Advertisment

ಡರ್ಟಿ ಪಾಲಿಟಿಕ್ಸ್​.. BJP, ಜೆಡಿಎಸ್​ ಯಾವತ್ತಿದ್ರೂ ಡೆಡ್​ ಬಾಡಿ ಮೇಲೆ ರಾಜಕೀಯ ಮಾಡ್ತಾರೆ; ಡಿಕೆ ಶಿವಕುಮಾರ್

author-image
Bheemappa
Updated On
ಡರ್ಟಿ ಪಾಲಿಟಿಕ್ಸ್​.. BJP, ಜೆಡಿಎಸ್​ ಯಾವತ್ತಿದ್ರೂ ಡೆಡ್​ ಬಾಡಿ ಮೇಲೆ ರಾಜಕೀಯ ಮಾಡ್ತಾರೆ; ಡಿಕೆ ಶಿವಕುಮಾರ್
Advertisment
  • ಮನೆ ಮುಂದೆ ರಾಜಕುಮಾರ್​​ದ್ದು ಆಗಿದ್ದಾಗ ಆವತ್ತು ಏನಾಯಿತು..?
  • R ಅಶೋಕ್, CT ರವಿ, ಕುಮಾರಸ್ವಾಮಿ ಬಗ್ಗೆ ಏಕವಚನದಲ್ಲಿ ಮಾತು
  • ಯಾವ ರಾಜಕೀಯದವನು ಏನೇ ಮಾತನಾಡಿದ್ರು ನನಗೆ ಲೆಕ್ಕನೇ ಇಲ್ಲ

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತದಿಂದ ಈಗಾಗಲೇ 11 ಜನರು ಪ್ರಾಣ ಬಿಟ್ಟಿದ್ದು ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಇದು ರಾಜುಕೀಯ ಸ್ವರೂಪ ಪಡೆಯುತ್ತಿದ್ದು, ಡರ್ಟಿ ಪಾಲಿಟಿಕ್ಸ್​. ಬಿಜೆಪಿ, ಜೆಡಿಎಸ್​ ಯಾವತ್ತಿದ್ರೂ ಡೆಡ್​ ಬಾಡಿ ಮೇಲೆ ರಾಜಕೀಯ ಮಾಡ್ತಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

Advertisment

ಮಾಧ್ಯಮಗಳ ಮುಂದೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ಕೆಎಸ್​ಸಿಎಗೆ ಹೋಗೋ ಪ್ಲಾನ್ ನನಗಿರಲಿಲ್ಲ. ಅವರು ಆಹ್ವಾನ ನೀಡಿದರೂ ಹೋಗೋಕೆ ಇಷ್ಟ ಇರಲಿಲ್ಲ. ಮ್ಯಾನೇಜ್​ಮೆಂಟ್​ ಅವರನ್ನು ನನ್ನ ಗಾಡಿಯಲ್ಲಿ ಕೂರಿಸಿಕೊಂಡು ಹೋಗಬೇಕಿತ್ತು. ತಕ್ಷಣ ಅವರ ಹತ್ತಿರ ಮಾತನಾಡಿ, ಅವರಿಗೆ ಹೇಳಿ ತಕ್ಷಣ 10 ನಿಮಿಷದಲ್ಲಿ ಕಾರ್ಯಕ್ರಮ ನಿಲ್ಲಿಸೋಕೆ ಹೇಳಿದೆ. ಇದಕ್ಕೆಲ್ಲಾ ಅವರು ಒಪ್ಪಿಕೊಂಡರು. ಸ್ಟೇಡಿಯಂ ಹೋಗೋವರೆಗೆ ಹಿಂಗಾಗಿರುವುದು ನನಗೆ ಗೊತ್ತೇ ಇಲ್ಲ. ಫೋನ್​ಗಳು ಜಾಮ್​ ಆಗಿದ್ದವು, ಮಾಧ್ಯಮದವರೇ ಘಟನೆ ಬಗ್ಗೆ ನನಗೆ ಮಾಹಿತಿ ನೀಡಿದರು ಎಂದು ಹೇಳಿದ್ದಾರೆ.

