/newsfirstlive-kannada/media/media_files/2025/12/22/sudeep-versus-darshan-wife-vijaylaxmi-2025-12-22-12-41-58.jpg)
ಕನ್ನಡ ಸಿನಿ ಇಂಡಸ್ಟ್ರೀಯಲ್ಲಿ ಈಗ ಸ್ಟಾರ್ ವಾರ್ ಮತ್ತೆ ಶುರು
ಸುದೀಪ್​ ಸಿನಿಮಾನ ತುಂಬಾನೇ ಪ್ರೀತಿ ಮಾಡೋ ವ್ಯಕ್ತಿತ್ವ....ಸರಿಯಾಗಿ ನಿದ್ದೆ ಕೂಡ ಮಾಡಲ್ಲ, ಒಂದು ಸಿನಿಮಾ ಮಾಡೋದಕ್ಕೆ ಸಿಕ್ಕಾಪಟ್ಟೆ ರಿಸ್ಕ್​ ತಗೊಳ್ಳೋ ನಟ..ಅಂತಹ ನಟನ ಸಿನಿಮಾ ಬರ್ತಿದೆ ಅಂದ್ರೆ ಮತ್ತೊಂದು ಗುಂಪು ಸಿನಿಮಾ ವಿರುದ್ಧವೇ ಕೆಲಸ ಮಾಡೋದಕ್ಕೆ ರೆಡಿಯಾಗಿರುತ್ತೆ ಅನ್ನೋದು ಅವರ ಮಾತುಗಳಿಂದಾನೇ ಗೊತ್ತಾಗ್ತಿದೆ..ಅಷ್ಟಕ್ಕೂ ಸುದೀಪ್ ಯುದ್ಧದ ಘೋಷಣೆ ಹಾಕೋದಕ್ಕೆ ಕಾರಣಗಳೇನು? ದರ್ಶನ್​ ಪತ್ನಿ ಫ್ಯಾನ್​ವಾರ್​​ಗೆ ಎಂಟ್ರಿಯಾಗಿದ್ದಾದ್ರೂ ಯಾಕೆ? ಹೇಳ್ತೀವಿ ಕೇಳಿ
ಆಕ್ರೋಶ..ಬಹಿರಂಗ ಆಕ್ರೋಶ...ಕನ್ನಡದ ಸ್ಟಾರ್​ ಌಕ್ಟರ್​ ಕಿಚ್ಚ ಸುದೀಪ್​ ಆಕ್ರೋಶಗೊಳ್ಳೋದೇ ತುಂಬಾ ಕಡಿಮೆ..ಸಿನಿಮಾದಲ್ಲಿ ಆ ಕಥೆಗೋಸ್ಕರ ಆಕ್ರೋಶಪಟ್ಕೊಳ್ಳೋ ಸಾಕಷ್ಟು ದೃಶ್ಯಗಳಿದ್ರೂ ನಿಜ ಜೀವನದಲ್ಲಿ ಸುದೀಪ್​ ಸೂಪರ್ ಕಾಮ್​ ಪರ್ಸನ್​...ಇಂತಹ ಸುದೀಪ್​ ಬಹಿರಂಗ ವೇದಿಕೆಯಲ್ಲಿ ತಮ್ಮ ವಿರೋಧಿಗಳ ವಿರುದ್ಧ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತಪಡಿಸಿರೋದು ಸೋಷಿಯಲ್​ ಮೀಡಿಯಾದಲ್ಲಿ ಕಿಚ್ಚು ಹೊತ್ತಿಸಿದೆ..ಅದ್ರಲ್ಲೂ, ತಾಳ್ಮೆಯಿಂದ ಇದ್ದಿದ್ದು ಸಾಕು..ಇನ್ಮುಂದೆ ಸಹಿಸಿಕೊಳ್ಳೋ ಮಾತೇ ಇಲ್ಲ. ನಾವೂ ಯುದ್ಧಕ್ಕೆ ಸಿದ್ಧ..ಇನ್ಮೇಲೆ ಎಲ್ಲಿ​ ಮಾತಾಡ್ಬೇಕೋ ಅಲ್ಲಿ ಮಾತಾಡಿ ಎನ್ನುವಂತಹ ಮಾತುಗಳು ಸುದೀಪ್​ ಬಾಯಿಂದ ಬಂದಿರೋದಕ್ಕೆ ಸಾಕಷ್ಟು ಮಂದಿ ಅಚ್ಚರಿ ವ್ಯಕ್ತಪಡಿಸಿದ್ದಾರೆ..ಅಷ್ಟಕ್ಕೂ, ಸುದೀಪ್​ ಈ ರೀತಿ ತಮ್ಮ ವಿರೋಧಿಗಳಿಗೆ ವಾರ್ನ್​ ಮಾಡೋದಕ್ಕೆ ಬಹುದೊಡ್ಡ ಕಾರಣಗಳೇ ಇವೆ..ಆ ಕಾರಣ ಏನು ಅಂತಾ ಒಂದೊಂದಾಗಿ ಹೇಳ್ತಾ ಹೋಗ್ತೀವಿ ಕೇಳಿ..
ಕಿಚ್ಚನ ಕಿಚ್ಚು!
ಕಾರಣ - 01
ಪೈರಸಿ ಭೂತಗಳಿಗೆ ವಾರ್ನ್​!
ಅದು 2019 ನೇ ಇಸವಿಯ ಸೆಪ್ಟೆಂಬರ್ ತಿಂಗಳು..ಬಹುಕೋಟಿ ವೆಚ್ಚದಲ್ಲಿ ಸುದೀಪ್​ ಅಭಿನಯದ ಪೈಲ್ವಾನ್​ ಸಿನಿಮಾ ರಿಲೀಸ್ ಆಗಿತ್ತು. ಚಿತ್ರದ ಮೇಲೆ ಸುದೀಪ್​ ಸೇರಿದಂತೆ ಪೈಲ್ವಾನ್​ ಸಿನಿಮಾ ಇಡೀ ತಂಡ ಸಾಕಷ್ಟು ನಿರೀಕ್ಷೆ ಇಟ್ಕೊಂಡಿತ್ತು...ಆದ್ರೆ, ಚಿತ್ರ ರಿಲೀಸ್ ಆದ ದಿನವೇ ಸಿನಿಮಾಗೆ ಪೈರಸಿ ಭೂತ ಕಾಡಿತ್ತು..ಕಿಡಿಗೇಡಿಗಳು ಫಿಲ್ಮ್​ ರಿಲೀಸ್​ ಆದ ದಿನ ಚಿತ್ರದ ಸಂಪೂರ್ಣ ಲಿಂಕ್​ನ ತಮ್ಮ ಫೇಸ್​ಬುಕ್ ಖಾತೆಯಲ್ಲಿ ಶೇರ್​ ಮಾಡಿ ವೈರಲ್​ ಮಾಡಿದ್ದಾರೆ ..ಪೈಲ್ವಾನ್' ಚಿತ್ರದ ಲಿಂಕ್​ ಶೇರ್​ ಮಾಡಿದ್ದಲ್ಲದೇ, ತಮ್ಮ ಫೇಸ್​ಬುಕ್ ಸ್ಟೋರಿಯಲ್ಲಿ ಸಿನಿಮಾದ ಲಿಂಕ್ ಬೇಕಾದವರು ಇನ್​ಬಾಕ್ಸ್ ಮಾಡುವಂತೆ ಪೋಸ್ಟ್ ಬೇರೆ ಮಾಡಿದ್ರು...ಇನ್ನು, ಈ ಪೈರಸಿ ಕಿಚ್ಚು ಅದೆಷ್ಟರ ಮಟ್ಟಿಗೆ ಧಗಧಗಿಸಿತ್ತೆಂದರೆ ದರ್ಶನ್​ ಹಾಗೂ ಸುದೀಪ್ ಫ್ಯಾನ್ಸ್​ ಮಧ್ಯೆ ದೊಡ್ಡ ಕಾಳಗವೇ ನಡೆದು ಹೋಗಿತ್ತು...ಅಷ್ಟೇ ಅಲ್ಲ, ಸಿನಿಮಾವನ್ನ ಪೈರೇಟ್​ ಮಾಡಿದ ಇಬ್ಬರು ದುಷ್ಕರ್ಮಿಗಳನ್ನ ಪೊಲೀಸರು ಬಂಧನ ಕೂಡ ಮಾಡಿದ್ದರು...ಏನೇ ಅರೆಸ್ಟ್​ ಮಾಡಿದ್ರೂ, ಕಿಡಿಗೇಡಿಗಳ ಈ ಕೃತ್ಯದಿಂದ ನಿರ್ಮಾಪಕರಿಗೆ ಒಂದು ಮಟ್ಟಿಗೆ ನಷ್ಟವಾಗಿದ್ದಂತೂ ಸುಳ್ಳಲ್ಲ..ಆ ಘಟನೆ ನಡೆದು ಬರೋಬ್ಬರಿ 6 ವರ್ಷಗಳಾಗಿದೆ..ಅಲ್ಲಿಂದ ಇಲ್ಲಿವರೆಗೂ ಸುದೀಪ್​ ಸಿನಿಮಾಗಳ ವಿರುದ್ಧ ಒಂದು ತಂಡ ಕೆಲಸ ಮಾಡುತ್ತೆ ಅನ್ನೋ ಬಲವಾದ ನಂಬಿಕೆ ಸ್ಯಾಂಡಲ್​ವುಡ್​​ನಲ್ಲಿದೆ..