ಆಸ್ತಿ ಖರೀದಿಗೆ ಹಣ ಸಿಗಲಿದೆ; ಆರೋಗ್ಯದ ಬಗ್ಗೆ ಎಚ್ಚರ; ಮಿತಿ ಮೀರಬೇಡಿ; ಇಲ್ಲಿದೆ ಇಂದಿನ ಭವಿಷ್ಯ

author-image
Ganesh Nachikethu
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಸಣ್ಣ ವಿಷಯಗಳಿಗೆ ಮಿತಿ ಮೀರಿ ಮಾತಾಡಬಾರದು
  • ಸದಾ ನಿಮ್ಮ ಆರೋಗ್ಯದ ಬಗ್ಗೆಯೂ ಗಮನವಿರಲಿ
  • ಆಸ್ತಿ ಖರೀದಿಗೆ ಸಹಾಯಕವಾದ ಹಣ ಕೈ ಸೇರುತ್ತದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಪ್ರತಿಪತ್ ತಿಥಿ, ಹಸ್ತಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
.

ಮೇಷ ರಾಶಿ

publive-image

  • ಮನೆಯಲ್ಲಿ ಸಂತೃಪ್ತಿಯ ವಾತಾವರಣವಿರುತ್ತದೆ
  • ಆತ್ಮವಿಶ್ವಾಸ ಹೆಚ್ಚಿಸುವ ದಿನವಾಗಿರುತ್ತದೆ
  • ಎಲ್ಲಾ ಯೋಚನೆಗಳನ್ನ ಬಿಟ್ಟು ಉತ್ತಮ ಫಲ ಕೊಡುವ ಕೆಲಸದ ಬಗ್ಗೆ ಆಸಕ್ತಿ ತೋರಿಸಿ
  • ಅಂದುಕೊಂಡ ಕೆಲಸಗಳನ್ನು ಮೇಲ್ದರ್ಜೆಗೆ ಏರಿಸುವ ಪ್ರಯತ್ನ ನಿಮ್ಮದಾಗಿರಲಿ
  • ಆಕಸ್ಮಿಕವಾಗಿ ವಾಹನಕ್ಕೆ ಹಾನಿಯಾಗುವ ಸಾಧ್ಯತೆಗಳಿವೆ ಎಚ್ಚರವಿರಲಿ
  • ಕುಲದೇವತಾ ಆರಾಧನೆ ಮಾಡಿ

ವೃಷಭ

publive-image

  • ನಿಮ್ಮ ಇಚ್ಛೆಯಂತೆ ಕೆಲಸ ಮಾಡಿ ಯಶಸ್ಸನ್ನು ಹೊಂದಬಹುದು
  • ಈ ದಿನ ಉತ್ತಮವೆಂದು ಪರಿಗಣಿಸಿ ಕೆಲಸದಲ್ಲಿ ಯಶಸ್ಸು ಸಿಗಲಿದೆ
  • ಕೆಲಸದಲ್ಲಿ ಸಣ್ಣ ಪುಟ್ಟ ಕಿರಿಕಿರಿ ಕಾಡಬಹುದು
  • ನಿಮ್ಮ ಮನಸ್ಸು ಹತೋಟಿಯಲ್ಲಿರಬೇಕು
  • ಅಸಂಬದ್ಧ ಚಟುವಟಿಕೆಗಳತ್ತ ಮನಸ್ಸು ಹೋಗಬಹುದು
  • ಹಣಗಳಿಸಬೇಕೆಂಬ ಭರದಲ್ಲಿ ತಪ್ಪು ದಾರಿ ಹಿಡಿಯಬಾರದು
  • ಹಳೆಯ ವಾಹನದಲ್ಲಿ ಪ್ರಯಾಣಿಸುವಾಗ ತುಂಬಾ ಎಚ್ಚರವಹಿಸಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

