Budget; ಕೃಷಿ ಅಭಿವೃದ್ಧಿಗೆ 52 ಕೋಟಿ ಮೀಸಲು; ರಾಜ್ಯದ ಜನರಿಗೆ ಸಿದ್ದು ಏನೆಲ್ಲ ಕೊಟ್ಟಿದ್ದಾರೆ..?

author-image
Bheemappa
Updated On
Budget; ಕೃಷಿ ಅಭಿವೃದ್ಧಿಗೆ 52 ಕೋಟಿ ಮೀಸಲು; ರಾಜ್ಯದ ಜನರಿಗೆ ಸಿದ್ದು ಏನೆಲ್ಲ ಕೊಟ್ಟಿದ್ದಾರೆ..?
Advertisment
  • ಸಚಿವ ಸಂಪುಟದಲ್ಲಿ ಮುಂಗಡಪತ್ರಕ್ಕೆ ಅನುಮೋದನೆ ಪಡೆದ ಸಿಎಂ
  • ಬಜೆಟ್​ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿರುವ ಸಿಲಿಕಾನ್ ಸಿಟಿ ಜನರು
  • ಯಾವ್ಯಾವ ಕ್ಷೇತ್ರಗಳಿಗೆ ಬಜೆಟ್​ನಲ್ಲಿ ಹಣದ ಹೊಳೆ ಹರಿಯಲಿದೆ?

ಬೆಂಗಳೂರು: 2025-26ನೇ ಸಾಲಿನ ಕರ್ನಾಟಕ ಆಯವ್ಯಯವನ್ನು ಸಿಎಂ ಸಿದ್ದರಾಮಯ್ಯ ಅವರು ಮಂಡಿಸುತ್ತಿದ್ದು ಇದು ಅವರ 16ನೇ ಬಜೆಟ್ ಆಗಿದೆ. ಕರ್ನಾಟಕದ ಮುಖ್ಯಮಂತ್ರಿಗಳಲ್ಲಿ ಹೆಚ್ಚು ಬಜೆಟ್​ ಮಂಡನೆ ಮಾಡಿದವರಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಮೊದಲ ಸ್ಥಾನದಲ್ಲಿದ್ದಾರೆ. ಕಳೆದ ಬಾರಿ 3.71 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದರು. ಆದರೆ ಈ ಬಾರಿ ಇನ್ನು ಹೆಚ್ಚಿನ ಮೊತ್ತ ಹೊಂದಿದ ಬಜೆಟ್ ಮಂಡಿಸುತ್ತಿದ್ದಾರೆ. ಜೊತೆಗೆ ಸಿಎಂ ಸಿದ್ದರಾಮಯ್ಯರ ಬಜೆಟ್​ ಕುರಿತು ಜನರು ಕೂಡ ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ.

ಮುಂಗಡ ಪತ್ರದ ಗಾತ್ರವು 4.09 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸುತ್ತಿದ್ದಾರೆ. ಹೊಸ ಹೊಸ ಯೋಜನೆಗಳನ್ನು, ಅಭಿವೃದ್ಧಿ ಪೂರಕ ಕಾರ್ಯಕ್ರಮಗಳನ್ನು, ಕಾಮಗಾರಿ ಘೋಷಣೆ ಮಾಡಲಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು 2025ರ ಬಜೆಟ್​ ಅನ್ನು, ಬಜೆಟ್ ಎಂಬುದು ಬರಿ ಹಾಳೆಗಳ ಮೇಲಿನ ಲೆಕ್ಕವಲ್ಲ, ಕರ್ನಾಟಕ ರಾಜ್ಯದ 7 ಕೋಟಿ ಕನ್ನಡಿಗರ ಭವಿಷ್ಯ ರೂಪಿಸುವ ಕೈಪಿಡಿ ಎನ್ನುವುದು ನನ್ನ ನಂಬಿಕೆ ಎನ್ನುವಂತ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ.