ಯಾವ ರಾಜಕೀಯದವರು ಏನು ಮಾತನಾಡುತ್ತಿದ್ದಾರೆ ಎನ್ನುವುದು ನನಗೆ ಲೆಕ್ಕನೇ ಇಲ್ಲ. ಎಲ್ಲರದ್ದೂ ಬರೀ ಚೇಷ್ಟೇನೇ. ಅವನು ಸಿಟಿ ರವಿ ಮಾತನಾಡಲಿ, ಕುಮಾರಸ್ವಾಮಿ ಮಾತನಾಡಲಿ. ಅಶೋಕ್ ಮಾತನಾಡಲಿ. ಇವರೆದ್ದೇಲ್ಲಾ ಬರೀ ರಾಜಕಾರಣ. ಅವರದ್ದೇಲ್ಲಾ ಬೇರೆ ಸಂದರ್ಭದಲ್ಲಿ ಮಾತನಾಡುತ್ತೇನೆ. ಕಲಾಪದಲ್ಲಿ ಅವರು ಅವರು ಏನೇನು ಮಾಡಿದ್ದರು ಎನ್ನುವುದು ಚರ್ಚೆ ಬರುತ್ತದೆ. ಅವಾಗ ನಾನು ಅಲ್ಲಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: RCB ಸಂಭ್ರಮದಲ್ಲಿ 11 ಜನ ಬಲಿ.. ಬಿಕ್ಕಿ ಬಿಕ್ಕಿ ಅತ್ತ ಡಿಸಿಎಂ ಡಿ.ಕೆ ಶಿವಕುಮಾರ್

Advertisment

publive-image

ಆಗಿರುವ ಘಟನೆ ಕುರಿತು ಈಗ ರಾಜಕಾರಣ ಮಾತನಾಡುವುದು ಬೇಡ. ಕುಮಾರಸ್ವಾಮಿ ಹೇಳಿದಂಗೆ ಅದಕ್ಕೆ ಉತ್ತರ ಆಮೇಲೆ ಕೊಡ್ತಿನಿ. ನನ್ನ ಮನೆ ಮುಂದೆ ರಾಜಕುಮಾರ್​​ದ್ದು ಆಗಿದ್ದಾಗ ಆವತ್ತು ಏನಾಯಿತು?. ಡೆಲ್ಲಿ ಏನಾಗಿತ್ತು?. ಇದರ ಬಗ್ಗೆ ರಾಜಕೀಯ ಮಾತನಾಡೋಕೆ ನಾನು ಹೋಗಲ್ಲ. ಕೆಟ್ಟ ರಾಜಕೀಯ. ಬಿಜೆಪಿ, ಜೆಡಿಎಸ್​ ಯಾವಾಗಲೂ ಡೆಡ್​ ಬಾಡಿ ಮೇಲೆ ರಾಜಕೀಯ ಮಾಡ್ತಾರೆ. ಇದು ಅವರ ರಾಜಕೀಯ ಅಜೆಂಡಾ ಆಗಿದೆ.

ಕರ್ನಾಟಕ, ಬೆಂಗಳೂರಿನ ಇಮೇಜ್ ನಾವು ಉಳಿಸುತ್ತೇವೆ. ನಾವು ಯಾರನ್ನೂ ದೂರುತ್ತಿಲ್ಲ. ಆಕಸ್ಮಿಕವಾಗಿ ಈ ಘಟನೆ ನಡೆದು ಹೋಗಿದೆ. ಯಾರೂ ಇದನ್ನೂ ಊಹೆ ಮಾಡಿರಲಿಲ್ಲ. ನಡೆದು ಹೋಗಿದೆ. 18 ವರ್ಷಗಳ ನಂತರ ಟ್ರೋಫಿ ಗೆದ್ದಾಗ ಈ ರೀತಿ ಆಗುತ್ತೆ ಅಂತ ಯಾರು ಅಂದುಕೊಂಡಿರಲಿಲ್ಲ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment