/newsfirstlive-kannada/media/post_attachments/wp-content/uploads/2025/04/CM-SIDDARAMAIAH-1.jpg)
ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ ಜೀವ ಕಳೆದುಕೊಂಡ ಇಬ್ಬರು ಕನ್ನಡಿಗರ ಮೃತದೇಹ ತವರಿಗೆ ತಲುಪಿವೆ. ಭರತ್ ಭೂಷಣ್ ಮತ್ತು ಮಂಜುನಾಥ್ ಮೃತದೇಹ ಬೆಂಗಳೂರು ಏರ್ಪೋರ್ಟ್ನಿಂದ ಅವರವರ ನಿವಾಸಕ್ಕೆ ತಲುಪಿಸಲಾಗಿದೆ.
ಇತ್ತ ಭರತ್ ಭೂಷಣ್ ಮೃತದೇಹ ಕಂಡು ತಾಯಿ ಕಣ್ಣೀರಿಟ್ಟಿದ್ದಾರೆ. ತಾಯಿ, ಪತ್ನಿ ಹಾಗೂ ಕುಟುಂಬಸ್ಥರು ಭರತ್ ಭೂಷಣ್ ಹಣೆಗೆ ಕುಂಕಮವನ್ನಿಟ್ಟು ಕಣ್ಣೀರಿಟ್ಟಿದ್ದಾರೆ. ಸದ್ಯ ಮತ್ತಿಕೆರೆಯ ಅವರ ಮನೆಯ ಬಳಿ ಅಂತಿನ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಕುಟುಂಬಸ್ಥರು ಮತ್ತು ಸ್ನೇಹಿತರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: ಉಗ್ರರ ಪೈಶಾಚಿಕ ಕೃತ್ಯ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ.. ಗಾಬರಿಯಿಂದ ಠಾಣೆಗೆ ಬಂದ ಗಂಭೀರ್..!
ಸಿಎಂ ಅವರಿಂದ ಅಂತಿಮ ದರ್ಶನ
ಸಿಎಂ ಸಿದ್ದರಾಮಯ್ಯ ಇನ್ನು ಭರತ್ ಭೂಷಣ್ ಅಂತಿಮ ದರ್ಶನ ಪಡೆದಿದ್ದಾರೆ. ಸಿಎಂ ಜೊತೆಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಕೂಡಾ ಭರತ್ ಭೂಷಣ್ ನಿವಾಸಕ್ಕೆ ಆಗಮಿಸಿದ್ದು, ಅಂತಿಮ ದರ್ಶನ ಪಡೆದಿದ್ದಾರೆ. ಅಂತಿಮ ದರ್ಶನದ ಬಳಿಕ ಸಿಎಂ ಸಿದ್ದರಾಮಯ್ಯ ಮೃತ ಭರತ್ ಭೂಷಣ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದು, ಇದೇ ವೇಳೆ ಸಿಎಂ ಭರತ್ ಮಗನ ತಲೆ ಸವರಿದ್ರು. ಭರತ್ ಪತ್ನಿ ಹಾಗೂ ಸಹೋದರ ಘಟನೆ ಏಗಾಯ್ತು ಅನ್ನೋದನ್ನ ಸಿಎಂಗೆ ವಿವರಿಸಿದ್ದಾರೆ.
ಇದನ್ನೂ ಓದಿ: ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ತಾತ್ಕಾಲಿಕ ಅಮಾನತು; ಹನಿ ಹನಿ ನೀರಿಗೂ ಪರದಾಡಲಿದೆ ಪಾಕ್..!
ಭರತ್ ಭೂಷಣ್ ಅಂತಿಮ ದರ್ಶನದ ಬಳಿಕ ಮಾತ್ನಾಡಿದ ಸಿಎಂ ಸಿದ್ದರಾಮಯ್ಯ ಸರ್ಕಾರದಿಂದ ಮೃತರ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ ಕೊಡ್ತೀವಿ ಎಂದಿದ್ದಾರೆ. ಜೊತೆಗೆ ರಾಮಲಿಂಗಾರೆಡ್ಡಿ ಇಲ್ಲೇ ಇರ್ತಾರೆ. ಶಿವಮೊಗ್ಗದಲ್ಲಿ ಮಧುಬಂಗಾರಪ್ಪ ಅವರಿಗೆ ಹೋಗಲು ಹೇಳಿದ್ದೇನೆ. ಸಂತೋಷ್ ಲಾಡ್ರನ್ನ ಕಾಶ್ಮೀರಕ್ಕೆ ಕಳಿಸಿದ್ದೀವಿ.. ಕನ್ನಡಿಗರು ಯಾರೆಲ್ಲ ಇದ್ದಾರೆ ಶ್ರೀನಗರದಲ್ಲಿ ಅವರನ್ನೆಲ್ಲ ವಾಪಸ್ ಕರೆದುಕೊಂಡು ಬರಲಿಕ್ಕೆ ತಿಳಿಸಿದ್ದೇನೆ. ಮೃತರಿಗೆ ಸರ್ಕಾರಿ ಗೌರವ ಕೊಡಲಾಗುತ್ತೆ ಅಂತ ಹೇಳಿದ್ರು. ಜೊತೆಗೆ ಕೇಂದ್ರ ಸರ್ಕಾರಕ್ಕೆ ಮತ್ತೆ ಈ ರೀತಿಯ ಕೃತ್ಯ ಮರುಕಳಿಸದಂತೆ ನೋಡಿಕೊಳ್ಳಬೇಕು ಅಂತ ಹೇಳಿದ್ರು.
ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತರಾದ ಭರತ್ ಭೂಷಣ್ ಅವರಿಗೆ ಕನ್ನಡ ನಾಡಿನ ಸಮಸ್ತ ಕನ್ನಡಿಗರ ಪರವಾಗಿ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದೇನೆ. ಉತ್ತಮ ಶಿಕ್ಷಣ ಪಡೆದಿದ್ದ, ತರುಣರಾಗಿದ್ದ ಭರತ್ ಭೂಷಣ್ ಅವರು ಉಗ್ರರ ದಾಳಿಗೆ ಬಲಿಯಾಗಿರುವುದು ದುರದೃಷ್ಟಕರ. ಉಗ್ರರ ದಾಳಿ ಅಮಾನವೀಯವಾದ ಕೃತ್ಯವಾಗಿದ್ದು, ತೀವ್ರವಾಗಿ ಖಂಡಿಸುತ್ತೇನೆ.… pic.twitter.com/WrkAesyVGy
— CM of Karnataka (@CMofKarnataka) April 24, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