ಸಿಲಿಕಾನ್ ಸಿಟಿಯಲ್ಲಿ ಮರಗಳಿಗೆ ವಿಷ ಉಣಿಸಿದ ಮಕ್ಕಳ ತಜ್ಞ
ಮಕ್ಕಳ ತಜ್ಞ ಅಶ್ವತ್ಥ್ ರಾಮ್ ರಾವ್ನಿಂದ ಮರಗಳ ಕಗ್ಗೊಲೆ
ಕುಮಾರ ಪಾರ್ಕ್ ವೆಸ್ಟ್ ಬಿಡಿಎ ಕಚೇರಿ ಹಿಂಭಾಗದಲ್ಲಿ ಘಟನೆ
ಬೆಂಗಳೂರು: ಕಾಡು ಉಳಿಸಿದರೆ ಮಾನವನ ಜೀವ ಉಳಿದಂತೆ. ಕಾಡು ಕಡಿದರೆ ಹೆತ್ತ ತಾಯಿಯನ್ನ ಕೊಂದಂತೆ ಅನ್ನೋ ಮಾತಿದೆ. ಆ ಮಾತಿನಂತೆ ಇಲ್ಲೊಬ್ಬ ವ್ಯಕ್ತಿ ತನ್ನ ಸ್ವಾರ್ಥಕ್ಕಾಗಿ ಹೆತ್ತ ತಾಯಿಯನ್ನೇ ಕೊಂದು ಬಿಟ್ಟಿದ್ದಾನೆ. ಉಸಿರನ್ನ ಕಾಪಾಡೋ ವ್ಯಕ್ತಿಯೇ ಆ ವೃಕ್ಷಗಳ ಉಸಿರನ್ನ ಬಿಗಿಯಾಗಿಸಿ, ವಿಷ ಉಣಿಸಿ, ವಿಲವಿಲ ಒದ್ದಾಡಿಸಿ ಕಗ್ಗೊಲೆಗೆ ಕಾರಣನಾಗ್ಬಿಟ್ಟಿದ್ದಾನೆ. ಇನ್ನಷ್ಟು ಮರಗಳ ಹೋಮ ನಡೆಯೋ ಮುನ್ನ ಆ ವ್ಯಕ್ತಿಗೆ ಶಿಕ್ಷೆಯಾಗ್ಬೇಕೆಂಬ ಕೂಗು ಕೇಳಿಬಂದಿದೆ.
ಇದನ್ನೂ ಓದಿ: ಹಾಡಹಗಲೇ ಸ್ಕ್ರೂ ಡ್ರೈವರ್ನಿಂದ ಚುಚ್ಚಿ ಯುವಕನ ಬರ್ಬರ ಹತ್ಯೆ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ವೈದ್ಯೋ ನಾರಾಯಣ ಹರಿ ಅನ್ನೋ ಕಾಲವೊಂದಿತ್ತು. ಆದ್ರೀಗ ಯಮಪುರಿಯತ್ತ ಸಾಗಿಸೋ ಯಮ ರಾಕ್ಷಸ ಅನ್ನುವಂತಾಗ್ಬಿಟ್ಟಿದೆ. ಆ ಲಿಸ್ಟ್ಗೆ ಈತನೂ ಸೇರ್ಬಿಟ್ಟಿದ್ದಾನೆ. ಹೆಸರು ಅಶ್ವಥ್ ರಾಮ್ ರಾವ್, ಮಕ್ಕಳ ತಜ್ಞ. ಉಸಿರನ್ನ ಕಾಪಾಡೋ ವೈದ್ಯನೇ ಉಸಿರನ್ನ ನಿಲ್ಲಿಸ್ತಿದ್ದಾನೆ. ಪಾಪಿ ವೈದ್ಯನ ಪಾಪದ ಕೆಲಸ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಹೌದು, ಮಕ್ಕಳ ತಜ್ಞ ಅಶ್ವತ್ಥ್, ಸರ್ಪಂಟೈನ್ ರಸ್ತೆಯಲ್ಲಿ 3 