/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಕ್ರೋಧಿ ನಾಮ ಸಂವತ್ಸರ ದಕ್ಷಿಣಾಯಣ ವರ್ಷ ಋತು, ಭಾದ್ರಪದ ಮಾಸ ಶುಕ್ಲ ಪಕ್ಷ ಚತುರ್ಥಿ ತಿಥಿ ಚಿತ್ತ ನಕ್ಷತ್ರ, ಶನಿವಾರ ಬೆಳಗ್ಗೆ 9 ಗಂಟೆಯಿಂದ 10:30 ರವರೆಗೆ ಇರಲಿದೆ.
ಮೇಷ ರಾಶಿ
- ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಗುರಿ ಸಾಧಿಸುವ ಮೂಲಕ ಮನಸ್ಸಿಗೆ ಸಂತೋಷವಾಗಬಹುದು
- ವ್ಯಾಪಾರ ವ್ಯವಹಾರದಲ್ಲಿ ಲಾಭ ಉಂಟಾಗಬಹುದು
- ಕೆಲಸ ಕಾರ್ಯಗಳಲ್ಲಿ ಉತ್ಸಾಹ ಬಿಡುವಿಲ್ಲದ ಕಾರ್ಯ ಗೌರವ
- ಹಿರಿಯ ಸಹೋದರರು ಬಂಧುಗಳಲ್ಲಿ ವೈಮನಸ್ಯದ ಮಾತು
- ಜನರಿಗೆ ನಿಮ್ಮ ಬಗ್ಗೆ ಉತ್ತಮ ಅಭಿಪ್ರಾಯವಿರುತ್ತದೆ
- ನಿಮ್ಮ ಖುಷಿಗಾಗಿ ಹೆಚ್ಚು ಹಣ ಖರ್ಚು ಮಾಡುವ ಯೋಗ ಬರುತ್ತದೆ
- ಕುಲದೇವರನ್ನು ಪ್ರಾರ್ಥನೆ ಮಾಡಿ
ವೃಷಭ
- ಪ್ರಯಾಣದಿಂದ ಲಾಭ ಪಡೆಯಬಹುದು ದೂರ ಪ್ರಯಾಣ ಬೇಡ
- ಸಹೋದ್ಯೋಗಿಗಳ ಜೊತೆಯಲ್ಲಿ ಸೌಹಾರ್ದ ಮನೋಭಾವವಿರುತ್ತದೆ
- ನಿಮ್ಮ ತತ್ವ ಸಿದ್ಧಾಂತಗಳಿಂದ ಜನರು ಪ್ರಭಾವಿತರಾಗುತ್ತಾರೆ
- ವ್ಯವಹಾರದಲ್ಲಿ ದೊಡ್ಡ ಬದಲಾವಣೆ ಕಾಣಬಹುದು
- ಆಸ್ತಿ ವಿವಾದಗಳು ಇದ್ದರೂ ಈ ದಿನ ಬಗೆಹರಿಯುವ ಸಾಧ್ಯತೆಗಳಿವೆ
- ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದ ಮಾತೆಯರಿಗೆ ಹೆಣ್ಣು ಮಕ್ಕಳಿಗೆ ಅಗ್ನಿಯ ತೊಂದರೆ ಆಗಬಹುದು
- ಜಾತವೇದಾಗ್ನಿಯನ್ನು ಪ್ರಾರ್ಥನೆ ಮಾಡಿ
ಮಿಥುನ
- ವ್ಯಾವಹಾರಿಕವಾಗಿ ವ್ಯಾಪಾರದಲ್ಲಿ ಹೆಚ್ಚು ಶ್ರಮ ಪಡಬೇಕಾದ ದಿನ
- ಖರ್ಚು ಹೆಚ್ಚಾಗಿ ಕೆಲವು ದುಷ್ಟ ಪರಿಣಾಮ ನಿಮಗಾಗಬಹುದು
- ಸ್ವಲ್ಪಮಟ್ಟಿಗೆ ದುರಾಸೆಯನ್ನು ದೂರ ಮಾಡುವುದು ಉತ್ತಮ
- ಸಂಬಂಧಗಳು ಚೆನ್ನಾಗಿದ್ದರೂ ಬೆಂಬಲ ಸಿಕ್ಕುವುದು ಕಷ್ಟ ಸಾಧ್ಯ
- ಪ್ರೇಮಿಗಳಿಗೆ ಉತ್ತಮ ದಿನ
- ನಿಮ್ಮ ಸಹೋದರಿಗೆ ತೊಂದರೆಯ ಸೂಚನೆ ಇದೆ
- ಮೂಲ ದುರ್ಗಾದೇವಿಯನ್ನು ಅರ್ಚಿಸಿ
ಕಟಕ
- ನಿಮಗಿರುವ ಗೌರವ ಸ್ಥಾನಗಳ ದುರುಪಯೋಗವಾಗಬಹುದು
- ಯಾವುದಾದರೂ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಕೆಯಾಗಬಹುದು
- ಬೆಲೆ ಬಾಳುವ ಪದಾರ್ಥಗಳು ನಷ್ಟವಾಗಬಹುದು
- ಮಾತೆಯರೊಂದಿಗೆ ಸಭ್ಯವಾಗಿ ವರ್ತಿಸಬೇಕಾಗಬಹುದು, ಅವಮಾನವಿದೆ
- ದೀರ್ಘಕಾಲದ ಅನಾರೋಗ್ಯದ ಸೂಚನೆಗಳಿವೆ
- ಭಗವತೀ ದುರ್ಗೆಯನ್ನು ನೀಲಿ ಹೂಗಳಿಂದ ಪ್ರಾರ್ಥನೆ ಮಾಡಿ
ಸಿಂಹ
- ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ಶುಭ ವಾರ್ತೆ ಕೇಳಬಹುದು
- ಮನಸ್ಸಿಗೆ ಮತ್ತು ವ್ಯವಹಾರದಲ್ಲಿ ಸಂತೋಷವಿರುತ್ತದೆ
- ಸ್ನೇಹಿತರ ಸಂಬಂಧಗಳು ಹೆಚ್ಚಾಗಬಹುದು
- ನಿಮ್ಮ ಕಾರ್ಯ ಕ್ಷೇತ್ರದಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುವುದಿಲ್ಲ
- ಅತಿಯಾದ ಉತ್ಸಾಹ ಕೆಲವು ಕೆಲಸಗಳನ್ನು ಹಾಳು ಮಾಡಬಹುದು
- ಸಾಯಂಕಾಲಕ್ಕೆ ಹೊಸ ಸಂಬಂಧದಲ್ಲಿ ಕಿರಿಕಿರಿ ಬೇಸರ
- ಶಾಂತಿಪ್ರದ ದುರ್ಗಾದೇವಿಯನ್ನು ಆರಾಧಿಸಿ ಕಪ್ಪು ಬಟ್ಟೆ ಧರಿಸಬಾರದು
ಕನ್ಯಾ
- ಹೊಸ ಹೊಸ ಲಾಭಕ್ಕಾಗಿ ಹಣ ಕೂಡಿಡಲು ನಿಮ್ಮ ಬುದ್ಧಿ ಖರ್ಚಾಗುತ್ತದೆ
- ನಿಮ್ಮ ವಿರೋಧಿಗಳು ನಿಮ್ಮನ್ನು ಹಣಿಯಲು ಪ್ರಯತ್ನಿಸುತ್ತಿರುತ್ತಾರೆ
- ಗಮನವಿಲ್ಲದ ಕೆಲಸಗಳಿಂದ ತಪ್ಪಿಗೆ ಸಿಲುಕುವ ಸಾಧ್ಯತೆಗಳಿವೆ ಗಮನಿಸಿ
- ಆಕಾಶ ಮಾರ್ಗದ ಪ್ರಯಾಣಕ್ಕೆ ಅಡ್ಡಿಯಾಗಬಹುದು
- ಸೋದರ ಮಾವನಿಗೆ ತೊಂದರೆ ಕಾಣಬಹುದು ಜಾಗೃತೆವಹಿಸಿ
- ವೈರೋಚನಿ ಶಕ್ತಿಯನ್ನು ಪ್ರಾರ್ಥನೆ ಮಾಡಿ
ತುಲಾ
- ಖಾಸಗಿ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ನೌಕರಿ ಚಿಂತೆ ಕಾಡಬಹುದು
- ಅಜೀರ್ಣ ಸಮಸ್ಯೆ ಅಥವಾ ಹೊಟ್ಟೆ ನೋವು ಕಾಣಬಹುದು
- ನಿಮ್ಮ ಕೆಟ್ಟ ಅಸಭ್ಯಗಳಿದ್ದರೆ ನಿಧಾನವಾಗಿ ಬಿಡುವುದು ಒಳ್ಳೆಯದು
- ರಹಸ್ಯ ಶತ್ರುಗಳ ಬಗ್ಗೆ ಎಚ್ಚರ ವಹಿಸಿ ಕಂಟಕ ಸೂಚನೆಯಿದೆ
- ವಾಹನ ಚಾಲನೆ ಬೇಡ, ಪ್ರಯಾಣ ಬೇಡ
- ವಾಯುವ್ಯಾಸ್ತ್ರ ಮಂತ್ರ ಶ್ರವಣ ಮಾಡಿ
ವೃಶ್ಚಿಕ
- ನಿಮ್ಮ ಕೆಲಸದ ಗುಣಮಟ್ಟ ಕಡಿಮೆಯಾಗಲು ಅವಕಾಶ ಮಾಡಿಕೊಡಬಾರದು
- ಆಡಳಿತ ವರ್ಗ ಪ್ರಬಲ ವ್ಯಕ್ತಿಗಳ ಮಾತು ಮನಸ್ಸಿಗೆ ಬೇಸರ ತರಬಹುದು
- ಜೊತೆಯಲ್ಲಿ ಕೆಲಸ ಮಾಡುವವರ ಸಹಕಾರ ದೊರೆಯುತ್ತದೆ
- ಆಹಾರದ ಬಗ್ಗೆ ಗಮನವಿರಲಿ ಶೀತ ಸಂಬಂಧಿ ತೊಂದರೆ ಕಾಣಬಹುದು
