ಡಿ.ಕೆ ಶಿವಕುಮಾರ್​ ಆಟಕ್ಕೆ ಬ್ರೇಕ್​​ ಹಾಕಲು ಮುಂದಾದ ಸಿಎಂ ಸಿದ್ದರಾಮಯ್ಯ; ಸದ್ಯದಲ್ಲೇ ಹೈಕಮಾಂಡ್​​ ಭೇಟಿ

author-image
Ganesh Nachikethu
Updated On
ಡಿ.ಕೆ ಶಿವಕುಮಾರ್​ ಆಟಕ್ಕೆ ಬ್ರೇಕ್​​ ಹಾಕಲು ಮುಂದಾದ ಸಿಎಂ ಸಿದ್ದರಾಮಯ್ಯ; ಸದ್ಯದಲ್ಲೇ ಹೈಕಮಾಂಡ್​​ ಭೇಟಿ
Advertisment
  • ಸಿಎಂ, ಡಿಸಿಎಂ ನಡುವೆ ಸಿಎಂ ಅಧಿಕಾರ ಹಂಚಿಕೆ ವಾರ್​
  • ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಗೆ ಸಿದ್ದು ಬಣ ತಂತ್ರ!
  • ಅಧಿಕಾರ ಹಂಚಿಕೆಯಾದರೆ ದಲಿತ ಸಿಎಂಗೆ ಡಿಮ್ಯಾಂಡ್​

ಬೆಂಗಳೂರು: ಒಂದೆಡೆ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​, ಇಷ್ಟಾರ್ಥ ಸಿದ್ಧಿಗಾಗಿ ಶತ್ರು ಸಂಹಾರದ ಪೂಜೆ ಮೊರೆ ಹೋಗಿದ್ದಾರೆ. ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಬಣ ಕೂಡ ದಲಿತ ದಾಳ ಉರುಳಿಸುತ್ತಿದೆ. ಡಿನ್ನರ್​ ಮೀಟಿಂಗ್​ಗೆ ಹೈಕಮಾಂಡ್​ ಮೂಲಕ ಬ್ರೇಕ್​ ಹಾಕಿಸಿ ಮೇಲುಗೈ ಸಾಧಿಸಿದ್ದ ಡಿಕೆಶಿಗೆ ಠಕ್ಕರ್​ ಕೊಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ದಲಿತ ಸಚಿವರ ಸಭೆಗೆ ಅನುಮತಿ ಕೊಡಿಸಲು ಹೈಕಮಾಂಡ್​ ಭೇಟಿಗೆ ಸಜ್ಜಾಗಿದ್ದಾರೆ.

