ಅಣ್ಣನಿಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲಿಸಲು ಬೆಂಗಳೂರಿಗೆ ಓಡೋಡಿ ಬಂದ ಸೂಪರ್ ಸ್ಟಾರ್ ರಜನಿಕಾಂತ್‌!

ಸೂಪರ್ ಸ್ಟಾರ್ ರಜನಿಕಾಂತ್ ಅಣ್ಣ ಸತ್ಯನಾರಾಯಣ ಗಾಯಕ್ವಾಡ್ ಬೆಂಗಳೂರಿನ ಮನೆಯಲ್ಲಿ ಅನಾರೋಗ್ಯಕ್ಕೀಡಾಗಿದ್ದರು. ಆದರೇ, ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿದ್ದರು. ಬೆಂಗಳೂರಿಗೆ ದೌಡಾಯಿಸಿ ಬಂದ ರಜನಿಕಾಂತ್, ಅಣ್ಣನ ಮನವೊಲಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಂದು ಸಂಜೆ ಚೆನ್ನೈಗೆ ವಾಪಸ್ ಹೋಗುವರು.

author-image
Chandramohan
RAJANIKANTH RUSHED TO BANGALORE

ಬೆಂಗಳೂರಿಗೆ ದೌಡಾಯಿಸಿ ಬಂದು ಅಣ್ಣನನ್ನು ಆಸ್ಪತ್ರೆಗೆ ದಾಖಲಿಸಿದ ರಜನಿಕಾಂತ್!

Advertisment
  • ಬೆಂಗಳೂರಿಗೆ ದೌಡಾಯಿಸಿ ಬಂದು ಅಣ್ಣನನ್ನು ಆಸ್ಪತ್ರೆಗೆ ದಾಖಲಿಸಿದ ರಜನಿಕಾಂತ್!
  • ಅನಾರೋಗ್ಯ ಇದ್ದರೂ ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿದ್ದ ರಜನಿ ಅಣ್ಣ
  • ಅಣ್ಣ ಸತ್ಯನಾರಾಯಣ ಗಾಯಕ್ವಾಡ್ ರನ್ನು ಆಸ್ಪತ್ರೆಗೆ ದಾಖಲಿಸಿದ ರಜನಿಕಾಂತ್
  • ಇಂದು ಸಂಜೆಯ ಬಳಿಕ ಬೆಂಗಳೂರಿನಿಂದ ಚೆನ್ನೈಗೆ ತೆರಳುವ ರಜನಿಕಾಂತ್


ಸೂಪರ್ ಸ್ಟಾರ್ ರಜನಿಕಾಂತ್ ಅಣ್ಣ ಸತ್ಯನಾರಾಯಣ ಗಾಯಕ್ವಾಡ್ ಅನಾರೋಗ್ಯದಿಂದ  ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಅಣ್ಣನ  ಹಾರೈಕೆಗಾಗಿ ರಜನಿಕಾಂತ್ ಚೆನ್ನೈನಿಂದ ಬೆಂಗಳೂರಿಗೆ ದೌಡಾಯಿಸಿ ಬಂದಿದ್ದಾರೆ. ಅನಾರೋಗ್ಯಕ್ಕೀಡಾಗಿದ್ದ ರಜನಿಕಾಂತ್ ಅಣ್ಣ ಸತ್ಯನಾರಾಯಣ ಗಾಯಕ್ವಾಡ್ ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿದ್ದರು.  ಹೀಗಾಗಿ ಖುದ್ದು ರಜನಿಕಾಂತ್ ಚೆನ್ನೈನಿಂದ ಬೆಂಗಳೂರಿಗೆ ಬಂದು ಅಣ್ಣನ ಮನವೊಲಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.  ವೈದ್ಯರ ಸಲಹೆಯಂತೆ ಒಂದೆರೆಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತೆ.  ಇನ್ನೂ ನಟ ರಜನಿಕಾಂತ್ ಇನ್ನೂ ಬೆಂಗಳೂರಿನ ಆಸ್ಪತ್ರೆಯಲ್ಲೇ ಅಣ್ಣ ಸತ್ಯನಾರಾಯಣ್ ಗಾಯಕ್ವಾಡ್ ಜೊತೆ ಇದ್ದಾರೆ. ಇಂದು ಸಂಜೆಯ ತನಕ ಆಸ್ಪತ್ರೆಯಲ್ಲಿದ್ದು ಬಳಿಕ ಚೆನ್ನೆಗೆ ವಾಪಸ್ ಹೋಗುವರು. 

Video: ಮೈಚಾಂಗ್​ ತಂದ ಸಂಕಷ್ಟ.. ಸೂಪರ್​ ಸ್ಟಾರ್ ರಜನಿಕಾಂತ್​​ ಮನೆಗೆ ನುಗ್ಗಿದ ನೀರು



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rajinikanth super star rajinikanth Super Star
Advertisment