ಅಂತಸ್ಥಿನ ಕಮರ್ಷಿಯಲ್ ಕಟ್ಟಡವನ್ನ ಹೊಂದಿದ್ದ. ಇದಕ್ಕೆ ಈ ಮರಗಳು ಅಡ್ಡಿಯಾಗುತ್ವೆ ಅನ್ನೋ ಒಂದೇ ಒಂದು ಕಾರಣಕ್ಕೆ ಮರಗಳ ಮಾರಣಹೋಮ ನಡೆಸಿದ್ದಾನೆ. ಕಾರ್ಮಿಕನನ್ನ ಕರೆಸಿ ಎರಡು ಮರದ ಬುಡದ ಸುತ್ತಲು ಡ್ರಿಲ್ ಹೊಡೆಸಿ, 4ರಿಂದ 5 ಹೋಲ್ ಮಾಡಿಸಿ, ಅದರೊಳಗೆ ಮರ ಒಣಗುವ ಕೆಮಿಕಲ್ಯುಕ್ತ ಔಷಧಿಯನ್ನ ಹಾಕಿ ಕಗ್ಗೊಲೆಗೈದು ಕಾಲ್ಕಿತ್ತಿದ್ದಾನೆ.
ಈಗಾಗಲೇ ವೈದ್ಯನ ಕೃತ್ಯಕ್ಕೆ ಮರಗಳು ಸಾವಿನಂಚಿನಲ್ಲಿವೆ. ಎರಡೇ ವಾರದಲ್ಲಿ ಆಕಾಶದೆತ್ತರಕ್ಕೆ ಹೆಮ್ಮಾರವಾಗಿ ಬೆಳೆದು ನಿಂತಿದ್ದ ವೃಕ್ಷಗಳು ಸಂಪೂರ್ಣ ಒಣಗಿ ಈಗ್ಲೋ? ಆಗ್ಲೋ ಅನ್ನೋ ಪರಿಸ್ಥಿತಿಯಲ್ಲಿದೆ. ಅಲ್ಲದೆ ವೈದ್ಯ ಅಶ್ಚತ್ಥ್ ರಾಮ್ ರಾಮ್ನ ಕೃತ್ಯಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಕೂಡಲೇ FIR ದಾಖಲಿಸಿ ವೈದ್ಯನ ವಿರುದ್ಧ ಕ್ರಮ ಕೈಗೊಳ್ಳುವಂತೆ ಜನ ಆಗ್ರಹಿಸ್ತಿದ್ದಾರೆ. ಒಟ್ಟಿನಲ್ಲಿ ಮರಗಳನ್ನ ಉಳಿಸಿ ಬೆಳಸಬೇಕು ಅಂತಿರೋ ಬಿಬಿಎಂಪಿ, ಅರಣ್ಯ ಇಲಾಖೆ ರೂಲ್ಸ್ಗೆ ಡೋಂಟ್ ಕೇರ್ ಎಂಬಂತೆ ವರ್ತಿಸಿರೋ ಈ ಪಾಪಿ ವೈದ್ಯ ಮನಸೋ ಇಚ್ಛೆ ಮರಗಳಿಗೆ ವಿಷವಿಟ್ಟು ಕಗ್ಗೊಲೆ ನಡೆಸಿದ್ದಾನೆ. ಪರಿಸರ ಉಳಿಸಿ ಅನ್ನೋರ ಮಧ್ಯೆ ಇಂತಹ ಒಂದು ಕೆಟ್ಟ ಹುಳಗಳಿದ್ರೂ ಭವಿಷ್ಯದ ಹಾದಿ ವಿನಾಶದತ್ತ ಸಾಗೋದ್ರಲ್ಲಿ ಎರಡು ಮಾತಿಲ್ಲ. ಹೀಗಾಗಿ ಆದಷ್ಟು ಬೇಗ ಈ ಪಾಪಿ ವೈದ್ಯನಿಗೆ ತಕ್ಕ ಶಾಸ್ತಿ ಆಗಲೇ ಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸಿಲಿಕಾನ್ ಸಿಟಿಯಲ್ಲಿ ಮರಗಳಿಗೆ ವಿಷ ಉಣಿಸಿದ ಮಕ್ಕಳ ತಜ್ಞ