ಅನುಮತಿ ಕೊಡಿಸುವ ಜವಾಬ್ದಾರಿ ಹೊತ್ತ ಸಿದ್ದರಾಮಯ್ಯ

ರಾಜ್ಯ ಕಾಂಗ್ರೆಸ್​ನಲ್ಲಿ ದಿನಕ್ಕೊಂದು ಬೆಳವಣಿಗಳು ನಡೆಯುತ್ತಿದೆ. ಮನೆಯೊಂದು ಮೂರು ಬಾಗಿಲಾಗಿರುವ ಹಸ್ತದ ಮನೆಯೊಳಗಿನ ಕೋಲ್ಡ್​ವಾರ್​ ತಾರಕಕ್ಕೇರಿದೆ. ಅಧಿಕಾರ ಹಂಚಿಕೆ ಸೂತ್ರ; ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಗುಸುಗುಸು; ಸಾಲು ಸಾಲು ಡಿನ್ನರ್​ ಪಾಲಿಟಿಕ್ಸ್​ಗಳಿಂದ ಕಾಂಗ್ರೆಸ್​ನಲ್ಲಿ ಯಾವುದು ಸರಿ ಇಲ್ಲ ಎಂಬುದನ್ನು ಬಹಿರಂಗ ಮಾಡಿದೆ. ಮೊನ್ನೆ ಸಿಎಂ ಆಪ್ತರು ಡಿನ್ನರ್ ಮೀಟಿಂಗ್​ ನಡೆಸಿದ ಬೆನ್ನಲ್ಲೇ ಗೃಹಸಚಿವರು, ದಲಿತ ಸಚಿವರು, ಶಾಸಕರಿಗೆ ಔತಣಕೂಟ ಆಯೋಜಿಸಲು ನಿರ್ಧರಿಸಿದ್ರು. ಆದ್ರೆ, ಡಿಸಿಎಂ ಡಿ.ಕೆ ಶಿವಕುಮಾರ್​, ಹೈಕಮಾಂಡ್​ ಗಮನಕ್ಕೆ ತಂದು ಇದಕ್ಕೆ ಬ್ರೇಕ್​ ಹಾಕುವಲ್ಲಿ ಪರೋಕ್ಷವಾಗಿ ಮೇಲುಗೈ ಸಾಧಿಸಿದ್ರು. ಇದು ಕಾಂಗ್ರೆಸ್​ನ ದಲಿತ ಸಚಿವರ ಕಣ್ಣನ್ನು ಕೆಂಪಗಾಗಿಸಿದೆ. ಇದೀಗ ಸಿಎಂ ಸಿದ್ದರಾಮಯ್ಯ ಕೂಡ ದಾಳ ಉರುಳಿಸಲು ಮುಂದಾಗಿದ್ದಾರೆ.

ಸೋಮವಾರ ದೆಹಲಿಗೆ ತೆರಳಲು ಸಿಎಂ ಸಿದ್ದರಾಮಯ್ಯ ಸಜ್ಜು

ದಲಿತ ಸಚಿವರ ಸಭೆಗೆ ಹೈಕಮಾಂಡ್​ ಬ್ರೇಕ್​ ಹಾಕಿದ ಬಳಿಕ, ಸಿದ್ದರಾಮಯ್ಯ ಬಣದವರು ಡಿಸಿಎಂ ಡಿಕೆಶಿ ಮೇಲೆ ಕೆಂಡಕಾರಲು ಶುರು ಮಾಡಿದ್ರು. ಗೃಹಸಚಿವ ಪರಮೇಶ್ವರ್​ ಕೂಡ ಔತಣಕೂಟ ರದ್ದಾಗಿಲ್ಲ, ತಾತ್ಕಾಲಿಕವಾಗಿ ಮುಂದೂಡಿಕೆ ಆಗಿದೆ ಅಷ್ಟೆ ಎಂದು ಸಮಾಜಾಯಿಷಿ ನೀಡಿದ್ರು. ಬಳಿಕ ಕೆಎನ್​ ರಾಜಣ್ಣ ಪರಮೇಶ್ವರ್​ ಮನೆಗೆ ತೆರಳಿ ಮಾತುಕತೆ ನಡೆಸಿ ಅಸಮಾದಾನ ಹೊರಹಾಕಿದ್ದರು. ಅತ್ತ ಸಚಿವ ಸತೀಶ್​ ಜಾರಕಿಹೊಳಿ ಕೂಡ ಪರೋಕ್ಷವಾಗಿ ಡಿಸಿಎಂ ನಡೆಗೆ ಗರಂ ಆಗಿದ್ದರು.

