆರ್​ಸಿಬಿಗೆ ಬದ್ಧ ವೈರಿಯಾದರೂ ಪ್ರತಿ ಬಾರಿ ಟ್ರೋಫಿಯ ಕನಸು ನುಚ್ಚು ನೂರು ಮಾಡುತ್ತಿರುವ ತಂಡ ಹೈದ್ರಾಬಾದ್ ಆಗಿದೆ. ಈಗಾಗಲೇ ಹೈದ್ರಾಬಾದ್ ತಂಡ ಆರ್​ಸಿಬಿಯನ್ನು ಸೋಲಿಸಿ ಸಂಕಷ್ಟಕ್ಕೆ ಸಿಲುಕಿಸಿದೆ. ಹೀಗಾಗಿ ಚೆನ್ನೈ ಟೀಮ್ ಇಂದು ಗೆಲುವು ಸಾಧಿಸಿದರೆ ಬೆಂಗಳೂರು ತಂಡಕ್ಕೆ ಟಾಪ್​-2 ಸ್ಥಾನಕ್ಕೆ ಇನ್ನೊಂದು ಅವಕಾಶವಂತೂ ಇದ್ದೇ ಇರುತ್ತದೆ. ​ ​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment