newsfirstkannada.com

ಬಸ್​ ಕಂಡಕ್ಟರ್​​ ಆಗಲಿದ್ದಾರೆ ಸಿಎಂ ಸಿದ್ದರಾಮಯ್ಯ; ಜೂ.11ಕ್ಕೆ ಶಕ್ತಿ ಯೋಜನೆಗೆ ಚಾಲನೆ

Share :

09-06-2023

    ಬಸ್​ ಏರಿ ರೈಟ್​ ರೈಟ್​​ ಎನ್ನರಿದ್ದಾರೆ ಸಿಎಂ

    ಜೂನ್​ 11ಕ್ಕೆ ಶಕ್ತಿ ಯೋಜನೆಗೆ ಚಾಲನೆ

    ಕಂಡೆಕ್ಟರ್​ ಆಗಲಿದ್ದಾರೆ ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್​ ಸರ್ಕಾರ ಶಕ್ತಿ ಯೋಜನೆಯನ್ನು ಘೋಷಿಸಿದೆ. ಮಹಿಳೆಯರಿಗಾಗಿ ಜಾರಿಗೆ ತಂದ ಈ ಯೋಜನೆಗೆ ಚಾಲನೆ ಸಿಗುವ ಸಮಯ ಬಂದಿದೆ. ಸಿಎಂ ಸಿದ್ದರಾಮಯ್ಯನವರೇ ಶಕ್ತಿ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಕಂಡಕ್ಟರ್ ಸಿದ್ದರಾಮಯ್ಯ

ಮಹಿಳೆಯರಿಗಾಗಿ ತಂದ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯನ್ನ ಜಾರಿಗೆ ತರಲು ದಿನಾಂಕ ನಿಗದಿಯಾಗಿದ್ದು, ಸಿಎಂ ಸಿದ್ದರಾಮಯ್ಯವರು ಬಸ್​ ಕಂಡೆಕ್ಟರ್​ ಆಗುವ ಮೂಲಕ ಚಾಲನೆ ಕೊಡಲಿದ್ದಾರೆ. ಮಾತ್ರವಲ್ಲದೆ, ಬಸ್​ನಲ್ಲಿ ಟಿಕೆಟ್ ನೀಡುವ ಮೂಲಕ ಕಂಡಕ್ಟರ್ ಆಗಲಿದ್ದಾರೆ. ಬಸ್ ನಂಬರ್ 43ಕ್ಕೆ ಕಂಡಕ್ಟರ್ ಆಗಲಿದ್ದಾರೆ. ಅಂದಹಾಗೆಯೇ ಜೂ.11ಕ್ಕೆ ಈ ಯೋಜನೆಗೆ ಚಾಲನೆ ಸಿಗಲಿದೆ. ಶಕ್ತಿ ಯೋಜನೆಗೆ ಚಾಲನೆ ಕೊಟ್ಟ ಬಳಿಕ ಸಿದ್ದರಾಮಯ್ಯನವರು ವಿಧಾನಸೌಧದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಇತರೆ ಗ್ಯಾರಂಟಿಗಳಿಗೂ ಚಾಲನೆ

ಕಾಂಗ್ರೆಸ್​ ಸರ್ಕಾರ ಇತರೆ ಗ್ಯಾರಂಟಿಗಳಿಗೂ ವಿಭಿನ್ನವಾಗಿ ಚಾಲನೆ ನೀಡಲು ಚಿಂತಿಸಿದೆ. ಜು.1ರಂದು ಮೈಸೂರಲ್ಲಿ ಅನ್ನ ಭಾಗ್ಯ ಯೋಜನೆಯ ಉದ್ಘಾಟನೆ ನಡೆಸುವ ಬಗ್ಗೆ ಯೋಚಿಸಲಾಗಿದೆ. ಆ.1ಕ್ಕೆ ಕಲಬುರಗಿಯಲ್ಲಿ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡುವ ಬಗ್ಗೆ ಚಿಂತಿಸಿದೆ. ಆ.17 ಅಥವಾ 18ಕ್ಕೆ ಮನೆಯೊಡತಿಗೆ ₹2 ಸಾವಿರ ನೀಡುವ ಗೃಹ ಲಕ್ಷ್ಮಿ ಜಾರಿಗೆ ತರಲು ಚಿಂತಿಸಿದ್ದು, ಬೆಳಗಾವಿಯಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಸರ್ಕಾರ ಚಾಲನೆ ನೀಡಲಿದೆ. ಇನ್ನು  ಆಗಸ್ಟ್ ತಿಂಗಳಲ್ಲೇ ಯುವ ನಿಧಿ ಯೋಜನೆಯನ್ನೂ ಉದ್ಘಾಟಿಸುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಸ್​ ಕಂಡಕ್ಟರ್​​ ಆಗಲಿದ್ದಾರೆ ಸಿಎಂ ಸಿದ್ದರಾಮಯ್ಯ; ಜೂ.11ಕ್ಕೆ ಶಕ್ತಿ ಯೋಜನೆಗೆ ಚಾಲನೆ