- ಕೋಪ ಅನರ್ಥಕ್ಕೆ ಕಾರಣವಾಗಬಹುದು ಸ್ನೇಹಿತರೊಂದಿಗೆ ಜಗಳ ಸಂಭವ
- ನಾರಾಯಣಿ ದುರ್ಗಾ ಶಕ್ತಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು
- ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ
- ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಜಯ
- ಪರಿಶ್ರಮಕ್ಕೆ ತಕ್ಕ ಪ್ರತಿಫಲ ವಸ್ತು ರೂಪದಲ್ಲಿ ಪ್ರಾಪ್ತಿಯಾಗಬಹುದು
- ಹಳದಿ ಬಟ್ಟೆಯನ್ನು ಧರಿಸಿ ಪ್ರಯಾಣ ಮಾಡಿ ಶುಭವಿದೆ
- ಮಕ್ಕಳಿಗೆ ಮಧ್ಯಾಹ್ನದ ನಂತರ ಕಿರಿಕಿರಿಯಾಗಬಹುದು
- ಅಲುಪ್ತಾ ಶಕ್ತಿಯನ್ನು ಪ್ರಾರ್ಥನೆ ಮಾಡಿ
ಮಕರ
- ಸ್ನೇಹಿತರ ಮತ್ತು ಸಂಬಂಧಿಕರ ಮಧ್ಯೆ ಮಾತಿನ ಘರ್ಷಣೆ ನಡೆಯಬಹುದು
- ರಾಜಕಾರಣಿಗಳಿಗೆ ಹಿನ್ನಡೆಯಾಗುವ ಸೂಚನೆಗಳಿವೆ
- ಮಾನಸಿಕ ಉದ್ವೇಗವು ನಿಮ್ಮೆಲ್ಲ ಕೆಲಸಗಳನ್ನು ಹಾಳು ಮಾಡಬಹುದು
- ಮಹಿಳೆಯರಿಗೆ ಸಿಹಿ ಸುದ್ದಿ ತಮ್ಮ ಕಾರ್ಯ ಸಾಧನೆ ಮಾಡುತ್ತೀರಿ
- ಯಾವುದೋ ಮರಣವಾರ್ತೆ ಮನಸ್ಸಿನ ಮೇಲೆ ಪ್ರಭಾವ ಬೀರಬಹುದು
- ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡಿ ಪುಣ್ಯ ಸಂಪಾದಿಸಿ
ಕುಂಭ
- ರಾಜಕೀಯ ವ್ಯಕ್ತಿಗಳಿಗೆ ಶುಭವಾಗುವ ದಿನವೆಂದು ಹೇಳಬಹುದು
- ಕುಂಭ ರಾಶಿಯ ಶಿಕ್ಷಕರು ಅಪವಾದವನ್ನು ಎದುರಿಸಬೇಕಾದ ದಿನ
- ಮನಸ್ಸಿಗೆ ಕಿರಿಕಿರಿಯಾಗಬಹುದು ತಾಳ್ಮೆ ಇರಲಿ
- ರಸ್ತೆ ಬದಿಯ ವ್ಯಾಪಾರಿಗಳು ಲಾಭ ಪಡೆಯಲು ಅವಕಾಶವಿದೆ
- ಮನೆಯ ಹೊರಗೆ ಒಳಗೆ ನೆಮ್ಮದಿ ಇಲ್ಲದಿರುವ ದಿನ
- ಮಹಾ ಶೂಲನಿಯನ್ನು ಪ್ರಾರ್ಥಿಸಿ
ಮೀನ
- ಈ ದಿನ ಚೆನ್ನಾಗಿದೆ ಎಂದುಕೊಳ್ಳುವ ಹೊತ್ತಿಗೆ ಸಮಸ್ಯೆ ಉದ್ಭವಿಸಬಹುದು
- ಕಾರ್ಯಕ್ಷೇತ್ರದಲ್ಲಿ ಅತಿಯಾದ ಒತ್ತಡ ಸಮಯ ಶಕ್ತಿ ಮೀರಿ ಕೆಲಸ
- ಕುಟುಂಬದಲ್ಲಿ ವಾಗ್ವಾದ ಬೇಡ
- ಮಾತಿನ ಸರಮಾಲೆಯಿಂದ ನಂಬಿಕೆ ಹಾಳಾಗಬಹುದು ಎಚ್ಚರವಿರಲಿ
- ಮಗುವಿನ ಭವಿಷ್ಯ ಗಮನಿಸಿ ಮಕ್ಕಳನ್ನು ಬಯಸುವವರಿಗೆ
- ಶುಭದಿನ ಪಂಚಮುಖಿ ಆಂಜನೇಯನನ್ನು ಪ್ರಾರ್ಥಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