ಮಕ್ಕಳ ತಜ್ಞ ಅಶ್ವತ್ಥ್ ರಾಮ್ ರಾವ್ನಿಂದ ಮರಗಳ ಕಗ್ಗೊಲೆ
ಕುಮಾರ ಪಾರ್ಕ್ ವೆಸ್ಟ್ ಬಿಡಿಎ ಕಚೇರಿ ಹಿಂಭಾಗದಲ್ಲಿ ಘಟನೆ
ಬೆಂಗಳೂರು: ಕಾಡು ಉಳಿಸಿದರೆ ಮಾನವನ ಜೀವ ಉಳಿದಂತೆ. ಕಾಡು ಕಡಿದರೆ ಹೆತ್ತ ತಾಯಿಯನ್ನ ಕೊಂದಂತೆ ಅನ್ನೋ ಮಾತಿದೆ. ಆ ಮಾತಿನಂತೆ ಇಲ್ಲೊಬ್ಬ ವ್ಯಕ್ತಿ ತನ್ನ ಸ್ವಾರ್ಥಕ್ಕಾಗಿ ಹೆತ್ತ ತಾಯಿಯನ್ನೇ ಕೊಂದು ಬಿಟ್ಟಿದ್ದಾನೆ. ಉಸಿರನ್ನ ಕಾಪಾಡೋ ವ್ಯಕ್ತಿಯೇ ಆ ವೃಕ್ಷಗಳ ಉಸಿರನ್ನ ಬಿಗಿಯಾಗಿಸಿ, ವಿಷ ಉಣಿಸಿ, ವಿಲವಿಲ ಒದ್ದಾಡಿಸಿ ಕಗ್ಗೊಲೆಗೆ ಕಾರಣನಾಗ್ಬಿಟ್ಟಿದ್ದಾನೆ. ಇನ್ನಷ್ಟು ಮರಗಳ ಹೋಮ ನಡೆಯೋ ಮುನ್ನ ಆ ವ್ಯಕ್ತಿಗೆ ಶಿಕ್ಷೆಯಾಗ್ಬೇಕೆಂಬ ಕೂಗು ಕೇಳಿಬಂದಿದೆ.
ಇದನ್ನೂ ಓದಿ: ಹಾಡಹಗಲೇ ಸ್ಕ್ರೂ ಡ್ರೈವರ್ನಿಂದ ಚುಚ್ಚಿ ಯುವಕನ ಬರ್ಬರ ಹತ್ಯೆ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ವೈದ್ಯೋ ನಾರಾಯಣ ಹರಿ ಅನ್ನೋ ಕಾಲವೊಂದಿತ್ತು. ಆದ್ರೀಗ ಯಮಪುರಿಯತ್ತ ಸಾಗಿಸೋ ಯಮ ರಾಕ್ಷಸ ಅನ್ನುವಂತಾಗ್ಬಿಟ್ಟಿದೆ. ಆ ಲಿಸ್ಟ್ಗೆ ಈತನೂ ಸೇರ್ಬಿಟ್ಟಿದ್ದಾನೆ. ಹೆಸರು ಅಶ್ವಥ್ ರಾಮ್ ರಾವ್, ಮಕ್ಕಳ ತಜ್ಞ. ಉಸಿರನ್ನ ಕಾಪಾಡೋ ವೈದ್ಯನೇ ಉಸಿರನ್ನ ನಿಲ್ಲಿಸ್ತಿದ್ದಾನೆ. ಪಾಪಿ ವೈದ್ಯನ ಪಾಪದ ಕೆಲಸ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಹೌದು, ಮಕ್ಕಳ ತಜ್ಞ ಅಶ್ವತ್ಥ್, ಸರ್ಪಂಟೈನ್ ರಸ್ತೆಯಲ್ಲಿ 3 