ಈಗ ಸುದೀಪ್​ರ ಬಹುನಿರೀಕ್ಷಿತ ಮಾರ್ಕ್ ಸಿನಿಮಾ ಮೇಲೆ ಸಿಕ್ಕಾಪಟ್ಟೆ ಹೋಪ್ಸ್​ ಇದ್ದು, ಸಿನಿಮಾಗೆ ಪೈಲ್ವಾನ್ ರೀತಿಯೇ ಡ್ಯಾಮೇಜ್ ಮಾಡೋದಕ್ಕೆ ನಡೀತಿರೋ ಪ್ಲಾನ್​ ಬಗ್ಗೆ ಸುದೀಪ್​ಗೆ ಗೊತ್ತಾಗಿರಬೇಕು, ಆ ಕಾರಣಕ್ಕೇಣೇ ಆ ಒಂದು ಕಾಣದ ಪಡೆ ವಿರುದ್ಧ, ಅಂದ್ರೆ ಪೈರಸಿ ಭೂತಗಳಿಗೆ ಬಿಸಿ ಮುಟ್ಟಿಸಲು ಸುದೀಪ್ ಯುದ್ಧದ ರಣಕಹಳೆ ಮೊಳಗಿಸಿದ್ದಾರೆ...
ಕಿಚ್ಚನ ಕಿಚ್ಚು!
ಕಾರಣ - 02
"ಪೋಸ್ಟ್​" ದುರುಳರಿಗೂ ಎಚ್ಚರಿಕೆ!
ಇನ್ನು ಸುದೀಪ್ ಸಿನಿಮಾಗಳು ಬಂದಾಗ ಮತ್ತೊಬ್ಬ ನಟನ ಫ್ಯಾನ್ಸ್ ಕಿಚ್ಚನ ಪಿಕ್ಚರ್​​ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ತಾರೆ ಅಂತಲೂ ಹೇಳಲಾಗುತ್ತೆ..ಉದಾಹರಣೆಗೆ ಈ ಹಿಂದೆ ಮಾರ್ಕ್​ಗೂ ಮುಂಚೆ ಬಂದ ಮ್ಯಾಕ್ಸ್​ ಸಿನಿಮಾನೇ ತಗೊಳ್ಳಿ ಮ್ಯಾಕ್ಸ್​ ಸಿನಿಮಾ ಪ್ರಚಾರ ಆರಂಭವಾದಾಗಿನಿಂದಲೂ ಸುದೀಪ್​ ವಿರೋಧಿ ಬಣದ ಸದಸ್ಯರು ಸಿನಿಮಾದ ವಿರುದ್ಧ ಸಾಕಷ್ಟು ಪೋಸ್ಟ್​ಗಳನ್ನ ಹಾಕ್ತಾನೇ ಬಂದಿದ್ದರು . ಅಷ್ಟೇ ಅಲ್ಲ..ಈ ಮಾರ್ಕ್​ ಸಿನಿಮಾ ಟೈಮಲ್ಲೂ ಅದರ ನಿರ್ದೇಶಕ ವಿಜಯ್​ ಕಾರ್ತಿಕೇಯ ತಮಿಳುನಾಡಿನ ಮೂಲದವರು..ಕಾವೇರಿಯ ಬಗ್ಗೆ ಅವ್ರು ಹಿಂದೊಮ್ಮೆ ಕರ್ನಾಟಕ ವಿರೋಧಿ ಹೇಳಿಕೆ ಕೊಟ್ಟಿದ್ರು, ಕಾವೇರಿ ತಮಿಳಿಗೆ ಸೇರ್ಬೇಕು ಅಂತಾ ಅವರು ಹೇಳಿದ್ದ ಹಾಗೇ ನಕಲಿ ಪೋಸ್ಟ್​ ತಯಾರಿಸಿ ಹಂಚಿಕೊಂಡಿದ್ದರು..