publive-image

  • ಆರ್ಥಿಕವಾಗಿ ಅನುಕೂಲಕರ ದಿನ
  • ಮಕ್ಕಳಿಗೆ ಮತ್ತು ವಿದ್ಯಾರ್ಥಿಗಳಿಗೆ ಅಗತ್ಯತೆಯನ್ನು ಪೂರೈಸುವ ದಿನ
  • ಪ್ರೇಮಿಗಳಿಗೆ ಶುಭದಿನ ಸದುಪಯೋಗವಾಗಲಿ
  • ಉದ್ಯೋಗಿಗಳಿಗೆ ವ್ಯಾವಹಾರಿಕವಾಗಿ ಲಾಭವಿದೆ ಆದರೆ ಪ್ರಾಮಾಣಿಕವಾಗಿರಬೇಕು
  • ಸ್ನೇಹಿತರ ಭೇಟಿಯಿಂದ ಮೋಜು,ಮಸ್ತಿ ಹೆಚ್ಚಾಗಿದ್ದು ಹಣ ಹೆಚ್ಚಾಗಿ ಖರ್ಚು ಮಾಡುತ್ತೀರಿ
  • ಪ್ರಭಾವಿ ವ್ಯಕ್ತಿಗಳ ಭೇಟಿ ಪರಿಚಯ ಸಂತೋಷವನ್ನುಂಟು ಮಾಡುತ್ತದೆ
  • ಶಿವಾರಾಧನೆ ಮಾಡಿ

ಕಟಕ

publive-image

  • ವಿದ್ಯಾರ್ಥಿಗಳು ಮತ್ತು ಸರ್ಕಾರಿ ನೌಕರರು ಸವಾಲುಗಳನ್ನು ಎದುರಿಸಬೇಕಾದ ದಿನ
  • ಹತ್ತಿರದ ಸ್ನೇಹಿತರು ಅಥವಾ ಸಂಬಂಧಿಕರಿಂದ ದ್ರೋಹವಾಗುವ ಸೂಚನೆ ಇದೆ
  • ಆತುರದಿಂದ ಯಾವುದೇ ನಿರ್ಧಾರವನ್ನು ಮಾಡಬಾರದು
  • ಅನಗತ್ಯ ವಿಚಾರಗಳಿಗೆ ಜಗಳದ ಸಂಭವ ಹೆಚ್ಚಾಗಿರುತ್ತದೆ
  • ಕುಟುಂಬದಲ್ಲಿ ಹೆಂಗಸರ ಆರೋಗ್ಯ ಹದಗೆಡಬಹುದು ಎಚ್ಚರಿಕೆ
  • ದಾಂಪತ್ಯದಲ್ಲಿ ಕಲಹ,ಅಸಮಾಧಾನ ಉಂಟಾಗಬಹುದು
  • ಲಕ್ಷ್ಮಿದೇವಿಯನ್ನು ಪ್ರಾರ್ಥನೆ ಮಾಡಿ

ಸಿಂಹ

publive-image

  • ನೀವು ಯೋಚಿಸಿದ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತದೆ
  • ಕೆಲಸವನ್ನು ಅಲ್ಪ ಎಂದು ಭಾವಿಸದೆ ಶ್ರದ್ಧೆಯಿರಲಿ ತಾತ್ಸಾರ ಬೇಡ
  • ಹೊಸ ಕೆಲಸವನ್ನು ಆರಂಭ ಮಾಡುವುದಕ್ಕೆ ಅದ್ಭುತವಾದ ದಿನ
  • ಕೆಲಸ ನಿಮಿತ್ತ ಅಥವಾ ಹೆಚ್ಚಿನ ವಿದ್ಯಾಭ್ಯಾಸದ ನಿಮಿತ್ತ ಸಂದರ್ಶನಕ್ಕೆ ಭಾಗಿಯಾದರೆ ಯಶಸ್ಸು ನಿಮ್ಮದಾಗಿರುತ್ತೆ
  • ಮುರಿದು ಬಿದ್ದ ಸಂಬಂಧಗಳನ್ನು ಸರಿಪಡಿಸಲು ಉತ್ತಮವಾದ ದಿನ
  • ಪ್ರೇಮಿಗಳಿಗೆ ತುಂಬಾ ಅಪಾಯಕರವಾದ ದಿನ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

publive-image

  • ಮಹಿಳೆಯರಿಗೆ ಆರೋಗ್ಯದ ಆತಂಕ ತುಂಬಾ ಕಾಡುತ್ತೆ ಎಚ್ಚರಿಕೆವಹಿಸಿ
  • ಅಲ್ಪ ಸ್ವಲ್ಪ ಕೂಡಿಟ್ಟ ಹಣ ಔಷಧಿಗಳಿಗೆ ಖರ್ಚಾಗಬಹುದು
  • ಹಣ ಖರ್ಚು, ಅನಾರೋಗ್ಯದಿಂದ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರುತ್ತದೆ
  • ಕಷ್ಟ ಪಟ್ಟು ಮಾಡಿದ ಕೆಲಸ, ಉದ್ಯೋಗ ನೆನಪಾಗಿ ನೋವನ್ನು ಅನುಭವಿಸುತ್ತೀರಿ
  • ಕುಟುಂಬದವರಲ್ಲಿ ನಂಬಿಕೆ ಕಡಿಮೆಯಾಗಬಹುದು
  • ನಿಮ್ಮ ಸಹಾಯಕ್ಕೆ ಯಾರು ಆಗುವುದಿಲ್ಲ ಎಂಬ ಮನೋಭಾವ ಕಾಡುತ್ತದೆ
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ತುಲಾ