ಅಂತಸ್ಥಿನ ಕಮರ್ಷಿಯಲ್ ಕಟ್ಟಡವನ್ನ ಹೊಂದಿದ್ದ. ಇದಕ್ಕೆ ಈ ಮರಗಳು ಅಡ್ಡಿಯಾಗುತ್ವೆ ಅನ್ನೋ ಒಂದೇ ಒಂದು ಕಾರಣಕ್ಕೆ ಮರಗಳ ಮಾರಣಹೋಮ ನಡೆಸಿದ್ದಾನೆ. ಕಾರ್ಮಿಕನನ್ನ ಕರೆಸಿ ಎರಡು ಮರದ ಬುಡದ ಸುತ್ತಲು ಡ್ರಿಲ್ ಹೊಡೆಸಿ, 4ರಿಂದ 5 ಹೋಲ್ ಮಾಡಿಸಿ, ಅದರೊಳಗೆ ಮರ ಒಣಗುವ ಕೆಮಿಕಲ್ಯುಕ್ತ ಔಷಧಿಯನ್ನ ಹಾಕಿ ಕಗ್ಗೊಲೆಗೈದು ಕಾಲ್ಕಿತ್ತಿದ್ದಾನೆ.
ಈಗಾಗಲೇ ವೈದ್ಯನ ಕೃತ್ಯಕ್ಕೆ ಮರಗಳು ಸಾವಿನಂಚಿನಲ್ಲಿವೆ. ಎರಡೇ ವಾರದಲ್ಲಿ ಆಕಾಶದೆತ್ತರಕ್ಕೆ ಹೆಮ್ಮಾರವಾಗಿ ಬೆಳೆದು ನಿಂತಿದ್ದ ವೃಕ್ಷಗಳು ಸಂಪೂರ್ಣ ಒಣಗಿ ಈಗ್ಲೋ? ಆಗ್ಲೋ ಅನ್ನೋ ಪರಿಸ್ಥಿತಿಯಲ್ಲಿದೆ. ಅಲ್ಲದೆ ವೈದ್ಯ ಅಶ್ಚತ್ಥ್ ರಾಮ್ ರಾಮ್ನ ಕೃತ್ಯಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಕೂಡಲೇ FIR ದಾಖಲಿಸಿ ವೈದ್ಯನ ವಿರುದ್ಧ ಕ್ರಮ ಕೈಗೊಳ್ಳುವಂತೆ ಜನ ಆಗ್ರಹಿಸ್ತಿದ್ದಾರೆ. ಒಟ್ಟಿನಲ್ಲಿ ಮರಗಳನ್ನ ಉಳಿಸಿ ಬೆಳಸಬೇಕು ಅಂತಿರೋ ಬಿಬಿಎಂಪಿ, ಅರಣ್ಯ ಇಲಾಖೆ ರೂಲ್ಸ್ಗೆ ಡೋಂಟ್ ಕೇರ್ ಎಂಬಂತೆ ವರ್ತಿಸಿರೋ ಈ ಪಾಪಿ ವೈದ್ಯ ಮನಸೋ ಇಚ್ಛೆ ಮರಗಳಿಗೆ ವಿಷವಿಟ್ಟು ಕಗ್ಗೊಲೆ ನಡೆಸಿದ್ದಾನೆ. ಪರಿಸರ ಉಳಿಸಿ ಅನ್ನೋರ ಮಧ್ಯೆ ಇಂತಹ ಒಂದು ಕೆಟ್ಟ ಹುಳಗಳಿದ್ರೂ ಭವಿಷ್ಯದ ಹಾದಿ ವಿನಾಶದತ್ತ ಸಾಗೋದ್ರಲ್ಲಿ ಎರಡು ಮಾತಿಲ್ಲ. ಹೀಗಾಗಿ ಆದಷ್ಟು ಬೇಗ ಈ ಪಾಪಿ ವೈದ್ಯನಿಗೆ ತಕ್ಕ ಶಾಸ್ತಿ ಆಗಲೇ ಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