ಇನ್ನು ಡಿಸಿಎಂ ಡಿ.ಕೆ ಶಿವಕುಮಾರ್​ ಹೈಕಮಾಂಡ್​ ಭೇಟಿ ಬೆನ್ನಲ್ಲೇ ಇತ್ತ ಸಿಎಂ ಸಿದ್ದರಾಮಯ್ಯ ಎಚ್ಚೆತ್ತುಕೊಂಡಿದ್ದಾರೆ. ದಲಿತ ಸಚಿವರ ಸಭೆಗೆ ಅನುಮತಿ ಕೊಡಿಸುವ ಜವಾಬ್ದಾರಿ ಹೊತ್ತು, ಇದೇ ತಿಂಗಳ 13 ಅಂದ್ರೆ ಮುಂದಿನ ಸೋಮವಾರ ದೆಹಲಿಗೆ ತೆರಳಲು ಪ್ಲಾನ್​ ಮಾಡಿದ್ದಾರೆ. ಈ ವೇಳೆ ಹೈಕಕಾಂಡ್​ ಜೊತೆ ಮಾತುಕತೆ ನಡೆಸಿ, ಅನುಮತಿ ಕೊಡಿಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ರಣತಂತ್ರ ರೂಪಿಸಿದ್ದಾರೆ. ಇನ್ನು ಗೃಹಸಚಿವ ಪರಮೇಶ್ವರ್​ ಡಿನ್ನರ್​ ಸಭೆ ಪೋಸ್ಟ್​ಪೋನ್​ ಆಗಿದೆ ಎಂದು ಪುನರುಚ್ಚರಿಸಿದ್ದಾರೆ.

ಡಿಸಿಎಂಗೆ ಕೆ.ಎನ್.ರಾಜಣ್ಣ ಸಲಹೆ

ಸದ್ಯ 139 ಸ್ಥಾನ ಗೆದ್ದು ಸುಭದ್ರ ಸರ್ಕಾರ ರಚನೆ ಮಾಡಿದ್ರೂ ಕಾಂಗ್ರೆಸ್​ನಲ್ಲಿ ಅಧಿಕಾರ ಹಂಚಿಕೆಯದ್ದೇ ದೊಡ್ಡ ಚರ್ಚೆಯಾಗಿದೆ. ಈ ಬಗ್ಗೆ ಕಾಂಗ್ರೆಸ್​ನಲ್ಲಿ ಪರ-ವಿರೋಧ ಮಾತುಗಳು ಕೇಳಿ ಬರುತ್ತಿವೆ. ಇದೇ ವಿಚಾರವಾಗಿ ಸಚಿವ ಕೆ.ಎನ್​.ರಾಜಣ್ಣ, ಡಿಸಿಎಂ ಡಿಕೆಶಿಗೆ ಸಲಹೆಯ ನೆಪದಲ್ಲಿ ತಿರುಗೇಟು ನೀಡಿದ್ದಾರೆ. ಎರಡೂವರೆ ವರ್ಷ ಯಾಕೆ? ಮುಂದೆ 5 ವರ್ಷವೇ ಸಿಎಂ ಆಗಲಿ. ಈ ಬಾರಿ ಸಿಎಂ ಆಸೆ ಬಿಡಿ ಅಂತ ರಾಜಣ್ಣ ಪರೋಕ್ಷ ಸಂದೇಶ ರವಾನಿಸಿದ್ದಾರೆ. ಒಂದು ವೇಳೆ ಅಧಿಕಾರ ಹಂಚಿಕೆಯಾದ್ರೆ, ಕೆಳವರ್ಗಕ್ಕೆ ಸಿಎಂ ಸ್ಥಾನ ಸಿಗಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಇನ್ನು ಸಚಿವ ಎಂ.ಬಿ.ಪಾಟೀಲ್​ ಕೂಡ ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ. ಸದ್ಯಕ್ಕೆ ಸಿಎಂ ಖುರ್ಚಿ ಖಾಲಿ ಇಲ್ಲ ಎಂದು ಸಿದ್ದು ಬೆನ್ನಿಗೆ ನಿಂತಿದ್ದಾರೆ.

ಇದನ್ನೂ ಓದಿ:ಟೀಮ್​ ಇಂಡಿಯಾಗೆ ಮತ್ತೊಂದು ಶಾಕ್​​: R ಅಶ್ವಿನ್​ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ಸ್ಟಾರ್​ ಕ್ರಿಕೆಟರ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment