/newsfirstlive-kannada/media/post_attachments/wp-content/uploads/2025/02/DK_SHIVAKUMAR.jpg)
ಒಂದು ಕಡೆ ಗ್ಯಾರಂಟಿ ಯೋಜನೆಗಳನ್ನ ಈಡೇರಿಸುವ ಸವಾಲು, ಮತ್ತೊಂದೆಡೆ ಜನಪರ ಬಜೆಟ್ ಮಂಡಿಸುವ ಸವಾಲು. ಈ ಮಧ್ಯೆ ಐತಿಹಾಸಿಕ ಬಜೆಟ್ ಮಂಡಿಸಲಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ದಾಖಲೆಯ 15ನೇ ಬಜೆಟ್ ಮಂಡಿಸುತ್ತಿರುವ ಭಾಗ್ಯರಾಮಯ್ಯನ ಲೆಕ್ಕಾಚಾರ ನೂರೆಂಟು ನಿರೀಕ್ಷೆಗಳನ್ನ ಮೂಡಿಸಿದೆ.
ಮಾರ್ಚ್ 7.. ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಐತಿಹಾಸಿಕ ದಿನ. ಅವತ್ತು ಬಜೆಟ್ ಮಂಡನೆಗೆ ಫುಲ್ ರೆಡಿಯಾಗಿದ್ದಾರೆ. ಕರುನಾಡ ಜನತೆಗೆ ಭಾಗ್ಯಗಳನ್ನು ಕೊಟ್ಟಿದ್ದ ಸಿಎಂ ಸಿದ್ದರಾಮಯ್ಯ ಮತ್ತೊಂದು ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. 16ನೇ ಬಜೆಟ್ ಮಂಡಿಸಲಿದ್ದು, ಅತಿ ಹೆಚ್ಚು ಬಜೆಟ್ ಮಂಡಿಸಿದ ಖ್ಯಾತಿ ಸಿದ್ದರಾಮಯ್ಯ ಮುಡಿಗೇರಲಿದೆ. ಡಿಸಿಎಂ ಆಗಿ 7 ಬಾರಿ ಹಾಗೂ ಸಿಎಂ ಆಗಿ 8 ಬಾರಿ ಬಜೆಟ್ ಮಂಡಿಸಿದಂತಾಗಲಿದೆ. ಸದ್ಯ ಸಿಎಂ ಸಿದ್ದರಾಮಯ್ಯ ಬಜೆಟ್ ಮೇಲೆ ನೂರಾರು ನಿರೀಕ್ಷೆಗಳಿವೆ.
ಸಿದ್ದರಾಮಯ್ಯ ಬಜೆಟ್ ಮೇಲೆ ಸಚಿವರಲ್ಲೇ ಹೆಚ್ಚಿದ ನಿರೀಕ್ಷೆ
ಕಾಂಗ್ರೆಸ್ನಲ್ಲಿ ಪವರ್ ಶೇರಿಂಗ್ ಫೈಟು, ಗೆಲುವಿನ ಪಾಲು ಬೇಕು ಅನ್ನೋ ಡಿಕೆಶಿ ಸಿಂಗಲ್ ಅಜೆಂಡಾ, ಇತ್ತ ದಲಿತ ನಾಯಕತ್ವಕ್ಕೆ ಪಟ್ಟು, ಯುಗಾದಿ ಬಳಿಕ ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆ ಆಗೋ ಅಷ್ಟೂ ಲಕ್ಷಣಗಳು ಕಾಣಿಸ್ತಿದೆ. ಸಾಲು ಸಾಲು ಆಕಾಂಕ್ಷಿಗಳು ಸಚಿವ ಸ್ಥಾನಕ್ಕಾಗಿ ಡಿಮ್ಯಾಂಡ್ ಮಾಡ್ತಿರುವಾಗಲೇ ಈಗಿರೋ ಸಚಿವರು ಈ ಬಜೆಟ್ನಲ್ಲಿ ಹೇಗಾದ್ರೂ ತಮ್ಮ ತಮ್ಮ ಕ್ಷೇತ್ರಗಳಿಗೆ ಅನುದಾನ ಹೆಚ್ಚು ತಂದು ಬಿಡಬೇಕು ಅನ್ನೋ ತವಕದಲ್ಲಿದ್ದಾರೆ.
ಈ ವರ್ಷ ಬಜೆಟ್ ಗಾತ್ರ ₹4 ಲಕ್ಷ ಕೋಟಿಗೂ ಹೆಚ್ಚಾಗೋ ಸಾಧ್ಯತೆ
ಕಳೆದ ಭಾರಿ 3.7 ಲಕ್ಷ ಕೋಟಿ ಬಜೆಟ್ ಇತ್ತು.. ಈ ವರ್ಷ 4 ಲಕ್ಷ ಕೋಟಿಗೂ ಹೆಚ್ಚು ಬಜೆಟ್ ಗಾತ್ರ ಬರುವ ಸಾಧ್ಯತೆ ಇದೆ.. ಇನ್ನು ಮಾರ್ಚ್ ಬಜೆಟ್ನಲ್ಲಿ ನಮಗೇನು ಸಿಗುತ್ತೆ ಅನ್ನೋ ನಿರೀಕ್ಷೆ ಸಚಿವರಲ್ಲೇ ಹೆಚ್ಚಿಗಿದೆ. ಅನುದಾನ ತರೋ ಪೈಪೋಟಿಯಲ್ಲಿ ತುಮಕೂರು ಮುಂಚೂಣಿಯಲ್ಲಿದೆ. ಇದರ ಬಗ್ಗೆ ಮಾತನಾಡಿರುವ ಗೃಹ ಸಚಿವ ಪರಮೇಶ್ವರ್, ಈ ಬಾರಿಯ ಬಜೆಟ್ನಲ್ಲಿ ನಮ್ಮ ಜಿಲ್ಲೆಗೆ ದೊಡ್ಡ ಪ್ರಾಜೆಕ್ಟ್, ಹಣ ಕೇಳಿದ್ದೇವೆ ಎಂದು ಅನುದಾನದ ಸೀಟ್ ಮೇಲೆ ಕರ್ಚೀಫ್ ಹಾಕಿದ್ದಾರೆ.