ಮತ್ತೆ ನಿರ್ದೇಶಕನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಯತ್ನ ಕೂಡ ಮಾಡಿದ್ದರು..ಇನ್ನು, ಮತ್ತೊಬ್ಬ ನಟನ ಸಿನಿಮಾವೊಂದರ ಒಂಭತ್ತು ಸಾವಿರ ಪೈರಸಿ ಲಿಂಕ್​ಗಳನ್ನ ತೆಗೆದು ಹಾಕಿದ್ದೇವೆ, ನಿಮಗೂ ಇದೇ ರೀತಿ ಮಾಡ್ತೀವಿ ಅನ್ನೋ ಮೂಲಕ ಮಾರ್ಕ್ ಸಿನಿಮಾದ ಪೈರಸಿ ಮಾಡುವ ಬೆದರಿಕೆ ಹಾಕಿದ್ದರು..ಅಷ್ಟೇ ಅಲ್ಲ, ಮಾರ್ಕ್ ಸಿನಿಮಾ ಟಿಕೆಟ್ಸ್​ ಮಾರಾಟ ಮಾಡುವ ಬುಕ್​​ಮೈ ಶೋನಲ್ಲಿ ರೇಟಿಂಗ್​ ಕಡಿಮೆ ಮಾಡುವ ಪ್ರಯತ್ನವೂ ನಡೆದಿತ್ತು ಅಂತಾ ಹೇಳಲಾಗುತ್ತಾದ್ರೂ ಅದಕ್ಕೆ ಪ್ರೂಫ್​ ಇಲ್ಲ..ಬಟ್, ಸುದೀಪ್​ ಹೇಳಿಕೆಯಿಂದ ಸೋಷಿಯಲ್​ ಮೀಡಿಯಾದಲ್ಲೂ ಮಾರ್ಕ್ ಬಗ್ಗೆ ಅಪಪ್ರಚಾರ ಮಾಡುವ ಪ್ಲಾನ್ ನಡೀತಿದೆ ಅನ್ನೋದು ಗೊತ್ತಾಗಿರೋದು ಸುಳ್ಳಲ್ಲ..
ಕಿಚ್ಚನ ಕಿಚ್ಚು!
ಕಾರಣ - 03
ನೆಗೆಟಿವ್​ ಕಾಮೆಂಟ್ಸ್​ಕಾರರಿಗೆ ವಾರ್ನ್​
ಒಂದು ಪೈರೆಸಿ..ಇನ್ನೊಂದು ಸುಳ್ಳು ಸುಳ್ಳು ಪೋಸ್ಟರ್​ ಹಾಕೋದು.. ಇವರಿಬ್ಬರ ಜೊತೆಗೆ ಮತ್ತೂ ಒಂದು ತಂಡ ಇದೆ . ಅದೇನಪ್ಪ ಅಂದ್ರೆ ಅವರೇ ಕಾಮೆಂಟ್ ಕಿಡಿಗೇಡಿಗಳು..ಹೌದು, ಕಿಚ್ಚನ ಕಿಚ್ಚಿಗೆ ಕಾಮೆಂಟ್​ ಕಿಡಿಗೇಡಿಗಳೂ ಕಾರಣ ಇರಬಹುದು...ಯಾವುದೇ ಸಿನಿಮಾ ತಗೊಳ್ಳಿ..ಅದು ರಿಲೀಸ್ ಆದ್ಮೇಲೆ ನೋಡ್ಕೊಂಡು ಬಂದ ಪಕ್ಕಾ ವಿಮರ್ಶೆ ಬರೆಯುವವರ ವರ್ಗ ನಮ್ಮ ಮಧ್ಯೆ ಇದೆ...