newsfirstkannada.com

ಪತ್ನಿಯ ಶೀಲ ಶಂಕಿಸಿ ಕೊಲೆ.. ಚಾಕು ಸಮೇತ ಗಂಡ ಪರಾರಿ

Share :

Published January 13, 2024 at 7:41am

Update January 13, 2024 at 8:10am

    ಹೆಂಡತಿಯನ್ನೇ ಕೊಂದ ಪಾಪಿ ಗಂಡ

    ಶೀಲ ಶಂಕಿಸಿ ಪತ್ನಿಯನ್ನು ಕೊಂದ ಪತಿ

    ಚಾಕುವಿನಿಂದ ಕತ್ತು ಸೀಳಿ ಕೊಂದೇ ಬಿಟ್ಟ

ಪತ್ನಿಯ ಶೀಲವನ್ನು ಶಂಕಿಸಿ ಪತಿಯೇ ಪತ್ನಿಯ ಕತ್ತು ಸೀಳಿ ಕೊಲೆಗೈದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ನೆಹರು ನಗರದ ನಿವಾಸಿ 40 ವರ್ಷದ ರೇಣುಕಮ್ಮ ಕೊಲೆಯಾದ ಮಹಿಳೆ.

ಆಕೆಯ ಪತಿ ಮಂಜುನಾಥ ಪತ್ನಿಯ ಕತ್ತನ್ನು ಚಾಕುವಿನಿಂದ ಸೀಳಿ ಕೊಲೆ ಮಾಡಿದ್ದಾನೆ‌ ಅಂತಾ ಆರೋಪಿಸಲಾಗಿದೆ. ರಾತ್ರಿ ವೇಳೆ ಅಕ್ಕಪಕ್ಕದವರೊಂದಿಗೆ ಮಾತನಾಡಿ ಮಲಗಿದ್ದ ರೇಣುಕಮ್ಮ ಬೆಳಗಾಗುವಷ್ಟರಲ್ಲಿ ರಕ್ತಸಿಕ್ತ ಶವವಾಗಿ ಮನೆಯಲ್ಲೇ ಪತ್ತೆಯಾಗಿದ್ದಾ‌ಳೆ.

ಕೊಲೆ‌ ಮಾಡಿ ಚಾಕು ಸಮೇತ ಆರೋಪಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪತ್ನಿಯ ಶೀಲ ಶಂಕಿಸಿ ಕೊಲೆ.. ಚಾಕು ಸಮೇತ ಗಂಡ ಪರಾರಿ

https://newsfirstlive.com/wp-content/uploads/2024/01/Chitradurga-9.jpg

    ಹೆಂಡತಿಯನ್ನೇ ಕೊಂದ ಪಾಪಿ ಗಂಡ

    ಶೀಲ ಶಂಕಿಸಿ ಪತ್ನಿಯನ್ನು ಕೊಂದ ಪತಿ

    ಚಾಕುವಿನಿಂದ ಕತ್ತು ಸೀಳಿ ಕೊಂದೇ ಬಿಟ್ಟ

ಪತ್ನಿಯ ಶೀಲವನ್ನು ಶಂಕಿಸಿ ಪತಿಯೇ ಪತ್ನಿಯ ಕತ್ತು ಸೀಳಿ ಕೊಲೆಗೈದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ನೆಹರು ನಗರದ ನಿವಾಸಿ 40 ವರ್ಷದ ರೇಣುಕಮ್ಮ ಕೊಲೆಯಾದ ಮಹಿಳೆ.

ಆಕೆಯ ಪತಿ ಮಂಜುನಾಥ ಪತ್ನಿಯ ಕತ್ತನ್ನು ಚಾಕುವಿನಿಂದ ಸೀಳಿ ಕೊಲೆ ಮಾಡಿದ್ದಾನೆ‌ ಅಂತಾ ಆರೋಪಿಸಲಾಗಿದೆ. ರಾತ್ರಿ ವೇಳೆ ಅಕ್ಕಪಕ್ಕದವರೊಂದಿಗೆ ಮಾತನಾಡಿ ಮಲಗಿದ್ದ ರೇಣುಕಮ್ಮ ಬೆಳಗಾಗುವಷ್ಟರಲ್ಲಿ ರಕ್ತಸಿಕ್ತ ಶವವಾಗಿ ಮನೆಯಲ್ಲೇ ಪತ್ತೆಯಾಗಿದ್ದಾ‌ಳೆ.

ಕೊಲೆ‌ ಮಾಡಿ ಚಾಕು ಸಮೇತ ಆರೋಪಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More