publive-image

  • ಕುಟುಂಬದ ಎಲ್ಲಾ ಸದಸ್ಯರು ಕೂಡ ಸಂತೋಷವಾಗಿರುವ ದಿನ
  • ಆರ್ಥಿಕವಾದ ಸ್ಥಿತಿ ಅಥವಾ ಬಂಧುಗಳ ವಿಶ್ವಾಸ ಎಲ್ಲವೂ ನೀವು ಅಂದುಕೊಂಡ ಹಾಗೆ ನಡೆದು ಸಮಾಧಾನ ಕೊಡುವ ದಿನ
  • ಧನಾತ್ಮಕವಾದ ಚಿಂತನೆಗಳು ನಿಮಗೆ ಬರುವುದಿಲ್ಲ
  • ಕಾರ್ಯಕ್ಷೇತ್ರದಲ್ಲಿ ಸಿಹಿ ಸುದ್ದಿ ಇರುತ್ತದೆ, ಅನುಭವಿಸಲು ಯೋಗವಿಲ್ಲ
  • ಪ್ರೇಮಿಗಳಿಗೆ ಅಡ್ಡಿಯಾಗುವ ದಿನ ಸವಾಲುಗಳನ್ನು ಎದುರಿಸಬೇಕಾಗುತ್ತದೆ
  • ಸಾಯಂಕಾಲಕ್ಕೆ ಅದೃಷ್ಟ ವಿರುದ್ಧ ಅನಿಸಬಹುದು

ವೃಶ್ಚಿಕ

publive-image

  • ಈ ದಿನ ಬರೀ ನಕರಾತ್ಮಕ ಚಿಂತನೆಗಳು, ವಿಷಯಗಳು ನಿಮ್ಮ ಮುಂದೆ ಬರುವಂತಹದ್ದು
  • ನಿಮ್ಮ ನಿರ್ದಿಷ್ಟ ಗುರಿಗಳನ್ನು ತಲುಪಲು ಹಲವು ರೀತಿಯಲ್ಲಿ ಪ್ರಯತ್ನಿಸಿ ವಿಫಲರಾಗುತ್ತೀರಿ
  • ಸಂಬಂಧಿಕರು ಮತ್ತು ಸ್ನೇಹಿತರು ದೊಡ್ಡ ಆತಂಕಕ್ಕೆ ಒಳಗಾಗಬಹುದು
  • ಇಡೀ ದಿನವನ್ನು ತುಂಬಾ ತಾಳ್ಮೆಯಿಂದ ಕಳೆಯಬೇಕಾಗುತ್ತದೆ
  • ದಾಂಪತ್ಯದಲ್ಲಿ ವೈಮನಸ್ಯ ಬರದಂತೆ ನೋಡಿಕೊಳ್ಳಬೇಕು
  • ಹಣದ ವಿಚಾರದಲ್ಲಿ ಭಿನ್ನಾಭಿಪ್ರಾಯ ಬರಬಹುದು
  • ಹಳೆಯ ಲೆಕ್ಕದಿಂದ ಬೇಸರ ಉಂಟಾಗಬಹುದು

ಧನಸ್ಸು

publive-image

  • ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಆದಾಯದಲ್ಲಿ ಹೆಚ್ಚಳ ಸಾಧ್ಯತೆ
  • ಸಂಪಾದನೆ ಮಾಡುವ ದೃಷ್ಟಿಯಲ್ಲಿ ತುಂಬಾ ಆತ್ಮಸ್ಥೆರ್ಯ ಇದ್ದರೂ ಕೂಡ ಖರ್ಚನ್ನು ನೋಡಿ ಧೈರ್ಯಗೆಡಬೇಕಾದ ಪರಿಸ್ಥಿತಿ ಏರ್ಪಾಟಾಗುತ್ತದೆ
  • ಆತ್ಮವಿಶ್ವಾಸವಿದ್ದರೂ ಖರ್ಚನ್ನು ನೋಡಿ ಚಿಂತಿಸಬೇಕಾಗಿದೆ
  • ವ್ಯವಹಾರದಲ್ಲಿ ಒಪ್ಪಂದಗಳಾಗಬಹುದು ಅಥವಾ ಮಾತುಕತೆ ನಡೆಯಬಹುದು
  • ವಸ್ತುಗಳ ವಿತರಕರಿಗೆ ತುಂಬಾ ಲಾಭದ ದಿನ
  • ಮನೆಗೆ ಬಂದ ಅತಿಥಿಗಳಿಂದ ನಿಮ್ಮ ವೈಯಕ್ತಿಕ ಕೆಲಸಗಳಿಗೆ ಅಡ್ಡಿಯಾಗುವ ಸಾಧ್ಯತೆಯಿದೆ
  • ಈಶ್ವರನ ಆರಾಧನೆ ಮಾಡಿ

ಮಕರ

publive-image

  • ಬೆಲೆಬಾಳುವ ವಸ್ತುಗಳ ಖರೀದಿ ಮಾಡುತ್ತೀರಿ
  • ಅನುಭವಿಗಳ ಉಚಿತ ಸಲಹೆ ಧೈರ್ಯವನ್ನು ತರಬಹುದು
  • ಕುಟುಂಬದಲ್ಲಿ ಸಂತಸದ ವಾತಾವರಣ ಇದ್ದರೂ ಸಮಾಧಾನವಿರುವುದಿಲ್ಲ
  • ವಿದೇಶದಲ್ಲಿರುವರಿಂದ ಮನೆಗೆ ಶುಭವಾರ್ತೆ ಬರಬಹುದು
  • ಆಸ್ತಿ ಖರೀದಿಸಲು ಸಹಾಯಕವಾದ ಹಣ ಕೈ ಸೇರುತ್ತದೆ
  • ಮನೆಯಲ್ಲಿ ಎಲ್ಲವೂ ಶುಭ ಆದರೂ ಮಾನಸಿಕವಾಗಿ ಸಮಾಧಾನವಿರುವುದಿಲ್ಲ
  • ಗುರುದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ಕುಂಭ

publive-image

  • ನಿರೀಕ್ಷಿತ ಕೆಲಸದ ವಿರುದ್ಧವಾಗಿ ಅಸಮಾಧಾನವಾಗುತ್ತದೆ
  • ನಿಮ್ಮ ಆಸೆಗಳಿಗೆ ಹಿನ್ನಡೆಯಾಗಬಹುದು
  • ಉತ್ತಮ ಅಧಿಕಾರಿಗಳು ನಿಮ್ಮ ಮೇಲೆ ಸಿಡಿದೇಳಬಹುದು
  • ಪ್ರಯಾಣ, ಪ್ರವಾಸಗಳು ರದ್ದಾಗಬಹುದು ಇದರಿಂದ ಮಾನಸಿಕ ಬೇಸರ ಕಾಡಬಹುದು
  • ಇತರರನ್ನು ಅವಲಂಭಿಸಿ ಕೆಲಸಗಳನ್ನು ಮಾಡಬೇಕಾದ ಸಂದರ್ಭಗಳು ಹೆಚ್ಚಾಗಿ ಕಾಣುತ್ತದೆ
  • ಪ್ರತ್ಯಂಗಿರಾ ದೇವಿಯನ್ನು ಪ್ರಾರ್ಥನೆ ಮಾಡಿ

ಮೀನ

publive-image

  • ಈ ದಿನ ಕೆಲವು ಕೆಲಸಗಳು ಬೇಸರದಿಂದ ಮುಕ್ತಾಯವಾಗಬಹುದು
  • ಮನಸ್ಸಿನ ತೊಳಲಾಟ ಧೈರ್ಯಗೆಡಿಸುತ್ತದೆ
  • ಸಹೋದ್ಯೋಗಿಗಳು,ಮಿತ್ರರು,ಬಂಧುಗಳು ನಿಮ್ಮ ವರ್ತನೆಯಲ್ಲಿ ತಪ್ಪು ಹುಡುಕಬಹುದು
  • ಸಣ್ಣ ವಿಷಯಗಳಿಗೆ ಮಿತಿ ಮೀರಿ ಮಾತಾಡಬಾರದು
  • ಕೆಲವು ಕಾನೂನು ತೊಡಕುಗಳು ನಿಮ್ಮ ನೌಕರಿಯಲ್ಲಿ ಎದುರಾಗಬಹುದು
  • ನಿಮ್ಮ ಆರೋಗ್ಯದ ಬಗ್ಗೆಯೂ ಗಮನವಿರಲಿ
  • ಬೆನ್ನಿನ ಮೂಳೆಗೆ ತೊಂದರೆಯಾಗಬಹುದು ಸಲಹೆಯನ್ನು ಪಡೆಯಿರಿ
  • ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment