/newsfirstlive-kannada/media/post_attachments/wp-content/uploads/2023/06/Siddaramaiah-2.jpg)
ಒಂದಡೆ ಗ್ಯಾರಂಟಿ ರಾಜಕೀಯ. ಮತ್ತೊಂದೆಡೆ ಯೋಜನೆಗಳ ಫಲಾಫಲ. ಸದ್ಯ ಸರ್ಕಾರ ನುಡಿದಂತೆ ನಡೆದರು. ಅದಕ್ಕೆ ತಕ್ಕಂತೆ ಕ್ರೋಢೀಕರಣಕ್ಕೆ ಮುಂದಾಗಿದೆ. ಹೀಗಾಗಿ ಸಿದ್ದರಾಮಯ್ಯ ಸರ್ಕಾರ ಹಣದ ಸಂಗ್ರದತ್ತ ಗುರಿ ಇಟ್ಟಿದ್ದು, ಆದಾಯ ಮೂಲ ಹೊಂದಿರುವ ಇಲಾಖೆಗಳಿಗೆ ಟಾಸ್ಕ್ಕೊಟ್ಟಿದೆ.
35 ಸಾವಿರ ಕೋಟಿ ಟಾರ್ಗೆಟ್
ಕಾಂಗ್ರೆಸ್ ಸರ್ಕಾರ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಸಿದ್ಧತೆ ಮಾಡಿಕೊಂಡಿದೆ. ಗ್ಯಾರಂಟಿ ಯೋಜನೆಗಳ ಜಾರಿಗಾಗಿ ಹಣ ಸಂಗ್ರಹದ ಗುರಿ ಹೊಂದಿದೆ. 2021-22ರ ಸಾಲಿನಲ್ಲಿ 25 ಸಾವಿರ ಕೋಟಿ ಸಂಗ್ರಹದ ಗುರಿ ಹೊಂದಿತ್ತು. ಆದರೆ ಕೊಟ್ಟ ಟಾರ್ಗೆಟ್ಗಿಂತ 26 ಸಾವಿರ ಕೋಟಿ ಸಂಗ್ರಹ ಮಾಡಿತ್ತು. ಆದರೆ ಈ ಬಾರಿ ಆದಾಯ ಬರುವಂತಹ ಅಬಕಾರಿ ಇಲಾಖೆಗೆ 35 ಸಾವಿರ ಕೋಟಿ ಸಂಗ್ರಹದ ಟಾರ್ಗೆಟ್ ಕೊಟ್ಟಿದೆ. ಸಿಎಂ ಸಿದ್ದರಾಮಯ್ಯನವರು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್ಗೆ ಸಿಎಂ ಹೆಚ್ಚಿನ ಆದಾಯ ಸಂಗ್ರಹಿಸಲು ಸೂಚನೆ ನೀಡಿದ್ದಾರೆ.
ಅಧಿಕ ಹಣ ಸಂಗ್ರಹದ ಗುರಿ
ಅಚ್ಚರಿಯ ಸಂಗತಿ ಎಂದರೆ ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚಿನ ಹಣ ಸಂಗ್ರಹದ ಗುರಿ ಇಟ್ಟುಕೊಂಡಿದೆ. ಸದ್ಯ ಗ್ಯಾರಂಟಿ ಯೋಜನೆ ಬಳಿಕ ಸರ್ಕಾರ ಕೈ ಸುಟ್ಟುಕೊಂಡಿದೆಯಾ ಎಂಬ ಪ್ರಶ್ನೆ ಶ್ರೀಸಾಮಾನ್ಯರನ್ನು ಕಾಡುತ್ತಿದ್ದು, ಇದಕ್ಕಾಗಿ ಆದಾಯ ಕ್ರೋಢೀಕರಣಕ್ಕೆ ಮುಂದಾಗಿದೆಯಾ ಎಂಬ ಪ್ರಶ್ನೆ ಉದ್ಭವವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