ಬಟ್, ಕೆಲವರು ಸಿನಿಮಾನೇ ನೋಡಿರಲ್ಲ, ಅಷ್ಟರಲ್ಲಾಗಲೇ ಹೀರೋ ತಮಗೆ ಆಗೋದಿಲ್ಲ ಅನ್ನೋ ಒಂದೇ ಒಂದು ಕಾರಣಕ್ಕೆ ಸಿನಿಮಾಗೆ ಸಂಬಂಧಿಸಿದ ಪೋಸ್ಟರ್​ಗಳ ಮೇಲೆ ಮನಬಂದಂತೆ ಕಾಮೆಂಟ್​ ಮಾಡ್ತಾರೆ...ಅಷ್ಟೇ ಅಲ್ಲ, ಆ ಕಾಮೆಂಟ್​ ಮೂಲಕವೇ ಸಿನಿಮಾಗೆ ನೆಗೆಟಿವ್​ ಪ್ರಚಾರ ಮಾಡೋದಕ್ಕೂ ಪ್ರಯತ್ನ ಮಾಡ್ತಾರೆ...ಅಂತಹ ಒಂದು ಕಾಮೆಂಟ್​ ಕಿಡಿಗೇಡಿಗಳ ತಂಡ ಮಾರ್ಕ್ ಸಿನಿಮಾ ಬಗ್ಗೆಯೂ ನೆಗೆಟಿವ್ ಕಾಮೆಂಟ್ ಹೊಡೆಯೋದಕ್ಕೆ ಸಿನಿಮಾ ಬರೋ ಮುಂಚೆಯೇ ರೆಡಿಯಾಗಿ ಕೂತಿದೆ ಅನ್ನೋ ಮಾಹಿತಿ ಕೂಡ ಸುದೀಪ್​ಗೆ ಸಿಕ್ಕಿದ್ರೂ ಸಿಕ್ಕಿರಬಹುದು..ಆ ಕಾರಣದಿಂದ ಈ ರೀತಿ ಯುದ್ಧದ ವಾರ್ನ್​ ಸೈರನ್ ಮೊಳಗಿಸಿರಬಹುದು ಅಂತಾ ಹೇಳಲಾಗುತ್ತೆ.
/filters:format(webp)/newsfirstlive-kannada/media/media_files/2025/09/01/kiccha-sudeep-2-2025-09-01-17-26-12.jpg)
ಸುದೀಪ್​ ಆಕ್ರೋಶಕ್ಕೆ ದರ್ಶನ್​ ಫ್ಯಾನ್ಸ್​ ಗರಂ..!
ಹುಬ್ಬಳ್ಳಿಯಲ್ಲಿ ಓಪನ್ ಸ್ಟೇಜ್​ ಮೇಲೆ ನಿಂತು ಸುದೀಪ್ ಮೊಳಗಿಸಿದ ಯುದ್ಧದ ರಣಕಹಳೆ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗ್ತಿದೆ..ಸುದೀಪ್​ ಆಡಿದ ಪ್ರತಿಯೊಂದು ಮಾತನ್ನೂ ಡೀಕೋಡ್​ ಮಾಡಲಾಗ್ತಿದೆ..ಸುದೀಪ್ ಹೇಳಿದ್ದು ಯಾರಿಗೆ? ಯಾಕಾಗಿ ಆ ಥರ ಹೇಳಿದ್ರು ಅನ್ನೋ ಬಿಸಿ ಡಿಸ್ಕಷನ್​ ನಡೀತಿರೋ ಮಧ್ಯೆ, ಮತ್ತೊಂದು ಪಡೆ ಸುದೀಪ್ ಹೇಳಿಕೆ ವಿರುದ್ಧ ದಾಳಿಗಿಳಿದಿದೆ..ಆ ಪಡೆ ಬೇರಾವುದೂ ಅಲ್ಲ, ಜೈಲಲ್ಲಿರೋ ಕೊಲೆ ಆರೋಪಿ, ಮತ್ತು ನಟ ದರ್ಶನ್ ಫ್ಯಾನ್ಸ್​..
ಹೌದು ಸುದೀಪ್​ ಯಾರನ್ನೂ ಬೊಟ್ಟು ಮಾಡಿ ಯುದ್ಧಕ್ಕೆ ಸಿದ್ಧ ಅನ್ನೋ ಮಾತುಗಳನ್ನ ಆಡಿಲ್ಲ, ಆದ್ರೆ, ಸುದೀಪ್​ ಹೇಳಿಕೆ ಯಥಾಪ್ರಕಾರ ದರ್ಶನ್​ ಫ್ಯಾನ್ಸ್​ ಟಾಂಗ್​ ಕೊಡೋದಕ್ಕೆ ಶುರುಮಾಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ, ಸುದೀಪ್ ಮಾತನಾಡಿರೋ ವಿಡಿಯೋಗಳನ್ನ ಶೇರ್​ಮಾಡೋದಲ್ಲದೇ ಮನಬಂದಂತೆ ಕಾಮೆಂಟ್​ ಮಾಡ್ತಿದ್ದಾರೆ..ಈ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಮತ್ತೆ ಫ್ಯಾನ್​​ವಾರ್ ಬೆಂಕಿ ಹೊತ್ಕೊಂಡಿದೆ..ಆದ್ರೆ, ಎಲ್ಲಕ್ಕಿಂತ ಇಂಟರೆಸ್ಟಿಂಗ್​ ಅಂದ್ರೆ, ಈ ವಾರ್​​ಗೆ ಅಧಿಕೃತವಾಗಿ ದರ್ಶನ್​ ಪತ್ನಿ ವಿಜಯಲಕ್ಷ್ಮಿ ಎಂಟ್ರಿಕೊಟ್ಟಿರೋದು..
"ದರ್ಶನ್​ ಇರುವಾಗ ಹೇಳಿಕೆ ಕೊಡೋರು ಮಾಯವಾಗಿರ್ತಾರೆ"
ಕಿಚ್ಚನ ಯುದ್ಧದ ಕಹಳೆಗೆ ದರ್ಶನ್​ ಪತ್ನಿ ಕೌಂಟರ್​ ಕೊಟ್ರಾ?
ಲಕ್ಷ್ಮಿ..ವಿಜಯಲಕ್ಷ್ಮಿ...ನಟ ದರ್ಶನ್​ ಪಾಲಿನ ಅದೃಷ್ಟ ಲಕ್ಷ್ಮಿ ಫ್ಯಾನ್​​ವಾರ್​​ಗೆ ಎಂಟ್ರಿಕೊಟ್ಟಿದ್ದಾರೆ..ಇತ್ತ ಸುದೀಪ್ ಹುಬ್ಬಳ್ಳಿಯಲ್ಲಿ ಯುದ್ಧಕ್ಕೆ ಕಹಳೆ ಮೊಳಗಿಸುತ್ತಿದ್ದಂತೆ, ಅತ್ತ ದಾವಣಗೆರೆಯಲ್ಲಿ ಸುದೀಪ್​ ಮಾತಿಗೆ ಕೌಂಟರ್​ ಕೊಡುವಂತೆ ಮಾತಾನಾಡಿದ್ದಾರೆ..ದರ್ಶನ್​ ಫ್ಯಾನ್ಸ್​ ವಿರುದ್ಧ ಸಂದರ್ಶನಗಳಲ್ಲಿ, ವೇದಿಕೆಗಳ ಮೇಲೆ ಹೇಳಿಕೆಗಳನ್ನ ಕೊಡೋ ಕೆಲಸ ನಡೀತಿದೆ...ಆದ್ರೆ, ದರ್ಶನ್​ ಇರುವಾಗ ಹೇಳಿಕೆ ಕೊಡೋರು ಮಾಯವಾಗಿರ್ತಾರೆ ಅಂತಾ ವಿಜಯಲಕ್ಷ್ಮಿ ಹೇಳಿರೋದು ಈಗ ಮತ್ತೆ ಸುದೀಪ್​ ಫ್ಯಾನ್ಸ್​ ಕೆಂಡವಾಗುವಂತೆ ಮಾಡಿದೆ