ನಮ್ಮ ಜಿಲ್ಲೆಗೆ ಹೆಚ್ಚು ಪ್ರಾಜೆಕ್ಟ್, ಹಣ ಕೊಡಿ ಎಂದು ಈಗಾಗಲೇ ಕೇಳಿದ್ದೇನೆ. ಬಜೆಟ್ ಬಗ್ಗೆ ಹೆಚ್ಚು ನಿರೀಕ್ಷೆಯೇ ಇಟ್ಟುಕೊಂಡಿದ್ದೇನೆ. ಜಿಲ್ಲೆಗೆ ಯಾವ ರೀತಿ ಅನುದಾನ ಕೊಡುತ್ತಾರೆ ನೋಡಬೇಕು.
ಜಿ.ಪರಮೇಶ್ವರ್, ಗೃಹ ಸಚಿವ
ಇದನ್ನೂ ಓದಿ:ಬೆಂಗಳೂರು ಟ್ರಾಫಿಕ್ ಬಗ್ಗೆ ಡಿಸಿಎಂ ಅಸಹಾಯಕತೆ ಮಾತು.. ಡಿ.ಕೆ ಶಿವಕುಮಾರ್ ವಿರುದ್ಧ ಬಿಜೆಪಿ ಕೆಂಡ
ಈ ಬಾರೀ ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಗೆ ಸಿಹಿ ಸುದ್ದಿ ಕೊಡುತ್ತೇನೆ ಎಂದು ಸಚಿವ ಎಂಸಿ ಸುಧಾಕರ್ ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಮೆಡಿಕಲ್ ಕಾಲೇಜು ಆಸ್ಪತ್ರೆ, ಹೂವುಗಳ ಮಾರುಕಟ್ಟೆ, ಕೆರೆಗಳಿಗೆ ನೀರು ತುಂಬಿಸಲು ಮನವಿ ಮಾಡಿದ್ದೇನೆ. ಸಿಎಂ ಒಪ್ಪಿಗೆ ಸೂಚಿಸಿದ್ದಾರೆ ಎಂದರು.
ಶಿಡ್ಲಘಟ್ಟ ಮತ್ತು ಚಿಂತಾಮಣಿ ಕೆರೆಗಳಿಗೆ ನೀರು ತುಂಬಿಸುವ ಕೆಲಸ. ಹೆಚ್,ಎನ್ ವ್ಯಾಲಿದನ್ನು ಇಲಾಖೆಗೆ ಕಳಿಸಿಕೊಟ್ಟಿದ್ದೇವೆ. ಏನೇ ಆಗಲಿ ಈ ಬಾರಿ ಜಿಲ್ಲೆಯ ಜನರಿಗೆ ಸಿಹಿ ಸುದ್ದಿಯಂತೂ ಕೊಟ್ಟೇ ಕೊಡ್ತಿನಿ. ಸಿಎಂ ಸಿದ್ದರಾಮಯ್ಯ ಅವರು ಭರವಸೆ ಕೊಟ್ಟಿದ್ದಾರೆ.
ಎಂಸಿ ಸುಧಾಕರ್, ಸಚಿವ
ಇನ್ನೂ ಸಿದ್ದರಾಮಯ್ಯ ಬಜೆಟ್ ಬಗ್ಗೆ ಆಟೋ ಮತ್ತು ಟ್ಯಾಕ್ಸಿ ಚಾಲಕರ ಬೇಡಿಕೆ ಕೂಡ ಜಾಸ್ತಿಯಾಗಿದೆ. ಸಿಎಂಗೆ ಆಟೋ ಚಾಲಕರ ಯೂನಿಯನ್ ಬೇಡಿಕೆ ಈಡೇರಿಕೆಗೆ ಒತ್ತಾಯ ಕೇಳಿ ಬಂದಿದೆ. ಆದರ್ಶ್ ಆಟೋ ಯುನಿಯನ್ ಅಧ್ಯಕ್ಷ ಮಂಜುನಾಥ್ ಪತ್ರದ ಮೂಲಕ ಬೇಡಿಕೆ ಇಟ್ಟಿದ್ದಾರೆ. ಅದು ಏನೇ ಇರಲಿ, ಈ ವರ್ಷದ ಬಜೆಟ್ನಲ್ಲಿ ಯಾಱರಿಗೆ ಎಷ್ಟೆಷ್ಟು ಸಿಗುತ್ತೆ ಅನ್ನೋದನ್ನ ಮಾರ್ಚ್ 7ರವರೆಗೆ ಕಾದು ನೋಡಬೇಕಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