/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ತೃತೀಯಾ ತಿಥಿ, ಅಶ್ವಿನಿ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.
ಮೇಷ ರಾಶಿ
- ಸಮಾಜದಲ್ಲಿನ ಪರವಾದ ಅಲೆ ಇರುತ್ತದೆ
- ಹಿರಿಯರು ನಿಮ್ಮ ಗುಣಗಾನ ಮಾಡುತ್ತಾರೆ
- ಎಲ್ಲಾ ಚಟುವಟಿಕೆಗಳು ವೇಗವನ್ನು ನಡೆಯುತ್ತವೆ
- ನಿಮ್ಮ ಕೆಲಸದ ಗುಣಮಟ್ಟ ಪ್ರಶಂಸನೀಯ
- ದಾಂಪತ್ಯದಲ್ಲಿ ಕೆಲವು ಕೊರತೆಯಿಂದ ಬೇಸರ ಆಗಬಹುದು
- ಹಣದ ವಿಚಾರವಾಗಿ ನೆಮ್ಮದಿಯ ದಿನ
- ಆಂಜನೇಯ ಸ್ವಾಮಿಯನ್ನು ಆರಾಧನೆ ಮಾಡಿ
ವೃಷಭ
- ಹೊಸ ಕೆಲಸ, ಯೋಜನೆಗಳು ಬೇಡ
- ಮನೆಯವರ ಬಗ್ಗೆ ಚಿಂತಿತರಾಗುತ್ತೀರಿ
- ಪರಿಶ್ರಮಕ್ಕೆ ತಕ್ಕ ಪ್ರತಿಫಲ ಇರುವುದಿಲ್ಲ
- ಕಾರ್ಯಕ್ಷೇತ್ರದಲ್ಲಿ ಅಪಹಾಸಕ್ಕೆ ಗುರಿಯಾಗಬಹುದು
- ನಿಮ್ಮ ಗುರಿಯ ಬಗ್ಗೆ ಮಾತ್ರ ಧ್ಯಾನ ಇರಲಿ
- ಜಯವಿದೆ ಜೊತೆಗೆ ಶುಭವು ಇದೆ
- ಕುಲದೇವತಾ ಆರಾಧನೆ ಮಾಡಿ
ಮಿಥುನ
- ಹೊಸ ಯೋಜನೆಯ ಬಗ್ಗೆ ಮನೆಯಲ್ಲಿ ಚರ್ಚಿಸಬಹುದು
- ಅವಿವಾಹಿತರಿಗೆ ಶುಭ ಸುದ್ದಿ
- ವಿದ್ಯಾರ್ಥಿಗಳಿಗೆ ಏಕಾಗ್ರತೆ ವರದಾನ
- ಉನ್ನತ ಹುದ್ದೆಯವರಿಗೆ ಶುಭಕರ
- ಇಂದು ವ್ಯಾಪಾರದಲ್ಲಿ ಅನುಕೂಲವಿದೆ
- ಅನಿವಾರ್ಯ ಪ್ರಯಾಣವೂ ಇರಬಹುದು
- ವಿಷ್ಣು ಸಹಸ್ರನಾಮ ಪಠಿಸಿ
ಕಟಕ
- ಸಹೋದ್ಯೋಗಿಗಳಿಂದ ಉತ್ತಮ ಸಲಹೆ
- ದೂರದ ಪ್ರಯಾಣದ ಬಗ್ಗೆ ಚಿಂತನೆ ಮಾಡುತ್ತೀರಿ
- ಮನಸ್ಸಿನಲ್ಲಿ ಅಹಿತಕರ ವಾತಾವರಣ
- ಆರೋಗ್ಯದ ಬಗ್ಗೆ ಹೆಚ್ಚು ಚಿಂತಿಸಿ
- ಶೀತ ಮತ್ತು ಹೊಟ್ಟೆ ನೋವು ಕಾಣಬಹುದು
- ತಾಯಿಯವರ ಆಶೀರ್ವಾದ ಪಡೆಯಿರಿ
- ಅನ್ನಪೂರ್ಣೇಶ್ವರಿ ಆರಾಧನೆ ಮಾಡಿ
ಸಿಂಹ
- ಆತ್ಮ ತೃಪ್ತಿಯ ಕೆಲಸದಿಂದ ಸಮಾಧಾನ ಸಿಗಲಿದೆ