ಕೆಲವು ವ್ಯಕ್ತಿಗಳು ದರ್ಶನ್​ ಅವರು ಇಲ್ಲದೇ ಇರುವಾಗ ಅವರ ಬಗ್ಗೆ ಅವರ ಫ್ಯಾನ್ಸ್​ ಬಗ್ಗೆ ವೇದಿಕೆ ಮೇಲೆ ನಿಂತು ಮಾತನಾಡುವುದು.ಮೀಡಿಯಾದಲ್ಲಿ ಕೂತ್ಕೊಂಡು ಮಾತನಾಡುವುದು..ಹೊರಗಡೆ ಮಾತನಾಡುವುದು ಎಲ್ಲಾ ಮಾಡ್ತಿದ್ದಾರೆ..ಅದೇ ಜನಗಳು ದರ್ಶನ್​ ಇದ್ದಾಗ ಅವರು ಬೆಂಗಳೂರಲ್ಲಿ ಇರ್ತಾರಾ ಇಲ್ವಾ ಅಂತಾನೇ ಗೊತ್ತಾಗಲ್ಲ..ಎಲ್ಲಿ ಮಾಯ ಆಗಿರ್ತಾರೆ ಅಂತಾನೂ ಗೊತ್ತಾಗಲ್ಲ.ದರ್ಶನ್​ ಅವರು ಹೇಳಿರೋ ಹಾಗೇ ತಲೆ ಕೆಡಿಸಿಕೊಳ್ಳಬಾರದು..ದರ್ಶನ್​ ಹೇಳಿರೋ ಹಾಗೇ ನಾವು ನೊಂದುಕೊಳ್ಳುವುದಿಲ್ಲ..ನಮಗೆ ಇಂಪಾರ್ಟೆಂಟ್​ ನಿಮ್ಮ ಪ್ರೀತಿ ಹಾಗೂ ಬೆಂಬಲ ಮಾತ್ರ, ನೀವೂ ಹಾಗೇ ಬೇಜಾರ್​ ಮಾಡಿಕೊಳ್ಳಬೇಡಿ, ಕೋಪ ಮಾಡಿಕೊಳ್ಳಬೇಡಿ
ವಿಜಯಲಕ್ಷ್ಮಿ, ನಟ ದರ್ಶನ್ ಪತ್ನಿ
ವಿಜಯಲಕ್ಷ್ಮಿಯವರ ಈ ಹೇಳಿಕೆ ಸ್ಯಾಂಡಲ್​ವುಡ್​ನಲ್ಲಿ ಬೂದಿಮುಚ್ಚಿದ ಕೆಂಡದಂತಿದ್ದ ಸ್ಟಾರ್​ವಾರ್​​​ಗೆ ಮತ್ತೆ ತುಪ್ಪ ಸುರಿದಿರೋದ್ರಲ್ಲಿ ಸಂಶಯವಿಲ್ಲ..ಕಿಚ್ಚ ಆಗಲಿ ದರ್ಶನ್​ ಪತ್ನಿಯಾಗಲಿ ಯಾರೂ ಕೂಡ ಯಾರತ್ತಲೂ ಡೈರೆಕ್ಟ್​ ಬೊಟ್ಟು ಮಾಡಿಲ್ಲ..ಆದ್ರೆ, ಅವರವರೇ ಅವರವರಲ್ಲೇ ಯುದ್ಧ ಮೊಳಗಿಸಿಕೊಳ್ಳುತ್ತಿರೋದು ಇಬ್ಬರು ಬಿಗ್​ಸ್ಟಾರ್​ಗಳ ಮಧ್ಯೆದ ಕಂದಕ ಇನ್ನೂ ಮುಚ್ಚಿಲ್ಲ ಅನ್ನೋದಕ್ಕೆ ಸತ್ಯಸಾಕ್ಷಿಯಂತೆ ಕಾಣ್ತಿದೆ..
/filters:format(webp)/newsfirstlive-kannada/media/media_files/2025/12/22/darshan-wife-vijaylaxmi-2025-12-22-12-47-18.jpg)
ಏಟು ಎದುರೇಟು...ಇದು ಸ್ಟಾಂಡಲ್​ವುಡ್​ ಸ್ಟಾರ್​​ವಾರ್​ನ ಕಾಮನ್​ ಫ್ಯಾಕ್ಟರ್​..ಬಟ್, ಬಹುನಿರೀಕ್ಷಿತ ಸಿನಿಮಾಗಳು ರಿಲೀಸ್ ಆಗೋ ಹೊತ್ತಲ್ಲಿ ಈ ರೀತಿಯ ಫೈಟ್​ ನಿಜಕ್ಕೂ ಸಿನಿಮಾಗೆ ಒಳ್ಳೆ ರಿಸಲ್ಟ್​ ತಂದುಕೊಡುತ್ತಾ? ಗೊತ್ತಿಲ್ಲ..ಬಟ್, ಕಿಚ್ಚ ಅಂತೂ ಆ ಕಾಣದ ಪಡೆಯ ವಿರುದ್ಧ ತೊಡೆತಟ್ಟಿಯಾಗಿದ್ದು, ಈ ಫೈಟ್​ ಎಲ್ಲಿಗೆ ಹೋಗಿ ನಿಲ್ಲುತ್ತೋ ಕಾದುನೋಡ್ಬೇಕು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us