/newsfirstlive-kannada/media/post_attachments/wp-content/uploads/2025/04/RAJATH_CATCH_MISS.jpg)
ಆರ್ಸಿಬಿ ಸೋಲಿಗೆ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಈ ಮೂರರಲ್ಲಿ ಯಾವುದು ಕಾರಣ?. ಬಲಿಷ್ಠ ತಂಡ ಇದ್ದರೂ ಆರ್ಸಿಬಿ ಚಿನ್ನಸ್ವಾಮಿಯಲ್ಲಿ ಎಡವಿದ್ಯಾಕೆ?. ಎಲ್ಲಿ ಆರ್ಸಿಬಿ ಪ್ಲಾನ್ ಕೈಕೊಟ್ಟಿತ್ತು?. ಕ್ಯಾಪ್ಟನ್ ಪಾಟಿದಾರ್ ಪ್ಲಾನ್- ಬಿ ಮಾಡಿರಲಿಲ್ವಾ ಅಥವಾ ತವರಿನಲ್ಲಿ ಒತ್ತಡದಿಂದ ಆರ್ಸಿಬಿ ಸೋಲು ಅನುಭವಿಸಿತಾ?. ಹೀಗೆ ಸಾಕಷ್ಟು ಪ್ರಶ್ನೆಗಳು ಕಾಡ್ತಿವೆ. ಆದ್ರೆ ಬೆಂಗಳೂರೇ ಆರ್ಸಿಬಿಗೆ ಅನ್ಲಕ್ಕಿ ಆದಂತಿದೆ.
ತವರಿನಲ್ಲೇ ಆರ್ಸಿಬಿಗೆ ಅತಿ ಹೆಚ್ಚು ಸೋಲು..!
ನಿಜ ಹೇಳಬೇಕಂದ್ರೆ, ಆರ್ಸಿಬಿಗೆ ಚಿನ್ನಸ್ವಾಮಿಯೇ ಅನ್ಲಕ್ಕಿ ಪಿಚ್. ಎಲ್ಲಾ ತಂಡಗಳಿಗೆ ಹೋಂ ಪಿಚ್ ಅಡ್ವಾಂಟೇಜ್ ಆದ್ರೆ, ಪಾಟಿದಾರ್ ಪಡೆಗೆ ಇದೇ ಮುಳುವಾಗ್ತಿದೆ. ದಿನೇಶ್ ಕಾರ್ತಿಕ್ ಏನೇ ಆರೋಪ ಮಾಡಿರಲಿ, ಆದ್ರೆ ಆರ್ಸಿಬಿ ತವರಿನಲ್ಲಿ ಸೋಲ್ತಿರೋದು, ಇಂದು ನೆನ್ನೆಯ ಕಥೆಯಲ್ಲ. ಐಪಿಎಲ್ ಸೀಸನ್ ಒಂದರಿಂದಲೂ ಆರ್ಸಿಬಿಯದ್ದು ಇದೇ ಕಥೆ.
ಇದುವರೆಗೂ ಆರ್ಸಿಬಿ ತವರಿನಲ್ಲಿ ಗೆಲುವಿಗಿಂತ ಹೆಚ್ಚು ಸೋಲು ಅನ್ನೇ ಅನುಭವಿಸಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿದ 93 ಪಂದ್ಯಗಳಲ್ಲಿ 45 ಪಂದ್ಯ ಸೋತಿರುವ ಆರ್ಸಿಬಿ ಸೋಲಿನ ದಾಖಲೆ ಬರೆದಿದೆ.
ಇದನ್ನೂ ಓದಿ: ಗುಜರಾತ್ ಗೆಲುವಿಗೆ ಬಿಗ್ ಬ್ರೇಕ್.. ಮಾರ್ಕ್ರಾಮ್, ಪೂರನ್ ಬ್ಯಾಟಿಂಗ್ ಅಬ್ಬರಕ್ಕೆ ತಲೆ ಬಾಗಿದ ಗಿಲ್ ಸೇನೆ
ಆಗಿದ್ದು ಆಯಿತು, ತವರಿನಲ್ಲಿ 2 ಪಂದ್ಯಗಳನ್ನ ಸೋತಿರುವ ಆರ್ಸಿಬಿ, ಕಳೆದುಕೊಂಡಿದ್ದು ಏನೂ ಇಲ್ಲ. ಇನ್ನು 5 ಪಂದ್ಯಗಳನ್ನ, ಚಿನ್ನಸ್ವಾಮಿಯಲ್ಲಿ ಆಡಲಿದೆ. ಹಾಗಾಗಿ ಮುಂದಿನ ಪಂದ್ಯಗಳಲ್ಲಿ ಆರ್ಸಿಬಿ, ತಪ್ಪುಗಳನ್ನ ತಿದ್ದಿಕೊಂಡು ಗೆಲ್ಲೋದಕ್ಕೆ ನೋಡಬೇಕಷ್ಟೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