https://newsfirstlive.com/wp-content/uploads/2023/06/Siddramaiah-1-1.jpg

    ಬಸ್​ ಏರಿ ರೈಟ್​ ರೈಟ್​​ ಎನ್ನರಿದ್ದಾರೆ ಸಿಎಂ

    ಜೂನ್​ 11ಕ್ಕೆ ಶಕ್ತಿ ಯೋಜನೆಗೆ ಚಾಲನೆ

    ಕಂಡೆಕ್ಟರ್​ ಆಗಲಿದ್ದಾರೆ ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್​ ಸರ್ಕಾರ ಶಕ್ತಿ ಯೋಜನೆಯನ್ನು ಘೋಷಿಸಿದೆ. ಮಹಿಳೆಯರಿಗಾಗಿ ಜಾರಿಗೆ ತಂದ ಈ ಯೋಜನೆಗೆ ಚಾಲನೆ ಸಿಗುವ ಸಮಯ ಬಂದಿದೆ. ಸಿಎಂ ಸಿದ್ದರಾಮಯ್ಯನವರೇ ಶಕ್ತಿ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಕಂಡಕ್ಟರ್ ಸಿದ್ದರಾಮಯ್ಯ

ಮಹಿಳೆಯರಿಗಾಗಿ ತಂದ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯನ್ನ ಜಾರಿಗೆ ತರಲು ದಿನಾಂಕ ನಿಗದಿಯಾಗಿದ್ದು, ಸಿಎಂ ಸಿದ್ದರಾಮಯ್ಯವರು ಬಸ್​ ಕಂಡೆಕ್ಟರ್​ ಆಗುವ ಮೂಲಕ ಚಾಲನೆ ಕೊಡಲಿದ್ದಾರೆ. ಮಾತ್ರವಲ್ಲದೆ, ಬಸ್​ನಲ್ಲಿ ಟಿಕೆಟ್ ನೀಡುವ ಮೂಲಕ ಕಂಡಕ್ಟರ್ ಆಗಲಿದ್ದಾರೆ. ಬಸ್ ನಂಬರ್ 43ಕ್ಕೆ ಕಂಡಕ್ಟರ್ ಆಗಲಿದ್ದಾರೆ. ಅಂದಹಾಗೆಯೇ ಜೂ.11ಕ್ಕೆ ಈ ಯೋಜನೆಗೆ ಚಾಲನೆ ಸಿಗಲಿದೆ. ಶಕ್ತಿ ಯೋಜನೆಗೆ ಚಾಲನೆ ಕೊಟ್ಟ ಬಳಿಕ ಸಿದ್ದರಾಮಯ್ಯನವರು ವಿಧಾನಸೌಧದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಇತರೆ ಗ್ಯಾರಂಟಿಗಳಿಗೂ ಚಾಲನೆ

ಕಾಂಗ್ರೆಸ್​ ಸರ್ಕಾರ ಇತರೆ ಗ್ಯಾರಂಟಿಗಳಿಗೂ ವಿಭಿನ್ನವಾಗಿ ಚಾಲನೆ ನೀಡಲು ಚಿಂತಿಸಿದೆ. ಜು.1ರಂದು ಮೈಸೂರಲ್ಲಿ ಅನ್ನ ಭಾಗ್ಯ ಯೋಜನೆಯ ಉದ್ಘಾಟನೆ ನಡೆಸುವ ಬಗ್ಗೆ ಯೋಚಿಸಲಾಗಿದೆ. ಆ.1ಕ್ಕೆ ಕಲಬುರಗಿಯಲ್ಲಿ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡುವ ಬಗ್ಗೆ ಚಿಂತಿಸಿದೆ. ಆ.17 ಅಥವಾ 18ಕ್ಕೆ ಮನೆಯೊಡತಿಗೆ ₹2 ಸಾವಿರ ನೀಡುವ ಗೃಹ ಲಕ್ಷ್ಮಿ ಜಾರಿಗೆ ತರಲು ಚಿಂತಿಸಿದ್ದು, ಬೆಳಗಾವಿಯಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಸರ್ಕಾರ ಚಾಲನೆ ನೀಡಲಿದೆ. ಇನ್ನು  ಆಗಸ್ಟ್ ತಿಂಗಳಲ್ಲೇ ಯುವ ನಿಧಿ ಯೋಜನೆಯನ್ನೂ ಉದ್ಘಾಟಿಸುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More