publive-image

ಸಿಎಂ ಸಿದ್ದರಾಮಯ್ಯ ಭಾಷಣದ ಹೈಲೈಟ್ಸ್

  • ಬಜೆಟ್ ಮಂಡನೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ
  • 2025-26ನೇ ಸಾಲಿನ ಬಜೆಟ್ ಗಾತ್ರ- ₹4,09,549 ಲಕ್ಷ ಕೋಟಿ
  • 2025-26ನೇ ಸಾಲಿನ ಬಜೆಟ್ ಮಂಡಿಸುತ್ತಿರುವ ಸಿಎಂ
  • 4.09 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸುತ್ತಿರುವ ಸಿಎಂ
  • 7 ಕೋಟಿ ಜನರ ಬದುಕಿನ ಭರವಸೆಯ ಉಸಿರು ಬಜೆಟ್
  • ಕುವೆಂಪು ಬರೆದ ಪದ್ಯ ಹೇಳಿದ ಸಿಎಂ ಸಿದ್ದರಾಮಯ್ಯ
  • ರಾಜ್ಯದ ಪ್ರತಿ ಪ್ರಜೆಯ ಕನಸು ಸಾಕಾರಗೊಳಿಸೋ, ನಾಳೆಯ ಭರವಸೆ
  • ಬ್ರ್ಯಾಂಡ್​ ಬೆಂಗಳೂರು ಹೆಸರಲ್ಲಿ ಮಹತ್ವದ ಯೋಜನೆಗಳು ಜಾರಿ
  • 1 ಲಕ್ಷ ಕೋಟಿಗೂ ಅಧಿಕ ಮೊತ್ತದ ಹಣ ಸರ್ಕಾರದ ಫಲಾನುಭವಿಗಳಿಗೆ ನೀಡಲಾಗಿದೆ
  • ಕಲ್ಯಾಣ ಇಲಾಖೆಗಳ ಮೂಲಕ ಅಸಹಾಕರ ಅಭಿವೃದ್ಧಿಗೆ ಹೊತ್ತು ನೀಡಲಾಗಿದೆ

publive-image

  • ಇಂಧನ ಇಲಾಖೆಗೆ 26,896 ಕೋಟಿ ರೂಪಾಯಿ ಅನುದಾನ
  • ಪಶುಸಂಗೋಪನೆ ಹಾಗೂ ಮೀನುಗಾರಿಕೆಗೆ 3,977 ಕೋಟಿ ರೂಪಾಯಿ
  • ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್​ ಇಲಾಖೆಗೆ 26,735 ಕೋಟಿ ರೂ. ಅನುದಾನ
  • ಬಿಸಿಯೂಟ ಕಾರ್ಯಕರ್ತೆಯರ ಗೌರವಧನವು 1000 ರೂಪಾಯಿ ಹೆಚ್ಚಳ
  • ನೀರಾವರಿ ಇಲಾಖೆಗೆ 22,181 ಕೋಟಿ ರೂಪಾಯಿ ನೀಡಲಾಗಿದೆ
  • ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ 6 ದಿನಗಳಿಗೆ ವಿಸ್ತರಣೆ
  • ವಾರದಲ್ಲಿ 6 ದಿನ ಮೊಟ್ಟೆ, ಬಾಳೆಹಣ್ಣ ವಿತರಣೆ ಮಾಡಲು 1,500 ಕೋಟಿ ರೂಪಾಯಿ
  • ಗ್ಯಾರಂಟಿ ಕೊಡುಗೆಗಳು ಅಲ್ಲ, ಅವುಗಳೆಲ್ಲಾ ಸಾಮಾಜಿಕ ತತ್ವದ ಹೂಡಿಕೆ
  • ಕೃಷಿ ಯಾಂತ್ರಿಕರಣ ಕಾರ್ಯಕ್ರಮದಡಿ 50 ಸಾವಿರ ರೈತರಿಗೆ ನೆರವು

