ಚಿಕ್ಕೋಡಿ ಮೇಖಳಿ ಮಠ ಧ್ವಂಸ.. ಅಧಿಕಾರಿಗಳ ಇಂಥ ನಿರ್ಧಾರಕ್ಕೆ ಅಸಲಿ ಕಾರಣ ಏನು..?

author-image
Veena Gangani
Updated On
ಚಿಕ್ಕೋಡಿ ಮೇಖಳಿ ಮಠ ಧ್ವಂಸ.. ಅಧಿಕಾರಿಗಳ ಇಂಥ ನಿರ್ಧಾರಕ್ಕೆ ಅಸಲಿ ಕಾರಣ ಏನು..?
Advertisment
  • ಮೇಖಳಿ ಗ್ರಾಮದಲ್ಲಿನ ರಾಮ ಮಂದಿರಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ
  • ಸ್ವಾಮೀ ಲೊಕೇಶ್ವರ ಸ್ವಾಮೀಯ ಮಠ ಸಂಪೂರ್ಣ ದ್ವಂಸ
  • 3 ಜೆಸಿಬಿ ಬಳಸಿ ಮಠವನ್ನ ಸಂಪೂರ್ಣ ಕೆಡವಿ ಹಾಕಿದ ತಾಲೂಕಾಡಳಿತ

ಚಿಕ್ಕೋಡಿ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಕಪಟಿ ಸ್ವಾಮೀಜಿ ಲೋಕೇಶ್ವರ ಜೈಲು ಸೇರುತ್ತಿದ್ದಂತೆ ಆತನ ಮಠ ಸಂಪೂರ್ಣ ಧ್ವಂಸ ಮಾಡಲಾಗಿದೆ.

ಇದನ್ನೂ ಓದಿ:ಕರ್ನಾಟಕದಲ್ಲಿ ಭಾರೀ ಮಳೆ.. ಇವತ್ತು, ನಾಳೆ ಈ ಜಿಲ್ಲೆಯ ಶಾಲೆಗೆ ರಜೆ ಘೋಷಣೆ

publive-image

ಆರೋಪಿ ಕಪಟಿ ಸ್ವಾಮೀಜಿ ಲೋಕೇಶ್ವರ ಅನಧಿಕೃತವಾಗಿ ಮಠ ಕಟ್ಟಡ ನಿರ್ಮಾಣ ಮಾಡಿದ್ದರು. ಮೇಖಳಿ ಗ್ರಾಮದ ಸರ್ವೇ ನಂ. 225ರಲ್ಲಿ ಸರಕಾರಿ ಗಾಯರಾಣಾ ಜಮೀನಿನಲ್ಲಿ 8 ಎಕರೆ ಜಾಗವನ್ನ ಅತಿಕ್ರಮಣ ಮಾಡಿಕೊಂಡು 8 ವರ್ಷಗಳ ಹಿಂದೆ ಮಠ ನಿರ್ಮಾಣ ಮಾಡಿಕೊಂಡಿದ್ದರು.

ಇತ್ತ ದೌರ್ಜನ್ಯ ಕೇಸ್​ನಲ್ಲಿ ಸ್ವಾಮೀಜಿ ಜೈಲು ಪಾಲಾಗುತ್ತಿದ್ದಂತೆ ಬೆಳ್ಳಂಬೆಳಿಗ್ಗೆ ರಾಯಬಾಗ ತಹಶೀಲ್ದಾರ್ ನೇತೃತ್ವದಲ್ಲಿ ಮೂರು ಜೆಸಿಬಿಗಳ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment