/newsfirstlive-kannada/media/media_files/2026/02/16/rashmika-and-vijay-devarkonda-marriage-invitation-2026-02-16-15-51-28.jpg)
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ವಿವಾಹವಾಗಲಿದ್ದಾರೆ ಎಂಬುದು ರಹಸ್ಯವಾಗಿ ಉಳಿದಿಲ್ಲ. ಇಬ್ಬರು ತಾವು ದಾಂಪತ್ಯ ಜೀವನಕ್ಕೆ ಕಾಲಿಡುವುದಾಗಿ ಹೇಳಿದ್ದಾರೆ. ಈಗಾಗಲೇ ಈ ಜೋಡಿ ರಾಜಸ್ಥಾನದ ಉದಯಪುರಕ್ಕೆ ಆಗಮಿಸಿದ್ದಾರೆ. ಫೆಬ್ರವರಿ 26 ರಂದು ವಿವಾಹವಾಗಲಿದ್ದಾರೆ. ಈ ಎಲ್ಲದರ ನಡುವೆ, ಇಬ್ಬರು ತಾರೆಯರು ತಮ್ಮ ವಿಶೇಷ ದಿನವನ್ನು ಪ್ರಾದೇಶಿಕ ಸಂಪ್ರದಾಯಗಳಲ್ಲಿ ಬೇರೂರಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಬಾಲಿವುಡ್ ಹಂಗಾಮಾ ವರದಿಯನ್ನು ನಂಬುವುದಾದರೆ, ವಿಜಯ್-ರಶ್ಮಿಕಾ ಅವರ ವಿವಾಹಕ್ಕೆ ಬರುವ ಅತಿಥಿಗಳಿಗೆ ಏಳ ನೀರಿನ ಜೊತೆಗೆ ಬಾಳೆ ಎಲೆಗಳಲ್ಲಿ ಆಹಾರವನ್ನು ಬಡಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
"ರಶ್ಮಿಕಾ-ವಿಜಯ್ ಅವರ ವಿವಾಹಕ್ಕೆ ಬರುವ ಅತಿಥಿಗಳಿಗೆ ದಕ್ಷಿಣ ಭಾರತೀಯ ಸಂಪ್ರದಾಯದ ಸ್ಪರ್ಶವನ್ನು ಅನುಭವಿಸುವ ಸಾಧ್ಯತೆಯಿದೆ, ಆತಿಥ್ಯದ ಭಾಗವಾಗಿ ಬಾಳೆ ಎಲೆಗಳಲ್ಲಿ ಮತ್ತು ಏಳನೀರಿನ ಊಟ ಬಡಿಸಲಾಗುತ್ತದೆ" ಎಂದು ಸುದ್ದಿ ಪೋರ್ಟಲ್ ಉಲ್ಲೇಖಿಸಿದ ಮೂಲವೊಂದು ಹೇಳಿಕೊಂಡಿದೆ.
ಬಾಳೆ ಎಲೆಗಳಲ್ಲಿ ಆಹಾರವನ್ನು ಬಡಿಸುವುದು ಅನೇಕ ದಕ್ಷಿಣ ಭಾರತೀಯ ವಿವಾಹಗಳಲ್ಲಿ ಸಾಂಪ್ರದಾಯಿಕ ಪದ್ಧತಿಯಾಗಿದ್ದು, ಇದು ಸಮೃದ್ಧಿ ಮತ್ತು ಶುಭ ಆರಂಭಗಳನ್ನು ಸಂಕೇತಿಸುತ್ತದೆ. ಅದೇ ರೀತಿ, ಏಳನೀರು ಹೆಚ್ಚಾಗಿ ಶುದ್ಧತೆ ಮತ್ತು ಸ್ವಾಗತದೊಂದಿಗೆ ಸಂಬಂಧಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us