publive-image

  • ಬೆಂಗಳೂರಿನ ಅನುದಾನ 7 ಸಾವಿರ ಕೋಟಿ ರೂಪಾಯಿಗೆ ಏರಿಕೆ
  • ಸಿಲಿಕಾನ್ ಸಿಟಿಯಲ್ಲಿ ವಿಶೇಷ ಪರ್ಪಲ್ ವಾಹನಗಳ ಸ್ಥಾಪನೆ
  • ಯೋಜನೆಗಳ ಅನುಷ್ಠಾನ ಮಾಡಲು ಸಂಸ್ಥೆಯನ್ನು ಸ್ಥಾಪನೆ ಮಾಡಲಾಗುವುದು
  • ಉದ್ಯಾನ ನಗರಿ ಬೆಂಗಳೂರಿನ ಟನಲ್ ಯೋಜನೆಗೆ 40 ಸಾವಿರ ಕೋಟಿ ರೂಪಾಯಿ
  • 19 ಸಾವಿರ ಕೋಟಿ ರೂಪಾಯಿ ಶೂರಿಟಿ ನೀಡಲಿರುವ ರಾಜ್ಯ ಸರ್ಕಾರ
  • ಕರ್ನಾಟಕವನ್ನು ರಾಷ್ಟ್ರದಲ್ಲೇ ಮುಂಚೂಣಿಯಲ್ಲಿರುವ ರಾಜ್ಯವನ್ನಾಗಿ ಮಾಡಲಾಗುವುದು
  • ರೈತರ ಆದಾಯ ಪೌಷ್ಟಿಕ ಭದ್ರತೆ ಸುಧಾರಿಸಲು 88 ಕೋಟಿ ರೂ.
  • ಕೃಷಿ ವಲಯದ ಅಭಿವೃದ್ಧಿಗೆ 51,339 ಕೋಟಿ ರೂಪಾಯಿ ಮೀಸಲು
  • ಕೃಷಿ ಭಾಗ್ಯ ಯೋಜನೆ- 3 ಲಕ್ಷಕ್ಕಿಂತ ಹೆಚ್ಚು ಕೃಷಿ ಹೊಂಡ ನಿರ್ಮಾಣ
  • ರಸಗೊಬ್ಬರ, ಬಿತ್ತನೆ ಬೀಜಗಳ ಗುಣಮಟ್ಟ ಪರೀಕ್ಷೆಗೆ 58 ಪ್ರಯೋಗಾಲಯ

publive-image

  • ಶಿಕ್ಷಣ ಇಲಾಖೆಗೆ 45,286 ಕೋಟಿ ರೂಪಾಯಿ ಅನುದಾನ
  • ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 34,955 ಕೋಟಿ ರೂಪಾಯಿ
  • ಮಹಿಳೆಯರಿಗೆ ಡಿಜಿಟಲ್ ಮತ್ತು ಆರ್ಥಿಕ ಸಾಕ್ಷರತೆ
  • ಲೋಕೋಪಯೋಗಿ ಇಲಾಖೆಗೆ 11, 841 ಕೋಟಿ ಅನುದಾನ
  • ಮಲ್ಟಿಪ್ಲೆಕ್ಸ್​​ಗಳಿಗೆ ಏಕರೂಪ ದರ ನಿಗದಿ ಮಾಡಿದ ಸರ್ಕಾರ
  • ಸಿನಿಮಾ ಟಿಕೆಟ್ ದರ 200 ರೂಪಾಯಿ ನಿಗದಿ ಮಾಡಿದ ಸರ್ಕಾರ
  • ಮಂಡ್ಯದಲ್ಲಿ ಕೃಷಿ ವಿಶ್ವ ವಿದ್ಯಾಲಯ ಸ್ಥಾಪನೆಗೆ 25 ಕೋಟಿ ಅನುದಾನ
  • ಪ್ರಸಕ್ತ ಸಾಲಿನಲ್ಲಿ ಕೃಷಿ ವಿವಿಯ ತರಗತಿಗಳು ಆರಂಭ
  • ಅಬಕಾರಿ ಇಲಾಖೆಯಿಂದ 40 ಸಾವಿರ ಕೋಟಿ ರೂ. ಟಾರ್ಗೆಟ್
  • ಶಿಕ್ಷಣ ಇಲಾಖೆಗೆ ಅತಿ ಹೆಚ್ಚು ಅನುದಾನ ಘೋಷಣೆ

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment