/newsfirstlive-kannada/media/media_files/2025/09/19/naa-ninna-bidalare-2025-09-19-15-25-08.jpg)
ನಾ ನಿನ್ನ ಬಿಡಲಾರೆ Photograph: (ನಾ ನಿನ್ನ ಬಿಡಲಾರೆ)
ಝೀ ಕನ್ನಡ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಗೆ ವೀಕ್ಷಕರು ಫಿದಾ ಆಗಿದ್ದಾರೆ.ದುರ್ಗಾ-ಶರತ್​ ಮದುವೆ ಆದ್ಮೇಲಂತೂ ಎಂಟರ್​ಟೈನ್ಮೆಂಟ್​ ಮತ್ತಷ್ಟು ಹೆಚ್ಚಾಗಿದೆ.ದಿನದಿಂದ ದಿನಕ್ಕೆ ಟ್ವಿಸ್ಟ್​ ಮೇಲೆ ಟ್ವಿಸ್ಟ್ ಕೊಟ್ಟು ಪ್ರೇಕ್ಷಕರನ್ನ ಹಿಡಿದಿಟ್ಟುಕೊಂಡಿದೆ.
ಇನ್ನು ದೇವಿ ಕೃಪಾಕಟಾಕ್ಷದಿಂದ ಅಂಬಿಕಾ ಮಾಯಾಜಾಲದ ಮೂಲಕ ದುರ್ಗಾ-ಶರತ್​ ಮದುವೆ ಆಗ್ತಾರೆ.ಈ ಬಗ್ಗೆ ಸುಳಿವೇ ಇಲ್ಲದ ಜೋಡಿಗೆ ಗೊಂದಲ ಶುರುವಾಗಿದೆ. ಇದೇ ಕಾರಣಕ್ಕೆ ಡಿವೋರ್ಸ್ ಪಡೆಯೋ ನಿರ್ಧಾರ ಮಾಡ್ತಾರೆ.
/filters:format(webp)/newsfirstlive-kannada/media/media_files/2025/09/19/naa-ninna-bidalare-2-2025-09-19-15-28-56.jpg)
ಈ ನಡುವೆ ಅಂಬಿಕಾ ತನ್ನ ಶಕ್ತಿ ಬಳಸಿ ದುರ್ಗಾಳಿಗೆ ಸತ್ಯ ಹೇಳುವ ಪ್ರಯತ್ನ ಮಾಡ್ತಾಳೆ. ತನ್ನನ್ನ ಕೊಂದದ್ದು ಮಾಯಾ. ಅವಳ ಮುಂದಿನ ಟಾರ್ಗೆಟ್ ಹಿತಾ ಪುಟಾಣಿ ಎಂಬ ರೋಚಕ ಸತ್ಯವನ್ನ ಬಯಲು ಮಾಡೋ ಪ್ರಯತ್ನ ಮಾಡ್ತಾಳೆ. ಇದೇ ಕಾರಣಕ್ಕೆ ಇನ್ನೇನು ಡಿವೂರ್ಸ್​ ಆಗೋಯ್ತು ಅನ್ನೋವಾಗಲೇ ದುರ್ಗಾ ಸಿಹಿ ಮಾಡಲು ನಿರಾಕರಿಸಿದ್ದಾಳೆ.
ಅಂದ್ಹಾಗೆ ಅಂಬಿಕಾ ನೇರವಾಗಿ ದುರ್ಗಾ ಬಳಿ ಮಾತ್ನಾಡೋಕೆ ಆಗ್ತಿಲ್ಲ.ಹೀಗೆ ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ದುರ್ಗಾ-ಶರತ್​ ಮದುವೆ ಆದ ಮೇಲೆ ಎಂಟರ್​ಟೈನ್ಮೆಂಟ್​ ಡಬಲ್​ ಆಗಿದಂತೂ ನಿಜಾ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us