- ಬೇರೆಯವರಿಗೆ ಸಹಾಯ ಮಾಡುವ ತವಕದಲ್ಲಿರುತ್ತೀರಿ
- ಸಾಮರ್ಥ್ಯ ಮೀರಿ ಏನನ್ನು ಮಾಡಬೇಡಿ
- ತೊಂದರೆ ಎದುರಿಸಲು ಸಮರ್ಥರಾಗಿರುವ ನಿಮ್ಮ ಮುಂದೆ ಸವಾಲುಗಳು ಹೆಚ್ಚು
- ನಿಮ್ಮ ಕೆಲಸಕ್ಕಾಗಿ ಬೇರೆಯವರನ್ನು ಅವಲಂಬಿಸಬೇಡಿ
- ಹಣದ ಹರಿವು ಚೆನ್ನಾಗಿರುತ್ತದೆ
- ಮಹಾಲಕ್ಷ್ಮಿಯನ್ನು ಉಪಾಸನೆ ಮಾಡಿ
ಕನ್ಯಾ
- ಇಂದು ವಿಚಿತ್ರ ದಿನ
- ನೀವು ಬೇಡವೆಂದುಕೊಂಡ ಕೆಲಸ ಆಗುತ್ತವೆ
- ಸ್ವಂತದವರಿಂದಲೇ ದ್ರೋಹವಾಗಬಹುದು
- ರಾಜಕೀಯವಾಗಿ ದೂಷಣೆ ಇರುತ್ತದೆ
- ಶಾರೀರಿಕ ಸಮಸ್ಯೆ ನರನಾಡಿಗಳಲ್ಲಿ ನೋವು ಕಾಣಬಹುದು
- ವಾಹನ ಚಾಲನೆ ಎಚ್ಚರಿಕೆ ಇರಲಿ ಅಪಘಾತವಾಗಬಹುದು
- ದುರ್ಗಾ ಆರಾಧನೆ ಮಾಡಿ
ತುಲಾ
- ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ
- ಹಿರಿಯರು, ಅಧಿಕಾರ ಉಳ್ಳವರು ಸಹ ನಿಮ್ಮಿಂದ ಪ್ರಭಾವಿತರಾಗುತ್ತಾರೆ
- ನಕಾರಾತ್ಮಕ ಚಿಂತನೆಗಳಿಂದ ದೂರವಿರಿ
- ಪ್ರೇಮಿಗಳಿಗೆ ಉತ್ತಮ ದಿನ
- ಅನುಭವಿಗಳ ಮಾರ್ಗದರ್ಶನದಿಂದ ಯಶಸ್ಸಿದೆ
- ಧಾರ್ಮಿಕ , ಆಧ್ಯಾತ್ಮಿಕ ಮುಖಂಡರ ಭೇಟಿಯಾಗಬಹುದು
- ಈಶ್ವರನ ಆರಾಧನೆ ಮಾಡಿ
ವೃಶ್ಚಿಕ
- ದಾಂಪತ್ಯದಲ್ಲಿ ಅನ್ಯೋನ್ಯತೆ ಕಾಪಾಡಿ
- ಮನೆಯಲ್ಲಿ ಹಬ್ಬದ ವಾತಾವರಣ ಇರುತ್ತದೆ
- ಜನರಿಂದ ಗೌರವಾದಾರಗಳು ಸಿಗುವ ದಿನ
- ಹಣ ಹೂಡಿಕೆ, ಬಡ್ಡಿ ವ್ಯವಹಾರದಲ್ಲಿ ಉತ್ತಮ ಯಶಸ್ಸಿದೆ
- ಪಾರದರ್ಶಕವಾಗಿ ವ್ಯವಹಾರ ಮುಂದುವರಿಸಿದರೆ ಮಾದರಿ
- ಗುಪ್ತವಾಗಿ ಜನ ನಿಮ್ಮನ್ನು ಕಾಯುತ್ತಿರುತ್ತಾರೆ
- ರುದ್ರಾರಾಧನೆಯನ್ನ ಮಾಡಿ
ಧನಸ್ಸು
- ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ
- ವ್ಯಾಪಾರ, ವ್ಯವಹಾರಕ್ಕೆ ಸಂಬಂಧಿಸಿದಂತೆ ಅನುಕೂಲ
- ಆದಾಯದ ಮೂಲ ಗಟ್ಟಿಯಾಗಿರುತ್ತದೆ
- ಧಾರ್ಮಿಕ ಕಾರ್ಯಗಳ ಬಗ್ಗೆ ಚಿಂತಿಸುವುದು ಒಳಿತು
- ಈ ದಿನ ಲೇಖಕರಿಗೆ ಅನುಕೂಲವಿದೆ
- ಗೌರವ, ಆದರ, ಆಥಿತ್ಯಗಳು ಹುಡುಕಿಕೊಂಡು ಬರುತ್ತವೆ
- ದತ್ತೋಪಾಸನೆ ಮಾಡಿ
ಮಕರ
- ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನಿಸಿ
- ಖರೀದಿಯಿಂದ ಮೋಸ ಹೋಗಬಹುದು
- ನಿಮ್ಮ ಶಕ್ತಿ ಸಾಮರ್ಥ್ಯದ ಬಗ್ಗೆ ನಿಮಗೆ ಧೈರ್ಯ ಇರಲಿ
- ಕಾರ್ಯಕ್ಷೇತ್ರದಲ್ಲಿ ಅವಮಾನವಾಗಬಹುದು
- ನಿಮ್ಮ ಆಲೋಚನೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ
- ಹಳೆಯ ನೆನಪುಗಳಿಂದ ಬೇಸರ ನೋವು ಉಂಟಾಗಬಹುದು
- ಗಣಪತಿಯನ್ನು ಪೂಜಿಸಿ
ಕುಂಭ
- ನಿಮ್ಮ ಎಲ್ಲಾ ಕೆಲಸಗಳು ಉತ್ತಮವಾಗಿ ನಡೆಯುತ್ತವೆ
- ಹಿರಿಯರಿಂದ ಸಹೋದರರ ಉತ್ತಮ ಸಲಹೆ ಪಡೆಯುತ್ತೀರಿ
- ಮಕ್ಕಳಿಂದ ಸಂತೋಷ ಉಂಟಾಗಬಹುದು
- ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿ ಹೆಚ್ಚುತ್ತದೆ
- ಸಂಗೀತ ಆಸಕ್ತರಿಗೆ ಉತ್ತಮ ದಿನ
- ಆಧ್ಯಾತ್ಮಿಕ ಚಿಂತನೆಯ ಪ್ರಭಾವ ಮನಸ್ಸಿಗೆ ಧೈರ್ಯ ನೀಡುತ್ತದೆ
- ಶರಭೇಶ್ವರನ ಉಪಾಸನೆ ಮಾಡಿ
ಮೀನ
- ವ್ಯಾಪಾರದಲ್ಲಿ ಖರ್ಚು ಹೆಚ್ಚಾಗಬಹುದು
- ಕೈ ಕೆಳಗಿನ ಉದ್ಯೋಗಿಗಳಿಗೆ ಸಹಾಯ ಮಾಡಲು ಬಯಸುತ್ತೀರಿ
- ಪ್ರೇಮಿಗಳಿಗೆ ಶುಭ ದಿನ
- ಸರ್ಕಾರಿ ನೌಕರರಿಗೆ ಲಾಭದ ದಿನ
- ಅನುಭವಿಗಳ ಮಾತು ನಿಮ್ಮ ಕಾರ್ಯಕ್ಕೆ ಸ್ಪೂರ್ತಿ
- ಹೊಸ ಯೋಜನೆಗಳಿಂದ ಬೇರೆಯವರಿಗೆ ಅನುಕೂಲವಿದೆ
- 12 ಬಾರಿ ಅಶ್ವತ್ಥ ಪ್ರದಕ್ಷಿಣೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